10.1 C
London
Tuesday, April 23, 2024
Homeಕ್ರಿಕೆಟ್ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಭಾರತದ ಸೋಲಿಗೆ ಯಾರು ಹೊಣೆ..? ಭುವನೇಶ್ವರ್ ಮೇಲೆ ಗವಾಸ್ಕರ್...

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಭಾರತದ ಸೋಲಿಗೆ ಯಾರು ಹೊಣೆ..? ಭುವನೇಶ್ವರ್ ಮೇಲೆ ಗವಾಸ್ಕರ್ ಗರಂ..!

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿಯೇ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿಯು ಮುಗ್ಗರಿಸಿ ಸೋಲಿನ ರುಚಿ ಉಂಡಿದೆ.
ಭಾರತ ತಂಡ ಬೃಹತ್ ಮೊತ್ತದ ಗುರಿ  ನೀಡಿದರೂ ಸಹ ಕಳಪೆ ಬೌಲಿಂಗ್‍ ನಿರ್ವಹಣೆಯಿಂದ ರೋಹಿತ್ ಪಡೆ ಸೋಲು ಎದುರಿಸಬೇಕಾಯಿತು.
ಹಾಗಾದ್ರೆ ಮೊಹಾಲಿ ಪಂದ್ಯದ ಸೋಲಿಗೆ ಯಾರು ಹೊಣೆ ? ಎನ್ನುವ ಪ್ರಶ್ನೆ ಕೆಲವರನ್ನು ಕಾಡಿದೆ ಇದಕ್ಕೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಉತ್ತರಿಸಿದ್ದಾರೆ. ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕಿಯು ಸೋಲಿಗೆ ಕಾರಣವಾಗಿದ್ದು ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳನ್ನು ಕಟ್ಟು ಹಾಕಲಾರದೆ ಅತಿ ಹೆಚ್ಚು ರನ್ ಹೊಡೆಸಿಕೊಂಡ ಅನುಭವಿ ವೇಗಿ ಭುವನೇಶ್ವರ್ ಮೇಲೆ ಅವರು ಗರಂ ಆಗಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಾಕಷ್ಟು ಪಂದ್ಯಗಳ ‘ಡೆತ್ ಓವರ್‌ಗಳಲ್ಲಿ ಪದೇ ಪದೇ ತಂಡದ ವೈಫಲ್ಯಕ್ಕೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಕಾರಣವೆಂದು ಆರೋಪಿಸಿದ್ದಾರೆ. ಮೊಹಾಲಿಯಲ್ಲಿ ಮಂಗಳವಾರ ನಡೆದ 3 ಪಂದ್ಯಗಳ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ ಇಪ್ಪತ್ತು ಓವರ್‌ಗಳಲ್ಲಿ  ಆರು ವಿಕೆಟ್ ಕಳೆದುಕೊಂಡು 208 ರನ್‍ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು ತಂಡದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಹೊರತಾಗಿಯೂ ಭಾರತ ತಂಡ 4 ವಿಕೆಟ್‍ಗಳಿಂದ ಸೋಲು ಕಾಣಬೇಕಾದದ್ದು ಮಾತ್ರ ದುರಂತವೆ ಹೌದು ಇದಕ್ಕೆ ನೇರ ಹೊಣೆ ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್
*ನಾಲ್ಕು ಓವರ್ ಗಳಲ್ಲಿ 52 ರನ್‌ ಹೊಡಸಿಕೊಂಡ ಭುವಿ..!*  
ಭಾರತ ತಂಡದ ಅನುಭವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭುವಿ ಇನಿಂಗ್ಸ್‌ನ ಆರಂಭದಲ್ಲೆ ಒಂದರಮೇಲೊಂದು ವೈಡ್ ಬಾಲ್ ಎಸೆಯುವುದರೊಂದಿಕೆ ರನ್ ಕೂಡ ಹೊಡೆಸಿಕೊಂಡರು ಅದರಲ್ಲೂ ಅತ್ಯಂತ ನಿರ್ಣಾಯಕ 19ನೇ ಓವರ್‌ ಅನ್ನು ಬೌಲ್ ಮಾಡಿ ಭುವಿ 16 ರನ್ ಬಿಟ್ಟುಕೊಟ್ಟರು. ಈ ಓವರ್ ಪಂದ್ಯದ ಗತಿಯನ್ನೆ ಬದಲಿಸಿತ್ತು  ಭುವನೇಶ್ವರ್ ನಾಲ್ಕು ಓವರ್‌ಗಳಲ್ಲಿ 13 ಎಕಾನಮಿ ರೇಟ್‌ನಲ್ಲಿ 52 ರನ್ ಕೊಟ್ಟು ಸೋಲಿಗೆ ಪ್ರಮುಖ ಕಾರಣರಾದರು. ಭಾರತೀಯ ಬೌಲರ್‌ಗಳ ಪೈಕಿ ಭುವಿ ಬೌಲಿಂಗ್ ಪ್ರದರ್ಶನವು ಅತ್ಯಂತ ಕಳಪೆ ಮಟ್ಟದಲ್ಲಿತ್ತು ಆರಂಭದಿಂದಲೆ ಏನು ಕಳೆದುಕೊಂಡವರಂತೆ ಮೈದಾನದಲ್ಲಿ ಕಾಣುತ್ತಿದ್ದರು ಭುವಿ.
ಭಾರತ ತಂಡದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಇದು ನಮಗೆ ದೊಡ್ಡ ಆತಂಕವನ್ನು ತಂದೊಡ್ಡಿದೆ. ಮುಂದಿನ ಪಂದ್ಯಗಳನ್ನು ಯೋಚಿಸುವಂತಾಗಿದೆ. ಅದರಲ್ಲೂ ತಂಡದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಅನುಭವಿ ಬೌಲರ್ ಆಗಿದ್ದರು ಪ್ರತಿ ಬಾರಿಯೂ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಈ ಕಾರಣದಿಂದಲೇ ಭಾರತವನ್ನು ಪಾಕಿಸ್ತಾನ, ಶ್ರೀಲಂಕಾ ಮತ್ತು ಈಗ ಆಸ್ಟ್ರೇಲಿಯಾ ಕೂಡ ಸೋಲಿಸಿವೆ. ಆಸೀಸ್ ವಿರುದ್ಧ ನಾಲ್ಕು ಓವರ್ ಗಳಲ್ಲಿ ಭುವಿ ಹನ್ನೆರಡು ರನ್ ಸರಾಸರಿಯಲ್ಲಿ 52 ರನ್ ನಿಡಿದ್ದಾರೆ. ಪ್ರತಿ ಎಸೆತಕ್ಕೆ ಅವರು 2.16ರಂತೆ ರನ್ ನೀಡಿದ್ದಾರೆ. ಕಳೆದ 3 ಪಂದ್ಯಗಳ ಡೆತ್‍ ಓವರ್‍ ಳಲ್ಲಿ ಅವರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ’ ಅಂತಾ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.ಇದು ತಂಡದ ಮುಂದಿನ ಪಂದ್ಯಗಳಲ್ಲೂ ಸೋಲಿನ ಭೀತಿ ಎದುರಾಗಿದೆ.
ಭುವನೇಶ್ವರ್ ಹೊರತಾಗಿ ವೇಗಿ ಹರ್ಷಲ್ ಕೂಡ ಈ ಪಂದ್ಯದಲ್ಲಿ ದುಬಾರಿ ಎನಿಸಿದರು. ಗಾಯದಿಂದ ಮರಳಿದ ನಂತರ ಅವರು ತಮ್ಮ ಮೊದಲ ಪಂದ್ಯ ಆಡಿದರು. ಹರ್ಷಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 49 ರನ್‌ ಬಿಟ್ಟುಕೊಟ್ಟರು. ಆದರೆ ಹರ್ಷಲ್ ವಾಪಸಾದ ನಂತರ ಇದು ಮೊದಲ ಪಂದ್ಯ’ವಾಗಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ ಎಂದು ಗವಾಸ್ಕರ್ ಖಡಕ್ಕಾಗಿ ಹೇಳಿದ್ದಾರೆ.
ಟಿ-20 ವಿಶ್ವಕಪ್‌ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಬೌಲರ್‌ಗಳು ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡಿ ಅಭ್ಯಾಸ ಮಾಡಬೇಕಿದೆ ಬ್ಯಾಟಿಂಗ್ ನ ಬಲವನ್ನು ನಂಬಿ ಇದೇ ರೀತಿ ಬೌಲಿಂಗ್ ಮಾಡಿದರೆ ಬರಲಿರುವ ವಿಶ್ವಕಪ್ ಪಂದ್ಯದಲ್ಲಿ ಲೀಗ್ ಹಂತದಲ್ಲಿಯೇ ಭಾರತ ತಂಡ ಸೋತು ನಿರ್ಗಮಿಸಬೇಕಾದ ಸ್ಥಿತಿ ಬಂದರೂ ಬರಬಹುದು ಎಂದು ಕ್ರಿಕೆಟ್ ದಿಗ್ಗಜರ ಜೋತೆಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

2 × 1 =