6.4 C
London
Wednesday, April 24, 2024
HomeAction Replayಕುಂದಾಪುರ : ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣೆ ಸಮಾರಂಭ

ಕುಂದಾಪುರ : ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣೆ ಸಮಾರಂಭ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ಕುಂದಾಪುರ : ಒಬ್ಬ ವ್ಯಕ್ತಿಗೆ ವಿದ್ಯೆ ಇದ್ದರೆ ಸಾಲದು ವಿನಯವೂ ಇರಬೇಕು. ವಿದ್ಯೆ ಮಾತ್ರ ಇದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ವಿನಯದಿಂದ ಜಗತ್ತನ್ನೇ ಗೆಲ್ಲಬಹುದು ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ ಮಹೇಂದ್ರ ಭಟ್ ಹೇಳಿದರು.

ಕುಂದಾಪುರ ಆರ್ಶೀವಾದ ಸಭಾಂಗಣದಲ್ಲಿ ನಡೆದ ಹಿರಿಯ ಕಿರಿಯರ ಸಮ್ಮಿಲನ ಟೆನ್ನಿಸ್‍ಬಾಲ್ ಕ್ರಿಕೆಟ್ ಸಮ್ಮೇಳನ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೋಟೇಶ್ವರ ಚೇತನಾ ಕ್ರೀಡಾ ಮತ್ತು ಕಲಾರಂಗದ ಗೋಪಾಲಕೃಷ್ಣ ಶೆಟ್ಟಿ ಅವರು ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣಾಗೈದು ಶುಭಾಹಾರೈಸಿದ್ದ.

 

ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಪೋಷಕ ಸೀತಾರಾಮ ಆಚಾರ್ಯ ತೆಕ್ಕಟ್ಟೆ, ನಿವೃತ್ತ ಶಿಕ್ಷಕ ವಿಶ್ವೇಶ್ವರ ಹಂದೆ, ಪ್ರಸಿದ್ಧ ಯೋಗ ಗುರು ರಾಜೇಂದ್ರ ಚಕ್ಕೇರ ಇವರಿಗೆ ಗುರುವಂದನಾ ಕಾರ್ಯ ನಡೆಯಿತು.

ಬನ್ನಂಜೆ ಪ್ಯಾರಡೈಸ್ ಡಾ ಮಂಜುನಾಥ ಮಯ್ಯ, ಬೆಂಗಳೂರು ಜೈ ಕರ್ನಾಟಕ ಆರ್ ಮನೋಹರನ್, ಬೆಂಗಳೂರು ಶ್ರೀ ಕ್ರಿಕೆಟರ್ಸ್ ಡಾ ಆರ್ ಪ್ರಸನ್ನ ಕುಮಾರ್, ಬೆಂಗಳೂರಿನ ಖ್ಯಾತ ಚಿತ್ರನಟ ಸಿ.ಸಿ.ಎಲ್. ರಾಜೀವ್ ಹನು, ದೊಡ್ಮನೆ ಆಕಾಶ್ ಗೌಡ, ಪಡುಬಿದ್ರೆ ಫ್ರೆಂಡ್ಸ್ ಶರತ್ ಶೆಟ್ಟಿ, ಟಾರ್ಪೊಡಸ್ ಕ್ರಿಕೆಟ್ ಕ್ಲಬ್‍ನ ಗೌತಮ್ ಶೆಟ್ಟಿ, ಬೆಂಗಳೂರು ಫ್ರೆಂಡ್ಸ್ ರೇಣು ಗೌಡ, ಕುಂದಾಪುರ ಚಕ್ರವರ್ತಿ ಕ್ರಿಕೆಟ್‍ನ ಶ್ರೀಪಾದ್ ಉಪಾಧ್ಯ, ಉಡುಪಿ ಕೆನರಾ ಮಿತ್ರ ಮಂಡಳಿಯ ಉದಯ್ ಕುಮಾರ್, ಶಿರ್ವ ಬ್ಲೂಸ್ಟಾರ್ ಸಫ್ತಾರ್ ಆಲಿ, ಕೋಟ-ಪಡುಕೆರೆ ವಾಹಿನಿಯ ರಾಜೇಂದ್ರ ಸುವರ್ಣ, ತುಮಕೂರು ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್ ಕೆ.ಸಿ, ಶ್ರೀಶ ಆಚಾರ್ಯ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪೋರ್ಟ್ಸ್ ಕನ್ನಡ ಮುಖ್ಯಸ್ಥ ರಾಮಕೃಷ್ಣ ಆಚಾರ್ಯ ಕೋಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚೈತ್ರಾ ಆಚಾರ್ಯ ಕೋಟ ಸನ್ಮಾನಿತರನ್ನು ಪರಿಚಯಿಸಿದರು. ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದ್ದರು.

ಸಭಾ ಕಾರ್ಯಕ್ರಮದ ಮುಂಚಿತವಾಗಿ ಅಂಬಿಕಾ ಗುರುರಾಜ್ ಆಚಾರ್ಯ ಮಂಗಳೂರು, ಮಹಿಳಾ ಐತಾಳ್, ಸಂಧ್ಯಾ ಬಂಗೇರ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ , ಕಟಕ ಚಲನಚಿತ್ರದ ಬಾಲ ನಟಿ ಶ್ಲಾಘ ಸಾಲಿಗ್ರಾಮ, ಸಹನಾ ರೈ ಹಾಗೂ ಸುಪ್ರೀತಾ ವೈದ್ಯ ಇವರಿಂದ ನೃತ್ಯ ವೈಭವ, ಮುಕ್ತವಾಹಿನಿಯ ಖ್ಯಾತಿಯ ಚೇತನ್ ನೈಲ್ಯಾಡಿ ಇವರಿಂದ “ಸ್ಟ್ಯಾಂಡ್ ಅಪ್ ಕಾಮಿಡಿ ಪ್ರದರ್ಶನ ನಡೆಯಿತು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

12 + eleven =