ಬೈಂದೂರು: ಬೈಂದೂರು ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಆಸಕ್ತ ಮಕ್ಕಳಿಗೆ ಕ್ರಿಕೆಟ್ ತರಬೇತಿಯನ್ನು ನೀಡಿ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನಾಗಿ ಮಾರ್ಪಡಿಸಲು ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ವಾರ್ಷಿಕ ತರಬೇತಿ ಶಿಬಿರವನ್ನು ಆರಂಭಿಸಿದೆ.
Category: ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲದ ಡಿಪಾರ್ಟ್ ಮೆಂಟ್ ಆಫ್ ಜನರಲ್ ಸರ್ವಿಸ್, ಏರ್ ಕಂಡೀಶನ್ ಡಿಪಾರ್ಟ್ ಮೆಂಟ್ ಇವರ ನೇತೃತ್ವದಲ್ಲಿ ಸ್ಪಂದನ ಟ್ರೋಫಿ-2024, ಸೀಸನ್ 2 ಎನ್ನುವ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಮಾಹೆ ಉದ್ಯೋಗಿಗಳಿಗೆ ಆಯೋಜಿಸಿದೆ. ಮಾರ್ಚ್ 16 ಮತ್ತು 17 ರಂದು ಮಾಹೆ ಎಂಡ್ ಪಾಯಿಂಟ್ ಗ್ರೌಂಡ್ ನಲ್ಲಿ ಈ ಟೂರ್ನಮೆಂಟ್ ನಡೆಯಲಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಈ ಟೂರ್ನಮೆಂಟ್ ಆಯೋಜನೆಗೊಂಡಿದೆ.
ಕಾರ್ಕಳ-ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಹೆಬ್ರಿ ವಲಯ ಇವರ ಆಶ್ರಯದಲ್ಲಿ ಸಂಘಟನೆಯ ಉತ್ತಮ ಸಾಮಾಜಿಕ ಯೋಜನೆಗಳ ಸಹಾಯಾರ್ಥವಾಗಿ ಆಹ್ವಾನಿತ ಪ್ರತಿಷ್ಠಿತ ಸಂಸ್ಥೆಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಕಾಪು-ಇಲ್ಲಿನ ಮುದರಂಗಡಿ ಫ್ರೆಂಡ್ಸ್ ಆಶ್ರಯದಲ್ಲಿ ಮುದರಂಗಡಿ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ “ಮುದರಂಗಡಿ ಫ್ರೆಂಡ್ಸ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಫ್ರೆಂಡ್ಸ್ ಬೆಂಗಳೂರು ವಿಭಿನ್ನ ಚಿಂತನೆ
ಜಿ ಎಸ್ ಬಿ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದಂತಹ ಹರಿ ಓಂ ಗಂಗೊಳ್ಳಿ ಸುಮಾರು ಎರಡು ದಶಕಕ್ಕೂ ಮಿಕ್ಕಿ ಜಿ ಎಸ್ ಬಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾ ಬಂದಿದೆ.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್(ರಿ) ಕುಂದಾಪುರ ಮತ್ತು ತಾಲೂಕು ಮಹಿಳಾ ವೇದಿಕೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ,ವಿಪ್ರರಿಗಾಗಿ ಮಾರ್ಚ್ 9,10 ರಂದು ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ವಿಪ್ರ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ) ಇವರ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ವೆಂಕಟರಮಣ ಟ್ರೋಫಿ-2024 ಕಟಪಾಡಿ ಮಣ್ಣುಗಡ್ಡೆ ಮೈದಾನದಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು.
ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ನಡೆದ ಈ ಪಂದ್ಯಾಟದಲ್ಲಿ 15 ಬಲಿಷ್ಠ ತಂಡಗಳು ಭಾಗವಹಿಸಿದ್ದವು.
ವಿಶೇಷವಾಗಿ ಸ್ಥಳೀಯ ತಂಡಗಳು ಕೂಡ ರಾಷ್ಟ್ರೀಯ ಮಟ್ಟದ ತಂಡಗಳಿಗೆ ಪೈಪೋಟಿ ನೀಡಿದ ಪರಿ ಕ್ರೀಡಾ ಪ್ರೇಕ್ಷಕರನ್ನು ಅಚ್ಚರಿಗೆ ಒಳಪಡಿಸಿತ್ತು.
ಪ್ರಕೃತಿ ನ್ಯಾಶ್ ಶಿಸ್ತಿನ ಪ್ರದರ್ಶನಕ್ಕೆ ಒಲಿದ ವೆಂಕಟರಮಣ ಟ್ರೋಫಿ
ಶಿಸ್ತಿಗಾಗಿ ಕ್ರಿಕೆಟ್ ಶಿರೋನಾಮೆಯಡಿ ನಡೆದ ಈ ಪಂದ್ಯಾಟದಲ್ಲಿ ಶಿಸ್ತು ಹಾಗೂ ಸಂಯೋಜಿತ ತಂಡ ನ್ಯಾಶ್ ಬೆಂಗಳೂರು ಚಾಂಪಿಯನ್ ತಂಡವಾಗಿ ಮೂಡಿಬಂದಿತು.
ಲೀಗ್ ಹಂತದ ರೋಚಕ ಕದನದ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ಪ್ರಕೃತಿ ನ್ಯಾಶ್-ಇಜಾನ್ ಸ್ಪೋರ್ಟ್ಸ್ ಉಡುಪಿ ಹಾಗೂ ಜಾನ್ಸನ್ ಕುಂದಾಪುರ-ಫ್ರೆಂಡ್ಸ್ ಬೆಂಗಳೂರು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪ್ರಕೃತಿ ನ್ಯಾಶ್ ಮಹೇಶ್ ಬಿರುಸಿನ 18 ರನ್ ಹಾಗೂ ಪ್ರಜ್ವಲ್ 10 ರನ್ ನೆರವಿನಿಂದ ನಿಗದಿತ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 44 ರನ್ ಪೇರಿಸಿತ್ತು.
ರನ್ ಚೇಸಿಂಗ್ ವೇಳೆ ಆರಂಭಿಕ ಹಂತದ ಹಠಾತ್ ಕುಸಿತದ ಬಳಿಕ ಅನಿಲ್ ಖಾರ್ವಿ ತಂಡವನ್ನು ಆಧರಿಸಿದರೂ ನ್ಯಾಶ್ ಮೊನಚಾದ ಬೌಲಿಂಗ್ ದಾಳಿ ಎದುರು 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಲಷ್ಟೇ ಶಕ್ತವಾಯಿತು.
ನ್ಯಾಶ್ ಈ ಪಂದ್ಯದಲ್ಲಿ ಹೊಸ ಮುಖಗಳಾದ ನೀತು,ಬೊಮ್ಮಾಲಿ ಸುರೇಶ್,ಪ್ರಜ್ವಲ್,ಶಮಾಝ್,ನಿಖಿಲ್ ಪರಿಚಯಿಸಿದರೆ,
ಜಾನ್ಸನ್ ಕುಂದಾಪುರ ಜಶಾಂತ್,ಸೂರಜ್,ಅಶ್ವಿಕ್ ನಿತೇಶ್ ರನ್ನು ಪರಿಚಯಿಸಿದ್ದು,ಈ ಎಲ್ಲಾ ಆಟಗಾರರು ಲೀಗ್ ಹಂತದಿಂದ ಫೈನಲ್ ಫಲಿತಾಂಶದ ವರೆಗೂ ಅತ್ಯುತ್ತಮ ಪ್ರದರ್ಶನ ನೀಡಿ
ಗಮನ ಸೆಳೆದರು.
ವಿಶಾಲವಾದ ಮೈದಾನವಾದ್ದರಿಂದ ಒಂಟಿ ಅವಳಿ ಓಟಗಳ ಮಹತ್ವವೂ ಆಟಗಾರರಿಗೆ ಮನವರಿಕೆ ಆಗಿತ್ತು.ಲೀಗ್ ಹಂತದ ಪಂದ್ಯವೊಂದರಲ್ಲಿ ಗುರುಗಣೇಶ್ ನೇಜಾರು ತಂಡದ ಆರಂಭಿಕ ಜೋಡಿ ಪ್ರಸಿದ್ಧ್ ಮತ್ತು ಪ್ರಥ್ವಿ ಈರ್ವರ 63 ರನ್ ಗಳ ಜೊತೆಯಾಟ ಗಮನ ಸೆಳೆದಿತ್ತು.
ಅಗಲಿದ ಮಿತ್ರರ ಸವಿನೆನಪಿಗಾಗಿ ಪೆವಿಲಿಯನ್ ನಿರ್ಮಾಣ
ಕಳೆದ ವರ್ಷವಷ್ಟೇ ಅಗಲಿದ ಸಂಸ್ಥೆಯ ಮಾಜಿ ಅಧ್ಯಕ್ಷ ದಿ.ಮಲ್ಲೇಶ್ ಬಂಗೇರ ಮತ್ತು ದಿ.ದಯಾನಂದ ಸಾಲ್ಯಾನ್ ಇವರ ಸವಿನೆನಪಿಗಾಗಿ ಆಟಗಾರರ ಪೆವಿಲಿಯನ್ ನಿರ್ಮಿಸಿ ಅಗಲಿದ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಿದರು.
ವೆಂಕಟರಮಣ ಸಂಸ್ಥೆಯ ಸೇವಾಕಾರ್ಯ ವಿಶ್ವಕ್ಕೆ ಮಾದರಿ-ಗುರ್ಮೆ ಸುರೇಶ್ ಶೆಟ್ಟಿ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ) ಕಳೆದ 35 ವರ್ಷಗಳಿಂದ ಸಮಾಜದ ನೊಂದವರ ಬೆಂದವರ ಧ್ವನಿಯಾಗಿ,ಸಮಾಜದ ಕಟ್ಟಕಡೆಯ ಜನರ ಕಣ್ಣೀರೊರೆಸಿ,ಸಾಧಕರ ಬದುಕು ಬಂಗಾರವಾಗಲಿ ಎಂದು ಹಾರೈಸುತ್ತಿದೆ,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ)ಸಂಸ್ಥೆಯ ಸೇವಾಕಾರ್ಯ ವಿಶ್ವಕ್ಕೆ ಮಾದರಿ ಎಂದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟೆನಿಸ್ಬಾಲ್ ಕ್ರಿಕೆಟ್ ನ ಏಕೈಕ ಸಂಸ್ಥೆ “ಮಾರುತಿ ಜನಸೇವಾ ಸಂಘ(ರಿ) ಉಳ್ಳಾಲ” ಸಂಸ್ಥೆಯನ್ನು ಗೌರವಿಸಲಾಯಿತು.ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ಆಟಗಾರ್ತಿ ತೇಜಸ್ವಿನಿ ಉದಯ್ ಕುಮಾರ್ ಕಟಪಾಡಿ,ಸಂಗೀತ ಕ್ಷೇತ್ರದ ಸಾಧಕಿ ಸಂಚಲಿ ಪಿತ್ರೋಡಿ,ಪ್ರತಿಭಾನ್ವಿತ ವಿದ್ಯಾರ್ಥಿನಿ ರಿತಿಕಾ ಪಿತ್ರೋಡಿ ಹಾಗೂ ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗೂ ವಿ.ಎಸ್.ಸಿ ಕಾರಣ್ಯ ಯೋಜನೆಯ ಫಲಾನುಭವಿಗಳಿಗೆ ಸಹಾಯ ಧನ ವಿತರಿಸಲಾಯಿತು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್,ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಾಲ್ಯಾನ್,ದಿವಾಕರ ಕುಂದರ್,ಜಿತೇಂದ್ರ ಶೆಟ್ಟಿ ಉದ್ಯಾವರ,ಗೌತಮ್ ಶೆಟ್ಟಿ ಕುಂದಾಪುರ,
ಗೋಪಾಲ ಅಮೀನ್ ಪಿತ್ರೋಡಿ, ಗಂಗಾಧರ ಕರ್ಕೇರ,ವೆಂಕಟರಮಣ ಸಂಸ್ಥೆ ಅಧ್ಯಕ್ಷ ನವೀನ್ ಸಾಲ್ಯಾನ್,ಉಪಾಧ್ಯಕ್ಷ ವಿಜಯ್ ಕೋಟ್ಯಾನ್,
ಕಾರ್ಯದರ್ಶಿ ಪ್ರವೀಣ್ ಪಿತ್ರೋಡಿ, ಕ್ರೀಡಾ ಕಾರ್ಯದರ್ಶಿ
ಶಶಿಕಾಂತ್ ಪಿತ್ರೋಡಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಯಶಸ್ವಿ ಫಿಶ್ ಮೀಲ್&ಆಯಿಲ್ ಕಂ ಪಿತ್ರೋಡಿ ಪ್ರವರ್ತಕರಾದ ಸಾಧು ಸಾಲ್ಯಾನ್ ರವರು ದೀಪ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ವಿ.ಎಸ್.ಸಿ ಕಾರುಣ್ಯ ಯೋಜನೆಗೆ ಚಾಲನೆ
ವೆಂಕಟರಮಣ ಸಂಸ್ಥೆ ಕಳೆದ 35 ವರ್ಷಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಶೀರ್ಷಿಕೆಯಡಿ ಸೇವಾ ನಿರತರಾಗಿದ್ದು,ಈ ಬಾರಿ ಸಾಮಾಜಿಕ ಕಳಕಳಿಯ ಚಿಂತನೆಯೊಂದಿಗೆ ಸಮಾಜದ ಅಶಕ್ತರ ನೆರವಿಗಾಗಿ ಸದಾ ಬೆರೆಯುವ ಉದ್ದೇಶದಿಂದ “ವಿ.ಎಸ್.ಸಿ ಕಾರುಣ್ಯ-ಇದು ನೆರವಿನ ಹಸ್ತ” ಯೋಜನೆಗೆ ಚಾಲನೆ ನೀಡಿದರು.ಉದ್ಯಮಿ ಲೋಹಿತ್ ಕುಮಾರ್ ಪಿತ್ರೋಡಿ “ಕಾರುಣ್ಯ ನೆರವಿನ ಹಸ್ತ” ಇದರ ಉದ್ಘಾಟನೆ ನೆರವೇರಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ನಯನಾ ಗಣೇಶ್ ಉದ್ಯಾವರ,ಪ್ರಮೀಳಾ ಜತ್ತನ್ನ,ಶರತ್ ಶೆಟ್ಟಿ ಪಡುಬಿದ್ರಿ,ಜಿತೇಂದ್ರ ಶೆಟ್ಟಿ ಉದ್ಯಾವರ,ಗೋಪಾಲ ಅಮೀನ್,ಗಂಗಾಧರ ಕರ್ಕೇರ,ಅಧ್ಯಕ್ಷ ನವೀನ್ ಸಾಲ್ಯಾನ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭ ಸಾಹಿತಿ ನವೀನ್ ಕುಮಾರ್ ಪಡ್ರೆ,ರಾಷ್ಟ್ರ ಮಟ್ಟದ ಚಿತ್ರ ಕಲಾವಿದ ಅಜಯ್ ಕುಮಾರ್ ಪಿತ್ರೋಡಿ ಇವರನ್ನು ಗೌರವಿಸಲಾಯಿತು.
ವೀಕ್ಷಕ ವಿವರಣೆಯಲ್ಲಿ ವಿನಯ್ ಉದ್ಯಾವರ,ಪ್ರಶಾಂತ್ ಅಂಬಲಪಾಡಿ,ಅರವಿಂದ್ ಮಣಿಪಾಲ ಮತ್ತು ಶಿವು ಸಹಕರಿಸಿದರೆ,ರಾಘು ಕಡೂರು,ಸ್ವರೂಪ್ ತೀರ್ಥಹಳ್ಳಿ ತಂಡ ತೀರ್ಪುಗಾರರಾಗಿ ಭಾಗವಹಿಸಿದರು.
ಮೂರು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದ ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಮೈದಾನದಲ್ಲಿ ಸಹಸ್ರಾರು ಕ್ರೀಡಾಪ್ರೇಮಿಗಳು ವೀಕ್ಷಿಸಿದ್ದು ,ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ಮೂಲಕ 2 ಲಕ್ಷಕ್ಕೂ ಅಧಿಕ ಮಂದಿ ಪಂದ್ಯಾಟದ ಸವಿಯನ್ನು ಸವಿದರು.
ಚಿತ್ರಕೃಪೆ-ಸುರಭಿ ರತನ್
ಬೈಂದೂರು-ಸನ್ ರೈಸ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಹಳಗೇರಿ ಇವರ ಆಶ್ರಯದಲ್ಲಿ 7 ನೇ ಬಾರಿಗೆ 60 ಗಜಗಳ “ಸನ್ ರೈಸ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ವೇಳಾಪಟ್ಟಿ ಹಾಗೂ ನಿಯಮಗಳು ಹೀಗಿವೆ…..!!!!!!