9.9 C
London
Saturday, April 20, 2024
HomeAction Replayಅಂದು ಕುಂಬ್ಳೆ ವಿಶ್ವದಾಖಲೆಯ 10 ವಿಕೆಟ್ ಗಳಿಸಲು ಗೊಂಚಲಿಗೆ ನೆರವಾಗಿದ್ದ ಶ್ರೀನಾಥ್

ಅಂದು ಕುಂಬ್ಳೆ ವಿಶ್ವದಾಖಲೆಯ 10 ವಿಕೆಟ್ ಗಳಿಸಲು ಗೊಂಚಲಿಗೆ ನೆರವಾಗಿದ್ದ ಶ್ರೀನಾಥ್

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ಭಾರತೀಯರ ಪಾಲಿಗೆ ಹಾಗೂ ಅನಿಲ್ ಕುಂಬ್ಳೆ ಅದೊಂದು ಅವಿಸ್ಮರಣೀಯ ದಿನ ಅಂದರೆ ತಪ್ಪಾಗಲಾರದು. ಅವತ್ತು ದಿನಾಂಕ 7 ಫೆಬ್ರವರಿ 1999 ಆ ದಿನ ಬಹುಶಃ ವಿಶ್ವ ಕ್ರಿಕೆಟ್ ಅನಿಲ್ ಕುಂಬ್ಳೆ ಎಂಬ ಸ್ಪಿನ್ ಗಾರುಡಿಗನತ್ತ ತಿರುಗಿ ನೋಡಿದ ದಿನ.

ದಿನಾಂಕ 7 ಫೆಬ್ರವರಿ 1999ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ 2 ನೇ ಟೆಸ್ಟ್ ನಲ್ಲಿ ಅನಿಲ್ ಕುಂಬ್ಳೆ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು.

ಹಾಗೆ 2 ನೇ ಇನ್ನಿಂಗ್ಸ್ ನಲ್ಲಿ ಎದುರಾಳಿಗಳಿಗೆ ಆರಂಭದಿಂದಲೂ ಅನಿಲ್ ಕುಂಬ್ಳೆ ದುಃಸ್ವಪ್ನವಾಗಿ ಕಾಡಿದ್ದರು ಅಂತಿಮವಾಗಿ ಕುಂಬ್ಳೆ 9 ವಿಕೆಟ್ ಪಡೆದಿದ್ದರು ಇತಿಹಾಸ ನಿರ್ಮಿಸಲು ಕುಂಬ್ಳೆಗೆ ಒಂದು ವಿಕೆಟ್ ಅವಶ್ಯಕತೆ ಇತ್ತು .ಪಾಕಿಸ್ತಾನದ 9 ವಿಕೆಟ್ ಗಳು ಉರುಳಿದಾಗ ಬೌಲಿಂಗ್ ಸರದಿ ಜವಾಗಲ್ ಶ್ರೀನಾಥ್ ಅವರದ್ದಾಗಿತ್ತು ಆದರೆ ಅವರು ಎಸೆದ ಆ ಓವರ್ ಕುಂಬ್ಳೆಗೆ 10 ವಿಕೆಟ್ ಗಳಿಸಲು ಸಂಪೂರ್ಣ ಅನುವು ಮಾಡಿಕೊಟ್ಟಿತು.

ಮುಂದಿನ ಓವರ್ ನಲ್ಲಿ ಕುಂಬ್ಳೆಗೆ ವಿಕೆಟ್ ಸಿಗಲೆಂದು ಅವರು ಆ ಓವರ್ ನಲ್ಲಿ ವಾಸಿಮ್ ಅಕ್ರಮ್ ಅವರಿಗೆ ಆಫ್ ಸ್ಟಂಪ್ ನಿಂದ ಹೊರಗೆ ಮತ್ತು ಲೆಗ್ ಸ್ಟಂಪ್ ನಿಂದ ಹೊರಗೆ ಚೆಂಡನ್ನು ಎಸೆದು ತಮ್ಮ ಓವರ್ ಅನ್ನು ಮುಗಿಸಿದ ಕನ್ನಡಿಗ ಇನ್ನೊಬ್ಬ ಕನ್ನಡಿಗನ 10 ವಿಕೆಟ್ ಗಳ ದಾಖಲೆಗೆ ನೆರವಾದರು. ಮುಂದಿನ ಓವರ್ ನಲ್ಲೇ ವಾಸಿಂ ಅಕ್ರಮ್ ಅವರ ವಿಕೆಟ್ ಕಬಳಿಸುವುದರ ಮೂಲಕ ಕುಂಬ್ಳೆ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು.

ಶ್ರೀನಾಥ್ ಕುಂಬ್ಳೆ ಗೆ10 ನೇ ವಿಕೆಟ್ ಗಳಿಸಲು ನೆರವಾದ ರೋಮಾಂಚಕ ವಿಡಿಯೋ ಇಲ್ಲಿದೆ ನೋಡಿ ಆನಂದಿಸಿ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

fifteen − 10 =