ಭರವಸೆಯ ಬೆಳಕುಮೂರುವರ್ಷ ತುಂಬಿದ ಸಂಭ್ರಮದಲ್ಲಿರುವ ಕೆ.ಆರ್.ಕೆ ಆಚಾರ್ಯರ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್...

ಮೂರುವರ್ಷ ತುಂಬಿದ ಸಂಭ್ರಮದಲ್ಲಿರುವ ಕೆ.ಆರ್.ಕೆ ಆಚಾರ್ಯರ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಗೆ ಶುಭಾಶಯಗಳು

-

- Advertisment -spot_img
ಕೋಟ ರಾಮಕೃಷ್ಣ ಆಚಾರ್ಯ ಎಲ್ಲರೂ ಪ್ರೀತಿಯಿಂದ  ಕರೆಯುವ ಇವರ ಹೆಸರು ಕೆ ಆರ್ ಕೆ.ಇವರ ಹುಟ್ಟೂರು ಕೋಟದಿಂದ  ಆರಂಭಗೊಂಡು ಜಿಲ್ಲಾ ರಾಜ್ಯ ಮತ್ತು ರಾಷ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಟೆನ್ನಿಸ್ ಬಾಲ್ ಕ್ರಿಕೆಟ್ ಅಂಗಳದಲ್ಲಿ ಇವರ ಹೆಸರು  ಚಿರಪರಿಚಿತವಾಗಿದೆ.
 ವೃತ್ತಿಯಲ್ಲಿ ಆಭರಣ ತಯಾರಕರಾದ ಇವರು ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರ ಹಾಗೂ ಸಂಘಟಕರಾಗಿ  ಕಳೆದ ಇಪ್ಪತ್ತು ವರ್ಷಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟಿನ ನಂಟಿನೊಂದಿಗೆ  ಕ್ರಿಕೆಟ್ ಅಂಗಳದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
 ಕೆ ಆರ್ ಕೆ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡುವುದರ ಜೊತೆ ಜೋತೆಗೆ ಟೆನ್ನಿಸ್ ಬಾಲ್ ಕ್ರಿಕೆಟಿನ ಪ್ರತಿಯೊಬ್ಬ ಹಿರಿಯ ಕಿರಿಯ ಆಟಗಾರರ ಮತ್ತು ತಂಡಗಳ ಕಷ್ಟ ಸುಖವನ್ನು ಹತ್ತಿರದಿಂದ ನೋಡಿ ಎಲ್ಲರನ್ನೂ ಒಗ್ಗೂಡಿಸಿ ಆಟಗಾರರ ಮತ್ತು ತಂಡಗಳ ಹಾಗೂ ಪಂದ್ಯಾವಳಿಗಳ ಆಗು ಹೊಗುಗಳನ್ನು ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯನ್ನು ರೂಪಿಸ ಬೇಕೆನ್ನುವುದು ಇವರ ಕನಸಾಗಿತ್ತು.
 ಗ್ರಾಮೀಣ ಪ್ರದೇಶ ಮತ್ತು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಗಳ ಮಾಹಿತಿಯೊಂದಿಗೆ ಪ್ರತಿಯೊಬ್ಬ ಆಟಗಾರರ ಪರಿಚಯ ಮತ್ತು ಹಿರಿಯರು ಮತ್ತು ಕಿರಿಯ ಶ್ರೇಷ್ಠಮಟ್ಟದ ಆಟಗಾರರ ಆಟದ ಮತ್ತು ದಾಖಲೆಗಳ ಸುದ್ದಿಯನ್ನು ಎಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಪ್ರಿಯರಿಗೆ ತಲುಪಿಸುವುದು ಇವರ ಗುರಿಯಾಗಿತ್ತು.
 ಜೊತೆಗೆ ಹಿರಿಯರು ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಬಹುದೊಡ್ಡ ಕಾರ್ಯಕ್ಕೆ ಮುನ್ನುಡಿ ಬರೆಯಲೆ ಬೇಕು ಎನ್ನುವ ಸಂಕಲ್ಪ ತೊಟ್ಟ ಕೆ ಆರ್ ಕೆ ಕನಸಿನ ಮೂಟೆ ಹೊತ್ತು ಸುಮ್ಮನೇ ಕೂರಲಿಲ್ಲ.
ಜುಲೈ 7 ಟೆನ್ನಿಸ್ ಬಾಲ್ ಕ್ರಿಕೆಟ್ ಕಾಶಿ ಎಂದೆ ಪ್ರಸಿದ್ಧಿ ಹೊಂದಿರುವ ಕುಂದಾಪುರದ ಕಡಲ ಕಿನಾರೆಯ ಕ್ರಿಕೆಟ್ ಅಂಗಳ ಅರಿದ್ರ ಮಳೆಯ ಬಿರುಸಿಗೆ ತೆವಗೊಂಡು ಮಲಗಿದರೆ ಬ್ಯಾಟು ಬಾಲುಗಳು ನಿದ್ರಾವಸ್ಥೆಗೆ ಜಾರಿದ್ದವು  ಜಿಟಿ ಜಿಟಿ ಮಳೆಯಲ್ಲೂ ತೆವಗೊಂಡ ಮೈದಾನದಲ್ಲಿ ಪುಟ್ಟ ಮಕ್ಕಳ ಕ್ರಿಕೆಟ್ ಆಟದ ಕಲರವ ಮಾತ್ರ ಮುಗಿಲು ಮುಟ್ಟಿತ್ತು ಈ ಸಂಧರ್ಭದಲ್ಲೆ ಮೈ ಕೊಡವಿದ  ಕೆ ಆರ್ ಕೆ ತಮ್ಮ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಕೈ ಹಾಕಿಯೆ ಬಿಟ್ಟರು…
ಕರಾವಳಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಅಂಗಳದಿಂದ ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಅಂಗಳದ ವರೆಗೆ ಆಟಗಾರರನ್ನು ಪರಿಚಯಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ವೇದಿಕೆಯನ್ನು ಹುಟ್ಟು ಹಾಕಲು ಮನಸ್ಸು ಮಾಡಿದ ಕೆ ಆರ್ ಕೆ  ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದರು.
ಕಳೆದ ಮೂರು ವರ್ಷಗಳ ಹಿಂದೆ ಅಂದರೆ ದಿನಾಂಕ 07/07/2019 ರಂದು ಮಳೆಯ ಬಿರುಸು ತಣ್ಣಗೆ ಬಿಸುವ ಗಾಳಿಗೆ ಕೊರೆವ ಚಳಿಯಲ್ಲೆ  ಜನಿಸಿದ ಕೂಸೆ *”ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್”* ಒಳ್ಳೆಯ ಉದ್ದೇಶದ ಕನಸಿಟ್ಟುಕೊಂಡು ಲೋಕಾರ್ಪಣೆಗೊಂಡ ಜಾಲತಾಣವೆ  www.sportskannada.com . ಕುಂದಾಪುರದ ಬಡಗುಪೇಟೆಯಲ್ಲಿರುವ ಕಛೇರಿಯಿಂದ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ಇಂದು  ಮೂರು ವರ್ಷಗಳನ್ನು ತುಂಬಿ ಯಶಸ್ಸಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯನೀಡುತ್ತಿದೆ ಇದು ಪ್ರತಿಯೊಬ್ಬ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರನಿಗೆ ಹೆಮ್ಮೆಯ ವಿಷಯವಾಗಿದೆ .
ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರ ಮತ್ತು  ಕ್ರಿಕೆಟ್ ಪ್ರೇಮಿಗಳ ಹೆಮ್ಮೆಯ ವೇದಿಕೆಯಾಗಿರುವ ಕೆ ಆರ್ ಕೆ ಅವರ ಕನಸಿನ ಕೂಸಾದ ಸ್ಪೋರ್ಟ್ಸ್ ಕನ್ನಡ ಜಾಲತಾಣ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ .
ನಿಮ್ಮೆಲ್ಲ ಕನಸುಗಳು ನನಸಾಗಲಿ ಶುಭವಾಗಲಿ ಸಹೋದರ ರಾಮಕೃಷ್ಣ ಆಚಾರ್ಯ ( ಕೆ ಆರ್ ಕೆ )
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

15 − 6 =

Latest news

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್ ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ತುಮಕೂರು  ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ತುಮಕೂರು ಇವರ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಡಾ....

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ! ಬೆಂಗಳೂರು:  ಪ್ರತೀ ಬಾರಿಯಂತೆ ಈ ವರ್ಷದ ‘Cheftalk Premier League – Season 6’ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 13...

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು! ಮಲ್ಪೆ, ಮೀನುಗಾರಿಕಾ ಬಂದರು: ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಮಲ್ಪೆ ಇವರ ವತಿಯಿಂದ,...

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”   ಉಡುಪಿ: ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ (Kinnimulki Sports Club) ವತಿಯಿಂದ ಪ್ರತಿಷ್ಠಿತ ಕಿನ್ನಿಮೂಲ್ಕಿ ಸೂಪರ್...
- Advertisement -spot_imgspot_img

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ! 

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ!  ಕ್ರಿಕೆಟ್ ಲೋಕದ ಅಭಿಮಾನಿಗಳನ್ನು ರಂಜಿಸಿದ ಗೆಳೆಯರು ಕಪ್ 2025 ಟೂರ್ನಮೆಂಟ್...

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ. ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ...

Must read

- Advertisement -spot_imgspot_img

You might also likeRELATED
Recommended to you