Home ಕ್ರಿಕೆಟ್ ಏಷ್ಯಾ ಕಪ್‌ಗೆ ಕಾತರ – ಮಂಗಳವಾರ ಪ್ರಕಟವಾಗಲಿದೆ ಟೀಮ್ ಇಂಡಿಯಾ

ಏಷ್ಯಾ ಕಪ್‌ಗೆ ಕಾತರ – ಮಂಗಳವಾರ ಪ್ರಕಟವಾಗಲಿದೆ ಟೀಮ್ ಇಂಡಿಯಾ

ಏಷ್ಯಾ ಕಪ್‌ಗೆ ಕಾತರ – ಮಂಗಳವಾರ ಪ್ರಕಟವಾಗಲಿದೆ ಟೀಮ್ ಇಂಡಿಯಾ

 

ಏಷ್ಯಾ ಕಪ್‌ಗೆ ಕಾತರ – ಮಂಗಳವಾರ ಪ್ರಕಟವಾಗಲಿದೆ ಟೀಮ್ ಇಂಡಿಯಾ

ಏಷ್ಯಾ ಕಪ್‌ಗಾಗಿ ಕ್ರಿಕೆಟ್ ಜಗತ್ತು ಸಜ್ಜಾಗುತ್ತಿದೆ. ಯುಎಇಯಲ್ಲಿ ನಡೆಯಲಿರುವ ಟೂರ್ನಿಗೆ ಕೆಲವೇ ವಾರಗಳು ಬಾಕಿ ಇರುವಾಗ, ಅಭಿಮಾನಿಗಳು ಭಾರತೀಯ ತಂಡದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಂಗಳವಾರ (19) ಭಾರತೀಯ ತಂಡವನ್ನು ಘೋಷಿಸುವ ನಿರೀಕ್ಷೆಯಿದೆ. ಬಹಳಾ ಸಮಯದ ನಂತರ ಭಾರತ ತಂಡ ಟಿ20ಗೆ ಮರಳುತ್ತಿರುವ ಟೂರ್ನಿಯೂ ಇದಾಗಿದೆ.

ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್, ಈ ವರ್ಷ ಭಾರತ ತಂಡ ಆಡಲಿರುವ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ, ಅವರು ಅತ್ಯಂತ ಆಕ್ರಮಣಕಾರಿ ಯುವ ತಂಡವನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಭಾರತವು ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಘೋಷಿಸಲಿದೆ. ಮಂಗಳವಾರ ತಂಡವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಐಪಿಎಲ್ ಮೂಲಕ ಟಿ-20 ಸ್ವರೂಪದಲ್ಲಿ ಅನೇಕ ಹೊಸ ಆಟಗಾರರು ಉದಯಿಸಿದ ಹಿನ್ನಲೆಯಲ್ಲಿ, ತಂಡದ ಅಂತಿಮ ಆಯ್ಕೆ ಪ್ರಕ್ರಿಯೆ ಈ ಬಾರಿ ಹೆಚ್ಚಿನ ಸವಾಲಿನದ್ದಾಗಿದೆ. ಆದ್ದರಿಂದ, ಏಷ್ಯಾ ಕಪ್‌ಗಾಗಿ ಭಾರತದ ಅಂತಿಮ ತಂಡವನ್ನು ಆಯ್ಕೆ ಮಾಡಲು ಆಯ್ಕೆದಾರರು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ.

ಭಾರತೀಯ ಕ್ರಿಕೆಟ್ ಈಗ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ತಂಡಗಳನ್ನು ಆಡಿಸುವಷ್ಟು ಪ್ರತಿಭಾನ್ವಿತ ತಂಡವನ್ನು ಹೊಂದಿದೆ. ಟೀಮ್ ಇಂಡಿಯಾದಲ್ಲಿ ಇಷ್ಟೊಂದು ಪ್ರತಿಭಾನ್ವಿತ ಆಟಗಾರರಿರುವುದರಿಂದ, ಏಷ್ಯಾಕಪ್‌ಗೆ ಭಾರತೀಯ ತಂಡವನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿದೆ.

 

 

LEAVE A REPLY

Please enter your comment!
Please enter your name here

fifteen − 10 =

ಏಷ್ಯಾ ಕಪ್‌ಗೆ ಕಾತರ – ಮಂಗಳವಾರ ಪ್ರಕಟವಾಗಲಿದೆ ಟೀಮ್ ಇಂಡಿಯಾ

  ಏಷ್ಯಾ ಕಪ್‌ಗೆ ಕಾತರ – ಮಂಗಳವಾರ ಪ್ರಕಟವಾಗಲಿದೆ ಟೀಮ್ ಇಂಡಿಯಾ ಏಷ್ಯಾ ಕಪ್‌ಗಾಗಿ ಕ್ರಿಕೆಟ್ ಜಗತ್ತು ಸಜ್ಜಾಗುತ್ತಿದೆ. ಯುಎಇಯಲ್ಲಿ ನಡೆಯಲಿರುವ ಟೂರ್ನಿಗೆ ಕೆಲವೇ ವಾರಗಳು ಬಾಕಿ ಇರುವಾಗ, ಅಭಿಮಾನಿಗಳು ಭಾರತೀಯ ತಂಡದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಂಗಳವಾರ (19) ಭಾರತೀಯ ತಂಡವನ್ನು ಘೋಷಿಸುವ ನಿರೀಕ್ಷೆಯಿದೆ. ಬಹಳಾ ಸಮಯದ ನಂತರ ಭಾರತ ತಂಡ ಟಿ20ಗೆ ಮರಳುತ್ತಿರುವ ಟೂರ್ನಿಯೂ ಇದಾಗಿದೆ. ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್, ಈ ವರ್ಷ ಭಾರತ ತಂಡ ಆಡಲಿರುವ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ, ಅವರು ಅತ್ಯಂತ ಆಕ್ರಮಣಕಾರಿ ಯುವ ತಂಡವನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಭಾರತವು ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಘೋಷಿಸಲಿದೆ. ಮಂಗಳವಾರ ತಂಡವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಐಪಿಎಲ್ ಮೂಲಕ ಟಿ-20 ಸ್ವರೂಪದಲ್ಲಿ ಅನೇಕ ಹೊಸ ಆಟಗಾರರು ಉದಯಿಸಿದ ಹಿನ್ನಲೆಯಲ್ಲಿ,

Send this to a friend