ಕ್ರಿಕೆಟ್ಗೆಲುವಿನ ಕ್ಯಾಪ್ ಧರಿಸಿ ಟೇಬಲ್ ಟಾಪ್ ಮಾಡಿದ ಆರ್.ಸಿ.ಬಿ

ಗೆಲುವಿನ ಕ್ಯಾಪ್ ಧರಿಸಿ ಟೇಬಲ್ ಟಾಪ್ ಮಾಡಿದ ಆರ್.ಸಿ.ಬಿ

-

- Advertisment -spot_img
ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬಾಲಿಂಗ್ ಮಾಡಿತು. ಆರ್.ಸಿ.ಬಿ ಬ್ಯಾಟ್ಸಮನಗಳನ್ನ ಯಾರ್ಕರ್ ಬಾಲ್ಗಳ ಮೂಲಕ ಎಡೆಬಿಡದೆ ಕಾಡಿತು. ವಿರಾಟ್ ವಿಕೆಟು ಬೇಗ ಕೊಟ್ಟಾಗಿತ್ತು. 3 ಬೌಂಡರಿಗಳ ನಂತರ ದೇವರು ಕೈ ಬಿಟ್ಟಾಗಿತ್ತು.
ಮೂರಕ್ಕೇರಿದ ಪಾಟಿದಾರ ಆಟ ಚೂರು ಸಮಾಧಾನಕರ. 1 ಸಿಕ್ಸು 2 ಬೌಂಡರಿ ಮಾತ್ರ ಬಾರಿಸಿ ಮಿನಿಮಮ್ ಆದ ಮ್ಯಾಕ್ಸು, 75 ರನ್ನು ಬಾರಿಸಿದ ಆರ್ಸಿಬಿಯ ಆಪತ್ಬಾಂಧವ ಎಬಿ ಡಿವಿಲಿಯರ್ಸ್ ಮತ್ತೆ ರಾಕ್ಸು.
ಗೆಲ್ಲಲು 172 ರನ್ನುಗಳ ಗಳಿಸಬೇಕಿದ್ದ ಡೆಲ್ಲಿ ಹೈರಾಣಾಯಿತು ಆರಂಭಿಕ ವಿಕೆಟ್ಗಳ ಚೆಲ್ಲಿ. ಕೇವಲ 6 ರನ್ನುಗಳಿಗೆ ಉರುಳಿದ ಶಿಖರ
4 ರನ್ನುಗಳಿಗೆ ಚಿತ್ತಾದ ಸ್ಮಿತ್ತು. ಮೂರು ಬೌಂಡರಿಗಳ ನಂತರ ತಿರುಗದ ಪೃಥ್ವಿ, 22 ರನ್ನುಗಳಿಗಿಂತ ಹೆಚ್ಚು ಮಾರ್ಕಾಗದ ಮಾರ್ಕು.
ವಿಕೆಟ್ ಮೇಲೆ ವಿಕೆಟ್ ಹೋದರು ಹೆದರಲಿಲ್ಲ ಪಂತು ಕೊನೆಯ ಕ್ಷಣದವರೆಗೂ ಹೋರಾಡಿದ ಕ್ರೀಸ್ ಮೇಲೆ ನಿಂತು. ಆದರೆ ಸೋಲುತಿದ್ದ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಅಸಲಿ ವಾರಿಯರ್ ಸಿಕ್ಸುಗಳ ಸುರಿಮಳೆಗೈದ ಸಿಮ್ರನ್ ಹೆಟ್ಮಾಯರ್.
ಇನ್ನೇನು ಗೆದ್ದೇ ಬಿಟ್ರು ದಿಲ್ಲಿ ಅನ್ನುವಾಗಲೇ ಒಂದ್ನಿಮಿಷ ನಿಲ್ಲಿ ಅಂತ  ಬಂದ ಸಿರಾಜ್ ಭಾಯ್ ಎರಡು ಬೌಂಡರಿ ಕೊಟ್ರೂ ಗೆಲ್ಲಲು ಬಿಡದೆ ಡೆಲ್ಲಿಗೆ ಹೇಳಿದ ಬಾಯ್ ಬಾಯ್.
ನಾಯಕನ ಆಟ ಆಡಿದ ಪಂತು, ಮೀಸ್ಟೇಕ್ ಮಾಡೇಬಿಟ್ಟ ಅಂತೂ. ಹೆಟ್ಟುತ್ತಿದ್ದ ಹೆಟ್ಮಾಯರಗೆ ಕೊನೆ ಎರಡು ಬಾಲು ಸಿಗಲೇ ಇಲ್ಲ. ಟೇಬಲ್ ಟಾಪ್ ಗೆ ಹಾರಿದ ಆರ್.ಸಿ.ಬಿ ನೋಡಿ ‘ಎಲ್ಲೋ’ ಕೆಲವರು ನಗಲೇ ಇಲ್ಲ

LEAVE A REPLY

Please enter your comment!
Please enter your name here

13 − 8 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you