Categories
ಕ್ರಿಕೆಟ್

ಶುರುವಾಗ್ತಿದೆ ಮೂಲ್ಕಿಯಲ್ಲಿ ಜಿ.ಎಸ್.ಬಿ ಗಳ ಕ್ರಿಕೆಟ್ ಮಹಾ ಸಂಗ್ರಾಮ, VPL ಟೂರ್ನಿಗೆ ಕ್ಷಣಗಣನೆ

VPL ಆರಂಭಕ್ಕೆ ಕ್ಷಣಗಣನೆ; ಒಳಲಂಕೆ ಪ್ರೀಮಿಯರ್ ಲೀಗ್  ಕ್ರಿಕೆಟ್ ಪಂದ್ಯಾವಳಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಜಿ ಎಸ್ ಬಿ ಗಳಿಗಾಗಿ ಮೂಲ್ಕಿಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹರಾಜು ಆಧಾರಿತ ಸರಣಿಯು ಡಿಸೆಂಬರ್ 9ರಿಂದ 2 ದಿನಗಳ ಕಾಲ ನಡೆಯಲಿದೆ. ‘ಒಳಲಂಕೆ ಪ್ರೀಮಿಯರ್ ಲೀಗ್ ‘ (VPL) ಶುರುವಾಗಲಿದ್ದು. ವಿಪಿಎಲ್‌ನ ಟೂರ್ನಮೆಂಟ್ ಗೆ  ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕಪ್ ಗೆಲ್ಲುವ ಉತ್ಸಾಹದೊಂದಿಗೆ ರಾಜ್ಯದ ಮತ್ತು ಹೊರರಾಜ್ಯದ ತಂಡಗಳು ಅಖಾಡಕ್ಕೆ ಇಳಿದಿವೆ. ಒಟ್ಟು 12 ತಂಡಗಳು ಕಪ್‌ಗಾಗಿ ಹಣಾಹಣಿ ನಡೆಸಲಿವೆ.
ಈಗಾಗಲೇ ನಿಧಾನವಾಗಿ ಮತ್ತೆ ಕ್ರಿಕೆಟ್ (Cricket)​ ಜ್ವರ ದೇಶದಲ್ಲಿ ಹೆಚ್ಚುತ್ತಿದೆ. ಜಿ.ಎಸ್.ಬಿ ಕ್ರಿಕೆಟ್​ ಪ್ರೇಮಿಗಳಿಗಾಗಿ ಸಾಲು ಸಾಲು ಟೂರ್ನಿಗಳು ನಡೆಯುತ್ತಿದ್ದು ಕ್ರಿಕೆಟ್​ ಅಭಿಮಾನಿಗಳಿಗೆ ಈ ಬಾರಿ ರಸದೌತಣ ಎಂಬಂತಾಗಿದೆ. ಇನ್ನೇನು ಕಲವೇ ತಿಂಗಳುಗಳಲ್ಲಿ  ಜಿಪಿಎಲ್ ಸಹ ಸನಿಹದಲ್ಲಿದ್ದು, ಇವುಗಳ ನಡುವೆ ಮುಲ್ಕಿಯಲ್ಲಿ ಒಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್​ ಟೂರ್ನಿಮೆಂಟ್​ ಸಹ ಘೋಷಣೆ ಆಗಿದ್ದು, ಸಖತ್ ಥ್ರಿಲ್​ ನೀಡಲಿದೆ. ಹೌದು, ಇದೇ ತಿಂಗಳ 9ರಿಂದ 2 ದಿನಗಳ ಕಾಲ ವಿಪಿಎಲ್ (VPL) ಟೂರ್ನಿ ಅದ್ಧೂರಿಯಾಗಿ ಜರುಗಲಿದೆ.
ಮಳೆಗಾಲದ ಕಾರಣದಿಂದ ‘ಒಳಲಂಕೆ  ಕ್ರಿಕೆಟ್‌ ಲೀಗ್‌’ಗೆ ಕೊಂಚ ಬ್ರೇಕ್ ಬಿದ್ದಿತ್ತು. ಹಲವು ದಿನಗಳಿಂದ ವಿಪಿಎಲ್ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್‌ಗೆ ಈಗ ಮತ್ತೊಮ್ಮೆ ಜಿ ಎಸ್ ಬಿ ಗಳ ಕ್ರಿಕೆಟ್‌ ಅನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.
 *ಆರಂಭವಾಗ್ತಿದೆ ಒಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ :* 
ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಮುಲ್ಕಿಯಲ್ಲಿ ಜಿ ಎಸ್ ಬಿ ಕ್ರಿಕೆಟ್ ಟೂರ್ನಿ ನಡೆಯಲಿದೆ.  ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಒಳಲಂಕೆ ಪ್ರೀಮಿಯರ್ ಲೀಗ್ (ವಿಪಿಎಲ್) ಆರಂಭವಾಗಲಿದೆ. ಡಿಸೆಂಬರ್ 9 ಮತ್ತು 10ರ ವರೆಗೆ ಡೇ ಅಂಡ್ ನೈಟ್ ಕ್ರಿಕೆಟ್ ನಡೆಯಲಿದ್ದು ಈ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಅರ್ಥಪೂರ್ಣವಾಗಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ  12 ಫ್ರಾಂಚೈಸಿಗಳು ಭಾಗಿಯಾಗಲಿದ್ದು, ಪಂದ್ಯಾಕೂಟಕ್ಕೆ ಸಜ್ಜಾಗುತ್ತಿವೆ!
ವಿಪಿಎಲ್ ಪಂದ್ಯಾವಳಿಯಲ್ಲಿ ಬರೋಬ್ಬರಿ 12 ತಂಡಗಳು ಕಾಣಿಸಿಕೊಳ್ಳಲಿವೆ.  ಡೆಡ್ಲಿ ಪ್ಯಾಂಥರ್ಸ್ , ವೀರಾಂಜನೇಯ ಕ್ರಿಕೆಟರ್ಸ್ ಕಾಪು ,ಆಲ್ಫಾ ಟ್ರೂಪರ್ಸ್,ಕೆದಿಂಜೆ ರಾಯಲ್ ಟೈಗರ್ಸ್,ಮಲ್ಪೆ ಯುನೈಟೆಡ್, ಪೇಟೆ ಶ್ರೀ ವೆಂಕಟರಮಣ ಕ್ರಿಕೆಟರ್ಸ್,ರೈಸಿಂಗ್ ಸ್ಟಾರ್ಸ್ ಮಂಗಳೂರು,ಉಡುಪಿ ಬ್ಲಾಸ್ಟರ್ಸ್, ಕೊಡಿಯಾಲ್ ಸೂಪರ್ ಕಿಂಗ್ಸ್  ,ಕೊಂಕಣ್ ಎಕ್ಸ್ಪ್ರೆಸ್ ಕೋಟೇಶ್ವರ, ಮಾಲ್ಸಿ ಸ್ಮಾಶರ್ಸ್, ಇರ್ವತ್ತೂರ್ ಸ್ಪೋರ್ಟ್ಸ್ ಕ್ಲಬ್  ತಂಡಗಳು ವಿಪಿಎಲ್ ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಒಟ್ಟು 12 ತಂಡಗಳು ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದು, ಈ ಹನ್ನೆರಡು  ತಂಡಗಳಿಗೆ ಮಾಲೀಕರುಗಳನ್ನು ಒಳಗೊಂಡಿದೆ. ಈ ಟೂರ್ನಿಯಿಂದ ಬಂದಂತಹ ಹಣವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.
ವಿವಿಧ VPL ಫ್ರಾಂಚೈಸ್ ತಂಡಗಳಿಗೆ ಆಯ್ಕೆಯಾದ ಎಲ್ಲಾ ಆಟಗಾರರಿಗೆ ಸ್ಪೋರ್ಟ್ಸ್ ಕನ್ನಡದ ಪರವಾಗಿ ಅಭಿನಂದನೆಗಳು!
ವೊಳಲಂಕೆ ಪ್ರೀಮಿಯರ್ ಲೀಗ್ ಕಪ್‌ಗಾಗಿ ಉತ್ಸಾಹವು ಪ್ರಾರಂಭವಾಗಲಿ!!
 ✍🏼ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಹವ್ಯಾಸಿ ಅಂಕಣಕಾರ
Categories
ಕ್ರಿಕೆಟ್

ಸೌದಿ ಅರೇಬಿಯಾದಲ್ಲಿ ಅದ್ಧೂರಿಯ ಕ್ರಿಕೆಟ್ ಹಬ್ಬ ಮಂಗಳೂರು ಪ್ರೀಮಿಯರ್‌ ಲೀಗ್-2023

ಸೌದಿ ಅರೇಬಿಯಾದ ಪ್ರತಿಷ್ಠಿತ ಸಂಸ್ಥೆ ಅಲ್ ಬಿಲಾದಿ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ನವೆಂಬರ್‌ 29,30 ಮತ್ತು ಡಿಸೆಂಬರ್ 1 ರಂದು ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ಅದ್ಧೂರಿಯ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ಮಂಗಳೂರು ಪ್ರೀಮಿಯರ್‌ ಲೀಗ್-2023 (M.P.L ಸೀಸನ್ 1)ಆಯೋಜಿಸಲಾಗಿದೆ.
ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು SAR 3,000 ಪ್ರವೇಶ ಶುಲ್ಕ ಪಾವತಿಸಬೇಕಾಗಿದ್ದು,ಪ್ರಥಮ‌ ಪ್ರಶಸ್ತಿ ವಿಜೇತ ತಂಡ SAR 25,000 ದ್ವಿತೀಯ ಸ್ಥಾನಿ SAR 12,500 ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಟೂರ್ನಮೆಂಟ್ ನ ಮೆರುಗನ್ನು ಹೆಚ್ಚಿಸಲು ಮನೋರಂಜನಾ ಕಾರ್ಯಕ್ರಮ ಮತ್ತು ಕರಾವಳಿ ಸಂಸ್ಕೃತಿ ಮತ್ತು ವಿಶೇಷವಾದ ಮಂಗಳೂರು ಖಾದ್ಯಗಳ ಮೇಳ ಹಮ್ಮಿಕೊಂಡಿದ್ದಾರೆ.
ಕಿಂಗ್ ಸ್ಪೋರ್ಟ್ಸ್ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು ಹೆಚ್ಚಿನ ವಿವರಗಳಿಗಾಗಿ
+966597991860 ಅಥವಾ +966597647960 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
Categories
ಸ್ಪೋರ್ಟ್ಸ್

ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ದೀಪಾವಳಿಗೆ ಹೊಸ ಬಟ್ಟೆ ಉಡುಗೊರೆ

ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ,
ಪ್ರತಿವರ್ಷದಂತೆ ಈ ಬಾರಿಯೂ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನ ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ,ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು.
ಹೊಸ ಬಟ್ಟೆ ವಿತರಿಸಿ ಮಾತನಾಡಿದ ವೆಂಕಟರಮಣ ಸಂಸ್ಥೆಯ ಅಧ್ಯಕ್ಷರಾದ ನವೀನ್ ಸಾಲ್ಯಾನ್ ರವರು “ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭ ವೆಂಕಟರಮಣ ಸಂಸ್ಥೆಯ ಸದಸ್ಯರು  ಪಟಾಕಿಗೆ ಖರ್ಚು ಮಾಡುವ ಹಣವನ್ನು ಉಳಿಸಿ,ಆಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಉಡುಗೊರೆ ನೀಡಿ ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ” ಎಂದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್,ಕಾರ್ಯದರ್ಶಿ ಪ್ರವೀಣ್ ಕುಮಾರ್,ಕೋಶಾಧಿಕಾರಿ ಲೋಕೇಶ್ ಸುವರ್ಣ,ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ್ ಮೈಂದನ್,ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ,ಮಹಿಳಾ ಮಂಡಳಿ ಅಧ್ಯಕ್ಷೆ ರಾಜೀವಿ ಉಮೇಶ್,ಜಿತೇಂದ್ರ ಶೆಟ್ಟಿ, ಸತೀಶ್ ಕುಂದರ್,ಉಮೇಶ್ ಕರ್ಕೇರ,ಪ್ರಕಾಶ್ ಶೆಟ್ಟಿ, ಕಿರಣ್,ಹರಿಶ್ಚಂದ್ರ,ಸುರೇಶ್,ಸುರಭಿ ರತನ್,ಅನ್ನುರಾಜ್ ಮೊದಲಾದವರಿದ್ದರು.
Categories
ಕ್ರಿಕೆಟ್

ಭಾರತ ಅಥವಾ ಆಸ್ಟ್ರೇಲಿಯಾ, ಯಾರು ಸೇರಲಿದ್ದಾರೆ ಗೆಲುವಿನ ದಡ?

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ODI ವಿಶ್ವಕಪ್‌ನ ಅಂತಿಮ ಪಂದ್ಯಕ್ಕೆ ಹೆಚ್ಚು ಸಮಯ ಉಳಿದಿಲ್ಲ.ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವದ ಪ್ರಸ್ತುತ ಭಾರತೀಯ ಪಾಳಯ ಉನ್ನತ ಪ್ರದರ್ಶನದಲ್ಲಿ ಓಡುತ್ತಿದ್ದಾರೆ ಮತ್ತು ಇದುವರೆಗೆ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಜೇಯರಾಗಿದ್ದಾರೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಗ್ರ್ಯಾಂಡ್ ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ವಿಶ್ವ ಚಾಂಪಿಯನ್ ಅನ್ನು ನಿರ್ಧರಿಸುವ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಅಹಮದಾಬಾದ್‌ನ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವು ನಡೆಯಲಿದ್ದು
ಇದು ಸಂಪೂರ್ಣವಾಗಿ ತುಂಬಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕ್ರೀಡಾಂಗಣದಲ್ಲಿ ಆಟದ ಸಮಯದಲ್ಲಿ 130,000 ಕ್ಕೂ ಹೆಚ್ಚು ಜನರು ಉಪಸ್ಥಿತರಿರುತ್ತಾರೆ.
ಭಾನುವಾರ ನಡೆಯಲಿರುವ ಈ ಹೈ-ವೋಲ್ಟೇಜ್ IND vs AUS ಘರ್ಷಣೆಯಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಪಂದ್ಯವನ್ನು   ವೀಕ್ಷಿಸುವುದಕ್ಕಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ.
 *20 ವರ್ಷಗಳ ಹಿಂದಿನ ಸೋಲಿನ ಕಿಚ್ಚಿಗೆ ಬಲಿಯಾಗುವುದೇ ಆಸೀಸ್?* 
ಭಾರತ ಮತ್ತು ಆಸ್ಟ್ರೇಲಿಯಾ ಎರಡಕ್ಕೂ 2023ರ ಏಕದಿನ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಇನ್ನೂ ಇದೆ. ಆಸ್ಟ್ರೇಲಿಯ ತಂಡವು ವಿಶ್ವಕಪ್‌ನಲ್ಲಿ ಗರಿಷ್ಠ  ಐದು ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ಬಯಸಿದೆ.
 *ಭಾರತಕ್ಕೆ ಅವಕಾಶ:* ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡಕ್ಕೆ ಮೂರನೇ ಬಾರಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು. ರೋಹಿತ್ ಶರ್ಮಾಗೆ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.
 *ಭಾರತದ ಗೆಲುವಿನ ನಿರೀಕ್ಷೆ* : ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ನಲ್ಲಿ ನೆಚ್ಚಿನ ತಂಡ ಯಾವುದು? ಕ್ರಿಕೆಟ್ ತಜ್ಞರ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸದ್ಯಕ್ಕೆ ಭಾರತ ತಂಡ ಕ್ರಿಕೆಟ್ ಆಡುತ್ತಿರುವ ರೀತಿ, ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಹಲವು ಕ್ರಿಕೆಟ್ ಪಂಡಿತರು ನಂಬಿದ್ದಾರೆ.
 *ಕೊಹ್ಲಿ-ಶಮಿ ಮೇಲೆ ಕಣ್ಣು* : ಭಾರತ ತಂಡದ ಒಂದನೇ ಕ್ರಮಾಂಕದ  ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಗರಿಷ್ಠ 711 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್‌ನಿಂದ ದೊಡ್ಡ ಸ್ಕೋರ್‌ಗಳನ್ನು ನಿರೀಕ್ಷಿಸಬಹುದು. ವಿರಾಟ್ ಕೊಹ್ಲಿ ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಬಹುದು. ಒಂದು ವೇಳೆ ವಿರಾಟ್ ಕೊಹ್ಲಿ ಈ ರೀತಿ ಮಾಡಿದರೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಮೊಹಮ್ಮದ್ ಶಮಿ 6 ಪಂದ್ಯಗಳಲ್ಲಿ 23 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ. ಅವರು ಗೋಲ್ಡನ್ ಬಾಲ್ ಪಡೆಯಬಹುದು.
ರೋಹಿತ್ ಶರ್ಮಾ ಅಂಡ್ ಬಾಯ್ಸ್ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.ಭಾನುವಾರದಂದು ಎರಡು ಅತ್ಯುತ್ತಮ ತಂಡಗಳು ಪರಸ್ಪರ ಮುಖಾಮುಖಿಯಾದಾಗ ಇದು ಕ್ರಿಕೆಟ್‌ನಲ್ಲಿ ದೊಡ್ಡ ದಿನವಾಗಿರುತ್ತದೆ. ಯಾವ ತಂಡ ಹೊಸ ವಿಶ್ವ ಚಾಂಪಿಯನ್ ಆಗಲಿದೆ ಎಂಬುದನ್ನು ಈ ಪಂದ್ಯ ನಿರ್ಧರಿಸಲಿದೆ. ಪಂದ್ಯಾವಳಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಕಳೆದುಕೊಂಡಿಲ್ಲ, ಮತ್ತು ಆಸ್ಟ್ರೇಲಿಯಾ ಸತತ ಎಂಟು ಜಯಗಳಿಸಿದೆ.
ರೋಹಿತ್ ಶರ್ಮಾ ಅಂಡ್ ಬಾಯ್ಸ್
ಅದ್ಭುತವಾಗಿದ್ದಾರೆ. ಆದರೆ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಅವರಿಗಾಗಿ ಕಾಯುತ್ತಿದೆ. ಇದು ಎರಡು ಅತ್ಯುತ್ತಮ ತಂಡಗಳ ನಡುವೆ ಕಠಿಣ ಸ್ಪರ್ಧೆಯಾಗಲಿದೆ ಮತ್ತು ಯಾವ ತಂಡವು ಆಟದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಎತ್ತುತ್ತದೆ ಎಂಬುದನ್ನು ಸಮಯ ಮಾತ್ರ ಹೇಳುತ್ತದೆ. ಹಳದಿ ಬಣ್ಣದ ಪುರುಷರನ್ನು ಎದುರಿಸಲು ಭಾರತೀಯ ನಾಯಕ ಸಜ್ಜಾಗಿದ್ದಾರೆ.
ನಮ್ಮ ‘ಫೈನಲ್’ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಭಾರತವು ತಮ್ಮ ಮೂರನೇ ಜಾಗತಿಕ ಕಿರೀಟವನ್ನು ಎತ್ತುವ ಗುರಿಯೊಂದಿಗೆ ಆಸ್ಟ್ರೇಲಿಯಾವನ್ನು ಎದುರಿಸಲಿ. 20 ವರ್ಷಗಳ ಹಿಂದಿನ ಫೈನಲ್ ಸೋಲಿಗೆ ಸಡ್ಡು ಹೊಡೆದು, 2003 ವಿಶ್ವಕಪ್ ಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲಿ ಭಾರತ.
✍️ ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಅಂಕಣಕಾರ
ಸ್ಪೋರ್ಟ್ಸ್ ಕನ್ನಡ. ಕಾಮ್
Categories
ಕ್ರಿಕೆಟ್

ಟೀಮ್ ಇಂಡಿಯಾ ತೂಫಾನಿ ಪ್ರದರ್ಶನ ಮುಂದೆ ನೆಲಕಚ್ಚುವುದೇ ಆಸೀಸ್?

ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತವು ತಮ್ಮ ಮೂರನೇ ಜಾಗತಿಕ ಕಿರೀಟವನ್ನು ಎತ್ತುವ ಗುರಿಯೊಂದಿಗೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಅತ್ಯುತ್ತಮ ತಂಡಗಳ ನಡುವಿನ ಹಣಾಹಣಿ ಇದಾಗಿದೆ.
ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತ ಅಜೇಯವಾಗಿ ಉಳಿದುಕೊಂಡಿತು ಮತ್ತು ಸೆಮಿಸ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಮತ್ತೊಂದೆಡೆ, ಆಸ್ಟ್ರೇಲಿಯಾ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಲೀಗ್ ಹಂತದಲ್ಲಿ ಸೋತಿತು, ಆದರೆ ನಂತರ ಉಳಿದ ಪಂದ್ಯಗಳಲ್ಲಿ ಗೆದ್ದಿತು.
ಅವರು ಇತ್ತೀಚೆಗೆ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 8 ನೇ ವಿಶ್ವಕಪ್ ಫೈನಲ್‌ಗೆ ತಮ್ಮ ಹಾದಿಯನ್ನು ಪಡೆದರು.ODI ಮಾದರಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವರು ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಸ್ಪರ್ಧೆಯು ಅದರ ಮುಕ್ತಾಯವನ್ನು ಸಮೀಪಿಸುತ್ತಿದ್ದಂತೆ, ಕುತೂಹಲ ಹೆಚ್ಚು ತೀವ್ರಗೊಳ್ಳುತ್ತಿದೆ ಮತ್ತು ಅಭಿಮಾನಿಗಳ ಒಂದು ಪ್ರಶ್ನೆಯೆಂದರೆ ಫೈನಲ್‌ನಲ್ಲಿ  ಏನಾಗುತ್ತದೆ?
2003ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಆಸ್ಟ್ರೇಲಿಯಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಾ ಭಾರತ?
 ✍🏼ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಅಂಕಣಕಾರ
Categories
ಕ್ರಿಕೆಟ್

ಭಾರತ ವಿಶ್ವ ವಿಜೇತರಾಗಲು ಕೇವಲ ಒಂದು ಹೆಜ್ಜೆ ದೂರ

2023ರ ವಿಶ್ವಕಪ್‌ನಲ್ಲಿ ಭಾರತದ ಯೋಧರ ಅಜೇಯ ರಥ ಮುಂದುವರಿದಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವು ಅನುಭವಿಸಿದ  ಟೀಂ ಇಂಡಿಯಾ ಹೆಮ್ಮೆಯಿಂದ ಟೂರ್ನಿಯ ಫೈನಲ್ ತಲುಪಿದೆ.
ಭಾರತ ತಂಡ ನಾಲ್ಕನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೀಂ ಇಂಡಿಯಾದ ಗೆಲುವಿನ ದೊಡ್ಡ ವಿಷಯವೆಂದರೆ ಇಲ್ಲಿಯವರೆಗೆ ಆಡಿದ 10 ಪಂದ್ಯಗಳಲ್ಲಿ ಟೀಂ ಇಂಡಿಯಾ ಅಮೋಘ ಆಟವಾಡಿ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ತಂಡದ ಆಟಗಾರರು ಹಾಗೂ ಅಭಿಮಾನಿಗಳ ಉತ್ಸಾಹ ಉತ್ತುಂಗದಲ್ಲಿದೆ.
ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ  ವಿಶ್ವ ಕಪ್ ಮೆಗಾ ಫೈನಲ್ ಗೆ ದಿನಗಣನೆ ಶುರುವಾಗಿದೆ. ವಿಶ್ವದ ಎರಡು ಬಲಿಷ್ಠ ತಂಡಗಳ ಕಾದಾಟದ ವೀಕ್ಷಣೆಗೆ ಅಭಿಮಾನಿಗಳು ಕಾದುಕುಳಿತಿದ್ದಾರೆ.ವಿಶ್ವಕಪ್ 2023 ರ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನವೆಂಬರ್ 19 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲು ಮೈದಾನಕ್ಕಿಳಿಯಲಿದೆ. ಫೈನಲ್ ಪಂದ್ಯದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ, ಅಗ್ರ ಕ್ರಮಾಂಕದ  ಬ್ಯಾಟರ್ ಗಳು ಈಗಾಗಲೇ ಟೂರ್ನಿಯುದ್ದಕ್ಕೂ ತಮ್ಮ ಸಾಹಸ ಪ್ರದರ್ಶಿಸಿದ್ದಾರೆ. ವೇಗಿಗಳು ತಂಡದ ಪ್ರಮುಖ ಅಸ್ತ್ರ ವಾಗಿದ್ದಾರೆ ಅಲ್ಲದೆ ತಮ್ಮ ನಿಯಮಿತ ಬೌಲಿಂಗ್ ಮೂಲಕ ವಿಶ್ವದ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ.  ಬೌಲರ್ ಗಳು  ಭಯವಿಲ್ಲದೆ ಬೌಲಿಂಗ್ ಮಾಡಿ ಎದುರಾಳಿಯ ಮೈಚಳಿ ಬಿಡಿಸಿದ್ದಾರೆ.  ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ,ಕುಲದೀಪ್ ಯಾದವ್ ತೀಕ್ಷ್ಣ ಬೌಲಿಂಗ್ ಪ್ರದರ್ಶಿಸಿ ಬಿರುಗಾಳಿ ಎಬ್ಬಿಸಿ ಬ್ಯಾಟ್ಸ್ ಮನ್ ಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ.
 *ಇತಿಹಾಸ ಸೃಷ್ಟಿಸಲಿರುವ ರೋಹಿತ್:* 12 ವರ್ಷಗಳ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ವಶಪಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಸದ್ಯ ಭಾರತ ತಂಡ ಅದ್ಭುತ ಫಾರ್ಮ್‌ನಲ್ಲಿದೆ. ಭಾರತದ ಆಟಗಾರರು ಚೆಂಡು ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲುವ ಪ್ರಬಲ ಪೈಪೋಟಿ ತೋರುತ್ತಿದೆ. ಸೆಮಿಫೈನಲ್‌ನಲ್ಲಿ ಭಾರತ 70 ರನ್‌ಗಳಿಂದ ಗೆಲ್ಲುವ ಮೂಲಕ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ.
ಇನ್ನು ಮೈದಾನ ಮತ್ತು ಪಿಚ್ ಬಗ್ಗೆ ಹೇಳುವುದಾದರೆ ಬಹುತೇಕ ಪಂದ್ಯಗಳಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಸ್ಪಿನ್ ಬೌಲರ್ ಗಳಾದ ಕುಲದೀಪ್ ಮತ್ತು ಜಡೇಜಾ ಈಗಾಗಲೇ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರನ್ನು ಎದುರಿಸುವುದು ಎದುರಾಳಿ ತಂಡಕ್ಕೆ ಸುಲಭವಲ್ಲ.ಇದರ ಹೊರತಾಗಿ ಮೈದಾನದಲ್ಲಿರುವ ಪ್ರೇಕ್ಷಕರ ಬಗ್ಗೆ ಹೇಳುವುದಾದರೆ 1 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರೇಕ್ಷಕರ ಮುಂದೆ ಯಾವುದೇ ತಂಡಕ್ಕೆ ಅದು ಸುಲಭವಲ್ಲ. ಟೀಂ ಇಂಡಿಯಾ ಹಾದಿಯನ್ನು ಸುಲಭಗೊಳಿಸುವಲ್ಲಿ ಭಾರತೀಯ ಆಟಗಾರರ ಹೊರತಾಗಿ ಮೈದಾನದಲ್ಲಿರುವ ಪ್ರೇಕ್ಷಕರು ಕೂಡ ದೊಡ್ಡ ಪಾತ್ರವನ್ನು ವಹಿಸುತ್ತಾರೆ ಎಂದು ಅಭಿಮಾನಿಗಳು ಮತ್ತು ತಜ್ಞರು ನಂಬಿದ್ದಾರೆ.
ಹಾಗಾದರೆ ಫೈನಲ್ ನಲ್ಲಿ ಟೀಂ ಇಂಡಿಯಾ ಗೆಲುವು ಖಚಿತವೇ?
✍️ ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಅಂಕಣಕಾರ
ಸ್ಪೋರ್ಟ್ಸ್ ಕನ್ನಡ. ಕಾಮ್
Categories
ಕ್ರಿಕೆಟ್

ನವೆಂಬರ್ 29 ರಿಂದ ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಖ್ಯಾತಿಯ- ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್-2023

ದಾವಣಗೆರೆ-ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ,ದಾವಣಗೆರೆಯ ಶಾಸಕರು ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ನವರ ಧರ್ಮಪತ್ನಿ ದಿ.ಪಾರ್ವತಮ್ಮನವರ ಸವಿನೆನಪಿನ ಅಂಗವಾಗಿ,ಗಣಿ ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ,
ಉದ್ಯಮಿ ಶಿವಗಂಗಾ ಶ್ರೀನಿವಾಸ್ ಶಾಮನೂರು ಶಿವಶಂಕರಪ್ಪನವರ ಆಪ್ತರು ದಿನೇಶ್.ಕೆ.ಶೆಟ್ಟಿ ಮತ್ತು ಕುರುಡಿ ಗಿರೀಶ್,ಪ್ರಥಮ ದರ್ಜೆ ಗುತ್ತಿಗೆದಾರ ಮುನಿ ರೆಡ್ಡಿ ಇವರ ಸಹಕಾರದೊಂದಿಗೆ,ಕ್ರೀಡಾ ಪ್ರೋತ್ಸಾಹಕರಾದ ಜಯಪ್ರಕಾಶ್ ಗೌಡ(ಜೆ.ಪಿ) ಇವರ ದಕ್ಷ ಸಾರಥ್ಯದಲ್ಲಿ,ದಾಖಲೆಯ ಸತತ 16 ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ  ಆಯೋಜಿಸಲಾಗಿದೆ.
ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಎಂದೇ ಖ್ಯಾತಿ ಗಳಿಸಿದ “ಶಾಮನೂರು ಡೈಮಂಡ್,ಶಿವಗಂಗಾ ಕಪ್-2023” ಹೊನಲು ಬೆಳಕಿನ ಈ ರಾಷ್ಟ್ರೀಯ ಮಟ್ಟದ ಪಂದ್ಯಾಟ,
ನವೆಂಬರ್ 29 ರಿಂದ ಡಿಸೆಂಬರ್ 3 ರ ತನಕ ಸತತ 5 ದಿನಗಳ ಕಾಲ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮುಂಬಯಿ,ಮಧ್ಯಪ್ರದೇಶ,ಛತ್ತೀಸ್ಗಢ,ಚೆನ್ನೈ,ಕೇರಳ,ಕರ್ನಾಟಕ ಸೇರಿದಂತೆ ಒಟ್ಟು 50 ಬಲಿಷ್ಠ ತಂಡಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದು,
ದಾವಣಗೆರೆ ಸೇರಿದಂತೆ ರಾಜ್ಯದಾದ್ಯಂತ ಲಕ್ಷಾಂತರ ಕ್ರೀಡಾಭಿಮಾನಿಗಳು ಪಂದ್ಯಾಟದ ಸವಿಯನ್ನು ಸವಿಯಲಿದ್ದಾರೆ.M9Sports ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಶಾಮನೂರು ಶಿವಗಂಗಾ ಕಪ್-2023 ಪಂದ್ಯಾವಳಿಯ ಪ್ರಥಮ ಬಹುಮಾನ 5,00,555 ರೂ ನಗದು,ದ್ವಿತೀಯ ಸ್ಥಾನಿ 3,00,555 ರೂ ನಗದು,ತೃತೀಯ ಸ್ಥಾನಿ 1,55,555 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ.
Categories
ಕ್ರಿಕೆಟ್

ಭಾರತದ ಸಿಂಹ ಘರ್ಜನೆ; ಇನ್ಕ್ರೆಡಿಬಲ್ ಪರ್ಫಾರ್ಮೆನ್ಸ್

ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನ ಮಹತ್ವದ ಎನ್‌ಕೌಂಟರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಶುಭಾರಂಭ ಮಾಡಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಫೋಟಕ ರೀತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಈ ಅವಧಿಯಲ್ಲಿ, ರೋಹಿತ್ ಶರ್ಮಾ ಮೈದಾನದ ಸುತ್ತಲೂ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಕೆಲಸ ಮಾಡಿದರು. Well Played..ಕ್ಯಾಪ್ಟನ್!  Good start!
 *ಸ್ಫೋಟಕ ಆಟವಾಡಿದ ರೋಹಿತ್:* ರೋಹಿತ್ ಶರ್ಮಾ 29 ಎಸೆತಗಳಲ್ಲಿ 47 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಟಿಮ್ ಸೌದಿ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಅವರು ತಮ್ಮ ವಿಕೆಟ್ ಕಳೆದುಕೊಂಡರು. ಡೈವಿಂಗ್ ಮಾಡಿದ ಕೇನ್ ವಿಲಿಯಮ್ಸನ್ ರೋಹಿತ್ ಅವರ ಅದ್ಭುತ ಕ್ಯಾಚ್ ಪಡೆದರು. ಈ ಕ್ಯಾಚ್ ತುಂಬಾ ಕಷ್ಟಕರವಾಗಿತ್ತು ಆದರೆ ವಿಲಿಯಮ್ಸನ್ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿ ಕ್ಯಾಚ್ ಹಿಡಿದರು. ರೋಹಿತ್ ಶರ್ಮಾ ರೂಪದಲ್ಲಿ ಭಾರತಕ್ಕೆ ದೊಡ್ಡ ಆಘಾತವಾಯಿತು. ರೋಹಿತ್ ಶರ್ಮಾ ಔಟಾದ ನಂತರ, ವಾಂಖೆಡೆಯಲ್ಲಿ ಪಿನ್ ಡ್ರಾಪ್ ಮೌನ ಕಂಡುಬಂದಿತು.
 *ಸಚಿನ್ ಸಮ್ಮುಖದಲ್ಲೇ ದಾಖಲೆ ಮುರಿದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ!  ಶತಕಗಳ ಅರ್ಧಶತಕ! :* ರೋಹಿತ್ ಶರ್ಮಾ ನಂತರ ಮೈದಾನಕ್ಕೆ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ ಕೂಡ ಉತ್ತಮ ಹೊಡೆತಗಳನ್ನು ಬಾರಿಸಿದರು. ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಕೂಡ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಮಾಡುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ, ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ 640 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ 594 ರನ್ ಗಳಿಸಿದ್ದರು. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ. ಮುಂಬೈನಲ್ಲಿ ವಿರಾಟ್ ಅವರ ಅದ್ಭುತ ಪ್ರದರ್ಶನಕ್ಕೆ ಇಡೀ ವಾಂಖೆಡೆ ಸ್ಟೇಡಿಯಂ ಮತ್ತು  ಟೆಲಿವಿಷನ್‌ಗಳಿಗೆ ಅಂಟಿಕೊಂಡಿದ್ದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು. ಕೊಯ್ಲಿ ಆಟಕ್ಕೆ ಅಭಿಮಾನಿಗಳು ಫಿದಾ ಆದರು. ಭಾರತದ ಚೇಸ್ ಮಾಸ್ಟರ್ ಸಚಿನ್ ಅವರ ಮತ್ತೊಂದು ದಾಖಲೆಯನ್ನು ಬೆನ್ನಟ್ಟಿದಾಗ ಇಡೀ ವಾಂಖೆಡೆ ಸ್ಟೇಡಿಯಂ ಹುಚ್ಚೆದ್ದು ಕುಣಿದಾಡಿತು. ಕ್ರಿಕೆಟ್ ದೇವರ ದಾಖಲೆ ಧ್ವಂಸಗೊಳಿಸಿದ ದೊರೆ ಕಿಂಗ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಭಾರತೀಯ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮೂರು ದಾಖಲೆಗಳನ್ನು ಅಳಿಸಿಹಾಕಿ ಮೂಲೆಗುಂಪು ಮಾಡಿದ್ದಾರೆ.ವಿರಾಟ್ ಕೊಹ್ಲಿ 50 ಏಕದಿನ ಶತಕ ಸಿಡಿಸಿದ ಸಾರ್ವಕಾಲಿಕ ಮೊದಲ ಬ್ಯಾಟರ್ ಆದರು.
 *ಸಾರ್ವಕಾಲಿಕ ಶ್ರೇಷ್ಠ!* 🐐 
 *ಈ ಪೀಳಿಗೆಯ ಶ್ರೇಷ್ಠ ಆಟಗಾರ!* 
 *ಆಡು ಮುಟ್ಟದ ಸೊಪ್ಪಿಲ್ಲ, ಕ್ರಿಕೆಟ್ ನ 🐐 ವಿರಾಟ್ ಕೊಹ್ಲಿ ಅಂದ್ರೂ ತಪ್ಪಿಲ್ಲ* .
ವಿಶ್ವ ಕಪ್‌ನಲ್ಲಿ ವಿರಾಟ್ ಕೊಹ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ನಾನ್ ಓಪನರ್ ಅಂದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟೂರ್ನಿಯಲ್ಲಿ ಇಷ್ಟು ರನ್ ಗಳಿಸಿದ್ದು ಇದೇ ಮೊದಲು. ಈ ಹಿಂದೆ, ವಿಶ್ವಕಪ್‌ನಲ್ಲಿ 600 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸಿದಾಗ, ಆರಂಭಿಕ ಬ್ಯಾಟ್ಸ್‌ಮನ್‌ಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಪರ ಸಚಿನ್ ತೆಂಡೂಲ್ಕರ್ ರನ್ ಗಳಿಸಿದಾಗಲೆಲ್ಲ ತಂಡದ ಪರ ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಉಳಿದುಕೊಂಡರು.ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದರು. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
 ಶ್ರೇಯಸ್ ಅಯ್ಯರ್ ಅವರು ಸದ್ದಿಲ್ಲದೆ ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡರು.
ಮುಂಬೈನಲ್ಲಿ ಧೂo ಧಮಾಕ ಬ್ಯಾಟಿಂಗ್ ಮಾಡಿದ ಭಾರತ ಏಕದಿನ ವಿಶ್ವಕಪ್‌  ಇತಿಹಾಸ ನಾಕೌಟ್ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿತು. ವಾಂಖೆಡೆಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಭವದಿಂದಾಗಿ ಕಿವೀಸ್‌ಗೆ ಗೆಲ್ಲಲು 398 ರನ್ ಗಳ  ಬೃಹತ್ ಗುರಿ ನೀಡಿತು. ಉತ್ತರವಾಗಿ  ನ್ಯೂಜಿಲ್ಯಾಂಡ್ ಅಪಾರ ಒತ್ತಡದಲ್ಲಿ ತತ್ತರಿಸಿತು. ಮೊಹಮ್ಮದ್ ಶಮಿ ಅಮೋಘವಾದ ಬೌಲಿಂಗ್‌ನಲ್ಲಿ  ಏಳು ವಿಕೆಟ್‌ಗಳನ್ನು ಪಡೆದರು.
2019ರ ಸೆಮಿಫೈನಲ್ ಸೋಲಿಗೆ ಟೀಮ್ ಇಂಡಿಯಾ ಪ್ರತಿಕಾರ ನೀಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ ರೋಹಿತ್ ಬಳಗ! ಭಾರತವು ಕಮಾಂಡಿಂಗ್ ಸ್ಥಾನದಲ್ಲಿದೆ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಬ್ಲಾಕ್ ಬಸ್ಟರ್  ಫೈನಲ್‌ನಲ್ಲಿ ತಮ್ಮ ದಿನಾಂಕವನ್ನು ನಿಗದಿಪಡಿಸಿದೆ.
✍🏼ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಲೇಖಕ
ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಧೈರ್ಯಶಾಲಿಗಳಿಗೆ ಅದೃಷ್ಟ ಒಲವು ತೋರುವ ಸಮಯ ಬಂದಿದೆ.

ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಕದನ
2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಒಂಬತ್ತು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಆದರೆ ಭಾರತ ತಂಡದ ನಿಜವಾದ ಪರೀಕ್ಷೆ ನವೆಂಬರ್ 15 ರಂದು ನಡೆಯಲಿದೆ. ಸೆಮಿಫೈನಲ್ ಪಂದ್ಯಕ್ಕಾಗಿ ಮುಂಬೈಗೆ  ಟೀಮ್ ಇಂಡಿಯಾ ಆಟಗಾರರು ಬಂದಿಳಿದಿದ್ದಾರೆ.
ಮುಂಬೈನ ಐಕಾನಿಕ್  ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ಬುಧವಾರ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದ್ದಿದೆ. ಸೆಮಿಫೈನಲ್‌ನಲ್ಲಿ ಕಿವೀಸ್ ಕಿವಿ ಹಿಂಡಲು ಟೀಮ್ ಇಂಡಿಯಾ ಆಟಗಾರರು ಸಿದ್ಧರಾಗಿದ್ದಾರೆ.
ಕಿವೀಸ್ ತಂಡ ಸ್ಮಾರ್ಟ್ ಟೀಮ್ ಮತ್ತು  ನ್ಯೂಜಿಲೆಂಡ್ ತಂಡ ಸಮತೋಲಿತವಾಗಿದೆ. ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ತಂಡ ಎದುರಾಳಿ ತಂಡಗಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದೆ. ಟೀಂ ಇಂಡಿಯಾ ಬಲಿಷ್ಠ ಫಾರ್ಮ್‌ನಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಬಹುದು.
ಕಿವೀಸ್ ತಂಡವು ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಶೀಘ್ರದಲ್ಲೇ  ಔಟ್ ಮಾಡಲು ಬಯಸುತ್ತದೆ. ಒಂದು ವೇಳೆ ರೋಹಿತ್ ಶರ್ಮಾ ನಿಂತರೆ ಈ ಸೆಮಿಫೈನಲ್‌ನಲ್ಲಿ ಭಾರತ ತಂಡದ ಗೆಲುವು ಖಚಿತ. ಇದುವರೆಗೂ ರೋಹಿತ್ ಶರ್ಮಾ ಯಾವ ಕೆಲಸ ಮಾಡುತ್ತಿದ್ದಾರೋ ಅದೇ ಕೆಲಸವನ್ನು ಮುಂದುವರಿಸಬೇಕಾಗಿದೆ. ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಂದ ದೊಡ್ಡ ರನ್‌ಗಳನ್ನು ನಿರೀಕ್ಷಿಸಲಾಗಿದೆ. ಈ ವರ್ಷ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೆಮಿಫೈನಲ್‌ನಲ್ಲಿ ದೊಡ್ಡ ಮೊತ್ತವನ್ನು ಗಳಿಸುತ್ತಾರೆ ಎಂದು ಭಾರತ ತಂಡವು ಆಶಿಸುತ್ತಿದೆ. ತಂಡವು ಹೆಚ್ಚಾಗಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರನ್ ಗಳಿಸಲೇಬೇಕು.
ಸೆಮಿಫೈನಲ್ ಪಂದ್ಯದ ಒತ್ತಡವು ಸಂಪೂರ್ಣವಾಗಿ ವಿಭಿನ್ನವಾಗಿದೆ.  ಟೀಂ ಇಂಡಿಯಾ ಇದುವರೆಗೆ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಿದೆ. ಭಾರತ ತಂಡವನ್ನು ಬೆಂಬಲಿಸಲು ಅನೇಕ ಅಭಿಮಾನಿಗಳು ಮುಂಬೈಗೆ ಬರಲಿದ್ದಾರೆ. ಭಾರತ ತಂಡವು ಅವರ ಮುಂದೆ ಉತ್ತಮ ಪ್ರದರ್ಶನ ನೀಡಲು ಬಯಸುತ್ತದೆ. ಇದುವರೆಗಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿರುವುದು ಗಮನಾರ್ಹ. ಲೀಗ್ ಹಂತದಲ್ಲಿ ಭಾರತ ಎಲ್ಲಾ 9 ಪಂದ್ಯಗಳನ್ನು ಗೆದ್ದಿದೆ.
ಕಿವೀಸ್ ತಂಡ ಲೀಗ್ ಹಂತದಲ್ಲಿ ಭಾರತ ತಂಡದ ವಿರುದ್ಧ ಸೋಲನುಭವಿಸಬೇಕಾಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಯಾವ ತಂತ್ರದಡಿಯಲ್ಲಿ ಕಣಕ್ಕಿಳಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ 10 ವರ್ಷಗಳಲ್ಲಿ ಐಸಿಸಿಯ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಶೇಕಡಾ 86ರಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನಾಕೌಟ್ ಹಂತದಲ್ಲಿ ಶೇಕಡಾ 89ರಷ್ಟು ನಿರಾಸೆ ಅನುಭವಿಸಿದೆ. ಲೀಗ್‌ನಲ್ಲಿ ಅಬ್ಬರ ತೋರಿಸುತ್ತಿದ್ದ ಭಾರತ , ನಾಕೌಟ್‌ನಲ್ಲಿ ತತ್ತರಗೊಂಡಿತ್ತು. ಈ ಅಂಕಿ-ಅಂಶ ನಿಜಕ್ಕೂ ಟೀಮ್ ಇಂಡಿಯಾದ ನಿದ್ದೆಗೆಡಿಸಿದೆ.
ಕಳೆದ ವರ್ಲ್ಡ್ ಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿನ ರನ್ ಔಟ್ ಮಾಡಿದ ಕಿವಿಸ್ ತಂಡವನ್ನು ಬಗ್ಗು ಬಡಿಯಲಿ; ಭಾರತ ತಂಡಕ್ಕೆ ಶುಭವಾಗಲಿ. ಆಲ್ ದ ಬೆಸ್ಟ್ ಇಂಡಿಯಾ….
 ✍🏼ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಬರಹಗಾರ
ಟೀಂ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬಜ್ಪೆ ಲೆಜೆಂಡ್ಸ್ ವಿಶಿಷ್ಟ ಅಭಿಯಾನ-ಬಿ.ಪಿ.ಎಲ್ 2023

ಕ್ರೀಡೆ ಯುವಕರನ್ನು ಮಾದಕ ವಸ್ತುಗಳಿಂದ ದೂರವಿಡುತ್ತದೆ. ಮಾದಕ ವ್ಯಸನದ ವಿರುದ್ಧ ಬಲವಾದ ಸಂದೇಶದೊಂದಿಗೆ ಕ್ರಿಕೆಟ್‌ನ ಉತ್ಸಾಹವನ್ನು ಸಂಯೋಜಿಸುವ ”ಬಜ್ಪೆ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯು ನವೆಂಬರ್ 17, 2023 ರಿಂದ ಪ್ರಾರಂಭವಾಗಲಿದ್ದು, ಬಜ್ಪೆ ಪಟ್ಟಣ ಅಸಾಧಾರಣ ಕಾರ್ಯಕ್ರಮಕ್ಕೆ ಸಜ್ಜಾಗಿದೆ.
ಬಜ್ಪೆ ಲೆಜೆಂಡ್ಸ್ ಆಯೋಜಿಸುವ ಈ ಹಗಲು-ರಾತ್ರಿಯ ಪಂದ್ಯಾವಳಿ ಮೂರು ದಿನಗಳ ಕಾಲ ಬಜ್ಪೆಯಲ್ಲಿ ನಡೆಯಲಿದೆ.  ಸಿಂಪೋಲೊ ಸಿಕ್ಸರ್ಸ್, ಆಸ್ಟ್ರಿಚ್ ಬ್ಲಾಸ್ಟರ್ಸ್, ಶಾನ್ ಸ್ಪೋರ್ಟಿಂಗ್, ಟೀಮ್ ಸ್ಕೈಲೈನ್ಸ್, ಎಸ್ಪೀ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬಜ್ಪೆ ( RCB),ಟೀಮ್ ಹಾನ್ದಿ ಫೈಟರ್ಸ್, ಟೀಮ್ ಬ್ರೈಟ್ ಪ್ಲೇಯರ್ಸ್, ಸ್ಕೈ ಲೈನ್ಸ್,ಟೀಮ್ ಗ್ರೂಪ್ ಫೋರ್ ಇನ್ನಿತರ ತಂಡಗಳು ಬಿಪಿಎಲ್ ಟ್ರೋಫಿ ಗಾಗಿ ಬಜ್ಪೆಯ ಗೋಲ್ಡ್ ಫೀಲ್ಡ್ ಮೈದಾನದಲ್ಲಿ ಪರಸ್ಪರ ಸೆಣಸಾಡಲಿವೆ. 40 ವರ್ಷ ಮೇಲ್ಪಟ್ಟವರಿಗೆ ಮತ್ತು 16 ಕ್ಕಿಂತ ಕೆಳಗಿನವರಿಗಾಗಿ  ಎರಡು ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಾವಳಿಯು ನಡೆಯಲಿದೆ. ಟೂರ್ನಿಯ ಉತ್ತಮ ಆಟಗಾರನಿಗೆ ಕಿರಿಯರ ವಿಭಾಗದಲ್ಲಿ  ದ್ವಿಚಕ್ರವಾಹನ ಮತ್ತು ಕಿರಿಯರ ವಿಭಾಗದಲ್ಲಿ  ಬೈಸಿಕಲ್ ಅನ್ನು ಪ್ರಶಸ್ತಿಯಾಗಿ ನೀಡಲಾಗುವುದು.
ಪಂದ್ಯಾವಳಿಯ ಆರಂಭದ ಮೊದಲು ಶುಕ್ರವಾರ ನವೆಂಬರ್ 17 ರಂದು ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಮೆರವಣಿಗೆಯು ನಡೆಯಲಿದ್ದು ಎಲ್ಲಾ ತಂಡದ ಸದಸ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ತಮ್ಮ ಪಾತ್ರವನ್ನು ವಹಿಸಲು ಎಲ್ಲಾ ನಾಗರಿಕರು, ಪೋಷಕರು ಮತ್ತು ಇತರ ಜವಾಬ್ದಾರಿಯುತ ಸದಸ್ಯರಿಗೆ  ಬಿಪಿಎಲ್ ಪಂದ್ಯಾವಳಿಯ ಸಂಘಟಕರು ಮನವಿ ಮಾಡಿದ್ದಾರೆ.
ದಿನಾಂಕ 17-11-2023 ರ ಸಾಯಂಕಾಲ 6:30 ಗೆ  ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಆಗಿರುವಂತ  ಶ್ರೀ ಯು ಟಿ ಖಾದರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ  ಶ್ರೀ ದಿನೇಶ್ ಗುಂಡೂರಾವ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.  ಅಷ್ಟೇ ಅಲ್ಲದೆ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್,ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್, ದ.ಕ ಜಿಲ್ಲಾಧಿಕಾರಿ  ಶ್ರೀ ಮುಲ್ಲೈ ಮುರುಗನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ರೈ, ರೋಹನ್ ಕಾರ್ಪೊರೇಷನ್ ನ ರೋಹನ್ ಮೊಂತೆರೊ ಇವರುಗಳು ಗೌರವ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಪಂದ್ಯಾವಳಿಯ ಮುಕ್ತಾಯ ಸಮಾರಂಭ ದಿನಾಂಕ 17-11-2023 ರ ಬೆಳಗ್ಗೆ 11 ಗಂಟೆಗೆ ಜರುಗಲಿರುವುದು ಮತ್ತುಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿರುವರು.
ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರನ್ನು ಮಾದಕ ವ್ಯಸನದಿಂದ ದೂರವಿರಿಸಲು ಬಜ್ಪೆ ಲೆಜೆಂಡ್ಸ್  ತಂಡವು  ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿದೆ. ಒಂದು ಒಳ್ಳೆಯ ಸದುದ್ದೇಶದಿಂದ ನಡೆಯಲ್ಪಡುವ ಈ ಪಂದ್ಯಾವಳಿ ಯುವಜನರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರನ್ನು ಮಾದಕ ವಸ್ತುಗಳಿಂದ ದೂರವಿಡಬಹುದು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಮಾದಕ ವ್ಯಸನದಂತಹ ವಿವಿಧ ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಬಜ್ಪೆ ಲೆಜೆಂಡ್ಸ್ ವೇದಿಕೆಯನ್ನು ಒದಗಿಸುತ್ತಾ ಇದೆ.
ರೋಹನ್ ಕಾರ್ಪೊರೇಷನ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕರು. ಕರ್ನಾಟಕ ರಾಜ್ಯದ ಜನಪ್ರಿಯ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.