Categories
ಕ್ರಿಕೆಟ್

ಆರ್‌ಸಿಬಿ- ದಿ ಕ್ವೀನ್ಸ್ ಆಫ್ ದಿ ಫೀಲ್ಡ್!

2024ರ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಿದವು.  ಕೊನೆಯ ಹಂತದವರೆಗೂ ಬಾರಿ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿ, ಚೊಚ್ಚಲ ಪ್ರಶಸ್ತಿಯನ್ನು ಎತ್ತಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ  ನೀಡಿದ್ರು, ಆರ್‌ಸಿಬಿಯ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ DCಯ ಬ್ಯಾಟಿಂಗ್ ಲೈನ್ ಅಪ್ ಗೆ ಬ್ರೇಕ್ ನೀಡಿದರು. RCB ಬೌಲಿಂಗ್ ದಾಳಿಗೆ DC ತತ್ತರಗೊಂಡಿತು. ಬೆಂಕಿ ಬೌಲಿಂಗ್ ಮಾಡಿದ ಆರ್ ಸಿ ಬಿ ಪಡೆ ಯಾವುದೇ ಎಡವಟ್ಟು ಮಾಡದೆ ಪಂದ್ಯವನ್ನು ಗೆದ್ದುಕೊಂಡು  ಟ್ರೋಫಿಗೆ ಮುತ್ತಿಕ್ಕಿ 16 ವರ್ಷಗಳ ಕನಸನ್ನು ನನಸಾಗಿಸಿತು. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಕ್ರಿಪ್ಟ್ ಇತಿಹಾಸ, ಅದ್ಭುತ ಶೈಲಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ! 
ಕನಸು ಈಡೇರಿದೆ. 16 ವರ್ಷಗಳ ಟ್ರೋಫಿ ಬರ ನೀಗಿಸಿದ ಆರ್‌ಸಿಬಿ ಗರ್ಲ್ಸ್ ತಂಡಕ್ಕೆ ಅಭಿನಂದನೆಗಳು.ಬೆನ್ನು ತಟ್ಟಲೇಬೇಕು: ಕಂಗ್ರಾಜುಲೇಷನ್ಸ್ ಹೇಳಲೇಬೇಕು  ಆರ್‌ಸಿಬಿ ಸಿಂಹಿಣಿಯರಿಗೆ…ನಮ್ಮ ಆರ್‌ಸಿಬಿಯ ಆಪತ್ಬಾಂಧವಿ ಎಲ್ಲಿಸ್ ಪೆರ್ರಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್  ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಒಡತಿಯರಾದರು. WPL-T20 ಫೈನಲ್‌ನಲ್ಲಿ ಜಯಗಳಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು!  ತಮ್ಮ ತಂಡವು ಜಯ ಸಾಧಿಸುತ್ತಿದ್ದಂತೆ RCB ಅಭಿಮಾನಿಗಳು ಸಂತೋಷದ ಸಂಭ್ರಮದಲ್ಲಿದ್ದಾರೆ! 
ಆರ್‌ಸಿಬಿ ಅಭಿಮಾನಿಗಳು ಪದೇ ಪದೇ ಹೇಳುವ ‘ಈ ಸಲ ಕಪ್‌ ನಮ್ದೇ’ ಎಂಬ ಘೋಷ ವಾಕ್ಯವನ್ನು ಸ್ಮೃತಿ ಮಂಧಾನ ‘ಈ ಸಲ ಕಪ್‌ ನಮ್ದು’ ಎಂದು ಬದಲಿಸಿದರು.
ಹೆಣ್ಮಕ್ಕಳೇ ಸ್ಟ್ರಾಂಗ್ ಗುರು… 
Categories
ಕ್ರಿಕೆಟ್

ಸಿಸಿಎಲ್ 2024 ಟೂರ್ನಿಯಲ್ಲಿ ಫಿನಾಲೆಗೆ ತಲುಪಿದ ಕಿಚ್ಚನ ಟೀಂ ಕರ್ನಾಟಕ ಬುಲ್ಡೋಜರ್ಸ್ !!

ಶುಕ್ರವಾರ ಕನ್ನಡಿಗರಿಗೆ ಡಬಲ್ ಖುಷಿ, ಒಂದು ಕಡೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಮತ್ತೊಂದೆಡೆ ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಫೈನಲ್ ತಲುಪಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಶುಕ್ರವಾರ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಸ್ಯಾಂಡಲ್ ವುಡ್ ತಂಡ ಇದೀಗ ಫಿನಾಲೆಯಲ್ಲಿ ಸ್ಥಾನ ಪಡೆದಿದೆ.
ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆಲ್ಲುವುದರ ಮೂಲಕ ಅಂತಿಮ ಸುತ್ತಿಗೆ ಸಜ್ಜಾಗಿದೆ.ಸಿಸಿಎಲ್‌ 2024ರಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 3ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಕರ್ನಾಟಕ ಬುಲ್ಡೋಜರ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ, ಮಾರ್ಚ್ 17 ರಂದು ನಡೆಯಲಿರುವ  ಫೈನಲ್ ಪಂದ್ಯಕ್ಕೆ ನೇರವಾಗಿ  ಪ್ರವೇಶಿಸಿದೆ. 2013 ಹಾಗೂ 2014ರಲ್ಲಿ ಎರಡು ಬಾರಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು. ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಸುದೀಪ್ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸುತ್ತಿದ್ದಾರೆ. ನಟರಾದ ಪ್ರದೀಪ್, ಡಾರ್ಲಿಂಗ್ ಕೃಷ್ಣ, ಜೆಕೆ, ರಾಜೀವ್, ಪ್ರತಾಪ್, ಕರಣ್, ಪೆಟ್ರೋಲ್ ಪ್ರಸನ್ನ, ಮಂಜುನಾಥ್, ಚಂದನ್, ಸುನೀಲ್ ರಾವ್ ತಂಡದಲ್ಲಿದ್ದಾರೆ. ಅಂತಿಮ ಹಣಾಹಣಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರವೇಶಿಸಿದ್ದಕ್ಕೆ ಚಿಯರ್‌ಅಪ್ ಮಾಡೋಣ.
Categories
ಕ್ರಿಕೆಟ್

ದೆಹಲಿಯಲ್ಲಿ ಆರ್ಭಟಿಸಿದ ಆರ್.ಸಿ.ಬಿ ಸಿಂಹಿಣಿಯರು-ಫೈನಲ್ ಗೆ ಲಗ್ಗೆಯಿಟ್ಟ ಸ್ಮೃತಿ ಮಂದನಾ ಪಡೆ

ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ಎಲಿಮಿನೇಟರ್ ಪಂದ್ಯ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಇದರಲ್ಲಿ ಮೊದಲು ಆಡಿದ ಆರ್‌ಸಿಬಿ 6 ವಿಕೆಟ್‌ಗೆ 135 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 130 ರನ್ ಗಳಿಸಿತು ಮತ್ತು RCB ಪಂದ್ಯವನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತು.
ಶುಕ್ರವಾರ, ಮಾರ್ಚ್ 15 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL 2024 ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ (RCBW) ಕೊನೆಯ ಎಸೆತದಲ್ಲಿ ಥ್ರಿಲ್ಲರ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹಿಳೆಯರನ್ನು ಐದು ರನ್‌ಗಳಿಂದ ಸೋಲಿಸಿತು.ಗೆಲುವಿನೊಂದಿಗೆ RCBW ಫೈನಲ್‌ಗೆ ಅರ್ಹತೆ ಪಡೆಯಿತು, ಅಲ್ಲಿ ಸ್ಮೃತಿ ಮಂಧಾನ ನೇತೃತ್ವದ ತಂಡವು ಮೆಗ್ ಲ್ಯಾನಿಂಗ್‌ನ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರನ್ನು ಎದುರಿಸಲಿದೆ
ಕೊನೆಯ ಓವರ್‌ನಲ್ಲಿ ಮುಂಬೈಗೆ 12 ರನ್‌ಗಳ ಅಗತ್ಯವಿತ್ತು. ಈ ರನ್ ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 130 ರನ್ ಗಳಿಸಲು ಶಕ್ತವಾಯಿತು.
RCB ಮಹಿಳೆಯರು ಫೈನಲ್‌ಗೆ ಅರ್ಹತೆ ಪಡೆದ ನಂತರ RCB ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದರು. ಕಳೆದ ಋತುವಿನಲ್ಲಿ ನಾಕೌಟ್‌ಗಳನ್ನು ತಲುಪಲು ವಿಫಲವಾದ ನಂತರ WPL 2024 ಫೈನಲ್‌ಗೆ ಅರ್ಹತೆ ಗಳಿಸಿದ್ದಕ್ಕಾಗಿ ಅಭಿಮಾನಿಗಳು RCBW ಅನ್ನು ಶ್ಲಾಘಿಸಿದ್ದಾರೆ.
ಮಾರ್ಚ್ 17 ರಂದು ದೆಹಲಿ ಮತ್ತು RCB ನಡುವೆ ಫೈನಲ್ ಪಂದ್ಯ ನಡೆಯಲಿದೆ. ಹೆಸರಾಗಲಿ ಬೆಂಗಳೂರು; ಉಸಿರಾಗಲಿ ಆರ್‌ಸಿಬಿ…
Categories
ಸ್ಪೋರ್ಟ್ಸ್

ಅಪ್ಪು ಅಟ್ಯಾಕರ್ಸ್ ಮಣೂರು ಇವರ ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರಾಜರತ್ನ ಟ್ರೋಫಿ-2024

ಕುಂದಾಪುರ-ಇಲ್ಲಿನ ಮಣೂರು ಪರಿಸರದ ಸುಮಾರು 40 ಕ್ಕೂ ಅಧಿಕ ಉತ್ಸಾಹಿ ಯುವ ಗೆಳೆಯರು ಮರೆಯಲಾಗದ ಮಾಣಿಕ್ಯ ಪುನೀತ್ ರಾಜ್ ಕುಮಾರ್ ನಾಮಾಂಕಿತ ಸಂಸ್ಥೆ
ಅಪ್ಪು ಅಟ್ಯಾಕರ್ಸ್ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಪಿನ್ ಕೋಡ್ ಮಾದರಿಯ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರಾಜರತ್ನ ಟ್ರೋಫಿ-2024 ಆಯೋಜಿಸಲಾಗಿದೆ.
ಮಣೂರು ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ನಡುಬೆಟ್ಟು ಮೈದಾನದಲ್ಲಿ ಹೊನಲು ಬೆಳಕಿನನಲ್ಲಿ ಸಾಗಲಿರುವ ಈ ಪಂದ್ಯಾಟದ ಪ್ರಥಮ ಬಹುಮಾನ 25,555 ರೂ,ದ್ವಿತೀಯ 17,777 ರೂ,ತೃತೀಯ 11,111 ರೂ ನಗದು ಸಹಿತ ಆಕರ್ಷಕ ಟ್ರೋಫಿ ಹಾಗೂ ಚತುರ್ಥ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.
ಸಾಧಕರಿಗೆ ಸನ್ಮಾನ
ಸಭಾ ಕಾರ್ಯಕ್ರಮದ ಸಂದರ್ಭ ಗಡಿ ಕಾಯುವ ಸೈನಿಕ  ಯೋಗೀಶ್ ಕಾಂಚನ್,ರಾಷ್ಟ್ರೀಯ ಮಟ್ಟದ
ಕ್ರೀಡಾಪಟುಗಳಾದ ಅಖಿಲೇಶ್ ಕೋಟ,ಪ್ರೇರಣಾ ಜೊತೆಗೆ ಹಿರಿಯ ಕ್ರೀಡಾಪಟು ವಸಂತ ಸುವರ್ಣ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು,
ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.
ಮಾರ್ಚ್ 16 ಶನಿವಾರ ಸಂಜೆ 7 ಗಂಟೆಗೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ರಾಜಕೀಯ ಧುರೀಣರು,ಉದ್ಯಮಿಗಳು ಹಾಗೂ ಗಣ್ಯಾತಿಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
Categories
ಕ್ರಿಕೆಟ್

ISPL 2024 ಫೈನಲ್: ಕೋಲ್ಕತ್ತಾ ಟೈಗರ್ಸ್ ನ ಐತಿಹಾಸಿಕ ಗೆಲುವು

ಮಾಝಿ ಮುಂಬೈ ವಿರುದ್ಧ  ಕೋಲ್ಕತ್ತಾ  ಟೈಗರ್ಸ್ ತಂಡದ ಗೆಲುವಿನ ಝಲಕ್ ಕೊಲ್ಕತ್ತಾದ ಟೈಗರ್ಸ್ ತಂಡ ಮಾಝಿ ಮುಂಬೈಯನ್ನು ಸೋಲಿಸಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್‌ಪಿಎಲ್) ಉದ್ಘಾಟನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 15) ನಡೆದ ಫೈನಲ್‌ನಲ್ಲಿ ಕೋಲ್ಕತ್ತಾದ ಟೈಗರ್ಸ್ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್‌ಪಿಎಲ್) ಫೈನಲ್‌ನಲ್ಲಿ ಮಝಿ ಮುಂಬೈಯನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಟೈಗರ್ಸ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು ಮತ್ತು ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ISPL ಪ್ರಶಸ್ತಿಯನ್ನು ಭದ್ರಪಡಿಸಿಕೊಂಡರು.
ಕೋಲ್ಕತ್ತಾ ತಂಡದ ನಾಯಕ ಪ್ರಥಮೇಶ್ ಪವಾರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.  ಮುಂಬೈ ತನ್ನ ನಿಗದಿತ ಹತ್ತು ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ಗೆ 58 ರನ್ ಗಳಿಸಿತ್ತು. ಭವೇಶ್ ಪವಾರ್ 10ಕ್ಕೆ 3 ವಿಕೆಟ್ ಪಡೆದರೆ, ರಾಜು ಮುಖಿಯಾ ಮತ್ತು ಬಬ್ಬು ರಾಣಾ ಕೂಡ ತಲಾ ಎರಡು ವಿಕೆಟ್ ಪಡೆದರು.
ರನ್ ಚೇಸ್‌ನಲ್ಲಿ, ನಾಯಕ ಪ್ರಥಮೇಶ್ ಪವಾರ್ ಮತ್ತು ಮುನ್ನಾ ಶೇಖ್  ಭದ್ರವಾದ ನೆಲೆಯನ್ನು ನೀಡಿದ ಕಾರಣ ಕೋಲ್ಕತ್ತಾದಿಂದ ಇದು ಸಂಯೋಜಿಸಲ್ಪಟ್ಟ ಆರಂಭವಾಗಿತ್ತು. ಈ ಜೋಡಿಯು ತಮ್ಮ ಉಲ್ಲಾಸದ ಹಾದಿಯನ್ನು ಮುಂದುವರೆಸಿದರು ಮತ್ತು ಪ್ರಥಮೇಶ್ ಪವಾರ್ ತಮ್ಮ ಹಿಟ್ಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು.  ಪವಾರ್ ಮತ್ತು ಖುರೇಷಿ ಅವರು ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡರು.
ISPL 2024 ಅಂತಿಮ ಸಂಕ್ಷಿಪ್ತ ಸ್ಕೋರ್ ಮಾಝಿ ಮುಂಬೈ: 10 ಓವರ್‌ಗಳಲ್ಲಿ 58/9
 (ವಿಜಯ್ ಪಾವ್ಲೆ 13, ಅಜಾಜ್ ಖುರೇಷಿ 9; ಭವೇಶ್ ಪವಾರ್ 3/10, ರಾಜು ಮುಖಿಯಾ 2/12)
ಕೋಲ್ಕತ್ತಾದ ಟೈಗರ್ಸ್: 7.4 ಓವರ್‌ಗಳಲ್ಲಿ 62/0 (ಮುನ್ನಾ ಶೇಖ್ 34, ಪ್ರಥಮೇಶ್ ಪವಾರ್ 30)
ಫಲಿತಾಂಶ: ಟೈಗರ್ಸ್ ಆಫ್ ಕೋಲ್ಕತ್ತಾ 10 ವಿಕೆಟ್‌ಗಳ ಜಯ ಮತ್ತು ISPL2024 ಪ್ರಶಸ್ತಿಯನ್ನು ಗೆದ್ದುಕೊಂಡಿತು
ನಿರೀಕ್ಷೆಯಂತೆ ಕೋಲ್ಕತ್ತಾದ ಟೈಗರ್ಸ್ ತಂಡವು ಮಾಝಿ ಮುಂಬೈ ವಿರುದ್ಧ ಸುಲಭವಾಗಿ ಐಎಸ್‌ಪಿಎಲ್ ಟಿ10 ಫೈನಲ್‌ನಲ್ಲಿ 59 ರನ್ ಗಳಿಸುವ ಮೂಲಕ ಸುಲಭ ಜಯ ಸಾಧಿಸಿ 10 ರನ್‌ಗಳಿಂದ ಗೆದ್ದು ಟ್ರೋಫಿಯನ್ನು ಭದ್ರಪಡಿಸಿಕೊಂಡರು. ಟೈಗರ್ಸ್ ಆಫ್ ಕೋಲ್ಕತ್ತಾ ವಿಜೇತರು 1 ಕೋಟಿ ಪಡೆದರೆ ಮಝಿ ಮುಂಬೈ ರನ್ನರ್ಸ್ 50 ಲಕ್ಷ ಪಡೆದರು.
ನಮ್ಮ ಕರ್ನಾಟಕದ ಇಬ್ಬರು ಆಟಗಾರರು ವಿನ್ನರ್ಸ್ ಮತ್ತು ರನ್ನರ್ಸ್ ತಂಡದ ಭಾಗವಾಗಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಫ್ರೆಂಡ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಸಾಗರ್ ಭಂಡಾರಿ  ಚಾಂಪಿಯನ್ ತಂಡವಾದ  ಕೋಲ್ಕತ್ತಾ ಟೈಗರ್ಸ್ ತಂಡವನ್ನು ಪ್ರತಿನಿಧಿಸಿದರೆ,  ಬೆಂಗಳೂರಿನ ಮೈಟಿ ಕ್ರಿಕೆಟ್ ಕ್ಲಬ್ ನ  ಹೆಮ್ಮೆಯ ಆಟಗಾರ ಮೈಟಿ ಮುರಳಿ ಇವರು ರನ್ನರ್ ಅಪ್ ಮಾಝಿ ಮುಂಬೈಯನ್ನು ಪ್ರತಿನಿಧಿಸಿದ್ದರು. ಇವರಿಬ್ಬರಿಗೂ ಸ್ಪೋರ್ಟ್ಸ್ ಕನ್ನಡದ ಪರವಾಗಿ ಅಭಿನಂದನೆಗಳು.
Categories
ಕ್ರಿಕೆಟ್

ಸನ್ ರೈಸ್ ಕ್ರಿಕೆಟ್ ಅಕಾಡೆಮಿ ರಂಗನಪಲ್ಕೆ ಕೌಡೂರು ಪ್ರಾಯೋಜಿತ ಕ್ರಿಕೆಟ್ ತರಬೇತಿ ಶಿಬಿರ

ಶ್ರೀ ಲಾರೆನ್ಸ್ ಸಲ್ದಾನ  ಇವರು ಸ್ಥಾಪಿಸಿದ  ಸನ್ ರೈಸ್ ಕ್ರಿಕೆಟ್  ಅಕಾಡೆಮಿ ಎಂದಿನಂತೆ ಈ ವರ್ಷ ಕೂಡ ಬೇಸಿಗೆ ರಜಾದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರಿಗೆ  ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಆಯೋಜಿಸಿದೆ.  ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಸೇವೆ ಮತ್ತು ತರಬೇತಿಯ ಏಕೈಕ ಉದ್ದೇಶದೊಂದಿಗೆ ಇವರು  ಪ್ರಮುಖ ಕ್ರಿಕೆಟ್ ಕೋಚಿಂಗ್ ಪೂರೈಕೆದಾರರಾಗಿದ್ದಾರೆ.
ರಂಗನಪಲ್ಕೆಯ  ಗ್ಲಾರಿಡಾ ಎಸ್ಟೇಟ್ ರಂಗನಪಲ್ಕೆ ಕೌಡೂರು  ಸ್ಟೇಡಿಯಂನಲ್ಲಿ ಉತ್ತಮವಾಗಿ ನಿರ್ಮಿಸಲಾದ ಮೈದಾನದಲ್ಲಿ ಈ ಕ್ರಿಕೆಟ್ ತರಬೇತಿ ಶಿಬಿರ ನಡೆಯಲಿದೆ. ವೃತ್ತಿಪರ ತರಬೇತುದಾರರ ಮೂಲಕ ಕ್ರಿಕೆಟ್ ಉತ್ಸಾಹಿ ಹುಡುಗ ಮತ್ತು ಹುಡುಗಿಯರಿಗೆ ಕ್ರಿಕೆಟ್ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಮುಖ್ಯ  ತರಬೇತುದಾರರಾಗಿರುವ ಸದಾನಂದ ಶಿರ್ವ ಈ ಅಕಾಡೆಮಿಯನ್ನು ಮುನ್ನಡೆಸುತ್ತಿದ್ದಾರೆ.
ಈ ಕ್ರಿಕೆಟ್  ಅಕಾಡೆಮಿಯು ಐಷಾರಾಮಿ ಕ್ರೀಡಾ ಸೌಕರ್ಯಗಳು ಮತ್ತು ಸೌಲಭ್ಯಗಳೊಂದಿಗೆ ಎಲ್ಲರಿಗೂ ಸ್ಫೂರ್ತಿ ನೀಡಲು  ಗುಣಮಟ್ಟದ ಸಾಧನಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾಗಿದೆ. ಹೊರಾಂಗಣದ  ಸೌಲಭ್ಯದೊಂದಿಗೆ ಆಸ್ಟ್ರೋ ಟರ್ಫ್  ಪ್ರಾಕ್ಟೀಸ್  ನೆಟ್ಸ್ . ಗುಣಮಟ್ಟದ ಸೇವೆ ಸುತ್ತಮುತ್ತಲಿನ  ಕ್ರಿಕೆಟ್  ಉತ್ಸಾಹಿ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ. ಅನುಭವಿ ತರಬೇತುದಾರರ ಪ್ರಯೋಜನಗಳು, ನಿಯಮಿತ ಪಂದ್ಯಗಳು ಮತ್ತು ಪ್ರವಾಸಗಳು , ಅತ್ಯಂತ ಸಮಂಜಸವಾದ ಶುಲ್ಕರಚನೆ, ಅತ್ಯುತ್ತಮ ಸೇವೆಯೊಂದಿಗೆ ತರಬೇತುದಾರರು ತರಬೇತಿ ನೀಡಲಿದ್ದಾರೆ.
ಈ ಬೇಸಿಗೆ ಕ್ರಿಕೆಟ್ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಅಕಾಡೆಮಿಯ ಹೆಡ್ ಕೋಚ್ ಸದಾನಂದ ಶಿರ್ವ ಇವರನ್ನು ಮೊಬೈಲ್ ಸಂಖ್ಯೆ 9972581234 ಅಥವಾ 7975393148 ನಲ್ಲಿ ಸಂಪರ್ಕಿಸಬಹುದಾಗಿದೆ.
Categories
ಕ್ರಿಕೆಟ್

ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿ ಶಿರ್ವ ವತಿಯಿಂದ ಕ್ರಿಕೆಟ್ ತರಬೇತಿ ಶಿಬಿರ

ಶಿರ್ವ-ವಿದ್ಯಾವರ್ಧಕ ಸಂಘ ರಿಜಿಸ್ಟರ್ಡ್ ಶಿರ್ವ ಮತ್ತು  HJC ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ  ಸಹಭಾಗಿತ್ವದಲ್ಲಿ ಶಿರ್ವದ HJC ಕ್ರಿಕೆಟ್ ಅಕಾಡೆಮಿಯು  ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ  ಕ್ರಿಕೆಟ್ ಆಟದಲ್ಲಿ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಿದೆ. ಶಾಲಾ-ಕಾಲೇಜು ಮಕ್ಕಳ ಬೇಸಿಗೆ ರಜಾದಿನಗಳಲ್ಲಿ ಕ್ರಿಕೆಟ್ ತರಬೇತಿ ಶಿಬಿರವನ್ನು ಇವರುಗಳು ಆಯೋಜಿಸಿದ್ದು  ಕ್ರಿಕೆಟ್‌ಗೆ ಕ್ರೀಡಾ ಸೌಲಭ್ಯಗಳು ಮತ್ತು ತರಬೇತಿಯನ್ನು ನೀಡುತ್ತಾರೆ.
ಈ ಸಮ್ಮರ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ನಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರಿಗೆ ಉತ್ತಮ ತರಬೇತಿ ಮತ್ತು ಕೌಶಲ್ಯಗಳನ್ನು ಒದಗಿಸಲು  ಪರಿಣಿತ ತರಬೇತುದಾರರ ಮತ್ತು ಉತ್ತಮ ನಡತೆಯ ಸಿಬ್ಬಂದಿಯನ್ನು ಈ ಅಕಾಡೆಮಿಯು ಹೊಂದಿರುತ್ತದೆ. HJC ಕ್ರೀಡಾ ಅಕಾಡೆಮಿಯು ಭಾಗವಹಿಸುವವರನ್ನು ಆಟದಲ್ಲಿ ವೃತ್ತಿಪರರನ್ನಾಗಿ ರೂಪಿಸಲು ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಕ್ರಿಕೆಟ್ ಆಟದಲ್ಲಿ ತಮ್ಮ  ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಎಚ್ ಜೆ ಸಿ ಕ್ರಿಕೆಟ್ ಅಕಾಡೆಮಿಯು ವೇದಿಕೆಯಾಗಿದೆ.  ಪ್ರತಿಯೊಬ್ಬ ವಿದ್ಯಾರ್ಥಿ-ಕ್ರೀಡಾಪಟುಗಳು ತಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ತಮ್ಮ ನಿಜವಾದ ಸಾಮರ್ಥ್ಯವನ್ನು ಸಾಧಿಸಲು ಅಕಾಡೆಮಿಯು ಪ್ರೇರೇಪಿಸುತ್ತದೆ.
ವೃತ್ತಿಪರ ತರಬೇತುದಾರರು/ಮಾರ್ಗದರ್ಶಿಗಳೊಂದಿಗೆ ವಿದ್ಯಾರ್ಥಿಗಳು  ಕ್ರೀಡಾ ಸಾಮರ್ಥ್ಯವನ್ನು ಸಡಿಲಿಸಬಹುದು.ಈ  ರೋಮಾಂಚಕಾರಿ ಕ್ರಿಕೆಟ್ ಬೇಸಿಗೆ ಶಿಬಿರ ಎಲ್ಲಾ ಕೌಶಲ್ಯ ಮಟ್ಟಗಳಿಗಾಗಿ ವಿನ್ಯಾಸಗೊಳಿಸಲಾಗಿದೆ,  ಶಿಬಿರವು ಪರಿಣಿತ ತರಬೇತಿ, ಮೋಜಿನ ಡ್ರಿಲ್‌ಗಳು ಮತ್ತು ಪಂದ್ಯದ ಸಿಮ್ಯುಲೇಶನ್‌ಗಳನ್ನು ನೀಡುತ್ತದೆ.  ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೌಶಲ್ಯಗಳನ್ನುಇಲ್ಲಿ ಹೇಗೆ ಸುಧಾರಿಸಬಹುದು  ಎಂಬ ಎಲ್ಲಾ ವಿಷಯಗಳನ್ನು ಹೇಳಿಕೊಡಲಾಗುವುದು.
ಈ ಬೇಸಿಗೆಯಲ್ಲಿ ಮರೆಯಲಾಗದ ಕ್ರಿಕೆಟ್ ಅನುಭವಕ್ಕಾಗಿ ಅಕಾಡೆಮಿಯ ಮುಖ್ಯ ತರಬೇತುದಾರ ಸದಾನಂದ  ಶಿರ್ವ ( ಮೊ. ಸಂಖ್ಯೆ 9972581234 ಅಥವಾ 7975393148 ) ನಲ್ಲಿ ಸಂಪರ್ಕಿಸಿ ಈಗಲೇ ನೋಂದಾಯಿಸಿ…
Categories
ಕ್ರಿಕೆಟ್

ಹುಳಿಮಾವು ಗ್ರಾಮಸ್ಥರ ವತಿಯಿಂದ ರಾಜ್ಯಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಹುಳಿಮಾವು ಕಪ್

ಬೆಂಗಳೂರು-ಇಲ್ಲಿನ ಹುಳಿಮಾವು ಗ್ರಾಮಸ್ಥರ ವತಿಯಿಂದ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಹುಳಿಮಾವು ಕಪ್-2024  ಆಯೋಜಿಸಲಾಗಿದೆ.
ಮಾರ್ಚ್ ದಿನಾಂಕ 30 ಮತ್ತು 31 ರಂದು ಹುಳಿಮಾವು ರಾಯಲ್ ಮೀನಾಕ್ಷಿ ಹಿಂಭಾಗದ ಇಸ್ಲಾಮಿಯಾ ಆಟದ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ 16 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಪ್ರಥಮ‌ ಬಹುಮಾನ 1.5 ಲಕ್ಷ,ದ್ವಿತೀಯ ಬಹುಮಾನ 75 ಸಾವಿರ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದ್ದು  ಭಾಗವಹಿಸಲು ಆಸಕ್ತ ತಂಡಗಳು ಪ್ರವೇಶ ಶುಲ್ಕ 15000 ಪಾವತಿಸಬೇಕಿದೆ.
ಕವರ್ ಡ್ರೈವ್ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು ಹೆಚ್ಚಿನ ವಿವರಗಳಿಗಾಗಿ 9731977362,9739991545 ಅಥವಾ 9606739236 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
Categories
ಕ್ರಿಕೆಟ್

ಇಜಾನ್ ಸ್ಪೋರ್ಟ್ಸ್ ಉಡುಪಿ ಮಡಿಲಿಗೆ ಮುದರಂಗಡಿ ಫ್ರೆಂಡ್ಸ್ ಟ್ರೋಫಿ

ಕಾಪು-ಮುದರಂಗಡಿ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಯೋಜಿಸಲಾದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಮುದರಂಗಡಿ ಫ್ರೆಂಡ್ಸ್ ಟ್ರೋಫಿ ಯನ್ನು ಇಜಾನ್ ಸ್ಪೋರ್ಟ್ಸ್ ಉಡುಪಿ ಜಯಿಸಿದೆ.
ಮುದರಂಗಡಿ ಪಂಚಾಯತ್ ಮೈದಾನದಲ್ಲಿ ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ,
ಮಾರ್ಚ್ 2 ರಂದು ಮಲ್ಪೆ,ದೊಡ್ಡಣಗುಡ್ಡೆ,ಬೀಡಿನಗುಡ್ಡೆ,ಮಣಿಪಾಲ,ಉದ್ಯಾವರ,ಕಟಪಾಡಿ,ಕಾಪು,ಶಿರ್ವ,ಬೆಳ್ಮಣ್,ನಂದಳಿಕೆ,ಕೋಡೂರು,ಮೂಡುಬೆಳ್ಳೆ,ಮುದರಂಗಡಿ,ನಿಟ್ಟೆ,ಇನ್ನಂಜೆ,ಉಚ್ಚಿಲ,ಎರ್ಮಾಳ್,ಪಡುಬಿದ್ರಿ,ಹೆಜಮಾಡಿ,ಬೆಳಪು,ಮುಲ್ಕಿ,ಅಲೆವೂರು,ಹಿರಿಯಡಕ,ಬೈಲೂರು,ಪಲಿಮಾರು,ಪಾಂಗಾಳ ವಲಯದ ಒಟ್ಟು 12 ತಂಡಗಳು
ಹಾಗೂ ಮಾರ್ಚ್ 3 ರಂದು ರಾಜ್ಯಮಟ್ಟದ ಪ್ರಸಿದ್ಧ ತಂಡಗಳಾದ ರಿಯಲ್ ಫೈಟರ್ಸ್ ಮಲ್ಪೆ,ಇಜಾನ್ ಸ್ಪೋರ್ಟ್ಸ್ ಉಡುಪಿ,ಜಾನ್ಸನ್ ಕುಂದಾಪುರ,ಆಯುಷ್ ಇಲೆವೆನ್,ಪ್ರಿನ್ಸ್ ಇಲೆವೆನ್ ಪಿಲಾರ,ಮುದರಂಗಡಿ ರಾಕರ್ಸ್ ಈ 6 ತಂಡಗಳು ಭಾಗವಹಿಸಿದ್ದವು.
ಫೈನಲ್ ನಲ್ಲಿ ಇಜಾನ್ ಸ್ಪೋರ್ಟ್ಸ್ ಉಡುಪಿ- ಚೈತನ್ಯ M.F.C ಅಲೆವೂರು ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ರೂಪದಲ್ಲಿ 50,000 ರೂ ನಗದು,ದ್ವಿತೀಯ ಸ್ಥಾನಿ ಚೈತನ್ಯ
 30,000 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆದುಕೊಂಡರು.
ಪಂದ್ಯಾಟದ ಬೆಸ್ಟ್ ಬ್ಯಾಟರ್ ಗೌರೀಶ್ ಆಚಾರ್ಯ, ಬೆಸ್ಟ್ ಬೌಲರ್ ರಾಹಿಲ್ ಹಾಗೂ ಧೀರಜ್ ಅಲೆವೂರು ಸರಣಿಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪಡುಬಿದ್ರಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಆನಂದ್ ಡಿಸೋಜಾ,ಶರತ್ ಶೆಟ್ಟಿ ಪಡುಬಿದ್ರಿ,ಸುಭಾಸ್ ಕಾಮತ್ ಜೊತಗೆ ರಾಜ್ಯದ ಪ್ರಸಿದ್ಧ ಆಟಗಾರರಾದ ರಾಜಾ ಸಾಲಿಗ್ರಾಮ,ಸಂಪತ್ ಬೈಲಕೆರೆ,ಪ್ರಸಾದ್ ಪಡುಬಿದ್ರಿ, ಎ.ಕೆ ಮನೋಹರ್ ಹಾಗೂ ಹಲವಾರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿರುವ ಜಾನ್ಸನ್ ರವೀಂದ್ರ ಹೆಗ್ಡೆ,ಎ.ಕೆ ಯಶು ಇವರನ್ನು ಸನ್ಮಾನಿಸಲಾಯಿತು
ಸಮಾರೋಪ ಸಮಾರಂಭದಲ್ಲಿ
ಶರತ್ ಶೆಟ್ಟಿ ಮುದರಂಗಡಿ, ಯಶವಂತ್ ಶೆಟ್ಟಿ ಎಲ್ಲೂರು,ಆನಂದ್ ಡಿಸೋಜಾ,ರೆವರೆಂಡ್ ಫಾದರ್ ಫೆಡ್ರಿಕ್ ಡಿಸೋಜಾ,ಸುಧೀರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು
Iceberg Logistics Private Limited ಮತ್ತು Iceberg Shipping LLC ಹಾಗೂ ಕನ್ನಡದ ಮೊದಲ ಹೈಪರ್ ಲಿಂಕ್ Rom Com ಚಲನಚಿತ್ರ ಚೌಚೌಬಾತ್ ತಂಡ ಪಂದ್ಯಾವಳಿಗೆ ಸಂಪೂರ್ಣ ಸಹಕಾರ ನೀಡಿದರು.
Sparkle ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಂಡಿತು.
Categories
ಕ್ರಿಕೆಟ್

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ವಲಯದ ಪಂದ್ಯಾವಳಿ ಜಯಗಳಿಸಿದ – ಮಹಿಳಾ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯ

ಮಣಿಪಾಲ, 05 ಮಾರ್ಚ್ 2024: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ಅಖಿಲ ಭಾರತ ಅಂತರ ವಲಯ – 2023-24ರ ಮಹಿಳೆಯರಿಗಾಗಿ ಇಂಟರ್ ಯೂನಿವರ್ಸಿಟಿ ಕ್ರಿಕೆಟ್ ಟೂರ್ನಮೆಂಟ್‌ನ ಅಂತಿಮ ಪಂದ್ಯವನ್ನು ಮಾರ್ಚ್ 4, 2024 ರಂದು ಎಂಡ್‌ಪಾಯಿಂಟ್ ಮೈದಾನದಲ್ಲಿ ಹೆಮ್ಮೆಯಿಂದ ಆಯೋಜಿಸಿತು. ಉತ್ತರ ಪ್ರದೇಶದ ಜೌನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯ  ಪಂಜಾಬ್‌ನ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ವಿರುದ್ಧದ ಅಂತಿಮ ಪಂದ್ಯದಲ್ಲಿ ಅಸಾಧಾರಣ ಪ್ರತಿಭೆ ಮತ್ತು ಕ್ರೀಡಾ ಮನೋಭಾವದ ಪ್ರದರ್ಶನದಲ್ಲಿ 3 ವಿಕೆಟ್‌ಗಳಿಂದ ಜಯಗಳಿಸಿತು.
ಅಸೋಸಿಯೇಶನ್ ಆಫ್ ಇಂಡಿಯನ್ ಯೂನಿವರ್ಸಿಟಿಗಳ ಸಹಭಾಗಿತ್ವದಲ್ಲಿ ಈ ಮಹತ್ವದ ಟೂರ್ನಿಯು ದೇಶದಾದ್ಯಂತದ ವಿಶ್ವವಿದ್ಯಾನಿಲಯಗಳ ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳನ್ನು ಒಟ್ಟುಗೂಡಿಸಿತು.  MAHE ಮತ್ತು ಅಸೋಸಿಯೇಷನ್‌ನ ಸಹಯೋಗದ  ವೇದಿಕೆಯು ಮಹಿಳಾ ಕ್ರಿಕೆಟ್‌ಗೆ ಸ್ಪರ್ಧಾತ್ಮಕ ಅಖಾಡವನ್ನು ಒದಗಿಸಿ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನದ ಮೌಲ್ಯವನ್ನು ಒತ್ತಿಹೇಳಿತು.
ಅಂತಿಮ ಸ್ಕೋರ್‌: ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ, ಪಂಜಾಬ್ 123/8, ಮತ್ತು ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯ, ಜೌನ್‌ಪುರ್, ಯುಪಿ 124/7 ತಲುಪಿ, 3 ವಿಕೆಟ್‌ಗಳಿಂದ ಜಯ ಸಾಧಿಸಿದವು. ತಮ್ಮ ಗಮನಾರ್ಹ ಪ್ರದರ್ಶನಕ್ಕಾಗಿ ಶ್ರೀಮತಿ ಸಂಪದಾ ದೀಕ್ಷಿತ್ ಅವರಿಗೆ ಪಂದ್ಯದ ಆಟಗಾರ್ತಿ ಗೌರವ ಲಭಿಸಿದೆ.
ಬಿಹಾರದ ದರ್ಭಾಂಗದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯವು ಮೂರನೇ ಸ್ಥಾನವನ್ನು ಪಡೆದುಕೊಂಡಿತು, ಎಂಡಿ ವಿಶ್ವವಿದ್ಯಾಲಯ ರೋಹ್ಟಕ್ ನಾಲ್ಕನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಅತ್ಯುತ್ತಮ ಬ್ಯಾಟರ್ ಎಂದು ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಶ್ರೀಮತಿ ಮೇಘಾ ಮತ್ತು ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಶ್ರೀಮತಿ ಪ್ರಿಯಾಂಕಾ ಮುತ್ರೇಜಾ ಅವರಿಗೆ ಅತ್ಯುತ್ತಮ ಬೌಲರ್ ಮತ್ತು ಪಂದ್ಯಾವಳಿಯ ಅತ್ಯುತ್ತಮ ಆಟಗಾರ್ತಿಯಾಗಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಮತ್ತು ಮಾಹೆಯ ಪ್ರೊ ವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ) ಡಾ.ಶರತ್ ರಾವ್ ಅವರು ಅಸಾಧಾರಣ ಆಟಕ್ಕಾಗಿ ತಂಡಗಳನ್ನು ಅಭಿನಂದಿಸಿದರು. ಲೆಫ್ಟಿನೆಂಟ್ ಜನರಲ್ (ಡಾ.) ವೆಂಕಟೇಶ್ ಅವರು ಕ್ರೀಡಾಪಟುಗಳನ್ನು ಶ್ಲಾಘಿಸಿ, “ಈ ಪಂದ್ಯಾವಳಿಯು  ಯುವ ಮಹಿಳಾ ಕ್ರೀಡಾಪಟುಗಳ ಅದ್ಭುತ ಕೌಶಲ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಮೈದಾನದಲ್ಲಿ ಅವರ ಸಮರ್ಪಣೆ ಮತ್ತು ಉತ್ಸಾಹಭರಿತ ಪ್ರದರ್ಶನವು ನಮ್ಮಲ್ಲಿ ಮಹಿಳಾ ಕ್ರಿಕೆಟ್ ಪ್ರಗತಿಗೆ ಗಣನೀಯ ಕೊಡುಗೆ ನೀಡಿದೆ. .” ಎಂದು ಹೇಳಿದರು. ಸಮಗ್ರ ಬೆಳವಣಿಗೆಯಲ್ಲಿ ಕ್ರೀಡೆಯ ಅವಿಭಾಜ್ಯ ಪಾತ್ರವನ್ನು ಡಾ. ಶರತ್ ರಾವ್ ಒತ್ತಿ ಹೇಳಿದರು,. “ಈ ಪಂದ್ಯಾವಳಿಯ ಉದ್ದಕ್ಕೂ ಪ್ರದರ್ಶಿಸಲಾದ ಅಸಾಧಾರಣ ಪ್ರತಿಭೆ ಮತ್ತು ಕ್ರೀಡಾಸ್ಫೂರ್ತಿಯು ಸುಸಜ್ಜಿತ ವ್ಯಕ್ತಿಗಳನ್ನು ರೂಪಿಸುವಲ್ಲಿ ಕ್ರೀಡೆಗಳ ನಿರ್ಣಾಯಕ ಪಾತ್ರವನ್ನು ವಿವರಿಸುತ್ತದೆ. ಕ್ರೀಡಾ ಪರಾಕ್ರಮವನ್ನು ಗುರುತಿಸುವುದು  ಮಾತ್ರವಲ್ಲದೆ  ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸಲು ಇಂತಹ ವೇದಿಕೆಗಳನ್ನು ಸುಗಮಗೊಳಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಅವರು ಹೇಳಿದರು.
ಮಾಹೆ  ಪ್ರೊ ಚಾನ್ಸಲರ್ ಎಚ್.ಎಸ್ ಬಳ್ಳಾಲ್, ಮಾಹೆ  ಕ್ರೀಡಾ ಮಂಡಳಿಯ ಮುಖ್ಯ ಸಂಯೋಜಕರು ಡಾಕ್ಟರ್ ಉಪೇಂದ್ರ ನಾಯಕ್ , ಮಾಹೆ ಕ್ರಿಕೆಟ್ ಕೌನ್ಸಿಲ್ ಸೆಕ್ರೆಟರಿ ಡಾಕ್ಟರ್ ವಿನೋದ್. ಸಿ. ನಾಯಕ್ ಮತ್ತು ಜಂಟಿ ಕಾರ್ಯದರ್ಶಿ ಮೋನಿಕಾ ಜಾಧವ್ ಉಪಸ್ಥಿತರಿದ್ದರು. ಈ ಪಂದ್ಯಾವಳಿಯ ಯಶಸ್ಸಿನಲ್ಲಿ ಅವರ ಪಾತ್ರಕ್ಕಾಗಿ ಎಲ್ಲಾ ಭಾಗವಹಿಸಿದವರ, ಬೆಂಬಲಿಗರು ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘಕ್ಕೆ MAHE ತನ್ನ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಫೈನಲ್ ಪಂದ್ಯದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಂಡಿತು.
ರೋಚಕವಾಗಿ ಸಾಗಿದ ಫೈನಲ್ ಪಂದ್ಯ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.