ಕ್ರಿಕೆಟ್ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

-

- Advertisment -spot_img
17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ ಸಾವಿರ ಪಂದ್ಯಗಳಲ್ಲಿ ಅಷ್ಟೂ ತಂಡಗಳು ಕನಿಷ್ಠ 200 ಪಂದ್ಯಗಳಲ್ಲಾದರೂ ಹೀನಾಯವಾಗಿ ಸೋತಿವೆ. ಆದರೆ ಯಾವ ಫ್ರಾಂಚೈಸಿ owner ಕೂಡ ಈ ಸಂಜೀವ್ ಗೋಯೆಂಕಾನಂತೆ ವರ್ತಿಸಿಲ್ಲ.
ನಿನ್ನೆ ಹೈದರಾಬಾದ್ ತಂಡದ ವಿಧ್ವಂಸಕ ಆಟಕ್ಕೆ ಲಕ್ನೋ ತಂಡ ಧೂಳೀಪಟವಾದ ನಂತರ ಲಕ್ನೋ ಕ್ಯಾಪ್ಟನ್ ಕೆ.ಎಲ್ ರಾಹುಲ್ ಜೊತೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದ ವೀಡಿಯೊ ವೈರಲ್ ಆಗಿದೆ. ರಾಹುಲ್ ಮೇಲೆ ಗೋಯೆಂಕಾ ರೇಗಾಡುತ್ತಿದ್ದದ್ದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಕ್ರಿಕೆಟ್ ABCD ಗೊತ್ತಿಲ್ಲದ ವ್ಯಕ್ತಿಯೊಬ್ಬ, ಜೀವನದಲ್ಲಿ ಎಂದಿಗೂ ಬ್ಯಾಟನ್ನೇ ಹಿಡಿಯದ ಮನುಷ್ಯನೊಬ್ಬ ಎದುರಲ್ಲಿ ನಿಂತು ಕ್ರಿಕೆಟ್ ಪಾಠ ಹೇಳುತ್ತಿದ್ದರೆ, ರಾಹುಲ್ ಮಾತ್ರ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದ.
ಇದೇ ಸಂಜೀವ್ ಗೋಯೆಂಕಾ ನಮ್ಮ ದೇಶದ ಕ್ರಿಕೆಟ್ ಹೆಮ್ಮೆ ಎಂ.ಎಸ್ ಧೋನಿಯವರನ್ನು ಹೀಗೇ ಅವಮಾನಿಸಿದ್ದರು. 2017ರಲ್ಲಿ ರೈಸಿಂಗ್ ಪುಣೆ ತಂಡದ ಓನರ್ ಆಗಿದ್ದ ಗೋಯೆಂಕಾ, ತಂಡ ಸತತ ಸೋಲುಗಳನ್ನು ಕಾಣುತ್ತಿದ್ದ ಹಿನ್ನೆಲೆಯಲ್ಲಿ ತಂಡದ ನಾಯಕತ್ವದಿಂದ ಧೋನಿ ಅವರನ್ನು ಕೆಳಗಿಳಿಸುವ ನಿರ್ಧಾರ ತೆಗೆದುಕೊಂಡಿದ್ದರು.
ಮಿಸ್ಟರ್ ಸಂಜೀವ್ ಗೋಯೆಂಕಾ..,
ನೀವು ದುಡ್ಡಿನಲ್ಲಿ ದೊಡ್ಡವರಾಗಿರಬಹುದು. ಇಡೀ ವ್ಯವಸ್ಥೆಯನ್ನೇ ಖರೀದಿಸುವಷ್ಟು ಶ್ರೀಮಂತನಾಗಿರಬಹುದು. ಆದರೆ ಹೃದಯ ಶ್ರೀಮಂತಿಕೆಯೇ ಇಲ್ಲದ ಮೇಲೆ, ಕನಿಷ್ಠ ಕಾಮನ್’ಸೆನ್ಸ್ ಇಲ್ಲದ ಮೇಲೆ ನಿಮ್ಮಲ್ಲಿ ಎಷ್ಟು ದುಡ್ಡಿದ್ದರೇನು ಪ್ರಯೋಜನ..?
Yes.. ತಂಡ ನಿಮ್ಮ ನಿರೀಕ್ಷೆಗೆ ತಕ್ಕಂತೆ ಆಡದಿದ್ದಾಗ, ಸಾವಿರಾರು ಕೋಟಿ ಬಂಡವಾಳ ಹಾಕಿರುವ ನಿಮಗೆ ನಾಯಕನನ್ನು ಪ್ರಶ್ನಿಸುವ ಹಕ್ಕು ಮತ್ತು ಅಧಿಕಾರ ಇದ್ದೇ ಇದೆ. ಆದರೆ ಅದಕ್ಕೊಂದು ಸಮಯ, ಸಂದರ್ಭ  ಎಂಬುದು ಬೇಡವೇ..? ಇದೆಲ್ಲಾ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬೇಕಾದ ವಿಚಾರ. ಅದು ಬಿಟ್ಟು ಒಬ್ಬ ಪುಡಾರಿಯಂತೆ ವರ್ತಿಸುವುದು..?
ಸಂಜೀವ್ ಗೋಯೆಂಕಾ ಅವರೇ..
ನೆನಪಿರಲಿ.. ರಾಹುಲ್ ಈ ದೇಶದ ಕ್ರಿಕೆಟ್ ಹೀರೋ. ಕರ್ನಾಟಕದ ಹೆಮ್ಮೆ. ಅವನನ್ನು ಅವಮಾನಿಸುವ ಯಾವ ಅಧಿಕಾರವೂ ನಿಮಗಿಲ್ಲ. ದುಡ್ಡು ಚೆಲ್ಲಿದ್ದೀರಿ ಎಂಬ ಕಾರಣಕ್ಕೆ ಆತ ನಿಮ್ಮ ಮನೆಯ ಆಳಲ್ಲ. ರಾಹುಲ್ ನಾಯಕತ್ವ ನಿಮಗೆ ಇಷ್ಟವಿಲ್ಲ ಎಂದಾದರೆ, ಮುಂದಿನ ವರ್ಷ ಅವನನ್ನು ತಂಡದಲ್ಲಿ ಮುಂದುವರಿಸದಿರುವ ಆಯ್ಕೆ ನಿಮ್ಮ ಕೈಯಲ್ಲೇ ಇದೆ. ಆದರೆ ಈ ರೀತಿಯ ವರ್ತನೆಯನ್ನು ಯಾವ ಕ್ರಿಕೆಟ್ ಪ್ರೇಮಿಯೂ ಸಹಿಸಲಾರ.
ಪ್ರಿಯ ರಾಹುಲ್..
ಕ್ರೀಡಾಪಟುವೊಬ್ಬನ ಜೊತೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವಿಲ್ಲದವನ ತಂಡದ ಸಹವಾಸವೇ ಬೇಡ ನಿನಗೆ.. ಮುಂದಿನ ವರ್ಷ mega auctionಗೆ ಬಂದು ಬಿಡು. ನಿನ್ನಂತ ಒಬ್ಬ versatile ಕ್ರಿಕೆಟಿಗನ ಮೌಲ್ಯ ಏನೆಂಬುದು ಅಲ್ಲಿ ಅರ್ಥವಾಗುತ್ತದೆ.
ಲಕ್ನೋ ತಂಡ ಐಪಿಎಲ್’ಗೆ ಕಾಲಿಟ್ಟು ಇದು ಮೂರನೇ ವರ್ಷ. ಎರಡು ಬಾರಿ ಇದೇ ರಾಹುಲ್ ನಾಯಕತ್ವದಲ್ಲಿ (ಕಳೆದ ವರ್ಷ ಕೊನೆಯ ಕೆಲ ಪಂದ್ಯಗಳಲ್ಲಿ ಕೃಣಾಲ್ ಪಾಂಡ್ಯ ನಾಯಕನಾಗಿದ್ದ) ಲಕ್ನೋ ತಂಡ ಪ್ಲೇ ಆಫ್ ತಲುಪಿತ್ತು. ಈ ಬಾರಿಯೂ ತಂಡದ ಪ್ಲೇ ಆಫ್ ಬಾಗಿಲೇನೂ ಮುಚ್ಚಿ ಹೋಗಿಲ್ಲ. ಒಂದು ವೇಳೆ ಮುಚ್ಚಿದರೂ ಅದೇನು ಮಹಾಪರಾಧವೇನಲ್ಲ. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಇದ್ದದ್ದೇ. ಗೆದ್ದಾಗ standನಲ್ಲಿ ನಿಂತು ಸಂಭ್ರಮಿಸಿದವರು ಸೋತಾಗ ತಂಡದ ಜೊತೆ ನಿಲ್ಲಬೇಕಾದ ಸೌಜನ್ಯತೆ, ಹೃದಯ ಶ್ರೀಮಂತಿಕೆ ಪ್ರದರ್ಶಿಸಬೇಕು.
ಅಲ್ಲ ಗೋಯೆಂಕಾ ಅವರೇ.. ಒಂದೇ ಒಂದು ಪಂದ್ಯ ಸೋತಿದ್ದಕ್ಕೆ ಈ ರೀತಿ ವರ್ತಿಸಿದ್ದೀರಲ್ಲಾ..
17 ವರ್ಷಗಳಿಂದ RCB ತಂಡ ಅದೆಷ್ಟು ಬಾರಿ ಇಂತಹ  ಹೀನಾಯ ಸೋಲುಗಳನ್ನು ಕಂಡಿಲ್ಲ..! ಯಾವತ್ತಾದರೂ RCB ಫ್ರಾಂಚೈಸಿ ಓನರ್ಸ್ ತನ್ನ ಆಟಗಾರರನ್ನು ಹೀಗೆ ಅವಮಾನಿಸಿದ್ದನ್ನು ನೋಡಿದ್ದೀರಾ..? ದುಡ್ಡಿದ್ದ ಮಾತ್ರಕ್ಕೆ ನೀವು ದೊಡ್ಡವರಾಗುವುದಿಲ್ಲ. ದೊಡ್ಡತನ ಎಂಬುದು ನಡವಳಿಕೆಯಲ್ಲಿರಬೇಕು. Sportsmanship spiritನ ಅರ್ಥವೇ ಗೊತ್ತಿಲ್ಲದ ನಿಮ್ಮಂಥವರಿಂದ ಅದನ್ನೆಲ್ಲಾ ನಿರೀಕ್ಷಿಸಲು ಸಾಧ್ಯವೇ ಇಲ್ಲ..!

LEAVE A REPLY

Please enter your comment!
Please enter your name here

seventeen − 10 =

Latest news

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ...
- Advertisement -spot_imgspot_img

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಬೈಂದೂರಿನ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ (VCC) ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA)...

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

Must read

- Advertisement -spot_imgspot_img

You might also likeRELATED
Recommended to you