ಕ್ರಿಕೆಟ್ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಕಹಿ ಸುದ್ದಿ, ರಾಜ್ಯದಿಂದ ಹೊರ ನಡೆದ...

ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಕಹಿ ಸುದ್ದಿ, ರಾಜ್ಯದಿಂದ ಹೊರ ನಡೆದ ಮತ್ತೊಬ್ಬ ಕ್ರಿಕೆಟಿಗ!

-

- Advertisment -spot_img

ಆ ಹುಡುಗ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದ ಪ್ರತಿಭಾವಂತ.

ಅವಕಾಶಗಳು ಸರಿಯಾಗಿ ಸಿಕ್ಕಿದ್ದರೆ, ಆತನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿಸಿದ್ದಿದ್ದರೆ, ‘ಕರ್ನಾಟಕದ ಚೇತೇಶ್ವರ್ ಪೂಜಾರ’ ಆಗುವ ಸಾಮರ್ಥ್ಯ ಆ ಹುಡುಗನಿಗಿತ್ತು.

ಆದರೆ ಹಾಗಾಗಲಿಲ್ಲ..
ಅದು ಹುಡುಗನ ದುರದೃಷ್ಟವೋ.. ಕರ್ನಾಟಕ ಕ್ರಿಕೆಟ್’ಗೆ ಆದ ನಷ್ಟವೋ ಗೊತ್ತಿಲ್ಲ..

ಡಿ.ನಿಶ್ಚಲ್. ಈ ಹೆಸರು ಕೇಳಿದರೆ ಜ್ಯೂನಿಯರ್ ಕ್ರಿಕೆಟ್’ನಲ್ಲಿ ಆತ ಹರಿಸುತ್ತಿದ್ದ ರನ್ ಹೊಳೆ ಕಣ್ಣ ಮುಂದೆ ಬರುತ್ತದೆ. 9ನೇ ವರ್ಷದಿಂದ ಆರಂಭವಾಗಿ ಸ್ಕೂಲ್ ಕ್ರಿಕೆಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಂಘಟಿಸಿದ ಟೂರ್ನಿಗಳಲ್ಲಿ ಒಟ್ಟು 100 ಶತಕಗಳನ್ನು ಗಳಿಸಿದ ಪ್ರತಿಭಾ ಸಂಪನ್ನ ಈ ದೆಗಾ ನಿಶ್ಚಲ್.

ಮಯಾಂಕ್ ಅಗರ್ವಾಲ್ ರಣಜಿ ತ್ರಿಶತಕ ಬಾರಿಸಿದ ಪಂದ್ಯದಲ್ಲಿ ನಿಶ್ಚಲ್ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಮಹಾರಾಷ್ಟ್ರ ವಿರುದ್ಧ 2017ರಲ್ಲಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಣಜಿ ಪದಾರ್ಪಣೆ ಮಾಡಿದ್ದ ನಿಶ್ಚಲ್’ಗೆ ಅಲ್ಲಿಂದ ಆರು ವರ್ಷಗಳಲ್ಲಿ ಕರ್ನಾಟಕ ಪರ ಆಡುವ ಅವಕಾಶ ಸಿಕ್ಕಿದ್ದು ಕೇವಲ 18 ಪಂದ್ಯಗಳಲ್ಲಿ ಅಷ್ಟೇ..

ಆಡಿದ 2ನೇ ರಣಜಿ ಇನ್ನಿಂಗ್ಸ್’ನಲ್ಲೇ ಉತ್ತರ ಪ್ರದೇಶ ವಿರುದ್ಧ 195 ರನ್ ಗಳಿಸಿದ್ದ ನಿಶ್ಚಲ್, ಮನೀಶ್ ಪಾಂಡೆ ಜೊತೆ 354 ರನ್’ಗಳ ಮ್ಯಾರಾಥಾನ್ ಜೊತೆಯಾಟವಾಡಿದ್ದರು. ಅದಾದ ನಂತರ ಮುಂದಿನ 9 ರಣಜಿ ಪಂದ್ಯಗಳಲ್ಲಿ 3 ಶತಕ. 2018ರಲ್ಲಿ ವಿದರ್ಭ ವಿರುದ್ಧ 113 ರನ್, ಅದೇ ವರ್ಷ ರೈಲ್ವೇಸ್ ವಿರುದ್ಧ 101 ರನ್, 2019ರಲ್ಲಿ ಛತ್ತೀಸ್’ಗಢ ವಿರುದ್ಧ 107 ರನ್ ಗಳಿಸಿ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಗಳಿಸಿದ್ದ ಟ್ಯಾಲೆಂಟೆಡ್ ಕ್ರಿಕೆಟರ್.

ನಿಶ್ಚಲ್ ಬಾರಿಸಿದ ರಣಜಿ ಶತಕಗಳು:
195 (425) Vs ಉತ್ತರ ಪ್ರದೇಶ (2017)
113 (338) Vs ವಿದರ್ಭ (2018)
101 (232) Vs ರೈಲ್ವೇಸ್ (2018)
107 (242) Vs ಛತ್ತೀಸ್’ಗಢ (2019)

ಒಳ್ಳೆಯ ಕ್ರಿಕೆಟಿಗ.. ಸುದೀರ್ಘ ಇನ್ನಿಂಗ್ಸ್’ಗಳಿಗೆ ಹೆಸರಾಗಿದ್ದ ಆಟಗಾರ. ಪ್ರಥಮದರ್ಜೆ ಪಂದ್ಯಗಳಿಗೆ ಹೇಳಿ ಮಾಡಿಸಿದ್ದ ಆಟಗಾರ. ನಿಶ್ಚಲ್ ಅವರಲ್ಲಿದ್ದ ತಾಳ್ಮೆ ಚೇತೇಶ್ವರ್ ಪೂಜಾರನನ್ನು ನೆನಪಿಸುತ್ತಿತ್ತು.
ರಣಜಿ ಪದಾರ್ಪಣೆಯ ನಂತರ ಅಗ್ರಕ್ರಮಾಂಕದಲ್ಲಿ ಭರವಸೆ ಮೂಡಿಸಿದರೂ, ಅಷ್ಟು ಸಾಕಾಗಲಿಲ್ಲವೇನೋ..?

ಕರ್ನಾಟಕ ರಣಜಿ ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರನೊಬ್ಬ ಇಲ್ಲಿ ಅವಕಾಶಗಳಿಗೆ ಕಾಯುವಂತಾಯಿತು. ಕೊನೆಗೂ ಕಾಯುವಿಕೆಯಲ್ಲಿ ಅರ್ಥವಿಲ್ಲ ಎಂಬ ಕಟುಸತ್ಯವನ್ನು ಅರಿತು ನಾಗಾಲ್ಯಾಂಡ್’ಗೆ ಹೊರಟು ನಿಂತಿದ್ದಾರೆ. ನಿನ್ನೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ NOC ಪಡೆದಿರುವ ನಿಶ್ಚಲ್, ಈ ಬಾರಿಯ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ನಾಗಾಲ್ಯಾಂಡ್ ಪರ ಆಡಲಿದ್ದಾರೆ.

LEAVE A REPLY

Please enter your comment!
Please enter your name here

20 − seventeen =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you