ಯಶೋಗಾಥೆಮಹಾ ಕ್ರಿಕೆಟರ್ ವಿನೋದ್ ಕಾಂಬ್ಳಿಯು ಎಡವಿದ್ದೆಲ್ಲಿ? ಈ ಭಾರತೀಯ ಕ್ರಿಕೆಟರ್...

ಮಹಾ ಕ್ರಿಕೆಟರ್ ವಿನೋದ್ ಕಾಂಬ್ಳಿಯು ಎಡವಿದ್ದೆಲ್ಲಿ? ಈ ಭಾರತೀಯ ಕ್ರಿಕೆಟರ್ ಮೂಲೆಗುಂಪು ಆದದ್ದು ಯಾಕೆ?

-

- Advertisment -spot_img
ಭಾರತದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಇತ್ತೀಚೆಗಷ್ಟೇ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತರು! ತೀರಾ ಹತಾಶೆ ತೋಡಿಕೊಂಡರು!
ನನ್ನ ಮನಸ್ಸು 34 ವರ್ಷಗಳ ಹಿಂದಕ್ಕೆ ಓಡಿತು.
ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಮುಂಬೈಯ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಕಾಂಬ್ಳಿಯು ಸಚಿನಗಿಂತ ಎರಡು ವರ್ಷ ದೊಡ್ಡವನು.
1988ರ ಒಂದು ದಿನ ಇಬ್ಬರೂ ಸೇರಿ ತಮ್ಮ ಶಾರದಾಶ್ರಮ ಶಾಲೆಯ ಪರವಾಗಿ ಒಂದು ಪಂದ್ಯದಲ್ಲಿ 664 ರನ್ನುಗಳ ಜೊತೆಯಾಟ ಮಾಡಿ ಇಡೀ ಭಾರತದ ಗಮನ ಸೆಳೆದಿದ್ದರು. ಅಂದು ಇಬ್ಬರದೂ ತ್ರಿಶತಕವು ದಾಖಲು ಆಗಿತ್ತು! ಆಗ ಸಚಿನಗೆ 14 ವರ್ಷ. ಕಾಂಬ್ಳಿಗೆ 16 ವರ್ಷ!
ನಂತರ ಇಬ್ಬರೂ ತಮ್ಮ ಶಾಲೆಯನ್ನು ಬಿಟ್ಟು ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಆಚರೇಕರ್ ಅವರ ಕೋಚಿಂಗ್ ಕ್ಯಾಂಪ್ ಸೇರಿದರು. ಮಹಾಗುರುಗಳಾದ ಆಚರೇಕರ್ ಸರ್ ತಮ್ಮ ಇಬ್ಬರು ಶಿಷ್ಯರ ಬಗ್ಗೆ ಹೇಳಿದ ಮಾತು ತುಂಬಾ ಮುಖ್ಯ ಆದದ್ದು.
“ಸಚಿನ್ ತುಂಬಾ ಬದ್ಧತೆಯ ಹುಡುಗ. ಹೇಳಿದ ಸಮಯಕ್ಕೆ ಮೊದಲೇ ಕ್ಯಾಂಪಿಗೆ ಬರುತ್ತಿದ್ದ. ನಾನು ಹೇಳಿದ್ದನ್ನು ಚಾಚೂ ತಪ್ಪದೇ ಗಮನಿಸುತ್ತಿದ್ದ. ಹೇಳಿದ್ದನ್ನು ಪೂರ್ತಿಯಾಗಿ ಕಲಿತು  ಬರುತ್ತಿದ್ದ. ಅವನ ಶ್ರದ್ಧೆ ಮತ್ತು ನನ್ನ ಬಗ್ಗೆ ಇದ್ದ ಗೌರವಗಳು  ಎರಡೂ ಅದ್ಭುತ ಆಗಿತ್ತು”
“ಆದರೆ ಈ ವಿನೋದ್ ಕಾಂಬ್ಳಿ ಶಿಸ್ತಿಲ್ಲದ ಹುಡುಗ. ಆಗಲೇ ಶೋಕಿ ಮಾಡುವುದನ್ನು ಕಲಿತಿದ್ದ. ನನ್ನ ತರಗತಿಗೆ ತಡವಾಗಿ ಬರುತ್ತಿದ್ದ. ಕ್ಲಾಸು ಮುಗಿಯುವ ಮೊದಲೇ ಬೈಕನ್ನು ಏರಿ  ಓಡುತ್ತಿದ್ದ. ಸಿಗರೇಟ್, ಕುಡಿತ ಎಲ್ಲ ಚಟಗಳನ್ನು ಕಲಿತಿದ್ದ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಪಡುತ್ತಿದ್ದ”
“ಪ್ರತಿಭೆಯಲ್ಲಿ ಆತನು ಸಚಿನಗಿಂತ ಒಂದು ತೂಕ ಹೆಚ್ಚೇ ಇದ್ದನು. ಬಲಿಷ್ಠ ಎಡಗೈ ಆಟಗಾರ. ಹೆಚ್ಚು ಆಕ್ರಮಣಕಾರಿ ಆಟಗಾರ. ಆದರೆ ಬದ್ಧತೆ ಮತ್ತು ನಿರಂತರತೆ ಇಲ್ಲ. ಬಹಳ ಮುಖ್ಯವಾಗಿ ಫೋಕಸ್ ಇರಲಿಲ್ಲ. ನನ್ನ ಮಾತು ಕೇಳುತ್ತಲೇ ಇರಲಿಲ್ಲ. ಪರಿಣಾಮವಾಗಿ ಆತ ತನ್ನ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ!”
ಮುಂದೆ ಗುರುಗಳು ಹೇಳಿದ ಭವಿಷ್ಯದ ಮಾತು ಅಷ್ಟೂ ನಿಜ ಆಯಿತು.
ಸಚಿನ್ ಮತ್ತು ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ  ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕಾಂಬ್ಳಿ  ಆರಂಭದಲ್ಲಿ  ಭಾರೀ ಅಬ್ಬರಿಸಿದ. ಸತತವಾಗಿ ನಾಲ್ಕು ಶತಕ ಸಿಡಿಸಿದ! ಅದರಲ್ಲಿ ಎರಡು ಡಬ್ಬಲ್ ಸೆಂಚುರಿಗಳು! ಕೇವಲ 14 ಇನ್ನಿಂಗ್ಸಗಳಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ! ಏಕದಿನ ಪಂದ್ಯದಲ್ಲಿ ಕೂಡ ದಾಖಲೆ ಮಾಡಿದ.
ಆತನ ಆರಂಭಿಕ ಅಬ್ಬರ ನೋಡಿದಾಗ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಚಾಂಪಿಯನ್ ಆಟಗಾರ ಸಿಕ್ಕಿದ ಎಂದು ಲೀಡ್ ಪತ್ರಿಕೆಗಳು ಬರೆದವು!
ಆದರೆ ಆತ ಬಹುಬೇಗ ತನ್ನ ಫೋಕಸನ್ನು ಕಳೆದುಕೊಂಡ. ಚಟಗಳು ಮುಂದುವರೆದವು. ಶೋಕಿಯು ಮಿತಿಮೀರಿತು. ಕುಡಿತ, ಜೂಜು, ಸಿಗರೇಟ್ ಎಲ್ಲವೂ ಆತನನ್ನು ಖಾಲಿ ಮಾಡಿದವು. ಪರಿಣಾಮವಾಗಿ ಆತನ ಚಾಪಿಯನ್ ಆಟ ತನ್ನ ಆಕರ್ಷಣೆ ಕಳೆದುಕೊಂಡಿತು! ಕೇವಲ 24ನೆಯ ವಯಸ್ಸಿನಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ! ಒಂದೆರಡು ವರ್ಷಗಳಲ್ಲಿ ಏಕದಿನದ ಅವಕಾಶಗಳು ಬರಿದಾದವು.
ಆತ ಭಾರೀ ಜಗಳಗಂಟ. ಸಹ ಆಟಗಾರರ ಜೊತೆ, ಆಯ್ಕೆ ಸಮಿತಿಯವರ ಜೊತೆಗೆ, ಕೋಚ್ ಜೊತೆ, ಹೀಗೆ ಎಲ್ಲರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತ! ಅವನ ಮೇಲೆ ಎಲ್ಲರಿಗೂ ಇದ್ದ ಸಿಂಪೆತಿ ಖಾಲಿ ಆಯ್ತು! ಪರಿಣಾಮವಾಗಿ ತಂಡದಿಂದ ಮತ್ತೆ ಮತ್ತೆ ಹೊರಬಿದ್ದ!
ಅದೇ ಹೊತ್ತಿಗೆ ಸಚಿನ್ ಹೇಗೆ ತನ್ನ ಕ್ರಿಕೆಟ್ ಕೆರಿಯರ್ ಗ್ರಾಫ್ ಏರಿಸಿದ, ಯಾವ ರೀತಿ ದಾಖಲೆಗಳ ಮೇಲೆ ದಾಖಲೆ ಬರೆದ, ಹೇಗೆ ಗಾಡ್ ಆಫ್ ಕ್ರಿಕೆಟ್ ಆದ? ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಆದರೆ ಅವನಿಗಿಂತ ಹೆಚ್ಚು ಪ್ರತಿಭೆ ಮತ್ತು ತಾಕತ್ತು ಹೊಂದಿದ್ದ ವಿನೋದ್ ಕಾಂಬ್ಳಿ ಹೇಗೆ ದಾರಿ ತಪ್ಪಿದ ಅನ್ನುವುದನ್ನು  ಕೂಡ ಎಂದು ನಾವು ನೋಡಿದ್ದೇವೆ!
ಮುಂದೆ ತನ್ನ ಖಾಸಗಿ ಜೀವನದಲ್ಲಿಯೂ ಕಾಂಬ್ಳಿ ಒಂದರ ಮೇಲೊಂದು ಎಡವಟ್ಟು ಮಾಡಿಕೊಂಡನು! ಹೋಟೆಲ್ ರಿಸೆಪ್ಶನಿಷ್ಟ ಒಬ್ಬಳನ್ನು ಹಾರಿಸಿಕೊಂಡು ಹೋಗಿ ಮದುವೆ ಆದ. ತಾನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ. ನಂತರ ಆಕೆಗೆ ಡೈವೋರ್ಸ್ ಕೊಟ್ಟು ಎರಡನೇ ಮದುವೆ ಆದ. ಕುಡಿತ, ಜೂಜು, ಸಿಗರೇಟ್ ಎಲ್ಲವೂ ನಿರಂತರವಾಗಿ  ಮುಂದುವರೆದವು. ಚಟಕ್ಕೆ ಬಿದ್ದು ದೊಡ್ಡ ದೊಡ್ಡ ಬ್ಯಾಂಕ್ ಸಾಲ ಮಾಡಿದ. ಬ್ಯಾಂಕಿನವರು ಹುಡುಕಿಕೊಂಡು ಬಂದಾಗ ಅಡಗಿ ಕೂತ!
ಒಂದು ಸಣ್ಣ ರಾಜಕೀಯ ಪಕ್ಷವನ್ನು ಸೇರಿ ಮುಂಬೈಯ ವಿಧಾನಸಭಾ  ಚುನಾವಣೆಗೆ ನಿಂತ. ತುಂಬಾನೆ ಖರ್ಚು ಮಾಡಿದ. ಆದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋದ! ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಸರ್ಜರಿ ಆಯ್ತು.
ವೈದ್ಯರು ಇನ್ನು ಕುಡಿಯಲೇ ಬಾರದು. ಕುಡಿದರೆ ಆಸ್ಪತ್ರೆಗೆ  ಅಡ್ಮಿಟ್ ಮಾಡುವುದಿಲ್ಲ ಎಂದು ಬೈದು ಕಳಿಸಿದರು! ಆತ ಕುಡಿಯುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಅಬ್ಬರಿಸಿ ಹೊರಬಂದ!
ಎರಡು ಹಿಂದೀ, ಒಂದು ಕನ್ನಡ ಸಿನೆಮಾದಲ್ಲಿ ಒಂದು  ಪಾತ್ರ ಮಾಡಿದ. ಅಲ್ಲೂ ಹೆಸರು ಕೆಡಿಸಿಕೊಂಡ. ಈಗ ಕ್ಯಾಮೆರಾದ ಮುಂದೆ ಬಂದು ನನಗೆ ಹೊಟ್ಟೆಪಾಡು ಕಷ್ಟ ಆಗ್ತಾ ಇದೆ ಎಂದು ಕಣ್ಣೀರು ಹಾಕಿದ್ದಾನೆ!
ಪತ್ರಕರ್ತ ಕುಣಾಲ್ ಪುರಂದರೆ ಅವರು ಬರೆದಿರುವ ಆತನ ಬದುಕಿನ ಕತೆಯ ಪುಸ್ತಕದ ಹೆಸರು ಅವನ ದುರಂತ ಬದುಕಿಗೆ ಅನ್ವರ್ಥ ಆಗಿದೆ. ಅದು THE LOST HERO! 
ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ  ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!

LEAVE A REPLY

Please enter your comment!
Please enter your name here

twelve − four =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you