Categories
ಕ್ರಿಕೆಟ್

ಸಿಸಿಎಲ್ ಫೈನಲ್: ಕರ್ನಾಟಕ ಬುಲ್ಲೋಜರ್ಸ್ ತಂಡಕ್ಕೆ ನಿರಾಸೆ: ಬೆಂಗಾಲ್ ಟೈಗರ್ಸ್‌ಗೆ ಚೊಚ್ಚಲ ಚಾಂಪಿಯನ್ ಪಟ್ಟ

ಫೆಬ್ರವರಿ 23ರಿಂದ ಶುರುವಾಗಿದ್ದ ಸಿಸಿಎಲ್‌ 10ನೇ ಸೀಸನ್‌ಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಸೋಲುಂಡಿದೆ. ಇದೇ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಸ್ಯಾಂಡಲ್‌ವುಡ್ ತಾರೆಯರ ತಂಡ ಫೈನಲ್ ಪ್ರವೇಶಿಸಿತ್ತು.
ಟೂರ್ನಿಯುದ್ದಕ್ಕೂ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯದಲ್ಲಿ ಕೂಡ ಪ್ರಬಲ ಹೋರಾಟ ನಡೆಸಿ ನಟ ಕಿಚ್ಚ ಸುದೀಪ್ ನೇತೃತ್ವದ  ತಂಡ ಸೋಲುಂಡಿದೆ. ನಾಲ್ಕು ಇನ್ನಿಂಗ್ಸ್‌ಗಳಾಗಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಬೆಂಗಾಲ್ ಟೈಗರ್ಸ್ ತಂಡ ಗೆಲುವು ಸಾಧಿಸಿದೆ. ವಿಶೇಷ ಅಂದ್ರೆ ಸರಣಿಯಲ್ಲಿ ಎರಡು ಬಾರಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಗೆಲುವಿನ ನಗೆ ಬೀರಿತ್ತು.
ಕಳಪೆ ಬೌಲಿಂಗ್ ಕಾರಣಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಕ್ಕ ಬೆಲೆ ತೆರುವಂತಾಯಿತು. ಸಿಸಿಎಲ್‌ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋತಿರುವುದು ಬೇಸರ ಮೂಡಿಸಿದೆ.  ಆದರೂ ಆಟಗಾರರು ತಮ್ಮ ಆಟದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಬೈಂದೂರು ವಿಕ್ರಮ್ ಕ್ರಿಕೆಟ್ ಕ್ಲಬ್ ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

ಬೈಂದೂರು: ಬೈಂದೂರು ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಆಸಕ್ತ ಮಕ್ಕಳಿಗೆ  ಕ್ರಿಕೆಟ್ ತರಬೇತಿಯನ್ನು ನೀಡಿ   ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನಾಗಿ ಮಾರ್ಪಡಿಸಲು  ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್  ಕ್ಲಬ್  ಬೈಂದೂರು ವಾರ್ಷಿಕ ತರಬೇತಿ ಶಿಬಿರವನ್ನು ಆರಂಭಿಸಿದೆ.
ಬೈಂದೂರು ನಗರದ ವಿಕ್ರಮ್ ಕ್ರಿಕೆಟ್  ಕ್ಲಬ್   ಪ್ರತಿಭಾವಂತ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿರುವ ಶಿಬಿರ ಏಪ್ರಿಲ್  1 ರಿಂದ ಆರಂಭಗೊಳ್ಳಲಿದ್ದು, ಮೇ 31ರವರೆಗೆ ಬೈಂದೂರಿನ  ಮೈದಾನದಲ್ಲಿ ಶಿಬಿರ ನಡೆಸಿ ತರಬೇತಿ ನೀಡುತ್ತಿದೆ. 10 ವರ್ಷದ ಮಕ್ಕಳಿಂದ 23 ವರ್ಷದೊಳಗಿನ ಬಾಲಕ ಬಾಲಕಿಯರಿಗೆ ಇಲ್ಲಿ ತರಬೇತಿ ನೀಡಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಪಾಲ್ಗೊಂಡವರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಲಾಗುವುದು.
ಕಳೆದ ಬಹಳಷ್ಟು ವರ್ಷಗಳಿಂದ ಸತತವಾಗಿ ವಾರ್ಷಿಕ ತರಬೇತಿ, ಬೇಸಿಗೆ ಶಿಬಿರಗಳನ್ನು ನಡೆಸುತ್ತಿರುವ ವಿಕ್ರಮ್ ಕ್ರಿಕೆಟ್  ಕ್ಲಬ್  ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿ ಆಯೋಜಿಸಿ ಪ್ರತಿಭಾವಂತ ಕ್ರಿಕೆಟ್ ಪಟುಗಳ ಶೋಧಕಾರ್ಯದಲ್ಲಿ ನಿರತವಾಗಿದೆ . ಇಲ್ಲಿ ಉತ್ಸಾಹಿ ಹಿರಿಯ ಆಟಗಾರರು ಮತ್ತು ತಜ್ಞ ಕ್ರಿಕೆಟ್ ಪಟುಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಿ, ಪ್ರತಿಭಾವಂತರನ್ನು ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ತಯಾರಿ ನಡೆಸಲಾಗುತ್ತದೆ ಎಂದು ಕ್ಲಬ್ ನ ದಿನೇಶ್ ಗಾಣಿಗ ಬೈಂದೂರು ತಿಳಿಸಿದ್ದಾರೆ.
ಇಲ್ಲಿ ತರಬೇತಿ ಪಡೆದ ಸಾಕಷ್ಟು ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಅವರು, ಆಸಕ್ತ ಕ್ರಿಕೆಟ್ ಪ್ರೇಮಿಗಳು ಒಟ್ಟುಗೂಡಿ ಈ ಸತ್ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.
ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ತಯಾರುಗೊಳಿಸಿ ಭವಿಷ್ಯದ ಕ್ರಿಕೆಟ್ ಪಟುಗಳಾಗಿ ರೂಪುಗೊಳಿಸುವುದೇ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್  ಕ್ಲಬ್  ಬೈಂದೂರು ಸಂಸ್ಥೆಯ ಗುರಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕ್ರಿಕೆಟ್ ಕೋಚ್ ಪ್ರಕಾಶ್ ಕುಲಾಲ್ 7678022778 ಅಥವಾ ದಿನೇಶ್ ಗಾಣಿಗ 6363852771, ರಾಜೇಶ್ ಆಚಾರ್ ಬೈಂದೂರು 9916440337 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
Categories
ಕ್ರಿಕೆಟ್

ಆರ್‌ಸಿಬಿ- ದಿ ಕ್ವೀನ್ಸ್ ಆಫ್ ದಿ ಫೀಲ್ಡ್!

2024ರ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಿದವು.  ಕೊನೆಯ ಹಂತದವರೆಗೂ ಬಾರಿ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿ, ಚೊಚ್ಚಲ ಪ್ರಶಸ್ತಿಯನ್ನು ಎತ್ತಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ  ನೀಡಿದ್ರು, ಆರ್‌ಸಿಬಿಯ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ DCಯ ಬ್ಯಾಟಿಂಗ್ ಲೈನ್ ಅಪ್ ಗೆ ಬ್ರೇಕ್ ನೀಡಿದರು. RCB ಬೌಲಿಂಗ್ ದಾಳಿಗೆ DC ತತ್ತರಗೊಂಡಿತು. ಬೆಂಕಿ ಬೌಲಿಂಗ್ ಮಾಡಿದ ಆರ್ ಸಿ ಬಿ ಪಡೆ ಯಾವುದೇ ಎಡವಟ್ಟು ಮಾಡದೆ ಪಂದ್ಯವನ್ನು ಗೆದ್ದುಕೊಂಡು  ಟ್ರೋಫಿಗೆ ಮುತ್ತಿಕ್ಕಿ 16 ವರ್ಷಗಳ ಕನಸನ್ನು ನನಸಾಗಿಸಿತು. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಕ್ರಿಪ್ಟ್ ಇತಿಹಾಸ, ಅದ್ಭುತ ಶೈಲಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ! 
ಕನಸು ಈಡೇರಿದೆ. 16 ವರ್ಷಗಳ ಟ್ರೋಫಿ ಬರ ನೀಗಿಸಿದ ಆರ್‌ಸಿಬಿ ಗರ್ಲ್ಸ್ ತಂಡಕ್ಕೆ ಅಭಿನಂದನೆಗಳು.ಬೆನ್ನು ತಟ್ಟಲೇಬೇಕು: ಕಂಗ್ರಾಜುಲೇಷನ್ಸ್ ಹೇಳಲೇಬೇಕು  ಆರ್‌ಸಿಬಿ ಸಿಂಹಿಣಿಯರಿಗೆ…ನಮ್ಮ ಆರ್‌ಸಿಬಿಯ ಆಪತ್ಬಾಂಧವಿ ಎಲ್ಲಿಸ್ ಪೆರ್ರಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್  ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಒಡತಿಯರಾದರು. WPL-T20 ಫೈನಲ್‌ನಲ್ಲಿ ಜಯಗಳಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು!  ತಮ್ಮ ತಂಡವು ಜಯ ಸಾಧಿಸುತ್ತಿದ್ದಂತೆ RCB ಅಭಿಮಾನಿಗಳು ಸಂತೋಷದ ಸಂಭ್ರಮದಲ್ಲಿದ್ದಾರೆ! 
ಆರ್‌ಸಿಬಿ ಅಭಿಮಾನಿಗಳು ಪದೇ ಪದೇ ಹೇಳುವ ‘ಈ ಸಲ ಕಪ್‌ ನಮ್ದೇ’ ಎಂಬ ಘೋಷ ವಾಕ್ಯವನ್ನು ಸ್ಮೃತಿ ಮಂಧಾನ ‘ಈ ಸಲ ಕಪ್‌ ನಮ್ದು’ ಎಂದು ಬದಲಿಸಿದರು.
ಹೆಣ್ಮಕ್ಕಳೇ ಸ್ಟ್ರಾಂಗ್ ಗುರು… 
Categories
ಕ್ರಿಕೆಟ್

ಸಿಸಿಎಲ್ 2024 ಟೂರ್ನಿಯಲ್ಲಿ ಫಿನಾಲೆಗೆ ತಲುಪಿದ ಕಿಚ್ಚನ ಟೀಂ ಕರ್ನಾಟಕ ಬುಲ್ಡೋಜರ್ಸ್ !!

ಶುಕ್ರವಾರ ಕನ್ನಡಿಗರಿಗೆ ಡಬಲ್ ಖುಷಿ, ಒಂದು ಕಡೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಮತ್ತೊಂದೆಡೆ ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಫೈನಲ್ ತಲುಪಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಶುಕ್ರವಾರ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಸ್ಯಾಂಡಲ್ ವುಡ್ ತಂಡ ಇದೀಗ ಫಿನಾಲೆಯಲ್ಲಿ ಸ್ಥಾನ ಪಡೆದಿದೆ.
ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆಲ್ಲುವುದರ ಮೂಲಕ ಅಂತಿಮ ಸುತ್ತಿಗೆ ಸಜ್ಜಾಗಿದೆ.ಸಿಸಿಎಲ್‌ 2024ರಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 3ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಕರ್ನಾಟಕ ಬುಲ್ಡೋಜರ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ, ಮಾರ್ಚ್ 17 ರಂದು ನಡೆಯಲಿರುವ  ಫೈನಲ್ ಪಂದ್ಯಕ್ಕೆ ನೇರವಾಗಿ  ಪ್ರವೇಶಿಸಿದೆ. 2013 ಹಾಗೂ 2014ರಲ್ಲಿ ಎರಡು ಬಾರಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು. ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಸುದೀಪ್ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸುತ್ತಿದ್ದಾರೆ. ನಟರಾದ ಪ್ರದೀಪ್, ಡಾರ್ಲಿಂಗ್ ಕೃಷ್ಣ, ಜೆಕೆ, ರಾಜೀವ್, ಪ್ರತಾಪ್, ಕರಣ್, ಪೆಟ್ರೋಲ್ ಪ್ರಸನ್ನ, ಮಂಜುನಾಥ್, ಚಂದನ್, ಸುನೀಲ್ ರಾವ್ ತಂಡದಲ್ಲಿದ್ದಾರೆ. ಅಂತಿಮ ಹಣಾಹಣಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಪ್ರವೇಶಿಸಿದ್ದಕ್ಕೆ ಚಿಯರ್‌ಅಪ್ ಮಾಡೋಣ.
Categories
ಕ್ರಿಕೆಟ್

ದೆಹಲಿಯಲ್ಲಿ ಆರ್ಭಟಿಸಿದ ಆರ್.ಸಿ.ಬಿ ಸಿಂಹಿಣಿಯರು-ಫೈನಲ್ ಗೆ ಲಗ್ಗೆಯಿಟ್ಟ ಸ್ಮೃತಿ ಮಂದನಾ ಪಡೆ

ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ಎಲಿಮಿನೇಟರ್ ಪಂದ್ಯ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಇದರಲ್ಲಿ ಮೊದಲು ಆಡಿದ ಆರ್‌ಸಿಬಿ 6 ವಿಕೆಟ್‌ಗೆ 135 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 130 ರನ್ ಗಳಿಸಿತು ಮತ್ತು RCB ಪಂದ್ಯವನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತು.
ಶುಕ್ರವಾರ, ಮಾರ್ಚ್ 15 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL 2024 ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ (RCBW) ಕೊನೆಯ ಎಸೆತದಲ್ಲಿ ಥ್ರಿಲ್ಲರ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹಿಳೆಯರನ್ನು ಐದು ರನ್‌ಗಳಿಂದ ಸೋಲಿಸಿತು.ಗೆಲುವಿನೊಂದಿಗೆ RCBW ಫೈನಲ್‌ಗೆ ಅರ್ಹತೆ ಪಡೆಯಿತು, ಅಲ್ಲಿ ಸ್ಮೃತಿ ಮಂಧಾನ ನೇತೃತ್ವದ ತಂಡವು ಮೆಗ್ ಲ್ಯಾನಿಂಗ್‌ನ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರನ್ನು ಎದುರಿಸಲಿದೆ
ಕೊನೆಯ ಓವರ್‌ನಲ್ಲಿ ಮುಂಬೈಗೆ 12 ರನ್‌ಗಳ ಅಗತ್ಯವಿತ್ತು. ಈ ರನ್ ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 130 ರನ್ ಗಳಿಸಲು ಶಕ್ತವಾಯಿತು.
RCB ಮಹಿಳೆಯರು ಫೈನಲ್‌ಗೆ ಅರ್ಹತೆ ಪಡೆದ ನಂತರ RCB ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದರು. ಕಳೆದ ಋತುವಿನಲ್ಲಿ ನಾಕೌಟ್‌ಗಳನ್ನು ತಲುಪಲು ವಿಫಲವಾದ ನಂತರ WPL 2024 ಫೈನಲ್‌ಗೆ ಅರ್ಹತೆ ಗಳಿಸಿದ್ದಕ್ಕಾಗಿ ಅಭಿಮಾನಿಗಳು RCBW ಅನ್ನು ಶ್ಲಾಘಿಸಿದ್ದಾರೆ.
ಮಾರ್ಚ್ 17 ರಂದು ದೆಹಲಿ ಮತ್ತು RCB ನಡುವೆ ಫೈನಲ್ ಪಂದ್ಯ ನಡೆಯಲಿದೆ. ಹೆಸರಾಗಲಿ ಬೆಂಗಳೂರು; ಉಸಿರಾಗಲಿ ಆರ್‌ಸಿಬಿ…
Categories
ಸ್ಪೋರ್ಟ್ಸ್

ಅಪ್ಪು ಅಟ್ಯಾಕರ್ಸ್ ಮಣೂರು ಇವರ ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರಾಜರತ್ನ ಟ್ರೋಫಿ-2024

ಕುಂದಾಪುರ-ಇಲ್ಲಿನ ಮಣೂರು ಪರಿಸರದ ಸುಮಾರು 40 ಕ್ಕೂ ಅಧಿಕ ಉತ್ಸಾಹಿ ಯುವ ಗೆಳೆಯರು ಮರೆಯಲಾಗದ ಮಾಣಿಕ್ಯ ಪುನೀತ್ ರಾಜ್ ಕುಮಾರ್ ನಾಮಾಂಕಿತ ಸಂಸ್ಥೆ
ಅಪ್ಪು ಅಟ್ಯಾಕರ್ಸ್ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಪಿನ್ ಕೋಡ್ ಮಾದರಿಯ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರಾಜರತ್ನ ಟ್ರೋಫಿ-2024 ಆಯೋಜಿಸಲಾಗಿದೆ.
ಮಣೂರು ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ನಡುಬೆಟ್ಟು ಮೈದಾನದಲ್ಲಿ ಹೊನಲು ಬೆಳಕಿನನಲ್ಲಿ ಸಾಗಲಿರುವ ಈ ಪಂದ್ಯಾಟದ ಪ್ರಥಮ ಬಹುಮಾನ 25,555 ರೂ,ದ್ವಿತೀಯ 17,777 ರೂ,ತೃತೀಯ 11,111 ರೂ ನಗದು ಸಹಿತ ಆಕರ್ಷಕ ಟ್ರೋಫಿ ಹಾಗೂ ಚತುರ್ಥ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.
ಸಾಧಕರಿಗೆ ಸನ್ಮಾನ
ಸಭಾ ಕಾರ್ಯಕ್ರಮದ ಸಂದರ್ಭ ಗಡಿ ಕಾಯುವ ಸೈನಿಕ  ಯೋಗೀಶ್ ಕಾಂಚನ್,ರಾಷ್ಟ್ರೀಯ ಮಟ್ಟದ
ಕ್ರೀಡಾಪಟುಗಳಾದ ಅಖಿಲೇಶ್ ಕೋಟ,ಪ್ರೇರಣಾ ಜೊತೆಗೆ ಹಿರಿಯ ಕ್ರೀಡಾಪಟು ವಸಂತ ಸುವರ್ಣ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು,
ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.
ಮಾರ್ಚ್ 16 ಶನಿವಾರ ಸಂಜೆ 7 ಗಂಟೆಗೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ರಾಜಕೀಯ ಧುರೀಣರು,ಉದ್ಯಮಿಗಳು ಹಾಗೂ ಗಣ್ಯಾತಿಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
Categories
ಕ್ರಿಕೆಟ್

ISPL 2024 ಫೈನಲ್: ಕೋಲ್ಕತ್ತಾ ಟೈಗರ್ಸ್ ನ ಐತಿಹಾಸಿಕ ಗೆಲುವು

ಮಾಝಿ ಮುಂಬೈ ವಿರುದ್ಧ  ಕೋಲ್ಕತ್ತಾ  ಟೈಗರ್ಸ್ ತಂಡದ ಗೆಲುವಿನ ಝಲಕ್ ಕೊಲ್ಕತ್ತಾದ ಟೈಗರ್ಸ್ ತಂಡ ಮಾಝಿ ಮುಂಬೈಯನ್ನು ಸೋಲಿಸಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್‌ಪಿಎಲ್) ಉದ್ಘಾಟನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 15) ನಡೆದ ಫೈನಲ್‌ನಲ್ಲಿ ಕೋಲ್ಕತ್ತಾದ ಟೈಗರ್ಸ್ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್‌ಪಿಎಲ್) ಫೈನಲ್‌ನಲ್ಲಿ ಮಝಿ ಮುಂಬೈಯನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಟೈಗರ್ಸ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು ಮತ್ತು ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದು ಚೊಚ್ಚಲ ISPL ಪ್ರಶಸ್ತಿಯನ್ನು ಭದ್ರಪಡಿಸಿಕೊಂಡರು.
ಕೋಲ್ಕತ್ತಾ ತಂಡದ ನಾಯಕ ಪ್ರಥಮೇಶ್ ಪವಾರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.  ಮುಂಬೈ ತನ್ನ ನಿಗದಿತ ಹತ್ತು ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ಗೆ 58 ರನ್ ಗಳಿಸಿತ್ತು. ಭವೇಶ್ ಪವಾರ್ 10ಕ್ಕೆ 3 ವಿಕೆಟ್ ಪಡೆದರೆ, ರಾಜು ಮುಖಿಯಾ ಮತ್ತು ಬಬ್ಬು ರಾಣಾ ಕೂಡ ತಲಾ ಎರಡು ವಿಕೆಟ್ ಪಡೆದರು.
ರನ್ ಚೇಸ್‌ನಲ್ಲಿ, ನಾಯಕ ಪ್ರಥಮೇಶ್ ಪವಾರ್ ಮತ್ತು ಮುನ್ನಾ ಶೇಖ್  ಭದ್ರವಾದ ನೆಲೆಯನ್ನು ನೀಡಿದ ಕಾರಣ ಕೋಲ್ಕತ್ತಾದಿಂದ ಇದು ಸಂಯೋಜಿಸಲ್ಪಟ್ಟ ಆರಂಭವಾಗಿತ್ತು. ಈ ಜೋಡಿಯು ತಮ್ಮ ಉಲ್ಲಾಸದ ಹಾದಿಯನ್ನು ಮುಂದುವರೆಸಿದರು ಮತ್ತು ಪ್ರಥಮೇಶ್ ಪವಾರ್ ತಮ್ಮ ಹಿಟ್ಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು.  ಪವಾರ್ ಮತ್ತು ಖುರೇಷಿ ಅವರು ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡರು.
ISPL 2024 ಅಂತಿಮ ಸಂಕ್ಷಿಪ್ತ ಸ್ಕೋರ್ ಮಾಝಿ ಮುಂಬೈ: 10 ಓವರ್‌ಗಳಲ್ಲಿ 58/9
 (ವಿಜಯ್ ಪಾವ್ಲೆ 13, ಅಜಾಜ್ ಖುರೇಷಿ 9; ಭವೇಶ್ ಪವಾರ್ 3/10, ರಾಜು ಮುಖಿಯಾ 2/12)
ಕೋಲ್ಕತ್ತಾದ ಟೈಗರ್ಸ್: 7.4 ಓವರ್‌ಗಳಲ್ಲಿ 62/0 (ಮುನ್ನಾ ಶೇಖ್ 34, ಪ್ರಥಮೇಶ್ ಪವಾರ್ 30)
ಫಲಿತಾಂಶ: ಟೈಗರ್ಸ್ ಆಫ್ ಕೋಲ್ಕತ್ತಾ 10 ವಿಕೆಟ್‌ಗಳ ಜಯ ಮತ್ತು ISPL2024 ಪ್ರಶಸ್ತಿಯನ್ನು ಗೆದ್ದುಕೊಂಡಿತು
ನಿರೀಕ್ಷೆಯಂತೆ ಕೋಲ್ಕತ್ತಾದ ಟೈಗರ್ಸ್ ತಂಡವು ಮಾಝಿ ಮುಂಬೈ ವಿರುದ್ಧ ಸುಲಭವಾಗಿ ಐಎಸ್‌ಪಿಎಲ್ ಟಿ10 ಫೈನಲ್‌ನಲ್ಲಿ 59 ರನ್ ಗಳಿಸುವ ಮೂಲಕ ಸುಲಭ ಜಯ ಸಾಧಿಸಿ 10 ರನ್‌ಗಳಿಂದ ಗೆದ್ದು ಟ್ರೋಫಿಯನ್ನು ಭದ್ರಪಡಿಸಿಕೊಂಡರು. ಟೈಗರ್ಸ್ ಆಫ್ ಕೋಲ್ಕತ್ತಾ ವಿಜೇತರು 1 ಕೋಟಿ ಪಡೆದರೆ ಮಝಿ ಮುಂಬೈ ರನ್ನರ್ಸ್ 50 ಲಕ್ಷ ಪಡೆದರು.
ನಮ್ಮ ಕರ್ನಾಟಕದ ಇಬ್ಬರು ಆಟಗಾರರು ವಿನ್ನರ್ಸ್ ಮತ್ತು ರನ್ನರ್ಸ್ ತಂಡದ ಭಾಗವಾಗಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಫ್ರೆಂಡ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಸಾಗರ್ ಭಂಡಾರಿ  ಚಾಂಪಿಯನ್ ತಂಡವಾದ  ಕೋಲ್ಕತ್ತಾ ಟೈಗರ್ಸ್ ತಂಡವನ್ನು ಪ್ರತಿನಿಧಿಸಿದರೆ,  ಬೆಂಗಳೂರಿನ ಮೈಟಿ ಕ್ರಿಕೆಟ್ ಕ್ಲಬ್ ನ  ಹೆಮ್ಮೆಯ ಆಟಗಾರ ಮೈಟಿ ಮುರಳಿ ಇವರು ರನ್ನರ್ ಅಪ್ ಮಾಝಿ ಮುಂಬೈಯನ್ನು ಪ್ರತಿನಿಧಿಸಿದ್ದರು. ಇವರಿಬ್ಬರಿಗೂ ಸ್ಪೋರ್ಟ್ಸ್ ಕನ್ನಡದ ಪರವಾಗಿ ಅಭಿನಂದನೆಗಳು.
Categories
ಕ್ರಿಕೆಟ್

ಮುಂಬೈ 42 ರಣಜಿ ಟ್ರೋಫಿಗಳನ್ನು ಗೆದ್ದದ್ದು ಹೇಗೆ..? ಆ ಸತ್ಯವನ್ನು ಅರಿತುಕೊಂಡರೆ ಕರ್ನಾಟಕವೂ ಮತ್ತೆ ಮತ್ತೆ ರಣಜಿ ಟ್ರೋಫಿ ಗೆಲ್ಲಬಹುದು..!

ಮುಂಬೈ ಕ್ರಿಕೆಟ್ ಬಗ್ಗೆ ಮಾತನಾಡುವಾಗಲೆಲ್ಲಾ “ಮುಂಬೈ ಲಾಬಿ” ಎಂಬ ಪದ ಕಡ್ಡಾಯವಾಗಿ ಬರದಿದ್ದರೆ ಕೇಳಿ. ಅದನ್ನು ಬದಿಗಿಟ್ಟು ಅಲ್ಲಿನ ಕ್ರಿಕೆಟ್ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ.
ಆದರೆ ಇದನ್ನು ಪಕ್ಕಕ್ಕಿಟ್ಟು ನೋಡಿದರೆ, ಮುಂಬೈ ಕ್ರಿಕೆಟ್’ನಿಂದ ನಮ್ಮವರು ಕಲಿಯುವುದು ಬೇಕಾದಷ್ಟಿದೆ. ಮುಂಬೈ ತಂಡ 42 ಬಾರಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿದ್ದು ಯಾಕೆ..? ಉಳಿದ ತಂಡಗಳಿಗೆ ಅದರ ಅರ್ಧದಷ್ಟು ಟ್ರೋಫಿಗಳನ್ನೂ ಗೆಲ್ಲಲು ಆಗಿಲ್ಲ, ಯಾಕೆ..?
‘’Of course, ಮುಂಬೈ ತಂಡ 70, 80ರ ದಶಕಗಳಲ್ಲಿ ಹೇಗೆ ಆಡುತ್ತಿತ್ತು..? ಅಂಪೈರ್’ಗಳು ಹೇಗೆಲ್ಲಾ ತೀರ್ಪು ಕೊಡುತ್ತಿದ್ದರು” ಎಂಬ ಬಗ್ಗೆ ನಮ್ಮ ಕರ್ನಾಟಕದ ದೊಡ್ಡ ದೊಡ್ಡ ಕ್ರಿಕೆಟಿಗರೇ ಸಾಕಷ್ಟು ಬಾರಿ ರಸವತ್ತಾಗಿ ಹೇಳಿದ್ದಿದೆ.
ಆ ಮಾತು ಪಕ್ಕಕ್ಕಿರಲಿ.. ಮುಂಬೈ ತಂಡ 42 ರಣಜಿ ಟ್ರೋಫಿಗಳನ್ನು ಗೆಲ್ಲುತ್ತದೆ ಎಂದರೆ, ನಮ್ಮ ಕರ್ನಾಟಕ ತಂಡಕ್ಕೆ ಅದರ ಅರ್ಧದಷ್ಟು..? ಹೋಗಲಿ, 15 ಟ್ರೋಫಿಗಳನ್ನೂ ಗೆಲ್ಲಲು ಯಾಕೆ ಸಾಧ್ಯವಾಗಿಲ್ಲ..? ಕಾರಣ.., ಕ್ರಿಕೆಟ್ ಮೇಲೆ ಮುಂಬೈಕರ್”ಗಳಿಗೆ ಇರುವ ಪ್ರೀತಿ ನಮ್ಮವರಿಗಿಲ್ಲ. ಅವರು ಕ್ರಿಕೆಟನ್ನು ಅಕ್ಷರಶಃ ಪ್ರೀತಿಸುತ್ತಾರೆ, ಪೂಜಿಸುತ್ತಾರೆ, ಆರಾಧಿಸುತ್ತಾರೆ.
ಒಂದೇ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಮುಂಬೈನ iconic ವಾಂಖೆಡೆ ಮೈದಾನಕ್ಕೆ ಮೊನ್ನೆ ಮೊನ್ನೆಯಷ್ಟೇ 50 ವರ್ಷ ತುಂಬಿದೆ. ವಾಂಖೆಡೆಯ ಸುವರ್ಣ ಮಹೋತ್ಸವದ ಆ ಸಂಭ್ರಮವನ್ನು ಮುಂಬೈ ಕ್ರಿಕೆಟಿಗರೆಲ್ಲಾ ಸಂಭ್ರಮಿಸಿದ್ದರು. ಸ್ವತಃ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ  ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಂಥಾ ಸಂಭ್ರಮವನ್ನು ನಮ್ಮಲ್ಲಿ ಕಂಡಿದ್ದೀರಾ..? ಊಹೂಂ.. ಸಾಧ್ಯವೇ ಇಲ್ಲ. 2020ನೇ ಇಸವಿಗೆ ನಮ್ಮ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ 50 ವರ್ಷ ತುಂಬಿತ್ತು. ಆಗ ನಮ್ಮ ದಿಗ್ಗಜ ಕ್ರಿಕೆಟಿಗರಲ್ಲಿ ಯಾರಾದರೂ ಇದರ ಬಗ್ಗೆ ಮಾತಾಡಿದ್ದು, ಒಂದು ಟ್ವೀಟ್ ಮಾಡಿದ್ದನ್ನು ನೋಡಿದ್ದೀರಾ..? ಮಾಡೇ ಇಲ್ಲ ಎಂದ ಮೇಲೆ ನೋಡೋ ಮಾತೆಲ್ಲಿ..? ಅದು ಮುಂಬೈ ಕ್ರಿಕೆಟ್’ಗೂ ನಮಗೂ ಇರುವ ವ್ಯತ್ಯಾಸ.
ಮುಂಬೈ-ವಿದರ್ಭ ನಡುವಿನ ರಣಜಿ ಫೈನಲ್ ಪಂದ್ಯವನ್ನು ಸಚಿನ್ ತೆಂಡೂಲ್ಕರ್ ಮೈದಾನಕ್ಕೇ ಬಂದು ವೀಕ್ಷಿಸಿದ್ದರು. ರೋಹಿತ್ ಶರ್ಮಾ ಮುಂಬೈ ಡ್ರೆಸ್ಸಿಂಗ್ ರೂಮ್’ನಲ್ಲಿ ಕಾಣಿಸಿಕೊಂಡಿದ್ದರು. ಕರ್ನಾಟಕದ ರಣಜಿ ಪಂದ್ಯವನ್ನು ನಮ್ಮ ಕ್ರಿಕೆಟ್ ದಿಗ್ಗಜರು ಕೊನೆಯ ಬಾರಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದು ಯಾವಾಗ..? ಹೋಗಲಿ, ಕನಿಷ್ಠ ಪಕ್ಷ ಕರ್ನಾಟಕ ತಂಡದ ಏಳು-ಬೀಳಿನ ಬಗ್ಗೆ ಮಾತನಾಡಿದ್ದನ್ನೂ ಕೇಳಿಲ್ಲ. ಇದೇ ಕಾರಣಕ್ಕೆ ಮುಂಬೈ ಕ್ರಿಕೆಟ್’ನ legacy ಇವತ್ತಿಗೂ unmatchable.
ಒಬ್ಬ ಹುಡುಗ ಚೆನ್ನಾಗಿ ಆಡುತ್ತಿದ್ದಾನೆ ಎಂದರೆ ಸಾಕು, ಮುಂಬೈ ಕ್ರಿಕೆಟ್ ಸಂಸ್ಥೆ ಆತನನ್ನು ನೇರವಾಗಿ ರಣಜಿ ತಂಡಕ್ಕೇ ಆಯ್ಕೆ ಮಾಡಿ ಬಿಡುತ್ತದೆ. ಸಚಿನ್ ತೆಂಡೂಲ್ಕರ್ ಮುಂಬೈ ಪರ ರಣಜಿ ಟ್ರೋಫಿಗೆ debut ಮಾಡಿದಾಗ ಅವರ ವಯಸ್ಸು ಕೇವಲ 15 ವರ್ಷ, 232 ದಿನ. ಪೃಥ್ವಿ ಶಾ ಮೊದಲ ರಣಜಿ ಪಂದ್ಯವಾಡಿದ್ದು 17ನೇ ವಯಸ್ಸಿಗೆ. ಸರ್ಫರಾಜ್ ಖಾನ್ 15 ದಾಟಿ 16ಕ್ಕೆ ಕಾಲಿಡುವ ಮುನ್ನವೇ ಆತನ ತಲೆಯ ಮೇಲೆ ಮುಂಬೈ ರಣಜಿ ಕ್ಯಾಪ್ ಬಂದು ಕುಳಿತಿತ್ತು. ಸರ್ಫರಾಜನ ತಮ್ಮ ಮುಶೀರ್ ಖಾನ್ ಕೂಡ 17ನೇ ವರ್ಷದಲ್ಲೇ ರಣಜಿ ಕ್ರಿಕೆಟ್’ಗೆ debut ಮಾಡಿದ್ದ. ಆ ಅನುಭವ ಸಿಕ್ಕಿದ್ದರಿಂದಲೇ ಮುಶೀರ್ ಖಾನ್ ಈ ಬಾರಿ ರಣಜಿ ಕ್ವಾರ್ಟರ್ ಫೈನಲ್’ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದು, ಸೆಮಿಫೈನಲ್’ನಲ್ಲಿ ಅರ್ಧಶತಕ, ಫೈನಲ್’ನಲ್ಲಿ ಶತಕ ಸಿಡಿಸಿದ್ದು.
“ಹುಡುಗ ರೆಡಿ ಇದ್ದಾನೆ” ಎಂಬುದು ಗೊತ್ತಾದರೆ ಸಾಕು, ವಯಸ್ಸು ನೋಡದೆ ಅಲ್ಲಿ ನೇರವಾಗಿ ರಣಜಿ ತಂಡದ ಬಾಗಿಲು ತೆರೆದು ಬಿಡುತ್ತಾರೆ. ಆದರೆ ನಮ್ಮಲ್ಲಿ..? “ಇನ್ನೂ ಚಿಕ್ಕವನು, ಜ್ಯೂನಿಯರ್ ಕ್ರಿಕೆಟ್’ನಲ್ಲಿ ಆಡಿ ಪಳಗಲಿ, ಆಮೇಲೆ ನೋಡೋಣ” ಎಂಬ ಮನಸ್ಥಿತಿ.
ಕಿರಿಯರ ಕ್ರಿಕೆಟ್’ನಲ್ಲಿ ಟನ್’ಗಟ್ಟಲೆ ರನ್’ಗಳನ್ನು ರಾಶಿ ಹಾಕಿದ್ರೂ, ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ರಣಜಿ ಟ್ರೋಫಿ ಪದಾರ್ಪಣೆಗೆ 23ನೇ ವಯಸ್ಸಿನವರೆಗೆ ಕಾಯಬೇಕಾಗಿತ್ತು. ಕೆ.ಎಲ್ ರಾಹುಲ್ ಜೊತೆ ಈ ಹುಡುಗರನ್ನೂ 18-19ನೇ ವಯಸ್ಸಲ್ಲೇ ಆಡಿಸಿದ್ದಿದ್ದರೆ, ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
ನನಗಿನ್ನೂ ನೆನಪಿದೆ. 2011ರ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರ್ಯಾಣ ವಿರುದ್ಧ ಕರ್ನಾಟಕ ಮಕಾಡೆ ಮಲಗಿ ಬಿಟ್ಟಿತ್ತು. ಕರ್ನಾಟಕದ ಸೋಲಿನ ನಂತರ ಕೋಚ್ ಆಗಿದ್ದ ಕೆ.ಜಸ್ವಂತ್ ಅವರ ಬಳಿ ಒಂದು ಪ್ರಶ್ನೆ ಕೇಳಿದ್ದೆವು. “ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್’ರಂಥಾ ಹುಡುಗರಿಗೆ ರಣಜಿ ತಂಡದಲ್ಲಿ ಅವಕಾಶ ಕೊಡಲು ಇದು ಸರಿಯಾದ ಸಮಯವಲ್ಲವೇ” ಎಂದು. “Yes, ಅದು debatable subject” ಅಂದಿದ್ದರು ಜಸ್ವಂತ್.
ಆ ಸಮಯದಲ್ಲಿ ವಿವಿಎಸ್ ಲಕ್ಷ್ಮಣ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಾಗಿಕೊಂಡೇ ಇರುವ National Cricket Academyಯಲ್ಲಿದ್ದರು. ಕರ್ನಾಟಕದ ಬ್ಯಾಟ್ಸ್’ಮನ್’ಗಳ ಆಟ, ಸೋತ ರೀತಿಯನ್ನು ನೋಡಿದ ಲಕ್ಷ್ಮಣ್, ತಮ್ಮ ಪಕ್ಕದಲ್ಲಿದ್ದವರನ್ನು ಒಂದು ಪ್ರಶ್ನೆ ಕೇಳಿದ್ದರಂತೆ. “ರಾಹುಲ್, ಕರುಣ್ ನಾಯರ್ ಎಲ್ಲಿ..? ಆ ಹುಡುಗರನ್ನು ಆಡಿಸುವುದು ಬಿಟ್ಟು, ಇವರೇನು ಮಾಡುತ್ತಿದ್ದಾರೆ” ಎಂದು. ಹೈದರಾಬಾದ್’ನ ಲಕ್ಷ್ಮಣ್’ಗಿದ್ದ ನಮ್ಮ ಹುಡುಗರ ಸಾಮರ್ಥ್ಯದ ಅರಿವು ನಮ್ಮವರಿಗೆ ಇರಲಿಲ್ಲ..!
ಇದೇ ಮನಸ್ಥಿತಿಯಿಂದ ಅದೆಷ್ಟೋ ಪ್ರತಿಭಾವಂತರು ಕರ್ನಾಟಕ ಪರ ರಣಜಿ ಪಂದ್ಯಗಳನ್ನಾಡುವ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಜ್ಯೂನಿಯರ್ ಕ್ರಿಕೆಟ್’ನಲ್ಲಿ ಯಾರಾದರೂ ಒಬ್ಬ ಹುಡುಗ ಭರವಸೆ ಮೂಡಿಸಿದ್ದಾನೆ ಎಂದರೆ ಆತನನ್ನು ನೇರವಾಗಿ ರಣಜಿ ತಂಡಕ್ಕೆ ಆಡಿಸಿ ಬಿಡಬೇಕು.
ಕೆ.ಎಲ್ ರಾಹುಲ್’ನನ್ನು 19ನೇ ವಯಸ್ಸಿಗೆ ರಣಜಿ ಟ್ರೋಫಿ ಆಡಿಸಿದ್ದಕ್ಕೇ ಅವನು 2013-14ರಲ್ಲಿ ಸಾವಿರ ರನ್ ಗಳಿಸಿ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆಲ್ಲಿಸಿದ್ದು. ಅಭಿಮನ್ಯು ಮಿಥುನ್’ನೊಳಗೆ ಇದ್ದ ಕಿಚ್ಚನ್ನು ಗುರುತಿಸಿದ್ದಕ್ಕೇ 2009ರಲ್ಲಿ ಆತ ಇಡೀ ರಣಜಿ ಟೂರ್ನಿಯೇ ನಡುಗುವಂತೆ ಬೌಲಿಂಗ್ ಮಾಡಿದ್ದು.
ಕರ್ನಾಟಕ ತಂಡ ಮತ್ತೆ ರಣಜಿ ಟ್ರೋಫಿ ಗೆಲ್ಲಬೇಕು ಎಂದರೆ, ಇಂಥಾ ಮ್ಯಾಚ್ ವಿನ್ನರ್’ಗಳನ್ನು ಗುರುತಿಸಿ ಆಡಿಸಬೇಕು. ಕರ್ನಾಟಕ ಈ ಬಾರಿ U-19 ಕೂಚ್ ಬೆಹಾರ್ ಟ್ರೋಫಿ ಮತ್ತು U-23 ಕರ್ನಲ್ ಸಿ.ಕೆ ನಾಯ್ಡು ಟ್ರೋಫಿಗಳನ್ನು ಇತಿಹಾಸದಲ್ಲೇ ಮೊದಲ ಬಾರಿ ಗೆದ್ದಿದೆ. ಅಲ್ಲಿ ಚರಿತ್ರೆ ಸೃಷ್ಠಿಸಿದ, ಆಟದ ಹಸಿವಿರುವ ಹುಡುಗರನ್ನು ರಣಜಿ ತಂಡಕ್ಕೆ ಕರೆ ತನ್ನಿ. ಕರ್ನಾಟಕ ಮತ್ತೆ ರಣಜಿ ಟ್ರೋಫಿ ಗೆಲ್ಲದಿದ್ದರೆ ಕೇಳಿ..!
#RanjiTrophy #RanjiTrophyFinal #KarnatakaCricket Karnataka Ranji Team/ ಕರ್ನಾಟಕ ರಣಜಿ ತಂಡ #mumbaicricket Mumbai Cricket Association
Categories
ಕ್ರಿಕೆಟ್

ಸನ್ ರೈಸ್ ಕ್ರಿಕೆಟ್ ಅಕಾಡೆಮಿ ರಂಗನಪಲ್ಕೆ ಕೌಡೂರು ಪ್ರಾಯೋಜಿತ ಕ್ರಿಕೆಟ್ ತರಬೇತಿ ಶಿಬಿರ

ಶ್ರೀ ಲಾರೆನ್ಸ್ ಸಲ್ದಾನ  ಇವರು ಸ್ಥಾಪಿಸಿದ  ಸನ್ ರೈಸ್ ಕ್ರಿಕೆಟ್  ಅಕಾಡೆಮಿ ಎಂದಿನಂತೆ ಈ ವರ್ಷ ಕೂಡ ಬೇಸಿಗೆ ರಜಾದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರಿಗೆ  ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಆಯೋಜಿಸಿದೆ.  ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಸೇವೆ ಮತ್ತು ತರಬೇತಿಯ ಏಕೈಕ ಉದ್ದೇಶದೊಂದಿಗೆ ಇವರು  ಪ್ರಮುಖ ಕ್ರಿಕೆಟ್ ಕೋಚಿಂಗ್ ಪೂರೈಕೆದಾರರಾಗಿದ್ದಾರೆ.
ರಂಗನಪಲ್ಕೆಯ  ಗ್ಲಾರಿಡಾ ಎಸ್ಟೇಟ್ ರಂಗನಪಲ್ಕೆ ಕೌಡೂರು  ಸ್ಟೇಡಿಯಂನಲ್ಲಿ ಉತ್ತಮವಾಗಿ ನಿರ್ಮಿಸಲಾದ ಮೈದಾನದಲ್ಲಿ ಈ ಕ್ರಿಕೆಟ್ ತರಬೇತಿ ಶಿಬಿರ ನಡೆಯಲಿದೆ. ವೃತ್ತಿಪರ ತರಬೇತುದಾರರ ಮೂಲಕ ಕ್ರಿಕೆಟ್ ಉತ್ಸಾಹಿ ಹುಡುಗ ಮತ್ತು ಹುಡುಗಿಯರಿಗೆ ಕ್ರಿಕೆಟ್ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಮುಖ್ಯ  ತರಬೇತುದಾರರಾಗಿರುವ ಸದಾನಂದ ಶಿರ್ವ ಈ ಅಕಾಡೆಮಿಯನ್ನು ಮುನ್ನಡೆಸುತ್ತಿದ್ದಾರೆ.
ಈ ಕ್ರಿಕೆಟ್  ಅಕಾಡೆಮಿಯು ಐಷಾರಾಮಿ ಕ್ರೀಡಾ ಸೌಕರ್ಯಗಳು ಮತ್ತು ಸೌಲಭ್ಯಗಳೊಂದಿಗೆ ಎಲ್ಲರಿಗೂ ಸ್ಫೂರ್ತಿ ನೀಡಲು  ಗುಣಮಟ್ಟದ ಸಾಧನಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾಗಿದೆ. ಹೊರಾಂಗಣದ  ಸೌಲಭ್ಯದೊಂದಿಗೆ ಆಸ್ಟ್ರೋ ಟರ್ಫ್  ಪ್ರಾಕ್ಟೀಸ್  ನೆಟ್ಸ್ . ಗುಣಮಟ್ಟದ ಸೇವೆ ಸುತ್ತಮುತ್ತಲಿನ  ಕ್ರಿಕೆಟ್  ಉತ್ಸಾಹಿ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ. ಅನುಭವಿ ತರಬೇತುದಾರರ ಪ್ರಯೋಜನಗಳು, ನಿಯಮಿತ ಪಂದ್ಯಗಳು ಮತ್ತು ಪ್ರವಾಸಗಳು , ಅತ್ಯಂತ ಸಮಂಜಸವಾದ ಶುಲ್ಕರಚನೆ, ಅತ್ಯುತ್ತಮ ಸೇವೆಯೊಂದಿಗೆ ತರಬೇತುದಾರರು ತರಬೇತಿ ನೀಡಲಿದ್ದಾರೆ.
ಈ ಬೇಸಿಗೆ ಕ್ರಿಕೆಟ್ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಅಕಾಡೆಮಿಯ ಹೆಡ್ ಕೋಚ್ ಸದಾನಂದ ಶಿರ್ವ ಇವರನ್ನು ಮೊಬೈಲ್ ಸಂಖ್ಯೆ 9972581234 ಅಥವಾ 7975393148 ನಲ್ಲಿ ಸಂಪರ್ಕಿಸಬಹುದಾಗಿದೆ.
Categories
ಕ್ರಿಕೆಟ್

ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿ ಶಿರ್ವ ವತಿಯಿಂದ ಕ್ರಿಕೆಟ್ ತರಬೇತಿ ಶಿಬಿರ

ಶಿರ್ವ-ವಿದ್ಯಾವರ್ಧಕ ಸಂಘ ರಿಜಿಸ್ಟರ್ಡ್ ಶಿರ್ವ ಮತ್ತು  HJC ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ  ಸಹಭಾಗಿತ್ವದಲ್ಲಿ ಶಿರ್ವದ HJC ಕ್ರಿಕೆಟ್ ಅಕಾಡೆಮಿಯು  ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ  ಕ್ರಿಕೆಟ್ ಆಟದಲ್ಲಿ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಿದೆ. ಶಾಲಾ-ಕಾಲೇಜು ಮಕ್ಕಳ ಬೇಸಿಗೆ ರಜಾದಿನಗಳಲ್ಲಿ ಕ್ರಿಕೆಟ್ ತರಬೇತಿ ಶಿಬಿರವನ್ನು ಇವರುಗಳು ಆಯೋಜಿಸಿದ್ದು  ಕ್ರಿಕೆಟ್‌ಗೆ ಕ್ರೀಡಾ ಸೌಲಭ್ಯಗಳು ಮತ್ತು ತರಬೇತಿಯನ್ನು ನೀಡುತ್ತಾರೆ.
ಈ ಸಮ್ಮರ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ನಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರಿಗೆ ಉತ್ತಮ ತರಬೇತಿ ಮತ್ತು ಕೌಶಲ್ಯಗಳನ್ನು ಒದಗಿಸಲು  ಪರಿಣಿತ ತರಬೇತುದಾರರ ಮತ್ತು ಉತ್ತಮ ನಡತೆಯ ಸಿಬ್ಬಂದಿಯನ್ನು ಈ ಅಕಾಡೆಮಿಯು ಹೊಂದಿರುತ್ತದೆ. HJC ಕ್ರೀಡಾ ಅಕಾಡೆಮಿಯು ಭಾಗವಹಿಸುವವರನ್ನು ಆಟದಲ್ಲಿ ವೃತ್ತಿಪರರನ್ನಾಗಿ ರೂಪಿಸಲು ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಕ್ರಿಕೆಟ್ ಆಟದಲ್ಲಿ ತಮ್ಮ  ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಎಚ್ ಜೆ ಸಿ ಕ್ರಿಕೆಟ್ ಅಕಾಡೆಮಿಯು ವೇದಿಕೆಯಾಗಿದೆ.  ಪ್ರತಿಯೊಬ್ಬ ವಿದ್ಯಾರ್ಥಿ-ಕ್ರೀಡಾಪಟುಗಳು ತಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ತಮ್ಮ ನಿಜವಾದ ಸಾಮರ್ಥ್ಯವನ್ನು ಸಾಧಿಸಲು ಅಕಾಡೆಮಿಯು ಪ್ರೇರೇಪಿಸುತ್ತದೆ.
ವೃತ್ತಿಪರ ತರಬೇತುದಾರರು/ಮಾರ್ಗದರ್ಶಿಗಳೊಂದಿಗೆ ವಿದ್ಯಾರ್ಥಿಗಳು  ಕ್ರೀಡಾ ಸಾಮರ್ಥ್ಯವನ್ನು ಸಡಿಲಿಸಬಹುದು.ಈ  ರೋಮಾಂಚಕಾರಿ ಕ್ರಿಕೆಟ್ ಬೇಸಿಗೆ ಶಿಬಿರ ಎಲ್ಲಾ ಕೌಶಲ್ಯ ಮಟ್ಟಗಳಿಗಾಗಿ ವಿನ್ಯಾಸಗೊಳಿಸಲಾಗಿದೆ,  ಶಿಬಿರವು ಪರಿಣಿತ ತರಬೇತಿ, ಮೋಜಿನ ಡ್ರಿಲ್‌ಗಳು ಮತ್ತು ಪಂದ್ಯದ ಸಿಮ್ಯುಲೇಶನ್‌ಗಳನ್ನು ನೀಡುತ್ತದೆ.  ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೌಶಲ್ಯಗಳನ್ನುಇಲ್ಲಿ ಹೇಗೆ ಸುಧಾರಿಸಬಹುದು  ಎಂಬ ಎಲ್ಲಾ ವಿಷಯಗಳನ್ನು ಹೇಳಿಕೊಡಲಾಗುವುದು.
ಈ ಬೇಸಿಗೆಯಲ್ಲಿ ಮರೆಯಲಾಗದ ಕ್ರಿಕೆಟ್ ಅನುಭವಕ್ಕಾಗಿ ಅಕಾಡೆಮಿಯ ಮುಖ್ಯ ತರಬೇತುದಾರ ಸದಾನಂದ  ಶಿರ್ವ ( ಮೊ. ಸಂಖ್ಯೆ 9972581234 ಅಥವಾ 7975393148 ) ನಲ್ಲಿ ಸಂಪರ್ಕಿಸಿ ಈಗಲೇ ನೋಂದಾಯಿಸಿ…