ಕ್ರಿಕೆಟ್ಕರ್ನಾಟಕದ ಶ್ರೇಷ್ಠ ಕ್ರಿಕೆಟ್ ಯೋಧನ ‘ದೊಡ್ಡ’ ಕಥೆ..!

ಕರ್ನಾಟಕದ ಶ್ರೇಷ್ಠ ಕ್ರಿಕೆಟ್ ಯೋಧನ ‘ದೊಡ್ಡ’ ಕಥೆ..!

-

- Advertisment -spot_img

ಕಳೆದ ತಿಂಗಳು..
ಜೂನ್ 30ರಂದು ಕರ್ನಾಟಕದ The most celebrated cricketer, ರಾಜ್ಯ ಕ್ರಿಕೆಟ್’ನ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬರಾಗಿರುವ ದೊಡ್ಡ ಗಣೇಶ್ ಅವರ ಹುಟ್ಟುಹಬ್ಬ.

ಇದು ದೊಡ್ಡ ಗಣೇಶ್ ಅವರ ಬಗ್ಗೆ ಅವತ್ತೇ ಬರೆದಿದ್ದ ಬರಹ.. ಆದರೆ ಭಾರತ ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಇದು ಮರೆಯಾಗಿತ್ತು. ಇವತ್ತು ನೆನಪಾಯಿತು, ಹಾಗೇ ಪ್ರಕಟಿಸಿದ್ದೇನೆ.

ಕರ್ನಾಟಕ ತಂಡದ 10 ವರ್ಷಗಳ ಹಿಂದಿನ ರಣಜಿ ಗತವೈಭವಕ್ಕೆ ಸಾಕ್ಷಿಯಾಗಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದು. ವೃತ್ತಿ ಸಂಬಂಧ ಕಾರಣಗಳಿಗೆ ಆ ಪ್ರತಿಯೊಂದು ಕ್ಷಣವನ್ನೂ ಕಣ್ತುಂಬಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಆದರೆ 90ರ ದಶಕದ ಗತವೈಭವವನ್ನು ನಾನು ನೋಡಿಲ್ಲ. ಆದರೆ ಆ ಕಥೆಯನ್ನು ಅಂದಿನ ಆಟಗಾರರ ಬಾಯಿಂದಲೇ ಸಾಕಷ್ಟು ಬಾರಿ ಕೇಳಿದ್ದೇನೆ. ಆ ಕಥೆಗಳಲ್ಲಿ ಬರುವ ಒಂದು ಪ್ರಮುಖ ಪಾತ್ರದ ಹೆಸರು ದೊಡ್ಡ ನರಸಯ್ಯ ಗಣೇಶ್.

ಹರಿದ ಸ್ಲಿಪ್ಪರ್, ಹರಕಲು ಸೈಕಲ್ ಏರಿ ಪೀಣ್ಯದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುತ್ತಿದ್ದ ಹುಡುಗ. ಪೀಣ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್’ನಿಂದ ಶುರುವಾಗಿದ್ದ ಪ್ರಯಾಣ.. 90ರ ದಶಕದಲ್ಲಿ ರಣಜಿ ತಂಡಕ್ಕೆ ಕಾಲಿಟ್ಟಾಗ ದೊಡ್ಡ ಗಣೇಶ್ ಅವರ ಬಳಿ ಒಂದು ಜೊತೆ ಶೂ ಕೂಡ ಇರಲಿಲ್ಲ.

ದೊಡ್ಡ ಗಣೇಶ್ ಅವರ ಬಗ್ಗೆ ಸಾಕಷ್ಟು ದಂತಕಥೆಗಳಿವೆ. ಆ ಕಥೆಗಳನ್ನು ಅವರ ಜೊತೆ ಹತ್ತಾರು ವರ್ಷ ಆಡಿದವರ ಬಾಯಿಂದ ಕೇಳಿದಾಗ ಮೈ ರೋಮಾಂಚನಗೊಂಡಿದ್ದಿದೆ, ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಿದೆ. ಅಂತಹ ಕಥೆಗಳಲ್ಲಿ ಒಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅದೊಂದು ಘಟನೆ.

ಚಿನ್ನಸ್ವಾಮಿ ಮೈದಾನದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ಮಧ್ಯೆ ರಣಜಿ ಪಂದ್ಯ ನಡೆಯುತ್ತಿತ್ತು. ಕರ್ನಾಟಕ Vs ತಮಿಳುನಾಡು ರಣಜಿ ಮ್ಯಾಚ್ ಎಂದರೆ ಆಗಿನ ಕಾಲಕ್ಕೆ ಇಂಡಿಯಾ Vs ಪಾಕಿಸ್ತಾನ ಪಂದ್ಯದಷ್ಟು ಜಿದ್ದಾಜಿದ್ದಿ. ತಮಿಳುನಾಡು ವಿರುದ್ಧ ನಮ್ಮವರು ಜಿದ್ದಿಗೆ ಬಿದ್ದಂತೆ ಆಡುತ್ತಿದ್ದ ಕಾಲ. ಆ ಕಡೆಯಿಂದಲೂ ಅಷ್ಟೇ ಜಿದ್ದು.

ಕರ್ನಾಟಕ ತಂಡ ಫೀಲ್ಡಿಂಗ್ ಮಾಡುತ್ತಿತ್ತು. ಈಗಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಟ್ಟದ ಮೇಲ್ಭಾಗದ ಸ್ಟ್ಯಾಂಡ್’ನಲ್ಲಿ ಕೂತಿದ್ದ ಒಂದಷ್ಟು ಮಂದಿ ತಮಿಳುನಾಡು ತಂಡದ ಅಭಿಮಾನಿಗಳು ಬೌಂಡರಿ ಗೆರೆಯ ಬಳಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದ ಕರ್ನಾಟಕದ ಆಟಗಾರರನ್ನು ಸುಖಾ ಸುಮ್ಮನೆ ಕೆಣಕುತ್ತಾರೆ, ಹೀಯಾಳಿಸುತ್ತಾರೆ. ಪ್ರಶ್ನಿಸಲು ಹೋದ ಕರ್ನಾಟಕ ತಂಡದ ಅಭಿಮಾನಿಗಳ ಮೇಲೇರಿ ಹೋಗುತ್ತಾರೆ. ಇಡೀ ದಿನ ಈ ಆಟಾಟೋಪವನ್ನು ನೋಡಿದ್ದ ನಮ್ಮ ಆಟಗಾರರು ರೋಸಿ ಹೋಗಿದ್ದರೆ, ದೊಡ್ಡ ಗಣೇಶ್ ಮಾತ್ರ ಕೆರಳಿ ಬಿಟ್ಟಿರುತ್ತಾರೆ.

ಮೊದಲೇ ಪಕ್ಕಾ ಲೋಕಲ್. ಪೀಣ್ಯದಲ್ಲಿ ಇಂತಹ ಅದೆಷ್ಟು ಪುಂಡರನ್ನು ನೋಡಿಲ್ಲ ಅವರು. ಇವರಿಗೊಂದು ಪಾಠ ಕಲಿಸಬೇಕು ಎಂದುಕೊಂಡ ದೊಡ್ಡ ಗಣೇಶ್ ಏನು ಮಾಡಿದರು ಗೊತ್ತೇ..?

ಪಂದ್ಯದ 3ನೇ ದಿನವಿರಬೇಕು.. ಯಥಾ ಪ್ರಕಾರ ತಮಿಳುನಾಡು ತಂಡದ ಪರ ಘೋಷಣೆ ಕೂಗುತ್ತಿದ್ದ ಆ ಪುಂಡರು ಮತ್ತೆ ಕಿರಿಕ್ ಶುರು ಮಾಡುತ್ತಾರೆ. ಕರ್ನಾಟಕದ ಆಟಗಾರನ್ನು ನಿಂದಿಸಲು ಆರಂಭಿಸುತ್ತಾರೆ. ಅಷ್ಟೇ.. ಏನಾಗುತ್ತಿದೆ ಎನ್ನುವಷ್ಟರಲ್ಲಿ ಒಂದಷ್ಟು ಮಂದಿ ಯುವಕರು ಆ ಪುಂಡರಿಗೆ ಚೆನ್ನಾಗಿ ಬಾರಿಸುತ್ತಾರೆ, ಅಷ್ಟೂ ಮಂದಿಯನ್ನು ಎತ್ತಿಕೊಂಡು ಕ್ರೀಡಾಂಗಣದಿಂದ ಹೊರ ಹಾಕಿ ಬರುತ್ತಾರೆ. ಅಂದ ಹಾಗೆ ಆ ಯುವಕರು ಯಾರು ಗೊತ್ತಾ..? ಎಲ್ಲಿಯವರು ಗೊತ್ತಾ..? ಪೀಣ್ಯದವರು. ಕರ್ನಾಟಕದ ಆಟಗಾರನನ್ನು ನಿಂದಿಸುತ್ತಿದ್ದ ಪುಂಡ ಪೋಕರಿಗಳಿಗೆ ಪಾಠ ಕಲಿಸಲೆಂದು ಪೀಣ್ಯದಿಂದ ಹುಡುಗರನ್ನು ಕರೆ ತಂದು ಆ ಸ್ಟ್ಯಾಂಡ್’ನಲ್ಲಿ ಕೂರಿಸಿದ್ದರಂತೆ ದೊಡ್ಡ ಗಣೇಶ್.

ದೊಡ್ಡ ಗಣೇಶ್ ಕರ್ನಾಟಕ ಕ್ರಿಕೆಟ್ ಕಂಡ ದಣಿವರಿಯದ ಯೋಧ. ರಣಜಿ ಟ್ರೋಫಿ ಪಂದ್ಯಗಳಲ್ಲಿ ಒಂದು endನಿಂದ ದಿನಪೂರ್ತಿ ಬೌಲಿಂಗ್ ಮಾಡಲು ಸಿದ್ಧವಾಗಿರುತ್ತಿದ್ದ ಬೌಲರ್. ಕೆಲವೊಮ್ಮೆ ಗಣೇಶ್’ಗೆ ನಾಯಕ ಬೌಲಿಂಗ್ ನೀಡದೇ ಇದ್ದಾಗ, ಚೆಂಡನ್ನು ಬಲವಂತವಾಗಿ ಕಸಿದುಕೊಂಡು ಬೌಲಿಂಗ್ ಮಾಡುತ್ತಿದ್ದರಂತೆ. ತಂಡ ಗೆಲ್ಲಬೇಕು, ತಂಡವನ್ನು ಗೆಲ್ಲಿಸಬೇಕು.. ಅಷ್ಟೇ.. ಅದಕ್ಕಾಗಿ ರಕ್ತವನ್ನೇ ಬಸಿಯಲು ಸಿದ್ಧವಾಗಿ ನಿಲ್ಲುತ್ತಿದ್ದ ಕೆಚ್ಚೆದೆಯ ಕ್ರಿಕೆಟಿಗ.

1996-97ರ ಇರಾನಿ ಕಪ್ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ವಿವಿಎಸ್ ಲಕ್ಷ್ಮಣ್, ಸಿಕ್ಸರ್ ಸಿಧು ಸೇರಿ 11 ವಿಕೆಟ್ ಪಡೆಯುತ್ತಿದ್ದಂತೆ ದೊಡ್ಡ ಗಣೇಶ್’ಗೆ ಭಾರತ ತಂಡದ ಬಾಗಿಲು ತೆರೆಯಿತು. ಭಾರತ ಪರ 4 ಟೆಸ್ಟ್, ಒಂದು ಏಕದಿನ ಪಂದ್ಯವಾಡಿ ಮತ್ತೆ ಕರ್ನಾಟಕ ತಂಡಕ್ಕೆ ವಾಪಸ್ಸಾದ ಗಣೇಶ್, ರಾಜ್ಯ ತಂಡ ಸತತ ಎರಡು ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು.

1998-99ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಂತೂ ಅಕ್ಷರಶಃ ಬಿರುಗಾಳಿಯಾಗಿದ್ದರು ದೊಡ್ಡ ಗಣೇಶ್. ಆ ವರ್ಷ ಒಟ್ಟು 62 ವಿಕೆಟ್ ಪಡೆದಿದ್ದ ದೊಡ್ಡ ಗಣೇಶ್, ದೇಶೀಯ ಕ್ರಿಕೆಟ್’ನಲ್ಲಿ ಅದುವರೆಗೆ ಯಾರೂ ಮಾಡಲಾಗದ ದಾಖಲೆಯೊಂದನ್ನು ಬರೆದಿದ್ದರು. ಮುಂದೆ ಆ ದಾಖಲೆ ಪತನವಾಗಲು ಬರೋಬ್ಬರಿ 21 ವರ್ಷಗಳೇ ಬೇಕಾದವು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

seven + 20 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you