15.6 C
London
Tuesday, May 14, 2024
Homeಕ್ರಿಕೆಟ್ಸೋಮೇಶ್ವರ: ವಿದ್ಯುತ್ ಅವಘಡ ಕ್ರಿಕೆಟ್ ಆಟಗಾರ ರವಿ ಪೂಜಾರಿ ಸಾವು

ಸೋಮೇಶ್ವರ: ವಿದ್ಯುತ್ ಅವಘಡ ಕ್ರಿಕೆಟ್ ಆಟಗಾರ ರವಿ ಪೂಜಾರಿ ಸಾವು

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಹೆಬ್ರಿ , ಜ . 8 : ಸೋಮೇಶ್ವರ ಪಟ್ಟಣದಲ್ಲಿ ಏರ್‌ಟೆಲ್ ಟವರ್ ಬಳಿ ಕಟ್ಟಡ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಬೈಲೂರು ನಿವಾಸಿ ರವಿ ಪೂಜಾರಿ ( 38 ) ಅವರು ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ .
ಕಟ್ಟಡದ ಸೆಂಟ್ರಿಂಗ್ ಕಾಮಗಾರಿಗೆ ಅಳವಡಿಸಿದ ಕಬ್ಬಿಣದ ಸರಳನ್ನು ತೆಗೆಯುತ್ತಿರುವ ವೇಳೆ ಹತ್ತಿರದಲ್ಲಿರುವ 11 ಕೆವಿ ಟಿಸಿಗೆ ಕಬ್ಬಿಣದ ಸರಳು ತಗಲಿದ ಪರಿಣಾಮ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ರವಿ ಪೂಜಾರಿ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದು ಸಾಕಷ್ಟು ಪಂದ್ಯಗಳಲ್ಲಿ ಶ್ರೇಷ್ಠ ಮಟ್ಟದ ಆಟವನ್ನು ಆಡುವುದರ ಮುಖಾಂತರ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದರು . ಇವರು ನಾಲ್ಕು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಕನಸುಗಳ ಮೂಟೆಹೊತ್ತು ನೆಮ್ಮದಿಯ ಜೀವನ ಸಾಗಿಸಲು ಹಗಲಿರುಳು ಕಷ್ಟಪಟ್ಟು ದುಡಿಯುತ್ತಿದ್ದರು.
ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಕಟ್ಟಡ ಮಾಲಿಕ ಹಾಗೂ ಕಟ್ಟಡದ ಗುತ್ತಿಗೆದಾರನ  ಮೇಲೆ ನಿರ್ಲಕ್ಷ್ಯದ ಆರೋಪದಡುಯಲ್ಲಿ  ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
     ಅದೇನೇ ಇರಲಿ ಬಾಳಿ ಬದುಕಬೇಕಿದ್ದ ಜೀವ ಒಂದು ಕಿರು ವಯಸ್ಸಿನಲ್ಲೆ ತನಗೆ ಅರಿವಿಲ್ಲದೆಯೇ ಉಸಿರು ಚೆಲ್ಲಿ ಮಸಣದ ಹಾದಿ ಹಿಡಿದಿರಿವುದು ದುರಂತ
   ಉತ್ತಮ ಕ್ರಿಕೆಟ್ ಆಟಗಾರನಾಗಿದ್ದ ರವಿ ಪೂಜಾರಿ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ…. 🙏🙏🙏💐💐💐
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

8 + seventeen =