6.4 C
London
Wednesday, April 24, 2024
Homeಕ್ರಿಕೆಟ್ಭಾರತದ ಕ್ರಿಕೆಟ್ ನ ದಂತಕಥೆ ‘ಯುವರಾಜ’ ಇನ್ನು ಬ್ಲೂ ಜರ್ಸಿಯಲ್ಲಿ ನೆನೆಪು...

ಭಾರತದ ಕ್ರಿಕೆಟ್ ನ ದಂತಕಥೆ ‘ಯುವರಾಜ’ ಇನ್ನು ಬ್ಲೂ ಜರ್ಸಿಯಲ್ಲಿ ನೆನೆಪು ಮಾತ್ರ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ಯುವರಾಜ್ ಸಿಂಗ್ ಎಂದೊಡನೆ ನಮಗೆಲ್ಲಾ ನೆನಪಿಗೆ ಬರುವುದೇ ಆ ೬ ಸಿಕ್ಸರ್ ಗಳು ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ೨೦೦೭ರ ಟಿ೨೦ ವಿಶ್ವಕಪ್ ಮತ್ತು ೨೦೧೧ರ  ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಯುವರಾಜ್ ಸಿಂಗ್  ಯೋಗರಾಜ್ ಸಿಂಗ್ ಮತ್ತು ಶಬ್ನಮ್ ಸಿಂಗ್ ಅವರ ಪುತ್ರನಾಗಿ ೧೨ ಡಿಸೆಂಬರ್ ೧೯೮೧ರಂದು ಚಂಡೀಗಡ್ ನಲ್ಲಿ ಜನಿಸಿದರು. ೩೦ ನವೆಂಬರ್ ೨೦೧೬ ರಂದು ಹಜೆಲ್ ಕೀಚ್ ಅವರನ್ನು ಯುವಿ ವಿವಾಹವಾಗಿದ್ದಾರೆ.

ಯುವರಾಜ್ ಸಿಂಗ್ ತಮ್ಮ ೧೩ ನೇ ವಯಸ್ಸಿಗೆ ಪಂಜಾಬ್ ತಂಡದ ಪರವಾಗಿ ೧೬ರ ವಯೋಮಿತಿಯ ತಂಡದಲ್ಲಿ ಆಡಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ತಮ್ಮ  ಕ್ರಿಕೆಟ್ ಪಯಣವನ್ನು ಪ್ರಾರಂಭಿಸಿದರು. ಅದಾದ ನಂತರ ೧೯ ರ ವಯೋಮಿತಿಯಲ್ಲಿ ಹಿಮಾಚಲ ತಂಡ ವಿರುದ್ಧ  ಆಕರ್ಷಕ ೧೩೭ರನ್ ಗಳಿಸಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ ಆಗುವ ಎಲ್ಲಾ ಮುನ್ಸೂಚನೆಯನ್ನು ನೀಡಿದರು

೧೯೯೭ ರಲ್ಲಿ ಒಡಿಸ್ಸಾ ವಿರುದ್ಧ ತಮ್ಮ ಪ್ರಥಮ ದರ್ಜೆ ಪಂದ್ಯವನ್ನಾಡಿದ ಯುವಿ ಆಮೇಲೆ ಇಂದಿಗೂ ಹಿಂದಿರುಗಿ ನೋಡಲೇ ಇಲ್ಲ.ಅದಾದ ನಂತರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

೧೯೯೯-೨೦೦೦ ನೇ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಹರಿಯಾಣ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ೧೪೯ ರನ್ ಗಳಿಸಿದ್ದರು.ಯುವಿ ೨೦೦೦ನೇ ಸಾಲಿನಲ್ಲಿ ೧೯ರ ವಯೋಮಿತಿಯ ವಿಶ್ವಕಪ್ ನಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ತಂಡದಲ್ಲಿ ಸ್ಥಾನ  ಗಿಟ್ಟಿಸಿದ್ದ ಯುವ ಭರ್ಜರಿ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರರಾಗಿದ್ದರು. ೨೦೦೨ ರ ನಾಟ್ ವೆಸ್ಟ್ ಸರಣಿ ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.

ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ. 2003ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. 40 ಟೆಸ್ಟ್ ಆಡಿರುವ ಯುವಿ 1900 ರನ್ ಬಾರಿಸಿದ್ದಾರೆ. ಇನ್ನು 11 ಅರ್ಧ ಶತಕ ಹಾಗೂ 3 ಶತಕ ಬಾರಿಸಿದ್ದಾರೆ.

ಯುವಿಯ ನಿವೃತ್ತಿಯ ಮಾತು:

25 ವರ್ಷಗಳ ಕಾಲದಿಂದ 22 ಯಾರ್ಡ್ ಪಿಚ್‌ನ ಆಚೀಚೆ, ಸುಮಾರು 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಳಗೆ, ಹೊರಗೆ ಇದ್ದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳು ಕೊಡವಿಕೊಳ್ಳಬೇಕು ಮತ್ತು ಪುನಃ ಎದ್ದು ಮುನ್ನಡೆಯಬೇಕು ಎಂಬುದನ್ನೆಲ್ಲ ಈ ಆಟವು ನನಗೆ ಕಲಿಸಿಕೊಟ್ಟಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಹೇಳಿದರು. ನಿವೃತ್ತಿ ಬಳಿಕ ಜಿಟಿ20 (ಕೆನಾಡಾ), ಐರ್ಲೆಂಡ್ ಮತ್ತು ಹಾಲೆಂಡ್ ನಲ್ಲಿನ ಯೂರೋ ಟಿ20ಯಂತ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಅವರು ಬಿಸಿಸಿಐ ಜೊತೆ ಚರ್ಚಿಸಿ, ಸ್ಪಷ್ಟ ನಿರ್ಧಾರಕ್ಕೆ ಬರಲಿದ್ದಾರೆ.

ಯುವರಾಜ್ ಅವರಿಗೆ 2012 ರಲ್ಲಿ ಅರ್ಜುನ ಪ್ರಶಸ್ತಿ, ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2014 ರಲ್ಲಿ, ಅವರಿಗೆ ಪದ್ಮಶ್ರೀ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ನೀಡಿ ಗೌರವಿಸಲಾಯಿತು

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಭಾರತಕ್ಕೆ ತಂಡ ಸಾಕಷ್ಟು ಕೊಡುಗೆ ನೀಡಿರುವ ಯುವಿ, ಯುವಿಕ್ಯಾನ್ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗೂ 2014ರಲ್ಲಿ ಯುವರಾಜ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಶ್ವಕಪ್ ಹೀರೊ :

1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಯುವರಾಜ್ ಸಿಂಗ್ ಅವರು ವಿಶ್ವಕಪ್ ಹೀರೋ ಆಗಿ, 2007ರಲ್ಲಿ ಇಂಗ್ಲೆಂಡಿನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ವಿಶ್ವ ದಾಖಲೆಯನ್ನು ಸ್ಥಾಪಿಸಿದರು

ಯುವಿ ಕ್ರಿಕೆಟ್ ನ ಅಂಕಿ ಅಂಶಗಳು :

  • ಟೆಸ್ಟ್ : 40 ಪಂದ್ಯ, 1900ರನ್, 33.92ರನ್ ಸರಾಸರಿ, 3 ಶತಕ, 11 ಅರ್ಧಶತಕ, 169 ಗರಿಷ್ಠ ರನ್ ಗಳಿಕೆ, 9ವಿಕೆಟ್
  • ಏಕದಿನ ಕ್ರಿಕೆಟ್ : 304 ಪಂದ್ಯ, 8,701 ರನ್, 36.55 ರನ್ ಸರಾಸರಿ, 14 ಶತಕ, 52 ಅರ್ಧ ಶತಕ, 150 ಗರಿಷ್ಠ ಮೊತ್ತ, 111 ವಿಕೆಟ್
  • ಟಿ20ಐ: 58 ಪಂದ್ಯ, 1177 ರನ್, 28.02 ರನ್ ಸರಾಸರಿ, 77ಅಜೇಯ ಗರಿಷ್ಠ ಮೊತ್ತ, 28 ವಿಕೆಟ್
  • ಪ್ರಥಮ ದರ್ಜೆ: 139 ಪಂದ್ಯ, 8965ರನ್, 44.16ರನ್ ಸರಾಸರಿ, 26ಶತಕ, 36 ಅರ್ಧಶತಕ, 260ಗರಿಷ್ಠ ಮೊತ್ತ, 41 ವಿಕೆಟ್. ಪಡೆದುಕೊಂಡಿದ್ದಾರೆ.– ಪ್ರೀತಮ್ ಹೆಬ್ಬಾರ್
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

four × four =