12.8 C
London
Monday, May 20, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಉಡುಪಿ-T.C.A ಪ್ರಾಯೋಜಿತ ಕುಂದಾಪುರ-ಬ್ರಹ್ಮಾವರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ

ಉಡುಪಿ-T.C.A ಪ್ರಾಯೋಜಿತ ಕುಂದಾಪುರ-ಬ್ರಹ್ಮಾವರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಹಿರಿಯ ಆಟಗಾರರು,
ಕ್ರೀಡಾಪ್ರೋತ್ಸಾಹಕರ ಸಮಾಗಮದಲ್ಲಿ ಪ್ರವರ್ಧಮಾನಕ್ಕೆ ಬಂದ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಥಮಿಕ ಹಂತದ ಯೋಜನೆಯಂತೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಈಗಾಗಲೇ  ತಾಲೂಕು (ಕಾರ್ಕಳ,ಉಡುಪಿ,ಕಾಪು, ಬೈಂದೂರು,ಹೆಬ್ರಿ) ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿರುತ್ತದೆ.
ಇದೀಗ 2 ನೇ ಅತಿ ಹೆಚ್ಚು ಆಟಗಾರರ ನೋಂದಣಿ
(223 ಆಟಗಾರರು)ಭಾಗವಹಿಸಿದ ಕುಂದಾಪುರ ತಾಲೂಕು ಮತ್ತು ಬ್ರಹ್ಮಾವರ(154el ಆಟಗಾರರು) ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಮಾರ್ಚ್ 31 ರಿಂದ ಏಪ್ರಿಲ್ 3 ರ ತನಕ  ಕುಂದಾಪುರದ ಗಾಂಧಿಮೈದಾನದಲ್ಲಿ ನಡೆಯಲಿದೆ.
90 ರ ದಶಕದಲ್ಲಿ ಇತಿಹಾಸ ಬರೆದ ಕುಂದಾಪುರ ಪರಿಸರದ ಪ್ರಸಿದ್ಧ ತಂಡಗಳಾದ ಚಕ್ರವರ್ತಿ,
ಟೊರ್ಪೆಡೋಸ್,ಸ್ವಾಮಿ ಗಂಗೊಳ್ಳಿ,ಮಿತ್ರವೃಂದ ಕೋಟೇಶ್ವರ, ಅಂಶು ಕೋಟೇಶ್ವರ, ಚಾಲೆಂಜ್ ಕುಂದಾಪುರ, ಜೆ.ಸಿ.ಸಿ‌‌ ಜಾಲಾಡಿ,ಚಾಲುಕ್ಯ ಹೆಮ್ಮಾಡಿ,ಮಹಾದೇವಿ ಮಲ್ಯಾಡಿ,ಮದೀನಾ ಕುಂದಾಪುರ, ಲಕ್ಕಿ ಸ್ಟಾರ್ ಕೋಡಿ,ಸಮುದಾಯ ತಲ್ಲೂರು,ಮಯೂರ ಕುಂದಾಪುರ, ಜಾನ್ಸನ್ ಕುಂದಾಪುರ,ಕೀಳೇಶ್ವರಿ ಕುಂದಾಪುರ ಒಟ್ಟು 15 ತಂಡಗಳು,
ಹಾಗೂ ಬ್ರಹ್ಮಾವರ ಪರಿಸರದ ಹಿರಿಯ ತಂಡಗಳಾದ ವಾಹಿನಿ ಪಡುಕರೆ,ಇಲೆವೆನ್ ಅಪ್ ಕೋಟ,ಪಾರಂಪಳ್ಳಿ ಕ್ರಿಕೆಟರ್ಸ್,ಎಮ್.ಸಿ.ಸಿ ಮಣೂರು,ಖುಷಿ ಅಮರ್ ಬ್ರಹ್ಮಾವರ ಮತ್ತು ವರ್ಲ್ಡ್ ಇಲೆವೆನ್ ಹಂದಾಡಿ ಈ 6 ತಂಡಗಳು ಮತ್ತೆ ಅಖಾಡಕ್ಕಿಳಿಯಲಿದ್ದು ಟೆನಿಸ್ಬಾಲ್ ಕ್ರಿಕೆಟ್ ನ ಗತಕಾಲದ ವೈಭವ ಮತ್ತೆ ಮರುಕಳಿಸಲಿದೆ ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ತಿಳಿಸಿದ್ದಾರೆ.
ಅಳಿವಿನಂಚಿನಲ್ಲಿರುವ ಟೆನಿಸ್ಬಾಲ್ ಕ್ರಿಕೆಟ್ ಉಳಿಸುವ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಈ ಪ್ರಯತ್ನ ರಾಜ್ಯದಾದ್ಯಂತ ಕ್ರಾಂತಿಕಾರಿ ಸಂಚಲನ ಮೂಡಿಸಿದ್ದು,ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪಿಸುವ ಯೋಜನೆ ಕಾರ್ಯರೂಪಕ್ಕೆ ತರುವ ಯೋಚನೆ ನಡೆಯುತ್ತಿದೆ…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

12 − 9 =