8 C
London
Tuesday, April 23, 2024
Homeಕ್ರಿಕೆಟ್LCL ಹಿರಿಯರ ಕ್ರಿಕೆಟ್ ಹಬ್ಬ- ಗೆಲುವಿನ ನಗೆ ಬೀರಿದ ರೆಡ್ ಹಾಕ್ಸ್ ಉಳ್ಳಾಲ

LCL ಹಿರಿಯರ ಕ್ರಿಕೆಟ್ ಹಬ್ಬ- ಗೆಲುವಿನ ನಗೆ ಬೀರಿದ ರೆಡ್ ಹಾಕ್ಸ್ ಉಳ್ಳಾಲ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಹಿರಿಯ ಕ್ರಿಕೆಟ್ ಆಟಗಾರರಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಮತ್ತು ಪರಸ್ಪರ ಭಾಂಧವ್ಯ, ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಸುರತ್ಕಲ್ಲಿನಲ್ಲಿ 2 ದಿನಗಳ  ಕಾಲ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2  ಭರ್ಜರಿ ಯಶಸ್ಸು ಕಂಡಿದೆ.
12 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್ ನಲ್ಲಿ ರೆಡ್ ಹಾಕ್ಸ್ ಉಳ್ಳಾಲ ತಂಡವು ಮಹಾಲಕ್ಷ್ಮಿ ವಾರಿಯರ್ಸ್ ಸೂರಿಂಜೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿತು. ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಈ ಕ್ರಿಕೆಟ್ ಪಂದ್ಯಾವಳಿಯನ್ನು ಸತತ ಎರಡನೇಯ ಬಾರಿಗೆ 40 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರಿಗಾಗಿ  ಆಯೋಜಿಸಿತ್ತು. ವಿಜೇತ ತಂಡಕ್ಕೆ 1.01,000 ರೂ. + LCL ಕಪ್ ಮತ್ತು ರನ್ನರ್ ಅಪ್ ತಂಡಕ್ಕೆ 51,005 ರೂ.+ LCL ಕಪ್ ಗಳನ್ನು ನೀಡಿ ಗೌರವಿಸಲಾಯಿತು.
ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ಇವರ ಆಶ್ರಯದಲ್ಲಿ “ಎಲ್ ಸಿ ಎಲ್ ಟ್ರೋಫಿ -2023” ಮೇ 27, 28 ರಂದು ಸುರತ್ಕಲ್ ನ  ಗೋವಿಂದದಾಸ್ ಕಾಲೇಜು ಕ್ರಿಕೆಟ್  ಮೈದಾನದಲ್ಲಿ ನಡೆಯಿತು.ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ಈ ಪಂದ್ಯಾಕೂಟವು  ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ಹಿರಿಯ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಯಿತು.
ಪಂದ್ಯಾವಳಿಯನ್ನು ಸಂಯೋಜಕರಾದ ಮಹಾಬಲ ಪೂಜಾರಿ ಕಡಂಬೋಡಿ , ಸಂಸ್ಥೆಯ ಮಹಾಪೋಷಕರು,  ಟೂರ್ನಮೆಂಟ್ ನ ಮಾರ್ಗದರ್ಶಕರಾದ ಸಹಾಯಕ ಪೊಲೀಸ್ ಆಯುಕ್ತರು ಮಹೇಶ್ ಎಸ ಕುಮಾರ್,  ಕೋರ್ ಕಮಿಟಿ ಸದಸ್ಯರುಗಳಾದ ಸಂದೀಪ್  ಕಡಂಬೋಡಿ, ಅನಂತ್ ರಾಜ್ ಶೆಟ್ಟಿಗಾರ್, ಪದ್ಮನಾಭ್ ಕರ್ಕೇರ, ದಿನೇಶ ಆಚಾರ್ಯ ಕುಳಾಯಿ, ಸುಧಾಕರ ತಡಂಬೈಲ್, ಮುರಳಿ BASF,  ಕೇಶವ, ಅಶ್ವಥ್, ದಯಾನಂದ, ವರುಣ್ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್, ಕಿರಣ್ ಆಚಾರ್ಯ, ನಾಗರಾಜ ಕಡಂಬೋಡಿ, ಗಿರೀಶ್ ಟಿ ಕಡಂಬೋಡಿ ಹಾಗೂ ಕ್ಲಬ್ ನ ಇನ್ನಿತರ ಸದಸ್ಯರುಗಳು ಸೇರಿ ಯಶಸ್ವಿಯಾಗಿ ಆಯೋಜಿಸಿದರು. ಪಂದ್ಯಾವಳಿಯ ಉತ್ತಮ ಆಯೋಜನೆ, ಸಮಯಪಾಲನೆ ಕುರಿತು ಎಲ್ಲಾ ತಂಡದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರುಷ ರಾಜ್ಯ ಮಟ್ಟದ ಹಿರಿಯರ  ಕ್ರಿಕೆಟ್ ಟೂರ್ನಮೆಂಟ್ ನಡೆಸುವ ಇರಾದೆಯೂ ಕೂಡಾ ಇದೆ ಎಂದು ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
 ಸುರತ್ಕಲ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್( ರಿ ) ಸುರತ್ಕಲ್ ನ  ಉಸ್ತುವಾರಿಕೆಯಲ್ಲಿ ಅದ್ಭುತವಾಗಿ ಮೂಡಿ ಬಂದ ಟೂರ್ನಮೆಂಟ್ ನ ಉತ್ಸಾಹ ಭರಿತ ಕ್ಷಣಗಳನ್ನು ಬೆದ್ರಾ ಮೀಡಿಯಾ  ಸೆರೆ ಹಿಡಿದು ನೇರ ಪ್ರಸಾರ ಗೊಳಿಸಿತು. ಶಿವನಾರಾಯಣ ಐತಾಳ್ ಕೋಟ, ಸೈಯದ್ ಗುರುಕಂಬಳ, ಸುರೇಶ್ ಭಟ್ ಮೂಲ್ಕಿ ಮತ್ತು ಪ್ರವೀಣ್ ಪಾವಂಜೆ ಇವರುಗಳು ಕಾಮೆಂಟ್ರಿಯನ್ನು ನಡೆಸಿಕೊಟ್ಟರು.
ಮಾಜಿ ಕ್ರಿಕೆಟಿಗರಿಗೆ 2 ದಿನಗಳ ಪಂದ್ಯಾವಳಿಯಲ್ಲಿ  ಹಲವು ವರ್ಷದ ಹಿಂದೆ ತಾವೆಲ್ಲರೂ ಒಟ್ಟಿಗೆ ಅನುಭವಿಸಿದ ಕೆಲವು ಮಾಂತ್ರಿಕ ಕ್ಷಣಗಳನ್ನು ಮೆಲುಕು ಹಾಕಲು ಅವಕಾಶ ಸಿಕ್ಕಿತು. ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ 2 ನ್ನು ಸಂತಸದಿಂದ ವೀಕ್ಷಿಸಿದರು.ಬಂದಂತಹ ಎಲ್ಲಾ ಪ್ರೇಕ್ಷಕರಿಗೂ ತಂಪು ಪಾನೀಯ, ಐಸ್ ಕ್ರೀಮ್, ತಂಪಾದ ಮಜ್ಜಿಗೆ, ಕಲ್ಲಂಗಡಿ ಹಣ್ಣು ಮತ್ತು  ಊಟವನ್ನು ಉಚಿತವಾಗಿ ವಿತರಿಸಲಾಯಿತು.
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕ ಕೆ ಆರ್ ಕೆ ಆಚಾರ್ಯ ಅವರು ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಂಘಟಕರನ್ನು ಅಭಿನಂದಿಸಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

3 × 1 =