ಕ್ರಿಕೆಟ್ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಕಹಿ ಸುದ್ದಿ, ರಾಜ್ಯದಿಂದ ಹೊರ ನಡೆದ...

ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಕಹಿ ಸುದ್ದಿ, ರಾಜ್ಯದಿಂದ ಹೊರ ನಡೆದ ಮತ್ತೊಬ್ಬ ಕ್ರಿಕೆಟಿಗ!

-

- Advertisment -spot_img

ಆ ಹುಡುಗ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದ ಪ್ರತಿಭಾವಂತ.

ಅವಕಾಶಗಳು ಸರಿಯಾಗಿ ಸಿಕ್ಕಿದ್ದರೆ, ಆತನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿಸಿದ್ದಿದ್ದರೆ, ‘ಕರ್ನಾಟಕದ ಚೇತೇಶ್ವರ್ ಪೂಜಾರ’ ಆಗುವ ಸಾಮರ್ಥ್ಯ ಆ ಹುಡುಗನಿಗಿತ್ತು.

ಆದರೆ ಹಾಗಾಗಲಿಲ್ಲ..
ಅದು ಹುಡುಗನ ದುರದೃಷ್ಟವೋ.. ಕರ್ನಾಟಕ ಕ್ರಿಕೆಟ್’ಗೆ ಆದ ನಷ್ಟವೋ ಗೊತ್ತಿಲ್ಲ..

ಡಿ.ನಿಶ್ಚಲ್. ಈ ಹೆಸರು ಕೇಳಿದರೆ ಜ್ಯೂನಿಯರ್ ಕ್ರಿಕೆಟ್’ನಲ್ಲಿ ಆತ ಹರಿಸುತ್ತಿದ್ದ ರನ್ ಹೊಳೆ ಕಣ್ಣ ಮುಂದೆ ಬರುತ್ತದೆ. 9ನೇ ವರ್ಷದಿಂದ ಆರಂಭವಾಗಿ ಸ್ಕೂಲ್ ಕ್ರಿಕೆಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಂಘಟಿಸಿದ ಟೂರ್ನಿಗಳಲ್ಲಿ ಒಟ್ಟು 100 ಶತಕಗಳನ್ನು ಗಳಿಸಿದ ಪ್ರತಿಭಾ ಸಂಪನ್ನ ಈ ದೆಗಾ ನಿಶ್ಚಲ್.

ಮಯಾಂಕ್ ಅಗರ್ವಾಲ್ ರಣಜಿ ತ್ರಿಶತಕ ಬಾರಿಸಿದ ಪಂದ್ಯದಲ್ಲಿ ನಿಶ್ಚಲ್ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಮಹಾರಾಷ್ಟ್ರ ವಿರುದ್ಧ 2017ರಲ್ಲಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಣಜಿ ಪದಾರ್ಪಣೆ ಮಾಡಿದ್ದ ನಿಶ್ಚಲ್’ಗೆ ಅಲ್ಲಿಂದ ಆರು ವರ್ಷಗಳಲ್ಲಿ ಕರ್ನಾಟಕ ಪರ ಆಡುವ ಅವಕಾಶ ಸಿಕ್ಕಿದ್ದು ಕೇವಲ 18 ಪಂದ್ಯಗಳಲ್ಲಿ ಅಷ್ಟೇ..

ಆಡಿದ 2ನೇ ರಣಜಿ ಇನ್ನಿಂಗ್ಸ್’ನಲ್ಲೇ ಉತ್ತರ ಪ್ರದೇಶ ವಿರುದ್ಧ 195 ರನ್ ಗಳಿಸಿದ್ದ ನಿಶ್ಚಲ್, ಮನೀಶ್ ಪಾಂಡೆ ಜೊತೆ 354 ರನ್’ಗಳ ಮ್ಯಾರಾಥಾನ್ ಜೊತೆಯಾಟವಾಡಿದ್ದರು. ಅದಾದ ನಂತರ ಮುಂದಿನ 9 ರಣಜಿ ಪಂದ್ಯಗಳಲ್ಲಿ 3 ಶತಕ. 2018ರಲ್ಲಿ ವಿದರ್ಭ ವಿರುದ್ಧ 113 ರನ್, ಅದೇ ವರ್ಷ ರೈಲ್ವೇಸ್ ವಿರುದ್ಧ 101 ರನ್, 2019ರಲ್ಲಿ ಛತ್ತೀಸ್’ಗಢ ವಿರುದ್ಧ 107 ರನ್ ಗಳಿಸಿ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿದ್ದ ಟ್ಯಾಲೆಂಟೆಡ್ ಕ್ರಿಕೆಟರ್.

ನಿಶ್ಚಲ್ ಬಾರಿಸಿದ ರಣಜಿ ಶತಕಗಳು:
195 (425) Vs ಉತ್ತರ ಪ್ರದೇಶ (2017)
113 (338) Vs ವಿದರ್ಭ (2018)
101 (232) Vs ರೈಲ್ವೇಸ್ (2018)
107 (242) Vs ಛತ್ತೀಸ್’ಗಢ (2019)

ಒಳ್ಳೆಯ ಕ್ರಿಕೆಟಿಗ.. ಸುದೀರ್ಘ ಇನ್ನಿಂಗ್ಸ್’ಗಳಿಗೆ ಹೆಸರಾಗಿದ್ದ ಆಟಗಾರ. ಪ್ರಥಮದರ್ಜೆ ಪಂದ್ಯಗಳಿಗೆ ಹೇಳಿ ಮಾಡಿಸಿದ್ದ ಆಟಗಾರ. ನಿಶ್ಚಲ್ ಅವರಲ್ಲಿದ್ದ ತಾಳ್ಮೆ ಚೇತೇಶ್ವರ್ ಪೂಜಾರನನ್ನು ನೆನಪಿಸುತ್ತಿತ್ತು.
ರಣಜಿ ಪದಾರ್ಪಣೆಯ ನಂತರ ಅಗ್ರಕ್ರಮಾಂಕದಲ್ಲಿ ಭರವಸೆ ಮೂಡಿಸಿದರೂ, ಅಷ್ಟು ಸಾಕಾಗಲಿಲ್ಲವೇನೋ..?

ಕರ್ನಾಟಕ ರಣಜಿ ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರನೊಬ್ಬ ಇಲ್ಲಿ ಅವಕಾಶಗಳಿಗೆ ಕಾಯುವಂತಾಯಿತು. ಕೊನೆಗೂ ಕಾಯುವಿಕೆಯಲ್ಲಿ ಅರ್ಥವಿಲ್ಲ ಎಂಬ ಕಟುಸತ್ಯವನ್ನು ಅರಿತು ನಾಗಾಲ್ಯಾಂಡ್’ಗೆ ಹೊರಟು ನಿಂತಿದ್ದಾರೆ. ನಿನ್ನೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ NOC ಪಡೆದಿರುವ ನಿಶ್ಚಲ್, ಈ ಬಾರಿಯ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ನಾಗಾಲ್ಯಾಂಡ್ ಪರ ಆಡಲಿದ್ದಾರೆ.

LEAVE A REPLY

Please enter your comment!
Please enter your name here

nine − three =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you