ಫುಟ್ಬಾಲ್ಭಾರತೀಯ ಫುಟ್ಬಾಲ್ ದಂತಕತೆ - ಸುನೀಲ್ ಛೇಟ್ರಿ. ಲೆಜೆಂಡ್ ಆಟಗಾರನಿಗೆ ತಡವಾಗಿ...

ಭಾರತೀಯ ಫುಟ್ಬಾಲ್ ದಂತಕತೆ – ಸುನೀಲ್ ಛೇಟ್ರಿ. ಲೆಜೆಂಡ್ ಆಟಗಾರನಿಗೆ ತಡವಾಗಿ ಆದರೂ ಒಲಿದ ಫಿಫಾ ಗೌರವ!

-

- Advertisment -spot_img
ಸಾಮಾನ್ಯವಾಗಿ ವಿಶ್ವಮಟ್ಟದ ಫುಟ್ಬಾಲ್ ಆಟಗಾರರು 35 ವರ್ಷ ಆಗುವ ಹೊತ್ತಿಗೆ ನಿವೃತ್ತಿ ಘೋಷಣೆ ಮಾಡುತ್ತಾರೆ. ಯಾಕೆಂದರೆ ಫುಟ್ಬಾಲ್ ಅತೀ ಹೆಚ್ಚು ದೈಹಿಕ ದೃಢತೆ ಮತ್ತು ಕ್ಷಮತೆಗಳನ್ನು ಬೇಡುವ ಆಟ ಆಗಿದೆ.
ಆದರೆ ಈ ಭಾರತೀಯ ಫುಟ್ಬಾಲ್ ಆಟಗಾರನ ಸಾಧನೆಯ ಹಸಿವು ಸದ್ಯಕ್ಕಂತೂ  ತಣಿಯುವ ಯಾವ ಸೂಚನೆಯು ಇಲ್ಲ ಎಂದೆನಿಸುತ್ತದೆ! ವರ್ಷ ಮೂವತ್ತೆಂಟು  ದಾಟಿದರೂ ಆತನ ಚರಿಷ್ಮಾ ಒಂದಿಷ್ಟೂ ಕುಸಿದಿಲ್ಲ! ವೇಗ, ನಿಖರತೆ, ಆಕ್ರಮಣ, ಪಾದಗಳ ಚಲನೆಯ ವೇಗ, ಸ್ಟೆಮಿನಾ ಯಾವುದೂ ಕಡಿಮೆ ಆಗಿಲ್ಲ.
ಆತನೇ ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಛೇಟ್ರಿ!
ಅವರ ಇಡೀ ಕುಟುಂಬವೇ ಫುಟ್ಬಾಲಿಗೆ ಸಮರ್ಪಿತ!
————————————————–
ಸುನೀಲ್ ಛೇಟ್ರಿ ಇಡೀ ಕುಟುಂಬವೇ ಫುಟ್ಬಾಲ್ ಕ್ರೀಡೆಗೆ ಸಮರ್ಪಿತ ಆಗಿರುವುದು ವಿಶೇಷ. ಆತನ ತಂದೆ ಕೂಡ  ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಅವರು ಸೇನಾ ತಂಡದ ಪರವಾಗಿ ಆಡಿದ್ದರು. ಅವರ ಅಕ್ಕಂದಿರು, ತಾಯಿ, ಪ್ರೀತಿ ಮಾಡಿ ಕೈ ಹಿಡಿದ ಹೆಂಡತಿ, ಮಾವ ಎಲ್ಲರೂ ಫುಟ್ಬಾಲ್ ಆಟಗಾರರೇ ಆಗಿದ್ದಾರೆ!
ಅದರಿಂದಾಗಿ ಸುನೀಲ್ ಛೇಟ್ರೀ ಫುಟ್ಬಾಲೀನ  ಪ್ರತಿಭೆಯು ಅಮೇಜಾನ್ ನದಿಯ ವೇಗವನ್ನು ಪಡೆಯಿತು. ಅತೀ ಸಣ್ಣ ವಯಸ್ಸಿಗೇ ಫುಟ್ಬಾಲ್ ಆಡಲು ಆರಂಭ ಮಾಡಿದ ಆತ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಫುಟ್ಬಾಲ್ ಆಟದ  ಧ್ವಜವನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ!
ಸುನೀಲ್ ಪ್ರಯಾಣ ಆರಂಭ ಆದದ್ದು ಹೀಗೆ!
——————————————-
2002ರಲ್ಲಿ ಮೋಹನ್ ಬಗಾನ್ ಕ್ಲಬ್  ಪರ ಆಡುವುದರ ಮೂಲಕ ಸುನೀಲ್ ಪ್ರತಿಭೆಯು ಮೊದಲು ಪ್ರಕಾಶನಕ್ಕೆ ಬಂದಿತು. ಇದುವರೆಗೆ ಒಟ್ಟು 13 ಕ್ಲಬ್ ಮಟ್ಟದ ತಂಡಗಳ ಪರವಾಗಿ ಅವರು ಆಡಿದ್ದು ಯಾರೂ ಮುರಿಯಲು ಸಾಧ್ಯವೆ ಆಗದ ದಾಖಲೆಯನ್ನು ಹೊಂದಿದ್ದಾರೆ! ಸುನೀಲ್ ತಂಡದಲ್ಲಿ  ಇದ್ದರೆ ಗೆಲುವು ಖಚಿತ ಎನ್ನುವ ನಂಬಿಕೆಯು ಈವರೆಗೆ ಎಲ್ಲಿಯೂ ಸೋತಿರುವ ಉದಾಹರಣೆ ಇಲ್ಲ.
ಭಾರತ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ತೀರಾ ಕಳಪೆ ಸಾಧನೆ ಮಾಡುತ್ತಾ ಬಂದಿದ್ದರೂ ಸುನೀಲ್ ಛೇಟ್ರಿ ಅವರ ಅಂತಾರಾಷ್ಟ್ರೀಯ ದಾಖಲೆಗಳು ಇಂದಿಗೂ ಪ್ರಕಾಶಮಾನ ಆಗಿವೆ. ಆದಕ್ಕೆ ಕಾರಣ ಆತನ ಶ್ರೇಷ್ಟವಾದ ಪ್ರತಿಭೆ, ಬೆವರು ಸುರಿಸುವ ಸಾಧನೆ ಮತ್ತು ಕಠಿಣ ಪರಿಶ್ರಮ ಎಂದರೆ ಖಂಡಿತ ತಪ್ಪಿಲ್ಲ. ಆತನ ಆಟದಲ್ಲಿ ತೀವ್ರ ಆಕ್ರಮಣ ಇದೆ. ಆದರೆ ಆತ ಮೈದಾನದಲ್ಲಿ ಈವರೆಗೆ ತಾಳ್ಮೆ ತಪ್ಪಿದ್ದೇ ಇಲ್ಲ!
ಜಾಗತಿಕ ಮಟ್ಟದಲ್ಲಿ ಸುನೀಲ್ ಈಗ ನಂಬರ್ 3!
———————————————–
ಸುನೀಲ್ ಈವರೆಗೆ 131 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಹೊಡೆದ ಗೋಲುಗಳ ಸಂಖ್ಯೆ 84! ಕ್ರಿಶ್ಚಿಯನ್ ರೆನಾಲ್ದೋ ಮತ್ತು ಲಿಯೋನೆಲ್ ಮೆಸ್ಸಿ ಬಿಟ್ಟರೆ ಮೂರನೇ ಸ್ಥಾನದಲ್ಲಿ ಈಗ ಇರುವುದು ಸುನೀಲ್ ಛೇಟ್ರೀ ಮಾತ್ರ!
ಅವರಿಬ್ಬರಿಗೂ ಸಿಕ್ಕಿದ ಫೋಕಸ್ ಮತ್ತು ಅವಕಾಶಗಳು ನಮ್ಮ ಸುನೀಲ್ ಅವರಿಗೆ ಸಿಕ್ಕಿದ್ದರೆ ಅವರು ಖಂಡಿತವಾಗಿ ಜಾಗತಿಕ ದಾಖಲೆಗಳನ್ನು ಮಾಡುವ ಸಾಧ್ಯತೆ ಇತ್ತು. ಆದರೆ ದುರದೃಷ್ಟ ಎಂದರೆ ಆತನಿಗೆ ಈವರೆಗೆ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಆಡುವ ಅವಕಾಶವು ದೊರೆತಿಲ್ಲ ಅನ್ನುವುದು!
ಕ್ರಿಕೆಟ್ ಆಟ  ಭಾರತದ ನಾಡಿ ಮಿಡಿತವೇ ಆಗಿರುವುದರಿಂದ  ಬೇರೆ ಎಲ್ಲ ಆಟಗಳು ಮಸುಕು ಆಗಿರುವುದು ನಿಜವಾದ ದುರಂತ.
ಆದರೆ ಸುನೀಲ್ ಛೇಟ್ರಿ ಸಾಧನೆಗೆ ಎಣೆಯೇ ಇಲ್ಲ!
———————————————–
ಭಾರತದ ‘ದ ಬೆಸ್ಟ್  ಫಾರ್ವರ್ಡ್’  ಆಟಗಾರ ಆಗಿರುವ ಸುನೀಲ್ ಗೋಲ್ ಬಾರಿಸುವ ಯಾವ ಅವಕಾಶವನ್ನೂ ಈವರೆಗೆ ಕೈ ಚೆಲ್ಲಿದ ಪ್ರಸಂಗ ಇಲ್ಲ. ಮೂರು ಖಂಡಗಳಲ್ಲಿ ಆಡಿರುವ ಏಕೈಕ ಭಾರತೀಯ ಆಟಗಾರ ಅವರು.
AIFF (ಭಾರತೀಯ ಫುಟ್ಬಾಲ್ ಫೆಡರೇಷನ್) ನೀಡುವ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿಯನ್ನು ಏಳು ಬಾರಿ ಪಡೆದಿರುವ ಏಕೈಕ ಆಟಗಾರ ಅವರು! ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳನ್ನು  ಈಗಾಗಲೇ ಅವರು ಗೆದ್ದಾಗಿದೆ! ಎಲ್ಲಕಿಂತ ಹೆಚ್ಚಾಗಿ ದೇಶದ ಶ್ರೇಷ್ಠ ಕ್ರೀಡಾ ಪ್ರಶಸ್ತಿಯಾದ
‘ಖೇಲ್ ರತ್ನ ‘ ಪ್ರಶಸ್ತಿಯನ್ನು  ಪಡೆದಿರುವ ಮೊತ್ತಮೊದಲ ಫುಟ್ಬಾಲ್ ಆಟಗಾರ ಅವರು! ಏಷಿಯನ್ ಫುಟ್ಬಾಲ್ ಒಕ್ಕೂಟ ಅವರಿಗೆ ‘ಏಷಿಯಾದ ಫುಟ್ಬಾಲ್ ಐಕಾನ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಸುನೀಲ್ ಛೇಟ್ರಿ ಭಾರತದ ಬಹುಮೂಲ್ಯ ಆಟಗಾರ.
—————————————————
ಈಗಲೂ ಸುನೀಲ್ ಭಾರತದ  ಅತ್ಯಂತ ಬಹುಮೂಲ್ಯವಾದ  ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. 38ರ ಇಳಿ ಹರೆಯದಲ್ಲಿ ಕೂಡ ಅವರನ್ನು ಖರೀದಿ ಮಾಡಲು ದೇಶದ ಶ್ರೀಮಂತ ಕ್ಲಬಗಳು ತುದಿಗಾಲಲ್ಲಿ ನಿಂತಿವೆ ಅನ್ನೋದು ಅವರ ಪವರ್ ! ಈಗ ಬೆಂಗಳೂರು ಕ್ಲಬ್ ಪರವಾಗಿ ಅವರು ಆಡುತ್ತಿದ್ದಾರೆ.
ತಡವಾಗಿ ದೊರೆಯಿತು ಅಂತಾರಾಷ್ಟ್ರೀಯ ಮಾನ್ಯತೆ!
————————————————-
ಇಷ್ಟೆಲ್ಲ ಸಾಧನೆಯನ್ನು  ಮಾಡಿದ್ದರೂ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫಿಫಾ ಅವರನ್ನು ಗುರುತಿಸಿಲ್ಲ ಎನ್ನುವ ನೋವು ಪ್ರತಿಯೊಬ್ಬ ಭಾರತೀಯನಿಗೂ ಇತ್ತು. ಸುನೀಲ್ ಕೂಡ ಇದರ ಬಗ್ಗೆ ಬಹಳ ದುಃಖ ವ್ಯಕ್ತ ಪಡಿಸಿದ್ದರು. ಆದರೆ ಈಗ ಆ ನೋವಿಗೆ ಒಂದು ಉಪಶಮನ ದೊರೆತಿದೆ.
ಫಿಫಾ ಈಗ ಸುನೀಲ್ ಛೇಟ್ರಿ ಅವರ ಬಗ್ಗೆ ಒಂದು ಸುಂದರ  ಸಾಕ್ಷ್ಯಚಿತ್ರವನ್ನು ಸಿದ್ಧಮಾಡಿ ಅದನ್ನು ತನ್ನ ಅಧಿಕೃತ ವೆಬ್ ತಾಣದಲ್ಲಿ ಅಪ್ಲೋಡ್ ಮಾಡಿದೆ! ಅದು ಮೂರು ಸಂಚಿಕೆ  ಹೊಂದಿದ್ದು ಅದರಲ್ಲಿ ಜಗತ್ತಿನ ಮಹಾ ಮಹಾ ಫುಟ್ಬಾಲ್ ಆಟಗಾರರು ಸುನೀಲ್ ಛೇಟ್ರಿ ಬಗ್ಗೆ ಅಭಿಮಾನದ ಮಾತು ಹೇಳಿದ್ದಾರೆ. ಮೆಸ್ಸಿ, ರೊನಾಲ್ಡೋ ಇಬ್ಬರೂ ಸುನೀಲ್ ಬಗ್ಗೆ ಪ್ರೀತಿಯಿಂದ ಮಾತಾಡಿದ್ದಾರೆ. ಈ ಗೌರವ ಪಡೆದಿರುವ ಮೊದಲ ಏಷಿಯಾದ ಫುಟ್ಬಾಲ್ ಆಟಗಾರ ಸುನೀಲ್ !
ಫಿಫಾ ಆ ವೀಡಿಯೋದ ಕೊನೆಗೆ ಸುನೀಲ್ ಅವರನ್ನು ‘ಭಾರತದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ‘ ಎಂದು ಶ್ಲಾಘಿಸಿದೆ. ಇನ್ನು ಒಂದೇ ತಿಂಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗುವ ಸಂದರ್ಭದಲ್ಲಿ ಭಾರತೀಯ ಆಟಗಾರನಿಗೆ ಸಿಕ್ಕಿದ ಈ ಮಾನ್ಯತೆಯಿಂದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಆಗಿದೆ!
ಇಪ್ಪತ್ತು ವರ್ಷಗಳಿಂದ ಜಾಗತಿಕ ಫುಟ್ಬಾಲನ್ನು ಆಡುತ್ತ ಬಂದಿರುವ ಸುನೀಲ್ ಛೇಟ್ರಿ ಅವರ ಸುವರ್ಣ ಸಾಧನೆಯ ಶಿಖರಬಿಂದು ಈ ಗೌರವ!

LEAVE A REPLY

Please enter your comment!
Please enter your name here

nineteen − 3 =

Latest news

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...
- Advertisement -spot_imgspot_img

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

Must read

- Advertisement -spot_imgspot_img

You might also likeRELATED
Recommended to you