ASGFI ಆಯೋಜಿಸಿದ ರಾಷ್ಟ್ರಮಟ್ಟದ 7 ನೇ ಓಪನ್ ತ್ರೋಬಾಲ್ ಚಾಂಪಿಯನ್‌ ಶಿಪ್ ಪಂದ್ಯಾಕೂಟದಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ

ASGFI ಆಯೋಜಿಸಿದ ರಾಷ್ಟ್ರಮಟ್ಟದ 7 ನೇ ಓಪನ್ ತ್ರೋಬಾಲ್ ಚಾಂಪಿಯನ್‌ ಶಿಪ್ ಪಂದ್ಯಾಕೂಟದಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ
ಉಡುಪಿ ಜಿಲ್ಲೆಯ ಸೂಡಾ ಗ್ರಾಮದ ನರಸಿಂಹ ಪ್ರಭು ಮತ್ತು ಸುನಿತಾ ಪ್ರಭು ಇವರ ಪುತ್ರಿ ಕುಮಾರಿ ನಿಧಿ ಪ್ರಭು ASGFI ಆಯೋಜಿಸಿದ ರಾಷ್ಟ್ರಮಟ್ಟದ ಏಳನೇ ಓಪನ್ ಚಾಂಪಿಯನ್ ಶಿಪ್ ಟೂರ್ನಮೆಂಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾರೆ.
ಈ ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳ 15,16,17ರಂದು ಗೋವಾದಲ್ಲಿ ನಡೆಯಿತು. ಕಳೆದ ವರ್ಷ ವಯೋಮಿತಿಯ ಟೂರ್ನಮೆಂಟ್ ಸೇರಿದಂತೆ ಸತತ ವರ್ಷಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ, ರಾಷ್ಟ್ರೀಯ ಚಾಂಪಿಯನ್ ಆಗಿ ಮೂಡಿ ಬಂದು ಉಡುಪಿ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ ಕುಮಾರಿ ನಿಧಿ ಪ್ರಭು ಅವರಿಗೆ ಇನ್ನಷ್ಟು ಉಜ್ವಲ ಅವಕಾಶಗಳು ಒದಗಿ ಬರಲಿ, ರಾಷ್ಟ್ರೀಯ ತಂಡದಲ್ಲೂ ಸ್ಥಾನ ಲಭಿಸಲಿ ಎನ್ನುವ ಶುಭಹಾರೈಕೆಗಳು.
– ಸ್ಫೋರ್ಟ್ಸ್ ಕನ್ನಡ

Leave a Reply

Your email address will not be published. Required fields are marked *