ಗರ್ತಿಕೆರೆಯಲ್ಲಿ ಶ್ರೀ ನಾರಾಯಣ ಗುರು ಕಪ್ ಸೀಸನ್ 2 ಪ್ರಶಸ್ತಿ ಗೆದ್ದ ಜಾನ್ಸನ್ ಕುಂದಾಪುರ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಮೈದಾನದಲ್ಲಿ ನಡೆದ ಶ್ರೀ ನಾರಾಯಣ ಗುರು ಕಪ್ – ಸೀಸನ್ 2 ರಾಜ್ಯಮಟ್ಟದ ಹಾಗೂ ನಾನ್-ಸ್ಟೇಟ್ ಫ್ಲಡ್ ಲೈಟ್ ಕ್ರಿಕೆಟ್ ಟೂರ್ನಮೆಂಟ್ ಕ್ರೀಡಾಭಿಮಾನಿಗಳ ಮನಸೆಳೆಯುವಂತೆ ಭರ್ಜರಿಯಾಗಿ ನೆರವೇರಿತು. ಹಲವು ಶಕ್ತಿಶಾಲಿ ತಂಡಗಳ ಭಾಗವಹಿಸುವಿಕೆಯಿಂದ ಟೂರ್ನಮೆಂಟ್ ಉತ್ಸಾಹಭರಿತ ಪಂದ್ಯಗಳಿಗೆ ಸಾಕ್ಷಿಯಾಯಿತು.

ಟೂರ್ನಮೆಂಟ್ನ ಫೈನಲ್ನಲ್ಲಿ ಜಾನ್ಸನ್ ಕುಂದಾಪುರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಕಸಿದುಕೊಂಡಿತು. ವಿಜೇತ ತಂಡಕ್ಕೆ ₹3 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು. ಬೆಂಗಳೂರು ಮೂಲದ ಫ್ರೆಂಡ್ಸ್ ತಂಡ ರನ್ನರ್-ಅಪ್ ಸ್ಥಾನ ಪಡೆದು ₹1.5 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದಿತು
ಮೂರನೇ ಸ್ಥಾನವನ್ನು ಬೆಂಗಳೂರು ಮೂಲದ SAP ಬ್ರೈಟ್ ಸ್ಟಾರ್ ತಂಡ ಪಡೆದು ₹30,000 ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಕೊಡಗಿನ ಅಕುಲ್ ಟೂರಿಸಮ್ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು ₹30,000 ನಗದು ಮತ್ತು ಟ್ರೋಫಿಯನ್ನು ಪಡೆದಿತು.

ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿಯೂ ಆಟಗಾರರು ಮೆರೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ರಿಶಾಲ್ ಅಲೆವೂರು (ಜಾನ್ಸನ್ ಕುಂದಾಪುರ) ಪಡೆದು ಸ್ಮಾರ್ಟ್ ವಾಚ್ ಬಹುಮಾನವಾಗಿ ಪಡೆದರು.

ಟೂರ್ನಮೆಂಟ್ನ ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ತೀರ್ಥಹಳ್ಳಿಯ ರ್ಯಾಪಿಡ್ ರಾಪ್ಟರ್ಸ್ ತಂಡದ ಲಿಖಿತ್ ತಮ್ಮದಾಗಿಸಿಕೊಂಡರೆ, ಕೊಡಗಿನ ಅಕುಲ್ ಟೂರಿಸಮ್ ತಂಡದ ಮೋಹನ್ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದು ರೀಬಾಕ್ ಶೂ ಬಹುಮಾನವಾಗಿ ಪಡೆದರು.

ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ಫ್ರೆಂಡ್ಸ್ ಬೆಂಗಳೂರು ತಂಡದ ಧೀರಜ್ ಅಲೆವೂರು ಪಡೆದು ಟ್ರಾವೆಲಿಂಗ್ ಬ್ಯಾಗ್ ಬಹುಮಾನವಾಗಿ ಪಡೆದರು. ಟೂರ್ನಮೆಂಟ್ನ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಜಾನ್ಸನ್ ಕುಂದಾಪುರ ತಂಡದ ರಾಜಾ ಸಾಲಿಗ್ರಾಮ ಪಡೆದು ಸೈಕಲ್ ಬಹುಮಾನವಾಗಿ ಪಡೆದರು.

ಒಟ್ಟಾರೆ, ಶ್ರೀ ನಾರಾಯಣ ಗುರು ಕಪ್ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್ ಗರ್ತಿಕೆರೆ ಭಾಗದಲ್ಲಿ ಕ್ರೀಡಾ ಹಬ್ಬದ ಸಂಭ್ರಮವನ್ನು ಸೃಷ್ಟಿಸಿದ್ದು, ಸ್ಥಳೀಯ ಹಾಗೂ ರಾಜ್ಯಮಟ್ಟದ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿ ಪರಿಣಮಿಸಿತು.
