ಕ್ರಿಕೆಟ್ವರನಟ ಅಣ್ಣಾವ್ರ ದೊಡ್ಡ ಅಭಿಮಾನಿ ಈ ಕ್ರಿಕೆಟಿಗ!

ವರನಟ ಅಣ್ಣಾವ್ರ ದೊಡ್ಡ ಅಭಿಮಾನಿ ಈ ಕ್ರಿಕೆಟಿಗ!

-

- Advertisment -spot_img

ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಮಯಾಂಕ್ ಅಗರ್ವಾಲ್ ಅವರ ಸಂದರ್ಶನದ ವೀಡಿಯೋ ಅದು.

ಸಂದರ್ಶಕ ಕೇಳುತ್ತಾನೆ, ‘’bro, ನಿಮ್ಮ ಫೇವರಿಟ್ ಆ್ಯಕ್ಟರ್ ಯಾರು’’ ಎಂದು. ‘’All time favourite ಡಾ.ರಾಜ್’ಕುಮಾರ್’’ ಎಂದು ಒಂದು ಕ್ಷಣ ಯೋಚಸದೆ ಹೇಳಿ ಬಿಟ್ಟರು ಮಯಾಂಕ್.

ಮಯಾಂಕ್ ಅಗರ್ವಾಲ್
ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಾ ಬೆಳೆದವರಲ್ಲ. ಡಾ.ರಾಜ್ ಅವರ ಅದೆಷ್ಟು ಸಿನಿಮಾಗಳನ್ನು ನೋಡಿದ್ದಾರೋ ಗೊತ್ತಿಲ್ಲ.
ಆದರೆ ನೆಚ್ಚಿನ ಸಿನಿಮಾ ತಾರೆ ಯಾರು ಎಂದಾಕ್ಷಣ ‘ಡಾ.ರಾಜ್’ಕುಮಾರ್’ ಎಂದು ಬಿಡುತ್ತಾರೆ ಮಯಾಂಕ್ ಅಗರ್ವಾಲ್.

ಸರಳತೆ, ಸಭ್ಯತೆಗೆ ಈ ಜಗತ್ತಿನಲ್ಲಿ ಮತ್ತೊಂದು ಹೆಸರೇನಾದರೂ ಇದ್ದರೆ ಅದು ವರನಟ ಡಾ.ರಾಜ್’ಕುಮಾರ್.

ಉತ್ಪ್ರೇಕ್ಷೆಯಲ್ಲ, ಮಯಾಂಕ್ ಅಗರ್ವಾಲ್ ಕೂಡ ಹಾಗೆಯೇ..
ಅತ್ಯಂತ ಸರಳ ಮತ್ತು ಸಭ್ಯ ಕ್ರಿಕೆಟಿಗ. ಮಯಾಂಕ್ ಅಗರ್ವಾಲ್ ಇರುವುದು ಹಾಗೆಯೇ.. ತುಂಬಾ down to earth ಮನುಷ್ಯ. ಅವರ ಕನ್ನಡ ಪ್ರೀತಿಯ ಬಗ್ಗೆ ಹೇಳಲೇಬೇಕು.

ಸಾಮಾನ್ಯವಾಗಿ ಅಗರ್ವಾಲ್ ಎಂಬ ಸರ್’ನೇಮ್ ಕೇಳಿದಾಕ್ಷಣ ಇವರು ಕನ್ನಡಿಗರಲ್ಲ, ಯಾರೋ ಉತ್ತರ ಭಾರತೀಯರಿರಬೇಕೆಂಬ ಅಭಿಪ್ರಾಯ ತನ್ನಿಂದ ತಾನಾಗಿಯೇ ಮೂಡಿ ಬಿಡುತ್ತದೆ. ಹೌದು, ಮಯಾಂಕ್ ಅಗರ್ವಾಲ್ ಅವರ ತಂದೆಯ ಮೂಲ ಉತ್ತರ ಭಾರತ, ಬಹುಶಃ ದೆಹಲಿ ಇರಬೇಕು. ಆದರೆ ಮಯಾಂಕ್ ಹುಟ್ಟಿದ್ದು ಇಲ್ಲೇ, ಬೆಳೆದದ್ದು ಇಲ್ಲೇ, ಆಡಿದ್ದೂ ಇಲ್ಲೇ, ಹೆಸರು ಮಾಡಿದ್ದೂ ಇಲ್ಲೇ.. ಅವರು ಕರ್ನಾಟಕಕ್ಕೆ ಗೌರವ ತಂದುಕೊಟ್ಟ ಹೆಮ್ಮೆಯ ಕನ್ನಡಿಗ.

ಮಾತನಾಡುವಾಗ ಅಚ್ಚಕನ್ನಡದಲ್ಲಿ, ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ. ಮಧ್ಯೆ ಇಂಗ್ಲೀಷ್ ಪದಗಳು ಬಾರದಂತೆ ಎಚ್ಚರ ವಹಿಸುತ್ತಾ ಮಾತನಾಡುವುದನ್ನು ಕೇಳುವುದೇ ಚಂದ.

ಮಾತೃಭಾಷೆ ಹಿಂದಿ, ಓದಿದ್ದು ಇಂಗ್ಲೀಷ್ ಮೀಡಿಯಂ. ಆದರೆ ಮಯಾಂಕ್ ಅಗರ್ವಾಲ್ ಅವರಿಗೆ ಕನ್ನಡ ‘ಜೀವನದ ಭಾಷೆ’.

ಅವಕಾಶ ಸಿಕ್ಕರೆ ಮಯಾಂಕ್ ಅವರೊಂದಿಗೆ ಒಮ್ಮೆ ಮಾತನಾಡಿ ಅಥವಾ ಅವರ ಯಾವುದಾದರೂ ಕನ್ನಡ ಸಂದರ್ಶನಗಳನ್ನೊಮ್ಮೆ ನೋಡಿ. ಕನ್ನಡಕ್ಕೆ ಅವರು ಕೊಡುವ ಬೆಲೆ, ಕನ್ನಡದ ಬಗ್ಗೆ ಆತನಿಗಿರುವ ಪ್ರೀತಿ, ಅಭಿಮಾನ ಅವರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿ ಬಿಡುತ್ತದೆ.

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವ ವಹಿಸಿರುವ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ನಾಯಕನೂ ಹೌದು. ಕಳೆದ 10 ವರ್ಷಗಳಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲಿ.

LEAVE A REPLY

Please enter your comment!
Please enter your name here

eighteen − 5 =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you