Categories
ಅಥ್ಲೆಟಿಕ್ಸ್

ಸೂರ್ಯ ನಮಸ್ಕಾರದ ಮೂಲಕ ದಾಖಲೆ ಮುರಿದ ರೇಣುಕಾ ಗೋಪಾಲಕೃಷ್ಣ

ಉಡುಪಿ : ಅಸ್ಸಾಮಿನ ಪುಷ್ಪಾಂಜಲಿ ಸೇನಾಪತಿ ಅವರು 1 ಗಂಟೆ 15 ನಿಮಿಷ  48ಸೆಕೆಂಡ್ಸ್ ನಲ್ಲಿ ಹೊಂದಿದ್ದ 132 ಸೂರ್ಯ ನಮಸ್ಕಾರದ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ.
ಮಲ್ಪೆ ಸಿಎಸ್ಪಿ ನಿವೃತ ಪಿಎಸ್‍ಐ ಬಿ. ಮನಮೋಹನ್ ರಾವ್ ನಿರೂಪಿಸಿ ವಂದಿಸಿದರು.
ಉಡುಪಿ ಸಮೀಪದ ಪೆರಂಪಳ್ಳಿ ಬೊಬ್ಬರ್ಯಕಟ್ಟೆಯ ರೇಣುಕಾ ಗೋಪಾಲಕೃಷ್ಣ 17 ನಿಮಿಷ 49 ಸೆಕೆಂಡ್‍ಗಳಲ್ಲಿ170 ಸೂರ್ಯ ನಮಸ್ಕಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.
ಆಭರಣ ಜ್ಯುವೆಲ್ಲರ್ಸ್ ಸಹಯೋಗದಲ್ಲಿ ಕರಾವಳಿ ಬೈಪಾಸ್ ಬಳಿಯ ಹೋಟೆಲ್ ಮಣಿಪಾಲ್ ಇನ್ ಇದರ ಗ್ರ್ಯಾಂಡ್ ಮಿಲೇನಿಯಂ ಕನ್ವೆನನ್ ಸೆಂಟರ್‍ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ15 ನಿಮಿಷದಲ್ಲಿ 140 ಸೂರ್ಯ ನಮಸ್ಕಾರದ ಗುರಿಯನ್ನು ಮೀರಿ ಸಾಧನೆ ಮಾಡಿದ ರೇಣುಕಾ ಅವರಿಗೆ ಪತ್ರ ಹಸ್ತಾಂತರಿಸಲಾಯಿತು.
ಅಸ್ಸಾಮಿನ ಪುಷ್ಪಾಂಜಲಿ‌ ಸೇನಾಪತಿ‌ ಅವರು 1ಗಂಟೆ 15ನಿಮಿಷ 48ಸೆಕೆಂಡ್ಸ್ ಗಳಲ್ಲಿ ಹೊಂದಿದ್ದ 132 ಸೂರ್ಯ ನಮಸ್ಕಾರದ‌ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ.
ಸಮಾರಂಭದಲ್ಲಿ ಉಡುಪಿ‌ ಭ್ರಷ್ಟಾಚಾರ ನಿಗ್ರಹ‌ ದಳ್ ಪೊಲೀಸ್‌ ನಿರೀಕ್ಷಕ ಸತೀಶ್, ಇಂಡಿಯಾ ಬುಕ್ ಆಫ್‌ ರೆಕಾಡ್ಸ್೯ ಎಡ್ಜುಡಿಕೇಟರ್ ಹರೀಶ್ ಆರ್., ಉಡುಪಿ‌ ನಗರ‌ ಠಾಣೆ‌ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಮಲ್ಪೆ‌ ಸಿಎಸ್ಪಿ‌ ಶಾಖಾಧೀಕ್ಷಕ‌ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಮಲ್ಪೆ‌ ಸಿಎಸ್ಪಿ ನಿವೃತ್ತ ಪಿಎಸ್ಐ ಬಿ.  ಮನಮೋಹನ ರಾವ್ ನಿರೂಪಿಸಿ‌ ವಂದಿಸಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

nine + seventeen =