Categories
ಇತರೆ

ಮಂಡ್ಯ-ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥ ಅಖಿಲ ಭಾರತ ವೃತ್ತಿಪರ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿ

*ಸ್ಪೋರ್ಟ್ಸ್ ಕನ್ನಡ ವರದಿ-*
ಭಾರತೀಯ ಖೋ-ಖೋ ಫೆಡರೇಷನ್,ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್, ಮಂಡ್ಯ ಜಿಲ್ಲಾ ಖೋ-ಖೋ ಸಂಸ್ಥೆ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ).
ಕ್ಯಾತನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ನಕ್ಷತ್ರ-ಕ್ರೀಡಾಪೋಷಕ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥ,ದರ್ಶನ್ ಪುಟ್ಟಣ್ಣಯ್ಯನವರ ಸಾರಥ್ಯದಲ್ಲಿ,
ಕ್ರೀಡಾ ಗ್ರಾಮ‌ ಕ್ಯಾತನಹಳ್ಳಿಯಲ್ಲಿ ಅಖಿಲ ಭಾರತ ಆಹ್ವಾನಿತ ವೃತ್ತಿಪರ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿ ಆಯೋಜಿಸಲಾಗಿದೆ.
ದಿನಾಂಕ  ಜೂನ್ 2,3,4 ಮತ್ತು 5 ರಂದು  ಕ್ಯಾತನಹಳ್ಳಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಪಂದ್ಯಾಟ ಆಯೋಜಿಸಲಾಗಿದೆ.ಮ್ಯಾಟ್ ಅಂಕಣದಲ್ಲಿ ವಿಶೇಷವಾಗಿ ನಡೆಯಲಿರುವ ಈ ಪಂದ್ಯಾವಳಿ ರೋಚಕವಾಗಿ ಸಾಗಲಿದ್ದು,ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತಿದೆ.
*ಭಾಗವಹಿಸುವ ಪ್ರತಿಷ್ಠಿತ ತಂಡಗಳ ವಿವರ ಈ ಕೆಳಗಿನಂತಿದೆ*
KSKKA(ಕರ್ನಾಟಕ), ಪಶ್ಚಿಮ ರೈಲ್ವೇ -ಮುಂಬೈ,ಕೇಂದ್ರ ರೈಲ್ವೇ-ಮುಂಬೈ,ದಕ್ಷಿಣ ಮಧ್ಯ ರೈಲ್ವೇ-ಸಿಕಂದರಾಬಾದ್,
ದಕ್ಷಿಣ ಪೂರ್ವ ಮಧ್ಯ ರೈಲ್ವೇ-ಛತ್ತೀಸ್ ಗಢ,ಮಹಾರಾಷ್ಟ್ರ ರಾಜ್ಯ ಪೋಲಿಸ್, ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ,ಮಹಾನಗರ ಪಾಲಿಕೆ-ಗ್ರೇಟರ್ ಮುಂಬೈ,
ಮಹಾನಗರ ಪಾಲಿಕೆ-ನವ ಮುಂಬಯಿ,ಪ್ರೆಸಿಡೆಂಟ್-12
ಹೆಚ್ಚಿನ ಮಾಹಿತಿಗಾಗಿ 9611233944,9481442615 ಈ ನಂಬರ್ ಗಳನ್ನು ಸಂಪರ್ಕಿಸಬಹುದು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

10 − six =