Home ಕ್ರಿಕೆಟ್ ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್’ಗಳ ಹೀನಾಯ ಸೋಲು ಕಂಡಿದೆ.

ತವರು ನೆಲದಲ್ಲಿ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ ಆ ಸೋಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಹೊಣೆ ಮಾಡಲಾಗುತ್ತಿದೆ. ಭಾರತದ ಸೋಲಿಗೆ ರಾಹುಲ್ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ.

ಹೌದು, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ರಾಹುಲ್ ಬಂಗಾರದಂಥಾ ಅವಕಾಶಗಳನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ದ್ವಿತೀಯ ಇನ್ನಿಂಗ್ಸ್’ನಲ್ಲಿ 12 ರನ್ ಗಳಿಸಿ ಔಟಾಗಿದ್ದರು. ಈ ಮೂಲಕ ಮನೆಯಂಗಳದಲ್ಲಿ ಮಿಂಚುವ ಸುವರ್ಣಾವಕಾಶವನ್ನು ವ್ಯರ್ಥ ಮಾಡಿದ್ದರು.

ಹಾಗಂತ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ನಿಜಕ್ಕೂ ರಾಹುಲ್ ಕಾರಣರೇ? ಖಂಡಿತಾ ಇಲ್ಲ.. ಇದು ನಾಯಕ ರೋಹಿತ್ ಶರ್ಮಾ ಪ್ರಮಾದದಿಂದ ಎದುರಾಗಿದ್ದ ಸೋಲು. ಚಿನ್ನಸ್ವಾಮಿ ಪಿಚ್ ವೇಗದ ಬೌಲರ್’ಗಳಿಗೆ ನೆರವು ನೀಡಲಿದೆ ಎಂಬುದನ್ನು ತಿಳಿದೂ ಪಂದ್ಯದ 2ನೇ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡದ್ದೇ ದೊಡ್ಡ ಪ್ರಮಾದ. ಪರಿಣಾಮ ಭಾರತ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 46 ರನ್’ಗಳಿಗೆ ಆಲೌಟಾಗಿತ್ತು. ನಂತರ ನ್ಯೂಜಿಲೆಂಡ್’ನ ಪ್ರಥಮ ಇನ್ನಿಂಗ್ಸ್’ನಲ್ಲಿ 7 ವಿಕೆಟ್’ಗೆ 233 ರನ್ ಗಳಿಸಿದ್ದಾಗ 8ನೇ ವಿಕೆಟ್’ಗೆ ಜೊತೆಗೂಡಿದ್ದ ರಚಿನ್ ರವೀಂದ್ರ ಮತ್ತು ಟಿಮ್ ಸೌಥಿ ಶತಕದ ಜೊತೆಯಾಟವಾಡಿದ್ದರು. ಈ ಜೊತೆಯಾಟವನ್ನು ಬೇಗನೆ ಮುರಿಯಲು ವಿಫಲವಾಗಿದ್ದೇ ಭಾರತದ ಸೋಲಿಗೆ ಕಾರಣ. ಸ್ವತಃ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್’ನಲ್ಲಿ ಮೂರು ಕ್ಯಾಚ್’ಗಳನ್ನು ಕೈಚೆಲ್ಲಿದ್ದರು.

ಇನ್ನು ರಾಹುಲ್ ವೈಫಲ್ಯದ ಬಗ್ಗೆ ಮಾತನಾಡುವವರು ರೋಹಿತ್ ಶರ್ಮಾ ವೈಫಲ್ಯದ ಬಗ್ಗೆ ಮೌನವಾಗಿರುವುದೇಕೆ?
10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ 339 ರನ್ ಕಲೆ ಹಾಕಿದ್ದರೆ, ನಾಯಕ ರೋಹಿತ್ ಶರ್ಮಾ ಕೇವಲ 275 ರನ್ ಗಳಿಸಿದ್ದಾರೆ. ರಾಹುಲ್’ರನ್ನು ಟೀಮ್ ಇಂಡಿಯಾದಿಂದ ಕೈಬಿಡಲೇಬೇಕು ಎಂದಾದರೆ ರೋಹಿತ್ ಶರ್ಮಾ ಸಾಧನೆಯೇನು? ಕೇವಲ ನಾಯಕನೆಂಬ ಕಾರಣಕ್ಕೆ ತಂಡದಲ್ಲಿ ಮುಂದುವರಿಯಬೇಕೇ?

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ ಗಳಿಸಿರುವ ರನ್: 101, 4, 8, 86, 22, 16, 22*, 68, 0, 12

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಗಳಿಸಿರುವ ರನ್: 19, 2, 55, 103, 6, 5, 23, 8, 2, 52

LEAVE A REPLY

Please enter your comment!
Please enter your name here

5 × four =

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ? ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್’ಗಳ ಹೀನಾಯ ಸೋಲು ಕಂಡಿದೆ. ತವರು ನೆಲದಲ್ಲಿ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ ಆ ಸೋಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಹೊಣೆ ಮಾಡಲಾಗುತ್ತಿದೆ. ಭಾರತದ ಸೋಲಿಗೆ ರಾಹುಲ್ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ. ಹೌದು, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ರಾಹುಲ್ ಬಂಗಾರದಂಥಾ ಅವಕಾಶಗಳನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ದ್ವಿತೀಯ ಇನ್ನಿಂಗ್ಸ್’ನಲ್ಲಿ 12 ರನ್ ಗಳಿಸಿ ಔಟಾಗಿದ್ದರು. ಈ ಮೂಲಕ ಮನೆಯಂಗಳದಲ್ಲಿ ಮಿಂಚುವ ಸುವರ್ಣಾವಕಾಶವನ್ನು ವ್ಯರ್ಥ ಮಾಡಿದ್ದರು. ಹಾಗಂತ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ನಿಜಕ್ಕೂ ರಾಹುಲ್ ಕಾರಣರೇ? ಖಂಡಿತಾ ಇಲ್ಲ.. ಇದು ನಾಯಕ ರೋಹಿತ್ ಶರ್ಮಾ ಪ್ರಮಾದದಿಂದ ಎದುರಾಗಿದ್ದ ಸೋಲು. ಚಿನ್ನಸ್ವಾಮಿ ಪಿಚ್ ವೇಗದ ಬೌಲರ್’ಗಳಿಗೆ ನೆರವು ನೀಡಲಿದೆ ಎಂಬುದನ್ನು ತಿಳಿದೂ

Send this to a friend