Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಎಮ್.ಜೆ.ಸಿ ಮೂಡುಬೆಳ್ಳೆ ಮಡಿಲಿಗೆ ಎಮ್.ಪಿ.ಎಲ್ 2023- ಸೀಸನ್ 4 ರ ಪ್ರಶಸ್ತಿ

ಉಡುಪಿ-ಯಶಸ್ವಿ ಸ್ಪೋರ್ಟ್ಸ್ ಕ್ಲಬ್ ಮೂಡುಬೆಳ್ಳೆ ಇವರ ಆಶ್ರಯದಲ್ಲಿ ಏಪ್ರಿಲ್ 2 ರವಿವಾರದಂದು ಮೂಡುಬೆಳ್ಳೆ ಕಾಲೇಜು ಮೈದಾನದಲ್ಲಿ ನಡೆದ ಮೂಡುಬೆಳ್ಳೆ ಪ್ರೀಮಿಯರ್ ಲೀಗ್ 2023-ಸೀಸನ್ 4 ರ ಪ್ರಶಸ್ತಿಯನ್ನು ಎಮ್.ಜೆ.ಸಿ ಮೂಡುಬೆಳ್ಳೆ ತಂಡ ಜಯಿಸಿದೆ.
ಮೂಡುಬೆಳ್ಳೆ ಪರಿಸರದ ಪ್ರತಿಭಾನ್ವಿತ ಆಟಗಾರರ ಅನ್ವೇಷಣೆಯ ಸದುದ್ದೇಶದಿಂದ ಹಮ್ಮಿಕೊಂಡ ಈ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು.
ಅಂತಿಮವಾಗಿ ಫೈನಲ್ ನಲ್ಲಿ ಎಮ್.ಜೆ.ಸಿ ಮೂಡುಬೆಳ್ಳೆ ತಂಡ ಭಜರಂಗಿ ಕ್ರಿಕೆಟರ್ಸ್ ಮೂಡುಬೆಳ್ಳೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಹಾಗೂ
ಬ್ರೂಟಲ್ ವಾರಿಯರ್ಸ್‌ ತೃತೀಯ ಸ್ಥಾನ ತನ್ನದಾಗಿಸಿಕೊಂಡಿತು.
ಫೈನಲ್ ನ ಪಂದ್ಯಶ್ರೇಷ್ಟ  ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸುದೇಶ್ ಆಚಾರ್ಯ ಎಮ್.ಜೆ‌.ಸಿ ಮೂಡುಬೆಳ್ಳೆ ಪಡೆದುಕೊಂಡರೆ,ಅನಿಕೇತ್ ಎಂಟರ್ಪ್ರೈಸಸ್ ಎಡ್ಮೇರ್ ನ ಚಂದ್ರಕಾಂತ್ ಬೆಸ್ಟ್ ಫೀಲ್ಡರ್,ಭಜರಂಗಿ ಮೂಡುಬೆಳ್ಳೆಯ ಪುರುಷೋತ್ತಮ್ ಬೆಸ್ಟ್ ಬ್ಯಾಟರ್ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್ರೌಂಡರ್ ಪ್ರದರ್ಶನ ನೀಡಿದ ಅನಿತ್ ಮೂಡುಬೆಳ್ಳೆ ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದರು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

four × 3 =