22.5 C
London
Sunday, May 19, 2024
Homeಭರವಸೆಯ ಬೆಳಕುಪಡುಬಿದ್ರಿ-ಶಶಿಕಲಾ ಆಚಾರ್ಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಆದರ್ಶ ಮೆರೆದ ಶ್ರೀವಿಕಾ ಕ್ರಿಕೆಟರ್ಸ್

ಪಡುಬಿದ್ರಿ-ಶಶಿಕಲಾ ಆಚಾರ್ಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಆದರ್ಶ ಮೆರೆದ ಶ್ರೀವಿಕಾ ಕ್ರಿಕೆಟರ್ಸ್

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಶ್ರೀವಿಕಾ ಕ್ರಿಕೆಟ್ ಕ್ಲಬ್ ಪಾದೆಬೆಟ್ಟು “ಶ್ರೀವಿಕಾ ಕಪ್-2022” ಆಯೋಜಿಸಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ,ರೇಷನ್ ಕಿಟ್ ಸಹಿತ,ಸಂಗ್ರಹವಾದ ಅಷ್ಟೂ ಮೊತ್ತವನ್ನು ಪಾದೆಬೆಟ್ಟು ಶಶಿಕಲಾ ಆಚಾರ್ಯ ರವರ ಕುಟುಂಬ ನಿರ್ವಹಣೆಗೆ ನೀಡಿ ಮಾನವೀಯತೆ ಮೆರೆದಿದೆ.
ಏಪ್ರಿಲ್ ದಿನಾಂಕ 9 ಮತ್ತು 10 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆದಿದ್ದು ಧನಲಕ್ಷ್ಮೀ ಚಿತ್ರಾಪುರ ಪ್ರಥಮ ಬಹುಮಾನ ಮತ್ತು ಶ್ರೀವಿಕಾ ಪಾದೆಬೆಟ್ಟು ತಂಡ ದ್ವಿತೀಯ ಬಹುಮಾನ ಪಡೆದರು. ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಸುದೇಶ್ ಶ್ರೀವಿಕಾ,ಬೆಸ್ಟ್ ಬೌಲರ್ ವರುಣ್ ಶ್ರೀವಿಕಾ,
ಮತ್ತು ಫೈನಲ್ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ವಿತೇಶ್ ಪಡೆದುಕೊಂಡರು.
ಶನಿವಾರ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಮಾತನಾಡಿ “ಪಂದ್ಯಾಟ ಸಂಘಟನೆಯೊಂದಿಗೆ ಬಡಕುಟುಂಬದ ಸಹಾಯಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿ” ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಚ್ಚಿಲ ಕಾಳಿಕಾಂಬಾ ದೇವಸ್ಥಾನದ 2 ನೇ ಮೊಕ್ತೇಸರರಾದ ಗಣೇಶ್ ಆಚಾರ್ಯ ಉಚ್ಚಿಲ “ಕ್ರೀಡಾ ಕೂಟ ಸಂಘಟಿಸಿ,ವಿಶ್ವಕರ್ಮ ಸಮಾಜದ ಬಡಕುಟುಂಬದ ನೆರವಿಗೆ ನಿಂತ ಶ್ರೀವಿಕಾ ಪಾದೆಬೆಟ್ಟು ತಂಡದ ಸಾಧನೆ ಶ್ಲಾಘನೀಯ ಎಂದರು‌.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ, ಶ್ರೀಕಾಂತ್ ಆಚಾರ್ಯ ವಿಶ್ವಭಾರತಿ ಕಾಪು,ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ವ್ಯಾಸರಾಯ ಆಚಾರ್ಯ,ಪಾದೆಬೆಟ್ಟು ವಿಶ್ವಬ್ರಾಹ್ಮಣ ಸಮಾಜ ಸೇವಾಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ,ಗ್ರಾಮ ಪಂಚಾಯತ್ ಸದಸ್ಯರು ಸಂದೇಶ್ ಶೆಟ್ಟಿ,ಶ್ರೀಧರ ಆಚಾರ್ಯ ಪಾದೆಬೆಟ್ಟು,ಕಾಪು ವಿಶ್ವಬ್ರಾಹ್ಮಣ ಯುವ ಸಂಘಟನೆ ಉಪಾಧ್ಯಕ್ಷರಾದ ರತ್ನಾಕರ ಆಚಾರ್ಯ,ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಶೆಟ್ಟಿ,ಶರತ್ ಶರ್ಮಾ ಪಡುಬಿದ್ರಿ,ಅಶೋಕ್ ಆಚಾರ್ಯ ಬೆಂಗಳೂರು, ಶಿವರಾಮ ಆಚಾರ್ಯ ಕಿನ್ನಿಗೋಳಿ,ಹಿರಿಯ ಆಟಗಾರರಾದ ಭಾಸ್ಕರ್ ಆಚಾರ್ಯ ಗುಂಡಿಬೈಲು ಮತ್ತು ಶ್ರೀವಿಕಾ ತಂಡದ ಸರ್ವಸದಸ್ಯರು ಉಪಸ್ಥಿತರಿದ್ದರು…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

four × three =