ಭರವಸೆಯ ಬೆಳಕುಸಣ್ಣದೊಂದು ಟೀ ಸ್ಟಾಲ್ ಮಾಲೀಕನ ಅದೃಷ್ಟ ಬದಲಾಯಿಸಿದ ತೆಂಡೂಲ್ಕರ್..!

ಸಣ್ಣದೊಂದು ಟೀ ಸ್ಟಾಲ್ ಮಾಲೀಕನ ಅದೃಷ್ಟ ಬದಲಾಯಿಸಿದ ತೆಂಡೂಲ್ಕರ್..!

-

- Advertisment -spot_img
ಬೆಳಗಾವಿ : ಅದೃಷ್ಟ ಒಮ್ಮೊಮ್ಮೆ ಯಾವ ರೂಪದಲ್ಲಿ ಬರುತ್ತದೆ ಅನ್ನೊದು ತಿಳಿಯುವುದೇ ಇಲ್ಲ. ಏನೇನು ಇಲ್ಲದವರು ಕ್ಷಣ ಮಾತ್ರದಲ್ಲಿ ಕೊಟ್ಯಧೀಶರಾಗುವುದೂ ಇದೆ,  ಸಣ್ಣ ಉದ್ಯಮ  ಆರಂಭಿಸಿದವ ಕೆಲವೇ ವರ್ಷದಲ್ಲಿ ಕೋಟಿ ಕೋಟಿ ಆಸ್ತಿಗಳ ಒಡೆಯನಾಗಿರುವುದೂ  ನಮ್ಮ ಕಣ್ಣ ಮುಂದೆ ಇದೆ.
ಬೆಳಗಾವಿಯ ರಸ್ತೆ ಬದಿಯ ಚಾಯ್ ವಾಲಾನ ಅದೃಷ್ಟಕೂಡ  ರಾತ್ರಿ ಬೆಳಗಾಗುವುದರಲ್ಲಿ ತಿರುಗಿದೆ ಕಥೆ ಇದು..!?
ಸಣ್ಣ ಟೀ ಸ್ಟಾಲ್ ನಡೆಸುತ್ತಿದ್ದ ಬಡ ಯುವಕನ ಅದೃಷ್ಟ ಬದಲಾಗಿಬಿಟ್ಟಿದೆ. ಇದಕ್ಕೆ ಕಾರಣ ಕ್ರಿಕೆಟ್ ದಂತ ಕಥೆ ಕ್ರಿಕೆಟ್ ದೇವರೆಂದು  ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಬೆಳಗಾವಿಯ ಸಮೀಪದ ಮಚ್ಚೆಗ್ರಾಮದ   ಸಣ್ಣ ಟೀ ಸ್ಟಾಲ್ ನಲ್ಲಿ ಸಚಿನ್ ಪ್ರತ್ಯಕ್ಷರಾಗಿದ್ದರು..!
ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀ ಸ್ಟಾಲ್ ಗೆ ಭೇಟಿ ನೀಡಿದ್ದರು
ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಸಚಿನ್ ತೆಂಡೂಲ್ಕರ್ ಅಕ್ಟೋಬರ್ 31ರಂದು ಮುಂಜಾನೆ ಬೆಳಗಾವಿ ಸಮೀಪದ ಮಚ್ಚೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಫೌಜಿ ಎಂಬ ಸಣ್ಣ ಚಹಾ ಅಂಗಡಿ ಎದುರು ಕಾರು ನಿಲ್ಲಿಸಿ ಚಹಾ ಸೇವಿಸಿದ್ದರು
ಕುಟುಂಬ ಸಮೇತರಾಗಿ ಬಂದಿದ್ದ ಸಚಿನ್
ಅಂದು ಬೆಳಗ್ಗೆ ಅಂಗಡಿಯಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದೆ ಒಂದು ಕಾರ್ ಬಂದು ನಿಂತಿತು ಅದರಿಂದ ಕೆಳಗಿಳಿದು ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಒಳಗೆ ಕಾರಿನಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ ಎಂದಾಗ ನಂಬಲು ಸಾಧ್ಯವಾಗಿರಲಿಲ್ಲ, ಬಳಿಕ ಸಚಿನ್ ಅವರೇ ಕೆಳಗಿಳಿದು ಬಂದಾಗ ಹೆದರಿಹೊಗಿದ್ದೆ ಎಂದು ವೈಜು ಹೇಳಿದರು. ಸಚಿನ್ ತೆಂಡೂಲ್ಕರ್ ಜತೆಗೆ ಅವರ ತಾಯಿ, ಪತ್ನಿ, ಪುತ್ರ ಮತ್ತು ಕೆಲ ಸಹಾಯಕರು ಸಹ ಜೋತೆಯಲ್ಲಿದ್ದರು  ಎಂದು ವೈಜು ಹೇಳಿದರು.
ಸಚಿನ್ ಅವರು ತಮ್ಮ ಸಹಾಯಕನೊಬ್ಬನ ಕೈಯಿಂದ ತಾನು ಅಂಗಡಿಯಲ್ಲಿ ಚಹಾ ಸೇವಿಸುತ್ತಿರುವುದನ್ನು ಸಂಪೂರ್ಣ ವಿಡಿಯೋ ಮಾಡಿಸಿದ್ದರು. ಬಳಿಕ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ವಿಶ್ವದೆಲ್ಲೆಡೆ ಜನ ನನ್ನ ಅಂಗಡಿಯನ್ನು ಗುರುತಿಸುವಂತಾಗಿದೆ ಎಂದು ಅವರು ಸಂತಸಪಟ್ಟರು.
ಫೌಜಿ ಚಹಾ ಅಂಗಡಿಯಲ್ಲಿ ಚಹಾ ತಯಾರಿಕೆಗೆ  ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಮಾತ್ರ ಬಳಸಲಾಗುತ್ತದೆ. ಇದಕ್ಕೆ ಸಚಿನ್ ಮೆಚ್ಚಿಗೆ ವ್ಯಕ್ತಪಡಿಸಿದರು. ಅಲ್ಲದೇ ಚಹಾದ ಸ್ವಾದ ಹಿಡಿಸಿದ ಕಾರಣ ಎರಡು ಕಪ್ ಚಹಾ ಕುಡಿದು ಬ್ರೆಡ್ ಟೋಸ್ಟ್ ಅನ್ನು ಸವಿದರು ಎಂದು ವೈಜು ಹೇಳಿದರು.
ಮೂಲತಃ ಖಾನಾಪುರ ತಾಲೂಕಿನವರಾದ ವೈಜು ನಿಟ್ಟೂರಕರ್ ಅವರಿಗೆ ತಾಯಿ ಮತ್ತು ಓರ್ವ ಸಹೋದರ ಇದ್ದಾರೆ. ಸಣ್ಣ ಜಮೀನಿದ್ದು ಕೃಷಿಯ ಆದಾಯ ಜೀವನ ನಿರ್ವಹಣೆಗೆ ಸಾಕಾಗದ ಕಾರಣ ಸುಮಾರು ಎಂಟು ತಿಂಗಳಿಂದ  ಮಚ್ಚೆ ಗ್ರಾಮದಲ್ಲಿ ಫೌಜಿ ಟೀ ಸ್ಟಾಲ್ ಆರಂಭಿಸಿದ್ದಾರೆ. ವ್ಯಾಪಾರ ಶುರು ಮಾಡಿದ ಎಂಟೇ ತಿಂಗಳಲ್ಲಿ ಸಚಿನ್ ತೆಂಡೂಲ್ಕರ್ ಅಂಥಹ ಮಹಾನ್ ವ್ಯಕ್ತಿ ನನ್ನ ಅಂಗಡಿಗೆ ಬರುತ್ತಾರೆ ಎಂದು ನನ್ನ ಕನಸನಲ್ಲೂ ಎಣಿಸಿರಲಿಲ್ಲ ಎಂದು ವೈಜು ತಮ್ಮ ಸಂತಸ ಹಂಚಿಕೊಂಡರು
ಪೌಜಿ ಟೀ ಸ್ಟಾಲ್ ಗೆ ಸಚಿನ್ ಬಂದು ಹೋದ ಬಳಿಕ  ವ್ಯಾಪಾರ ಒಂದೆ ಸಾರಿಗೆ ಹೆಚ್ಚಳವಾಗಿದೆ. ಮೊದಲು ಪ್ರತಿ ದಿನ ಸುಮಾರು 25 ಲೀ. ಹಾಲಿನ ಬಳಕೆ ಮಾಡಿ 400 ಕಪ್ ಚಹಾ ಮಾರಾಟ ಮಾಡುತ್ತಿದ್ದೆ. ಈಗ 700 ಕಪ್ ಚಹಾ ಮಾರಾಟವಾಗುತ್ತಿದೆ ಎಂದು ಫೌಜಿ ಚಹಾ ಅಂಗಡಿಯ ಮಾಲಿಕ ವೈಜು ಬಂದವರ ಎದುರು ಖುಷಿ ಹಂಚಿಕೊಳ್ಳುತ್ತಾರೆ.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

eleven + 17 =

Latest news

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...
- Advertisement -spot_imgspot_img

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

Must read

- Advertisement -spot_imgspot_img

You might also likeRELATED
Recommended to you