ಕ್ರಿಕೆಟ್ಕರ್ನಾಟಕ ತಂಡಕ್ಕೆ ಮತ್ತೆ ಯರೇ ಗೌಡ ಕೋಚ್, ಯಾರಾಗ್ತಾರೆ ಬೌಲಿಂಗ್ ಕೋಚ್?

ಕರ್ನಾಟಕ ತಂಡಕ್ಕೆ ಮತ್ತೆ ಯರೇ ಗೌಡ ಕೋಚ್, ಯಾರಾಗ್ತಾರೆ ಬೌಲಿಂಗ್ ಕೋಚ್?

-

- Advertisment -spot_img

ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲದೆ ಭರ್ತಿ 10 ವರ್ಷಗಳೇ ತುಂಬಿವೆ. 2015ರಲ್ಲಿ ಮುಂಬೈನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ರಣಜಿ ಟ್ರೋಫಿ ಗೆದ್ದ ನಂತರ ಕರ್ನಾಟಕ ತಂಡಕ್ಕೆ ಮತ್ತೆ ದೇಶೀಯ ಕ್ರಿಕೆಟ್’ನ ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.

ಈ ಬಾರಿ ರಣಜಿ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿರುವ ಕರ್ನಾಟಕ ತಂಡಕ್ಕೆ ಹೊಸ ಕೋಚ್ ನೇಮಕವಾಗಿದೆ. ಅವರು ಬೇರಾರೂ ಅಲ್ಲ, ರಾಜ್ಯ ತಂಡದ ಮಾಜಿ ನಾಯಕ, ಮಾಜಿ ಕೋಚ್, 134 ಪ್ರಥಮದರ್ಜೆ ಪಂದ್ಯಗಳ ಅನುಭವಿ ರಾಯಚೂರಿನ ಯರೇ ಗೌಡ.

ಮುಂದಿನ ಎರಡು ವರ್ಷಗಳ ಅವಧಿಗೆ ಯರೇ ಗೌಡ ಅವರನ್ನು ಕರ್ನಾಟಕ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ.

2020ರಲ್ಲಿ ಕರ್ನಾಟಕ ಸೀನಿಯರ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ಯರೇ ಗೌಡ, ಎರಡು ವರ್ಷಗಳ ಕಾಲ ತಂಡದ ಕೋಚ್ ಆಗಿದ್ದರು. ನಂತರ ಯರೇ ಗೌಡ ಜಾಗದಲ್ಲಿ ಪಿ.ವಿ ಶಶಿಕಾಂತ್ ಅವರನ್ನು ಕೋಚ್ ಆಗಿ ನೇಮ ಮಾಡಲಾಗಿತ್ತು. ಇದೀಗ 4 ವರ್ಷಗಳ ನಂತರ ಮತ್ತೆ ಯರೇ ಗೌಡ ರಾಜ್ಯ ತಂಡದ ಕೋಚ್ ಆಗಿ ವಾಪಸ್ಸಾಗಿದ್ದಾರೆ.

ಈ ಬಾರಿ ಸಿ. ಕೆ ನಾಯ್ಡು ಟ್ರೋಫಿ U-23 ಚಾಂಪಿಯನ್’ಷಿಪ್ ಗೆದ್ದ ಕರ್ನಾಟಕ ತಂಡಕ್ಕೆ ಯರೇ ಗೌಡ ಕೋಚ್ ಆಗಿದ್ದರು. ತನ್ನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕ ತಂಡ ಸಿ.ಕೆ ನಾಯ್ಡು ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಆ ಸಾಧನೆಗಾಗಿ ಯರೇ ಗೌಡರಿಗೆ ರಾಜ್ಯ ಸೀನಿಯರ್ ತಂಡದ ಕೋಚ್ ಆಗಿ ಪ್ರಮೋಶನ್ ಸಿಕ್ಕಿದೆ.

ದೇಶೀಯ ಕ್ರಿಕೆಟ್’ನ ದಿಗ್ಗಜ ಆಟಗಾರರಲ್ಲೊಬ್ಬರಾಗಿರುವ ಯರೇ ಗೌಡ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ, ನಂತರ ಸುದೀರ್ಘ ವರ್ಷಗಳ ಕಾಲ ರೈಲ್ವೇಸ್ ಪರವಾಗಿ ಆಡಿದ್ದರು. ತಮ್ಮ ನಾಯಕತ್ವದಲ್ಲಿ ರೈಲ್ವೇಸ್’ಗೆ ರಣಜಿ ಟ್ರೋಫಿ ಗೆದ್ದು ಕೊಟ್ಟ ಸಾಧನೆಯನ್ನೂ ಮಾಡಿದ್ದಾರೆ. ರೇಲ್ವೇಸ್ ಪರ ನಾಯಕನಾಗಿ ಮತ್ತು ಆಟಗಾರನಾಗಿ 2 ರಣಜಿ ಟ್ರೋಫಿ ಗೆದ್ದಿರುವ 52 ವರ್ಷದ ಯರೇ ಗೌಡ, ಮೂರು ಬಾರಿ ಇರಾನಿ ಕಪ್ ಚಾಂಪಿಯನ್’ಷಿಪ್ ಗೆದ್ದ ತಂಡದ ಸದಸ್ಯರೂ ಹೌದು.

ಸುದೀರ್ಘ ಒಂದು ದಶಕದ ಕಾಲ ರೈಲ್ವೇಸ್ ಪರ ಆಡಿದ್ದ ಯರೇ ಗೌಡ 2006ರಲ್ಲಿ ತವರು ರಾಜ್ಯಕ್ಕೆ ವಾಪಸ್ ಆಗಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದರು. ಮತ್ತೆ ರೈಲ್ವೇಸ್ ತಂಡಕ್ಕೆ ಮರಳಿದ್ದ ಯರೇ ಗೌಡ 2011ರಲ್ಲಿ ವೃತ್ತಿಜೀವನದ ಕೊನೆಯ ಪ್ರಥಮದರ್ಜೆ ಪಂದ್ಯವಾಡಿದ್ದರು.

100 ರಣಜಿ ಟ್ರೋಫಿ ಪಂದ್ಯಗಳನ್ನಾಡಿರುವ ದೇಶದ ಕೆಲವೇ ಕೆಲ ಆಟಗಾರರಲ್ಲಿ ಯರೇ ಗೌಡ ಕೂಡ ಒಬ್ಬರು. ವೃತ್ತಿಜೀವನದಲ್ಲಿ ಒಟ್ಟು 134 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಯರೇ ಗೌಡ 7650 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಸರಾಸರಿ 45.53, ಬಾರಿಸಿರುವ ಶತಕ 16 ಹಾಗೂ ಅರ್ಧಶತಕ 39. ಒಟ್ಟು 49 ಲಿಸ್ಟ್ ಎ ಪಂದ್ಯಗಳನ್ನಾಡಿ 1051 ರನ್ ಗಳಿಸಿದ್ದಾರೆ.

ಯರೇ ಗೌಡ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದು ಬೌಲಿಂಗ್ ಕೋಚ್ ಆಗಿ ರಾಜ್ಯ ಕ್ರಿಕೆಟ್ ಸಂಸ್ಥೆ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಕೆರಳಿಸಿದೆ. 2020ರಲ್ಲಿ ಯರೇ ಗೌಡ ಕರ್ನಾಟಕ ತಂಡದ ಕೋಚ್ ಆಗಿದ್ದಾಗ ರಾಜ್ಯ ತಂಡದ ಮಾಜಿ ಎಡಗೈ ಮಧ್ಯಮ ವೇಗಿ ಎಸ್.ಅರವಿಂದ್ ಬೌಲಿಂಗ್ ಕೋಚ್ ಆಗಿದ್ದರು.

 

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

five × 4 =

Latest news

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ ಪಂಜಾಬ್‌ನ ಸಣ್ಣ ಪಟ್ಟಣದಿಂದ ಆರಂಭವಾದ ಯುವ ಕ್ರಿಕೆಟಿಗ ಜಸ್ಪ್ರೀತ್ ಸಿಂಗ್ ಅವರ ಜೀವನಯಾನ ಇಂದು ಸಾವಿರಾರು ಯುವ...

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್ – ಸೀಸನ್ 2

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್  2026– ಸೀಸನ್ 2 ಕೊಲ್ನಾಡ್ ಮೈದಾನದಲ್ಲಿ ಫೆಬ್ರವರಿ 14 ಮತ್ತು 15ರಂದು LK ಕ್ರಿಕೆಟ್ ಪ್ರೀಮಿಯರ್ ಲೀಗ್ –...

ಮುಂಬೈ ನೆಲದಲ್ಲಿ ಕರ್ನಾಟಕದ ಐತಿಹಾಸಿಕ ವಿಜಯ

ಮುಂಬೈ ನೆಲದಲ್ಲಿ ಕರ್ನಾಟಕದ ಐತಿಹಾಸಿಕ ವಿಜಯ ರಣಜಿ ಟ್ರೋಫಿ ಕ್ರಿಕೆಟ್ ಎಂದರೆ ಮುಂಬೈಗೆ ಪ್ರತಿಷ್ಠೆಯ ಪ್ರಶ್ನೆ. 42 ಬಾರಿ ಚಾಂಪಿಯನ್ ಆಗಿರುವ ತಂಡದ ಎದುರು ಅವರದ್ದೇ ಮೈದಾನದಲ್ಲಿ...

ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭರ್ಜರಿ ಆರಂಭ: ಅಮೆರಿಕ ವಿರುದ್ಧ 29 ರನ್ ಜಯ

ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭರ್ಜರಿ ಆರಂಭ: ಅಮೆರಿಕ ವಿರುದ್ಧ 29 ರನ್ ಜಯ 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ....
- Advertisement -spot_imgspot_img

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು ಕರಾವಳಿ...

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ (Sports Kannada Live...

Must read

- Advertisement -spot_imgspot_img

You might also likeRELATED
Recommended to you