ಕ್ರಿಕೆಟ್ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

-

- Advertisment -spot_img
1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ ಲಂಕಾ ತಂಡದ ಕೋಚ್ ಆಗಿದ್ದವರು ಆಸ್ಟ್ರೇಲಿಯಾದ ಡೇವ್ ವಾಟ್ಮೋರ್. ನಂತರ ವಾಟ್ಮೋರ್ national cricket academyಗೆ ಡೈರೆಕ್ಟರ್ ಆಗಿ ಬೆಂಗಳೂರಿಗೆ ಬಂದಿದ್ದರು.
13-14 ವರ್ಷಗಳ ಹಿಂದಿನ ಮಾತು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ logistic manager ಆಗಿದ್ದ ರಮೇಶ್ ರಾವ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅಲ್ಲಿ ಕರುಣ್ ನಾಯರ್ NCA ನೆಟ್ಸ್’ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ. ಹುಡುಗನ ಆಟ ಆಕರ್ಷಣೀಯವೆನಿಸಿತು. ಹಾಗೇ ಸ್ವಲ್ಪ ಹೊತ್ತು ನೋಡುತ್ತಾ ನಿಂತೆ. ಆಗ ಡೇವ್ ವಾಟ್ಮೋರ್ NCA ಒಳಗಿನಿಂದ ಬಂದರು. ಬಂದವರೇ ಕರುಣ್ ನಾಯರ್ ಆಡುತ್ತಿರುವುದನ್ನು ನೋಡಿ ಮೊದಲು ಹೇಳಿದ ಮಾತು, ‘’ಜಿ.ಆರ್ ವಿಶ್ವನಾಥ್’’. ಆ ದಿನ ವಾಟ್ಮೋರ್ ಕಣ್ಣಿಗೆ ಕರುಣ್ ನಾಯರ್ ಜಿ.ಆರ್. ವಿಶಿ ಅವರಂತೆ ಕಂಡಿದ್ದ. ‘’ಕುಳ್ಳ’’ಗಿದ್ದಾನೆ ಎಂಬುದು ಒಂದು ಕಾರಣವಾದರೆ, ಅದನ್ನೂ ಮೀರಿದ್ದು ಕರುಣ್ ನಾಯರ್’ನ ಆಟ.
ಬದುಕು ಅದೆಷ್ಟು ಅನಿಶ್ಚಿತ ಎಂದರೆ, ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದವನು, ಒಂದು ಕಾಲದಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿ ನಂತರ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಕ್ಯಾಪ್ಟನ್ ಆಗಿದ್ದವನು. ಈಗ ನೋಡಿದರೆ ಯಾವ ಐಪಿಎಲ್’ಗೆ ಬೇಡದ ಆಟಗಾರ.
ಹಾಗೆಂದು ಇಲ್ಲಿ ಬಾಗಿಲು ಮುಚ್ಚಿತೆಂದು ಕರುಣ್ ಕೈ ಕಟ್ಟಿ ಮನೆಯಲ್ಲಿ ಕೂತಿಲ್ಲ. ಹೊಸ ಸವಾಲಿಗೆ ಎದೆಯೊಡ್ಡಿ ಇಂಗ್ಲೆಂಡ್’ನಲ್ಲಿ #Northamptonshire ಕೌಂಟಿ ಕ್ರಿಕೆಟ್ ಆಡುತ್ತಿದ್ದಾನೆ. ನಿನ್ನೆ #Glamorgan ವಿರುದ್ಧ ಅಮೋಘ ದ್ವಿಶತಕ ಬಾರಿಸಿದ್ದಾನೆ. (253 ಎಸೆತಗಳಲ್ಲಿ 202 ನೌಟೌಟ್).
ಕರುಣ್ ನಾಯರ್ ಒಂದು ರೀತಿಯಲ್ಲಿ ನತದೃಷ್ಟ ಕ್ರಿಕೆಟಿಗ. ಯಶಸ್ಸಿನ ಉತ್ತುಂಗಕ್ಕೇರಿ ಅಷ್ಟೇ ಬೇಗ ಪಾತಾಳಕ್ಕೆ ಬಿದ್ದವನು. 2013-14 ಮತ್ತು 2014-15ನೇ ಸಾಲಿನಲ್ಲಿ ಸತತ 2 ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಿದ್ದ ಫೇಮಸ್ ಕರ್ನಾಟಕ ತಂಡದ ನಂಬಿಕಸ್ಥ ದಾಂಡಿಗನಾಗಿದ್ದವನು ಕರುಣ್. 2019ರಲ್ಲಿ ಇದೇ ಕರುಣ್ ನಾಯಕತ್ವದಲ್ಲಿ ಕರ್ನಾಟಕ ವಿಜಯ್ ಹಜಾರೆ ಚಾಂಪಿಯನ್’ಷಿಪ್ ಗೆದ್ದಿತ್ತು. ಆದರೆ ನಂತರದ ದಿನಗಳಲ್ಲಿ ಎದುರಿಸಿದ ಸತತ ವೈಫಲ್ಯಗಳು ಕರುಣ್’ಗೆ ಕರ್ನಾಟಕ ತಂಡದ ಬಾಗಿಲನ್ನೇ ಮುಚ್ಚಿ ಬಿಟ್ಟವು.
ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಒಂದು ವರ್ಷ ಮನೆಯಲ್ಲಿ ಕೂತಿದ್ದಾಗ ಕರುಣ್ ನಾಯರ್ ಅಕ್ಷರಶಃ ಕುಗ್ಗಿ ಹೋಗಿದ್ದ. ‘’Dear cricket, give me one chance’’ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಂಗಲಾಚುವಷ್ಟರ ಮಟ್ಟಿಗೆ ಕರುಣ್ ಹತಾಶನಾಗಿದ್ದ.
ಕರುಣ್ ನಾಯರ್’ಗೆ ಕರ್ನಾಟಕದಲ್ಲಿ ಮುಚ್ಚಿದ ಬಾಗಿಲು ವಿದರ್ಭದಲ್ಲಿ ತೆರೆಯಿತು. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಮೋಘ ಆಟವಾಡಿ ವಿದರ್ಭ ತಂಡವನ್ನು ಫೈನಲ್’ವರೆಗೆ ಕೊಂಡೊಯ್ದಿದ್ದ.
ಇನ್ನು ಐಪಿಎಲ್. ಅಲ್ಲೂ ಕರುಣ್ ನಾಯರ್’ಗೆ ಡೋರ್ ಕ್ಲೋಸ್ ಆಗಿದೆ. ಕಳೆದ ವರ್ಷ ಕೆ.ಎಲ್ ರಾಹುಲ್ ಗಾಯಗೊಂಡಾಗ ಬದಲಿ ಆಟಗಾರನಾಗಿ ಲಕ್ನೋ ತಂಡ ಸೇರಿಕೊಂಡಿದ್ದ ಕರುಣ್’ಗೆ ಈ ಬಾರಿ ಯಾವ ತಂಡದಲ್ಲೂ ಅವಕಾಶ ಸಿಕ್ಕಿಲ್ಲ.
ಇಲ್ಲಿ ಅವಕಾಶಕ್ಕಾಗಿ ಕಾಯುತ್ತಾ ಕೂರುವ ಬದಲು ತನ್ನ ಆಟವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳುವ ಗುರಿಯೊಂದಿಗೆ,  ಮಾನಸಿಕವಾಗಿ ಇನ್ನಷ್ಟು ಸದೃಢನಾಗುವ ಧ್ಯೇಯದೊಂದಿಗೆ ಕಳೆದ ವರ್ಷದಂತೆ ಈ ಬಾರಿಯೂ ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾನೆ. ಕಳೆದ ವರ್ಷ 2 ಶತಕಗಳನ್ನು ಬಾರಿಸಿದ್ದ ಕರುಣ್, ಈ ವರ್ಷ ದ್ವಿಶತಕದೊಂದಿಗೆ ಅಬ್ಬರಿಸಿದ್ದಾನೆ.
ಕರುಣ್ ನಾಯರ್’ಗೆ ಈಗ 32 ವರ್ಷ. ಆತನೊಳಗೆ ಇನ್ನೂ ಐದಾರು ವರ್ಷದ ಕ್ರಿಕೆಟ್ ಇದ್ದೇ ಇದೆ. ಅವಕಾಶಗಳು ಹೇಗೆ ಬೇಕಾದರೂ, ಯಾವ ರೂಪದಲ್ಲಿ ಬೇಕಾದರೂ ಬರಬಹುದು. 37ನೇ ವರ್ಷದಲ್ಲಿ ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿ ಟಿ20 ವಿಶ್ವಕಪ್ ಆಡಿಲ್ಲವೇ..! ಅಂತಹ ಒಂದು ಟೈಮ್ ಕರುಣ್’ಗೆ ಭಾರತ ತಂಡದಲ್ಲಿ ಅಲ್ಲವಾದರೂ, ಕರ್ನಾಟಕ ಪರವಾಗಿಯಾದರೂ ಬರಬಹುದು.
ಹೀಗೇ ಆಡುತ್ತಿರು ಕರುಣ್.., ಕತ್ತಲು ಸರಿದ ಮೇಲೆ ಬೆಳಕು ಮೂಡಲೇಬೇಕು.

LEAVE A REPLY

Please enter your comment!
Please enter your name here

15 + seventeen =

Latest news

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ...
- Advertisement -spot_imgspot_img

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಬೈಂದೂರಿನ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ (VCC) ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA)...

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

Must read

- Advertisement -spot_imgspot_img

You might also likeRELATED
Recommended to you