ಬೆಂಗಳೂರು-ಮೊಗವೀರ ಸಂಘದ ವತಿಯಿಂದ ಸಮುದಾಯದ ಬಾಂಧವರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಈ ಬಾರಿ ಪ್ರಥಮ ಬಾರಿಗೆ ಮಕ್ಕಳ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ. ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಬೆಂಗಳೂರು-ಮೊಗವೀರ ಸಂಘದ ವತಿಯಿಂದ ಸಮುದಾಯದ ಬಾಂಧವರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಈ ಬಾರಿ ಪ್ರಥಮ ಬಾರಿಗೆ ಮಕ್ಕಳ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ. ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮೊಗವೀರ ಸಂಘ, ಬೆಂಗಳೂರು(ನೋಂ) ತನ್ನ ಸದಸ್ಯರಿಗಾಗಿ ಆಯೋಜಿಸಿದ್ದ *ಮೊಗವೀರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ* ಯು ಜಕ್ಕೂರಿನ ಜೆ ಪಿ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. ಸಂಘದ ಹಿರಿಯ ಸದಸ್ಯರಾದ ಶ್ರೀಮತಿ ಜಾಂಬವತಿ ಮತ್ತು ಶ್ರೀ ಶ್ರೀನಿವಾಸ ಮೊಗೇರ ದಂಪತಿಗಳು ಪಂದ್ಯಾವಳಿಗೆ ಚಾಲನೆ ನೀಡಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಟೋಕಿಯೋ: ವಿಶ್ವ ಬ್ಯಾಡ್ಮಿಂಟನ್ ಅಂಕಣದಲ್ಲಿ ಇಬ್ಬರೂ ಮದಗಜಗಳ ಹೋರಾಟವೆಂದೆ ಖ್ಯಾತಿ ಪಡೆದ ಪಿ.ವಿ. ಸಿಂಧು ಮತ್ತು ಯಮಗುಚಿ ನಡುವಿನ ಪಂದ್ಯದಲ್ಲಿ ಪಿ ವಿ ಸಿಂಧು ಗೆಲುವಿನ ನಗೆಬಿರಿವುದರ ಜೋತೆಗೆ ಪದಕದ ಖಚಿತದೊಂದಿಗೆ ಸೆಮಿ ಪೈನಲ್ ಹಂತಕ್ಕೆ ತಲುಪಿದ್ದಾರೆ
ಬೈಂದೂರು ಸುದ್ಧಿ ಜ.24 : ಇಲ್ಲಿನ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ಬಂಕೇಶ್ವರ ಇವರ ಆಶ್ರಯದಲ್ಲಿ ತೃತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2021, ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬೈಂದೂರು : ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ “ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2020” ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಬೈಂದೂರು ಆರಕ್ಷಕ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಗಳ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಒಂದು ಒಂದು ಕಲೆ ಅಡಗಿರುತ್ತದೆ. ಸಾಕಷ್ಟು ಜನ ಕ್ರೀಡಾಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಎಂದರು.
ಕ್ಲಬ್ ನ ಗೌರವಾಧ್ಯಕ್ಷ ಉದಯ್ ಎಸ್. ಕೆ.ಆರ್.ಸಿ.ಎಲ್ ಅವರು ಮಾತನಾಡಿ, ಕಳೆದ ವರ್ಷ ಸ್ಥಾಪಿಸಿದ ಹೆಮ್ಮೆಯಿದೆ. ಕಳೆದ ವರ್ಷ ಯಾವುದೇ ದೇಣಿಗೆಯನ್ನು ಪಡೆಯದೆ ನಮ್ಮೆಲ್ಲರ ಯುವಕ ಕೈಗೊಡಿಸಿಕೊಂಡು ಶಟಲ್ ಪಂದ್ಯಾಟ ನಡೆಸಿದ್ದೇವೆ. ಆ ಕಾರ್ಯಕ್ರಮವೂ ಕೂಡಾ ಬಹಳ ಯಶ್ವಸಿಯಾಗಿದೆ. ಅದಕ್ಕೆಲ್ಲಾ ನಮ್ಮ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ನ ಪ್ರತಿಯೊಬ್ಬ ಸದಸ್ಯರು ಸಾಕಷ್ಟು ಶ್ರಮ ವಹಿಸಿದ ಕಾರಣದಿಂದ ಇಂದು ಎರಡನೇ ವರ್ಷದ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.
ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಗಾಯಕಿ ಗೀತಾ ಬಂಕೇಶ್ವರ ಸನ್ಮಾನಿಸಲಾಯಿತು.
ಮುಖ್ಯಅತಿಥಿಗಳಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಪ್ರಭಾಕರ ಎಸ್, ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕ ಚಿತ್ರಾ, ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಸದಸ್ಯ ಸುರೇಂದ್ರ ಪೂಜಾರಿ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಶ್ ವಂದಿಸಿದರು.
ಬ್ಯಾಂಕಾಕ್ : ಭಾರತದ ಅನುಭವಿ ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರಿಗೆ ಇನ್ನು ಆರು ತಿಂಗಳಲ್ಲಿ ಆರಂಭವಾಗುವ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಅವಕಾಶ ಜೀವಂತವಾಗಿಟ್ಟುಕೊಳ್ಳಬೇಕಾದರೆ, ಬುಧವಾರ ಆರಂಭವಾಗುವ ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಬೇಕಾಗಿದೆ.
ಕಳೆದ ವರ್ಷ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಕಾರಣ ಸೈನಾ ಮತ್ತು ಶ್ರೀಕಾಂತ್ ಅವರು ‘ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ನ (ಬಿಡಬ್ಲ್ಯುಎಫ್) ಟೋಕಿಯೊ ರ್ಯಾಂಕಿಂಗ್’ನಲ್ಲಿ ಕ್ರಮವಾಗಿ 22 ಮತ್ತು 23ನೇ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಏಪ್ರಿಲ್ 26 ಅಂತಿಮ ದಿನವಾಗಿದೆ. ಥಾಯ್ಲೆಂಡ್ ಟೂರ್ನಿ ಸೇರಿದಂತೆ ಏಪ್ರಿಲ್ಗೆ ಮೊದಲು ಒಟ್ಟು ಎಂಟು ಟೂರ್ನಿಗಳು ಆಡಲು ಉಳಿದಿವೆ. ಈ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ಭಾರತದ ಈ ಇಬ್ಬರು ಸ್ಪರ್ಧಿಗಳಿಗೆ ಟೋಕಿಯೊಗೆ ಟಿಕೆಟ್ ಖಚಿತಪಡಿಸಿಕೊಳ್ಳಬಹುದು.
ಸೈನಾ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್ನ ಡೆನ್ಮಾರ್ಕ್ನ ಲಿನೆ ಹೊಜ್ಮಾರ್ಕ್ ವಿರುದ್ಧ ಆಡಲಿದ್ದಾರೆ. ಶ್ರೀಕಾಂತ್ ಪುರುಷರ ಸಿಂಗಲ್ಸ್ನಲ್ಲಿ ಶೆಸರ್ ಹಿರೆನ್ ರುಸ್ಟಾವಿಟೊ ಅವರನ್ನು ಮತ್ತೆ ಎದುರಿಸಲಿದ್ದಾರೆ.
“ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ.ಸರಳವಾಗಿ ಸ್ವೀಕರಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಸ್ಪರ್ಧೆಗಳಲ್ಲಿ ಭಾಗವಹಿಸಿದವರೆಲ್ಲರೂ ಗೆಲ್ಲಲು ಸಾಧ್ಯವಿಲ್ಲ,ಭಾಗವಹಿಸುವಿಕೆ ಮುಖ್ಯ”ಎಂದು ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿ ಕಂಚಿನಡ್ಕ ಬ್ಯಾಡ್ಮಿಂಟನ್ ಲೀಗ್ ಉದ್ಘಾಟಿಸಿ ಮಾತನಾಡಿದ್ದರು.
ಕೃಷ್ಣ ಬಂಗೇರ ಸಾರಥ್ಯದಲ್ಲಿ
ಪಡುಬಿದ್ರಿ ಕಂಚಿನಡ್ಕದಲ್ಲಿ ನಡೆದ ಹೊನಲು ಬೆಳಕಿನ ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದ್ದರು.
ಶಾಸಕ ಲಾಲಾಜಿ.ಆರ್.ಮೆಂಡನ್ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲೇ ಒಳಾಂಗಣ ಕ್ರೀಡಾಂಗಣವಾಗಿ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆಯಿದೆ ಎಂದು ಹೇಳಿದರು.
ಈ ಸಂದರ್ಭ ಇತ್ತೀಚೆಗಷ್ಟೇ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದು,
60 ನೇ ವರ್ಷದ ಸಂಭ್ರಮದಲ್ಲಿರುವ
ಎಂ.ಆರ್.ಜಿ.ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿಯವರನ್ನು,
ಆಲ್ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟದ ರನ್ನರ್ಸ್ ಹಾಗೂ ಪೋಲ್ಯಾಂಡ್ ನಲ್ಲಿ ನಡೆದ
BWE ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ಯಾಡ್ಮಿಂಟನ್ ಪಟು ಸಂಜಯ್ ಪಡುಬಿದ್ರಿ ಹಾಗೂ ಹಳೆಯಂಗಡಿಯಲ್ಲಿ
ಟೊರ್ಪೆಡೋಸ್ ಸಂಸ್ಥೆಯನ್ನು ಕಟ್ಟಿ,ನಿರಂತರ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸಿ,ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ,ಕ್ರೀಡೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಸಮಾಜರತ್ನ,ಬಂಟರತ್ನ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೌತಮ್ ಶೆಟ್ಟಿ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.
ಹೊನಲು ಬೆಳಕಿನಲ್ಲಿ ಸಾಗಿದ ಈ ಪಂದ್ಯಾವಳಿಯ ರೋಮಾಂಚಕಾರಿ ದೀರ್ಘಕಾಲದ ಹೋರಾಟದ ಬಳಿಕ ಪವನ್ ಪಾದೆಬೆಟ್ಟು ಮಾಲೀಕತ್ವದ ಎಸ್.ಪಿ.ಅಟ್ಯಾಕರ್ಸ್ ತಂಡ ,
ಪಾದೆಬೆಟ್ಟು ಪ್ರಕಾಶ್ ಮಾಲೀಕತ್ವದ ಸ್ಕಂದ ವಾರಿಯರ್ಸ್ ತಂಡವನ್ನು
12-15,9-15,15-12,12-15,15-9,15-6 ಹೀಗೆ 6 ಸೆಟ್ ಗಳ ಮುನ್ನಡೆಯೊಂದಿಗೆ ಪ್ರಥಮ ಪ್ರಶಸ್ತಿ ಪಡೆಯಿತು.
ವಿಜೇತ ತಂಡ 55,555 ನಗದು,
ರನ್ನರ್ಸ್ ತಂಡ 33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಎಸ್.ಅಟ್ಯಾಕರ್ಸ್ ನ ನಿನಾದ್,
ಬೆಸ್ಟ್ ರಿಸೀವರ್ ಸ್ಕಂದ ವಾರಿಯರ್ಸ್ ನ ಶಶನ್ ರಾಜ್,ಬೆಸ್ಟ್ ಸ್ಮ್ಯಾಶರ್ ಎಸ್.ಪಿ ಅಟ್ಯಾಕರ್ಸ್ ನ ಪ್ರವೀಣ್ ಬಜಗೋಳಿ,ಆಲ್ ರೌಡರ್ ಪ್ರಶಸ್ತಿಯನ್ನು ಸಂಜಯ್ ಪಡುಬಿದ್ರಿ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ
ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ.ಜೆ.ಶೆಟ್ಟಿ,ಕಾಪು ಬಿ.ಜೆ.ಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಶರತ್ ಶೆಟ್ಟಿ,ಸಂಘಟಕರಾದ ಕೃಷ್ಣ ಬಂಗೇರ,ಪದ್ಮನಾಭ ಕಂಚಿನಡ್ಕ,ಲೋಹಿತಾಕ್ಷ ಸುವರ್ಣ,ಸುನಿಲ್ ಶೆಟ್ಟಿ, ತಾರಾನಾಥ ಅಮೀನ್,ಅಣ್ಣು ಕಂಚಿನಡ್ಕ, ನಿಜಾಮುದ್ದೀನ್,ಸುರೇಶ್ ಪಡುಬಿದ್ರಿ, ಹರೀಶ್ ಕಂಚಿನಡ್ಕ, ಶಂಕರ್ ಕಂಚಿನಡ್ಕ, ದಿನೇಶ್ ಪಡುಬಿದ್ರಿ,ಯೋಗೀಶ್ ಪಡುಬಿದ್ರಿ
ಉಪಸ್ಥಿತರಿದ್ದರು.
ಆರ್.ಕೆ.ಆಚಾರ್ಯ ಕೋಟ…
ಪಡುಬಿದ್ರಿ ನ್ಯೂಸ್:
ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ ವತಿಯಿಂದ
ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಒಳಗೊಂಡ ಮೂರನೆಯ ಆವೃತ್ತಿಯ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಪಂದ್ಯಾಟವು ಇದೇ ಬರುವ ದಿನಾಂಕ 07.12.2019 ಶನಿವಾರ ಸಂಜೆ 4:00 ಗಂಟೆಗೆ ಸರಿಯಾಗಿ ಕಂಚಿನಡ್ಕದ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಪ್ರಮುಖವಾಗಿ ಉಡುಪಿ ಜಿಲ್ಲಾಧಿಕಾರಿ ಶ್ರೀ ಜಗದೀಶ್,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಪ್ರಕಾಶ್ ಶೆಟ್ಟಿ (ಎಮ್ ಆರ್ ಜಿ ಗ್ರೂಪ್), ಶಾಸಕರಾದ ಶ್ರೀ ರಘುಪತಿ ಭಟ್,ಶ್ರೀ ಲಾಲಾಜಿ ಆರ್ ಮೆಂಡನ್,ವೇದವ್ಯಾಸ್ ಕಾಮತ್ ಉದ್ಯಮಿಗಳಾದ ಶ್ರೀ ಮುನಿಯಾಲು ಉದಯಕುಮಾರ್ ಶೆಟ್ಟಿ,ಸುರೇಶ್ ಶೆಟ್ಟಿ ಗುರ್ಮೆ,ಮಟ್ಟಾರು ರತ್ನಾಕರ ಹೆಗ್ಡೆ, ಶರತ್ ಶೆಟ್ಟಿ ಪಡುಬಿದ್ರಿ,ವಿನಯ್ ಕುಮಾರ್ ಸೊರಕೆ,ಯಶಪಾಲ್ ಸುವರ್ಣ ,ರಾಜಕೀಯ ಧುರೀಣರು ಈ ಉದ್ಘಾಟನ ಸಮಾರಂಭದಲ್ಲಿ ಗೌರವದ ಉಪಸ್ಥಿತರಿಲಿದ್ದಾರೆ.
ಈ ಸಮಾರಂಭದಲ್ಲಿ ಪ್ರಮುಖವಾಗಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಶ್ರೀ ಸಂಜಯ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭಗಳಿಗೆ ಸದಾ ಪ್ರೋತ್ಸಾಹಿಗಳಾದ ಶ್ರೀ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.
ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ – 2019
ಸತತ 2 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ನಡೆಸಿದೆ. ಮೊದಲನೆಯ ಆವೃತ್ತಿಯಲ್ಲಿ ಪಡುಬಿದ್ರಿಯ ಆಟಗಾರರಿಗೆ ಸೀಮಿತವಾಗಿದ್ದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿತ್ತು.
ಎರಡನೇ ಆವೃತ್ತಿಯಲ್ಲಿ ಕಾಪು,ಹಳೆಯಂಗಡಿ, ಪಡುಬಿದ್ರಿ ಭಾಗದ ಆಟಗಾರರ ಸೀಮಿತವಾದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ನಿರೀಕ್ಷೆಗೂ ಮೀರಿದ ಯಶಸ್ಸುಗಳಿತ್ತು.
ಈ ಭಾರಿ ಮೂರನೇ ಆವೃತ್ತಿಗೆ ದಾಪುಗಾಲು ಇಡುವ ಹೊಸ್ತಿಲಲ್ಲಿ ಒಂದು ಹೆಜ್ಜೆ ಮುಂದುವರಿಸುತ್ತ ಬಹುಬೇಡಿಕೆಯಂತೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಆಟಗಾರರಿಗಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಆಯೋಜಿಸಲಾಗಿದೆ..
ನಿರಂತರವಾಗಿ 1 ವರ್ಷದ ಅವಧಿಯಲ್ಲಿ ಈ ಪಂದ್ಯಾಟದ ರೂಪುರೇಷೆಗಳು ಸಿದ್ಧಗೊಂಡಿರುತ್ತದೆ. ಸುಮಾರು 198 ಆಟಗಾರರು ನೋಂದಾಯಿಸಿದ್ದು ಮತ್ತು ಸುಮಾರು 20 ಕ್ಕೂ ಅಧಿಕ ಮಾಲಕರು ತಮ್ಮ ಆಸಕ್ತಿತೊರ್ಪಡಿಸಿರುತ್ತರೆ, ಆದರಲ್ಲಿ ಅಳೆದುತೂಗಿ 10 ತಂಡಗಳಿಗೆ 10 ಮಾಲಕರನ್ನು ಅದಿಕೃತಗೊಳಿಸಿರುತ್ತೇವೆ ಮತ್ತು ಹಿರಿಯ ಆಟಗಾರರ ಸಲಹೆ – ಸೂಚನೆಯಂತೆ ಪ್ರತಿಭಾನ್ವಿತ 70 ಆಟಗಾರಿಗೆ ಅವಕಾಶ ಕಲ್ಪಿಸಿ,ಅವರವರ ಪ್ರತಿಭೆ ಅನುಸಾರವಾಗಿ ಗ್ರೇಡ್ ರೀತಿಯಲ್ಲಿ ಆಟಗಾರರ ಹಂಚಿಕೆ ನಡೆಸಲಾಗಿದೆ. ಆಟಗಾರ ಹಂಚಿಕೆ ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ ಸಮಾರಂಭವು 2019 ನವೆಂಬರ್ 3 ರಂದು ಅದ್ದೂರಿಯಾಗಿ ಸಮಾಪನಗೊಂಡಿದೆ.
ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಮಾಲಕರು ಮತ್ತು ತಂಡಗಳ ವಿವರ
ಪಡುಬಿದ್ರಿ ಸಿ.ಎ ಬ್ಯಾಂಕ್ ನ ಅದ್ಯಕ್ಷರಾದ ಶ್ರೀ ವೈ.ಸುಧೀರ್ ಕುಮಾರ್ ಮಾಲಕತ್ವದ ನವರಂಗ್ ವಾರಿಯರ್ಸ್
ಯುವ ಉದ್ಯಮಿ ಶ್ರೀ ಪವನ್ ಪಾದೆಬೆಟ್ಟು ಮಾಲಿಕತ್ವದ ಎಸ್.ಪಿ ಆಟೇಕರ್ಸ್
ಕಾಪು ಭಾ.ಜ.ಪ ಅದ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ಮಾಲಕತ್ವದ ಸ್ಕಂದ ವಾರಿಯರ್ಸ್.
ಯುವ ಉದ್ಯಮಿ ಶ್ರೀ ಕೃಷ್ಣ ಬಂಗೇರ ಮಾಲಿಕತ್ವದ ನಮೋ ವಾರಿಯರ್ಸ್
ಯುವ ಉದ್ಯಮಿ ಶ್ರೀ ಪ್ರತೀಕ್ ಕೋಟ್ಯಾನ್ ನೇತೃತ್ವದ ನಂದಿಕೂರು ಜವನೆರ್
ಯುವ ಉದ್ಯಮಿ ಶ್ರೀ ಪದ್ಮನಾಭ ನೇತೃತ್ವದ ಬನ್ವಿತ ಸ್ಮಾಶರ್ಸ್
ಕ.ರ.ವೇ ಜಿಲ್ಲಾಧ್ಯಕ್ಷರಾದ ಶ್ರೀ ಅನ್ಸರ್ ಅಹಮದ್ ಮಾಲಿಕತ್ವದ ತಾನಿಯ ರೆಡ್ ರಾಕರ್ಸ್.
ಯುವನಾಯಕ ಶ್ರೀ ಶಂಕರ್ ಪಡುಬಿದ್ರಿ ಮಾಲಿಕತ್ವದ ಯಶ್ ವಾರಿಯರ್ಸ್
ಅಶೋಕ್ ಶೆಟ್ಟಿ ಬೆಂಗಳೂರು ಮಾಲಿಕತ್ವದ ಶೆಟ್ಟಿ ಪೈಟರ್ಸ್
ಪ್ರಶಾಂತ್ ಎರ್ಮಾಳ್ ಮಾಲಿಕತ್ವದ ಎಸ್.ಎನ್.ಜಿ ರಾಯಲ್ಸ್
ಪಂದ್ಯಾಟದಲ್ಲಿ ಭಾಗವಹಿಸುವ ಪ್ರಮುಖ ಆಟಗಾರರು
ಪ್ರಮುಖವಾಗಿ ಈ ಭಾರಿ ರಾಷ್ಟ ಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಶ್ರೀ ಸಂಜಯ್,ಏಷ್ಯಾನ್ ಗೇಮ್ಸ್ ಆಯ್ಕೆಗೊಂಡಿರುವ ಉಜಿರೆ ಎಸ್.ಡಿ.ಎಮ್ ವಿದ್ಯಾರ್ಥಿ ಶ್ರೀ ವಿನಯ್ ಡಿ,ಆರ್, ಪ್ರತಿಭಾನ್ವಿತ ಆಟಗಾರರಾದ ಶ್ರೀ ಮನೀಶ್ ಶ್ರೀ ಮಿನ್ನ ಪಡುಬಿದ್ರಿ,ಮನೋಜ್ ಹೆಜಮಾಡಿ, ಶಿವ ಬೆಳ್ತಂಗಡಿ, ಅಜಯ್ ಶೆಟ್ಟಿ,ಪ್ರಣಮ್ ಬೆಂಗಳೂರು, ಅಶ್ರಪ್ ಪಡುಬಿದ್ರಿ, ಪ್ರದೀಪ್ ಭಟ್ ಭಾಗವಹಿಸಲಿದ್ದಾರೆ..
ನವದೆಹಲಿ (ಪಿಟಿಐ): ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಐದನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ.
ಮುಂದಿನ ಋತುವಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಇದಕ್ಕಾಗಿ ಸೂಕ್ತ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದಾರೆ.
ಐದನೇ ಆವೃತ್ತಿಯ ಪಿಬಿಎಲ್, ಮುಂದಿನ ವರ್ಷದ ಜನವರಿ 20ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. 29 ವರ್ಷ ವಯಸ್ಸಿನ ಸೈನಾ, ಹಿಂದಿನ ಆವೃತ್ತಿಯಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡದ ಪರ ಆಡಿದ್ದರು.
‘ಗಾಯ ಹಾಗೂ ಇತರ ಕಾರಣಗಳಿಂದಾಗಿ ಈ ವರ್ಷ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ನನ್ನಿಂದ ಉತ್ತಮ ಸಾಮರ್ಥ್ಯ ಮೂಡಿಬರಲಿಲ್ಲ. ಮುಂದಿನ ಋತುವಿನಲ್ಲಾದರೂ ಚೆನ್ನಾಗಿ ಆಡಿ ಪ್ರಶಸ್ತಿ ಗೆಲ್ಲಬೇಕು ಎಂದು ತೀರ್ಮಾನಿಸಿದ್ದೇನೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸಬೇಕಿದೆ. ಹೀಗಾಗಿ ಮುಂದಿನ ಆವೃತ್ತಿಯ ಪಿಬಿಎಲ್ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಸೈನಾ, ಸದ್ಯ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ
ದಲ್ಲಿದ್ದಾರೆ. ಈ ವರ್ಷ ಅವರು ಒಟ್ಟು ಆರು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.
29 ವರ್ಷ ವಯಸ್ಸಿನ ಸೈನಾ, ಹಿಂದಿನ ಆವೃತ್ತಿಯಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡದ ಪರ ಆಡಿದ್ದರು.
ಕ್ರೀಡಾಪಟುಗಳಿಗೆ ಅವರದ್ದೇ ಆದ ವಿಚಿತ್ರ ನಂಬಿಕೆಗಳಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಟೆನ್ನಿಸ್ ಪಟು ರಾಫಾ ನಡಾಲ್ನ ಈ ನಂಬಿಕೆ ಕೊಂಚ ವಿಲಕ್ಷಣವಾದದ್ದು.ಆತ ಟೆನ್ನಿಸ್ ಕೋರ್ಟ್ನಲ್ಲಿ ತಾನು ಕುಳಿತುಕೊಳ್ಳುವ ಸೀಟಿನ ಪಕ್ಕ ಯಾವತ್ತಿಗೂ ಎರಡು ಬಾಟಲಿಗಳನ್ನಿಡುತ್ತಾನೆ.ಅದು ನೀರಿರುವ ಅಥವಾ ಜ್ಯೂಸ್ ಇರಬಹುದಾದ ಬಾಟಲಿಯಿರಲಿ.ಎರಡು ಬಾಟಲಿಗಳು ಅವನಿಗೆ ಬೇಕು.ಅದೂ ಸಹ ಅವನು ಕುಳಿತುಕೊಳ್ಳುವ ಆಸನದ ಎಡಪಕ್ಕಕ್ಕೆ ಇರಬೇಕು.
ಒಂದರ ಮುಂದೆ ಒಂದು ಕೊಂಚವೂ ವ್ಯತ್ಯಾಸವಾಗದಂತೆ ಹೊಂದಿಕೆಯಾಗುವಂತೆ ಒಂದರ್ಧ ಅಡಿ ದೂರದಲ್ಲಿ ಇರಬೇಕು.ಹಾಗೆ ಇರುವಂತೆ ಸ್ವತ: ನಡಾಲ್ ಅವುಗಳನ್ನು ಹೊಂದಿಸಿಡುತ್ತಾನೆ.ಬಾಟಲಿಗಳ ಸ್ಥಾನದ ಬಗ್ಗೆ ಆತ ಎಷ್ಟು ಕಟ್ಟುನಿಟ್ಟು ಎಂದರೆ ಬಾಟಲಿಗಳು ಬಿದ್ದು ಹೋದರೆ ಆತ ಸರ್ವಿಸ್ ಮಾಡುವ ಹಂತದಲ್ಲಿದ್ದರೂ ತಕ್ಷಣವೇ ಆಟ ನಿಲ್ಲಿಸಿ ಬಾಟಲುಗಳನ್ನು ಸರಿಪಡಿಸಿಯೇ ಆತ ಮುನ್ನಡೆಯುವುದು.ಹಾಗೊಂದು ವರ್ತನೆಗೆ ಅದೆಷ್ಟೋ ಎಚ್ಚರಿಕೆಗಳು, ದೂರುಗಳು ಬಿದ್ದಿದ್ದರೂ ಆತ ಮಾತ್ರ ತನ್ನ ವರ್ತನೆ ಬದಲಿಸಿಲ್ಲ.
ತೀರ ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ನ ಪಂದ್ಯವೊಂದರಲ್ಲಿ ಸಂದರ್ಶಕನಾಗಿದ್ದ ಮತ್ತೊಬ್ಬ ಟೆನ್ನಿಸ್ ದಂತಕತೆ ಮೆಕೆನ್ರೋ,’ಏನದು ನಿಮ್ಮ ಬಾಟಲಿಗಳ ಕುರಿತು ನಂಬಿಕೆ..?’ ಎಂದು ಪ್ರಶಿಸಿದಾಗ ಉತ್ತರಿಸಿದ್ದ ನಡಾಲ್,’ಬದುಕಿನಲ್ಲಿ ಯಾವುದಾದರೂ ನಂಬಿಕೆಗಳು ಫಲ ನೀಡುತ್ತಲಿವೆಯೆಂದರೆ ಅವುಗಳನ್ನು ಬದಲಿಸಬೇಡಿ, ಫಲ ನೀಡುತ್ತಿಲ್ಲ ಎಂದಾಗ ಮಾತ್ರ ಬದಲಿಸಿ, ಇಷ್ಟರವರೆಗಂತೂ ನನಗೆ ಈ ಬಾಟಲಿ ನಂಬಿಕೆ ಫಲ ನೀಡುತ್ತಲೇ ಇದೆ’ಎನ್ನುತ್ತ ನಕ್ಕಿದ್ದ.
ಯಕಶ್ಚಿತ್ ಪ್ಲಾಸ್ಟಿಕ್ ಬಾಟಲಿಗಳು ಸಹ ಬಲಿಷ್ಠ ಆಟಗಾರನೊಬ್ಬನನ್ನು ಆಡಿಸುವ ಈ ಬಗೆಯ ವರ್ತನೆ ನಿಜಕ್ಕೂ ಮನುಷ್ಯ ಸ್ವಭಾವದ ಕುರಿತು ಆಸಕ್ತಿ ಮೂಡಿಸುವುದಂತೂ ಸುಳ್ಳಲ್ಲ.
– ಗುರುರಾಜ್ ಕೊಡ್ಕಣಿ ಯಲ್ಲಾಪುರ