ಕ್ರಿಕೆಟ್ಸಹ ಆಟಗಾರ ಹನೀಫ್(ಹುಸೇನ್)ವೈದ್ಯಕೀಯ ಚಿಕಿತ್ಸೆಗೆ ನೆರವಿಗೆ ಧಾವಿಸಿದ ಐಡಿಯಲ್ ಶಿವಮೊಗ್ಗ ತಂಡ

ಸಹ ಆಟಗಾರ ಹನೀಫ್(ಹುಸೇನ್)ವೈದ್ಯಕೀಯ ಚಿಕಿತ್ಸೆಗೆ ನೆರವಿಗೆ ಧಾವಿಸಿದ ಐಡಿಯಲ್ ಶಿವಮೊಗ್ಗ ತಂಡ

-

- Advertisment -spot_img
ಉಡುಪಿ-ಹನೀಫ್ ಪುತ್ತುಮೋನು ಟೆನಿಸ್ಬಾಲ್  ಕ್ರಿಕೆಟ್ ರಾಜ್ಯಮಟ್ಟದಲ್ಲಿ ಆ ದಿನಗಳಲ್ಲಿ ಮೆರೆದಾಡಿದ ಓರ್ವ ಮೇರು  ಆಟಗಾರ.ಹುಟ್ಟೂರಾದ ಮುಲ್ಕಿ,ಪಡುಬಿದ್ರಿ,
ಮಾರುತಿ ಉಳ್ಳಾಲ ತಂಡದ ಪರವಾಗಿ ಆಡಿ ಗೆಲುವಿನ ರೂವಾರಿಯಾಗಿ ಮೂಡಿದ ಹನೀಫ್,ಐಡಿಯಲ್ ಕ್ರಿಕೆಟ್ ಶಿವಮೊಗ್ಗ ತಂಡದಲ್ಲಿ ಹಲವಾರು ವರ್ಷಗಳ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದರು ಕಳೆದ 5 6 ತಿಂಗಳಿಂದ ತೀವ್ರ ಸ್ವರೂಪದ ಮಧುಮೇಹಕ್ಕೆ ಒಳಗಾಗಿ ಸಂಕಷ್ಟದ ಜೀವನ‌ ನಡೆಸುತ್ತಿರುವ ಹನೀಫ್ ಪುತ್ತುಮೋನು ನೆರವಿಗಾಗಿ ಧಾವಿಸಿರೋದು ಅದೇ ಐಡಿಯಲ್ ಗೋಪಿ ಸಾರಥ್ಯದ ಐಡಿಯಲ್  ಕ್ರಿಕೆಟ್ ಶಿವಮೊಗ್ಗ ತಂಡ.
 
 ಶಿವಮೊಗ್ಗ ನಗರ ಮಾಜಿ ಮಹಾನಗರ ಪಾಲಿಕೆ ಸದಸ್ಯ ಗೋಪಾಲಕೃಷ್ಣ.ಜಿ(ಐಡಿಯಲ್ ಗೋಪಿ) ನಾಯಕತ್ವದಲ್ಲಿ ತಂಡದ ಸದಸ್ಯರೆಲ್ಲರಿಂದ ದೇಣಿಗೆ ಸಂಗ್ರಹಿಸಿ,ಇಂದು ಕಾರ್ಕಳ ಕಾಬೆಟ್ಟಿನ ಹನೀಫ್ ನಿವಾಸಕ್ಕೆ ಆಗಮಿಸಿ ಹನೀಫ್ ರವರ ತಾಯಿಗೆ ಸುಮಾರು 1ಲಕ್ಷದ 17 ಸಾವಿರ ರೂ ನಗದು ಹಸ್ತಾಂತರಿಸಿದರು.
 
ಈ ಹಿಂದೆ ಕೂಡ ಐಡಿಯಲ್ ಕ್ರಿಕೆಟ್ ಶಿವಮೊಗ್ಗ ತಂಡ ತಮ್ಮೊಂದಿಗೆ ಆಡಿದ್ದ ಕಿಶೋರ್ ಅಕಾಲಿಕ ಮರಣದ ಸಂದರ್ಭದಲ್ಲೂ ಕೂಡ ಅವರ ಕುಟುಂಬಕ್ಕೆ ಆಧಾರವಾಗಿದ್ದರು.
 
ಐಡಿಯಲ್ ಕ್ರಿಕೆಟ್ ಶಿವಮೊಗ್ಗದ ಈ ನಡೆ ಎಲ್ಲಾ ತಂಡಗಳಿಗೂ ಮಾದರಿಯಾಗಬೇಕು,ತಂಡಕ್ಕಾಗಿ ಜೀವ ಸವೆಸುವ ಸದಸ್ಯರ ಕಷ್ಟ,ಸುಖದಲ್ಲಿ ತಂಡ ಭಾಗಿಯಾಗಬೇಕು  ಎಂದು ಐಡಿಯಲ್ ಗೋಪಿ ತಿಳಿಸಿದರು.
 
 
ಈ ಸಂದರ್ಭ ಶಿವಮೊಗ್ಗ ಮಾಜಿ ಮಹಾನಗರ  ಪಾಲಿಕೆ ಸದಸ್ಯರಾದ ಗೋಪಾಲಕೃಷ್ಣ ‌ಜಿ (ಐಡಿಯಲ್ ಗೋಪಿ),
ಐಡಿಯಲ್ ಶಿವಮೊಗ್ಗ ತಂಡದ ಹಾಲಿ ಆಟಗಾರರಾದ
ಶೇಖ್ ಜಫ್ರುಲ್ಲಾ(ವಿಕ್ಕಿ),ವಕೀಲರು ಶ್ರೀನಿವಾಸ್,
ಜಗದೀಶ್ ಶೆಟ್ಟಿ, ಪುರುಷೋತ್ತಮ್ ,ಪರಮೇಶ್ ,
ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ ಉಪಸ್ಥಿತರಿದ್ದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

twenty − nine =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you