ಪಿ.ಎನ್.ಕೆ ಕ್ರಿಕೆಟರ್ಸ್ ಮಡಿಲಿಗೆ ಕ್ರಿಕೆಟ್ ಕಮ್ಯೂನಿಟಿ ಲೀಗ್ ಪ್ರಶಸ್ತಿ
ಬೆಂಗಳೂರು-ಇಲ್ಲಿನ ಮತ್ತಿಕೆರೆ ಜೆ.ಪಿ ಪಾರ್ಕ್ ಮೈದಾನದಲ್ಲಿ ಜರುಗಿದ 42+ ವಯೋಮಿತಿಯ ಕ್ರಿಕೆಟ್ ಕಮ್ಯೂನಿಟಿ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ದಾಸರಹಳ್ಳಿಯ ಕಾಂಗ್ರೆಸ್ ಮುಖಂಡ,ಹಿರಿಯ ಕ್ರೀಡಾಪಟು ಹಾಗೂ ಕ್ರೀಡಾಪ್ರೋತ್ಸಾಹಕರಾದ ಪಿ.ಎನ್.ಕೃಷ್ಣಮೂರ್ತಿಯವರ ಸಾರಥ್ಯದ ಪಿ.ಎನ್.ಕೆ ಕ್ರಿಕೆಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಲೀಗ್ ಹಂತದಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿದ ಪಿ.ಎನ್.ಕೆ ಕ್ರಿಕೆಟರ್ಸ್ ಫೈನಲ್ ನಲ್ಲಿ ಸಿಟಿ ಕೊಲ್ನಾಡ್ ತಂಡವನ್ನು ಮಣಿಸಿ ಪ್ರಥಮ ಬಹುಮಾನ 1 ಲಕ್ಷ ರೂ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿ ಹಾಗೂ ರನ್ನರ್ ಅಪ್ ಸಿಟಿ ಕೊಲ್ನಾಡ್ ತಂಡ 50 ಸಾವಿರ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.

ಪಂದ್ಯಾಟದ ಬೆಸ್ಟ್ ಬ್ಯಾಟರ್ ಮಿರಾಕಲ್ ನ ಭಾಸ್ಕರ್,ಬೆಸ್ಟ್ ಬೌಲರ್ ಪ್ರವೀಣ್ ಪಿತ್ರೋಡಿ ಮತ್ತು ಸರಣಿಶ್ರೇಷ್ಟ ಪ್ರಶಸ್ತಿಯನ್ನು ಸಿಟಿ ಕೊಲ್ನಾಡ್ ತಂಡದ ಭಾಸ್ಕರ್ ಪಡೆದರು.
