19.7 C
London
Saturday, May 18, 2024
Homeಕ್ರಿಕೆಟ್ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ಮೂಡಿಸುವತ್ತ ವೆಂಕಟರಮಣ ಪಿತ್ರೋಡಿ ಸಂಸ್ಥೆ ವಿಶಿಷ್ಟ ಪ್ರಯತ್ನ-ಭಾಂಧವ್ಯ ಟ್ರೋಫಿ-2021

ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ಮೂಡಿಸುವತ್ತ ವೆಂಕಟರಮಣ ಪಿತ್ರೋಡಿ ಸಂಸ್ಥೆ ವಿಶಿಷ್ಟ ಪ್ರಯತ್ನ-ಭಾಂಧವ್ಯ ಟ್ರೋಫಿ-2021

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಕಳೆದ ಮೂರು ದಶಕಗಳಿಂದ
ಕ್ರೀಡೆಯ ಜೊತೆ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಪ್ರತಿ ವರ್ಷವೂ ಈ ಸಂಸ್ಥೆ ಸಂಘಟಿಸುವ ಪ್ರತಿಯೊಂದು ಕ್ರೀಡಾ ಚಟುವಟಿಕೆಗಳಲ್ಲಿ ಹೊಸತನ,ಸಮಾಜಕ್ಕೆ ಸಂದೇಶ,ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ವೆಂಕಟರಮಣ ಸಂಸ್ಥೆಯ ಜ್ಯೂನಿಯರ್ ತಂಡ ಈ ಬಾರಿ ಹಿರಿಯ ಕ್ರಿಕೆಟಿಗರ ಸಲಹೆ,ಸಹಕಾರದೊಂದಿಗೆ ಉದ್ಯಾವರ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಯುವ ಜನಾಂಗಕ್ಕೆ ಮನೆ ಜವಾಬ್ದಾರಿ ಮೂಡಿಸುವ ಸಲುವಾಗಿ ವಿಶಿಷ್ಟ ಪ್ರಯತ್ನದ ರೂಪದಲ್ಲಿ  ಜನವರಿ 16 ಮತ್ತು 17 ರಂದು ಉದ್ಯಾವರ
ಗ್ರಾಮಪಂಚಾಯತ್ ಮೈದಾನದಲ್ಲಿ
ಭಾಂದವ್ಯ ಟ್ರೋಫಿ-2021 ಆಯೋಜಿಸಿದ್ದಾರೆ.
ಉದ್ಯಾವರ ಪರಿಸರದ 15 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸುತ್ತಿದ್ದು,
ವಿಜೇತ ತಂಡಗಳಿಗೆ ನಗದು ಬಹುಮಾನದ  ಬದಲಾಗಿ ಅಕ್ಕಿಯನ್ನು ನೀಡಲಾಗುತ್ತಿದೆ.
ಪ್ರಥಮ ಸ್ಥಾನಿ ತಂಡಕ್ಕೆ 600 ಕೆ‌.ಜಿ.ಅಕ್ಕಿ( ತಂಡದ ಎಲ್ಲಾ ಆಟಗಾರರಿಗೆ ತಲಾ 50 ಕೆ.ಜಿ ಅಕ್ಕಿ),ದ್ವಿತೀಯ ಸ್ಥಾನಿ ತಂಡಕ್ಕೆ 300
ಕೆ.ಜಿ ಅಕ್ಕಿ(ತಂಡದ ಎಲ್ಲಾ ಆಟಗಾರರಿಗೆ 25 ಕೆ.ಜಿ ಅಕ್ಕಿ),ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ 5 ಕೆ‌.ಜಿ ಅಕ್ಕಿ,ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಿಗೆ 25 ಕೆ‌.ಜಿ ಅಕ್ಕಿಯನ್ನು ನೀಡಲಾಗುತ್ತಿದೆ.
ಬಹುತೇಕ ಯುವಕರು ಗೆದ್ದ ನಗದು ಕೈಗೆ ಸಿಕ್ಕಾಗ ದಾರಿ ತಪ್ಪುವುದನ್ನು ಮನಗಂಡ ವೆಂಕಟರಮಣ ಸಂಸ್ಥೆ ಕಳೆದ ವರ್ಷವೂ ಕೂಡ ವಿಜೇತರಿಗೆ ನಗದು ಬಹುಮಾನದ ಬದಲಾಗಿ, ಕೆ‌.ಜಿ.ಗಟ್ಟಲೆ ಅಕ್ಕಿ ಬಹುಮಾನವನ್ನು ನೀಡಿ,ಆಟಗಾರರ ಪೋಷಕರ  ಮನದಲ್ಲಿ ಸಾರ್ಥಕ್ಯ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿತ್ತು.
ಈ ಬಾರಿಯೂ ಕೂಡ ಟನ್ ಗಟ್ಟಲೆ ಅಕ್ಕಿ ಗ್ರಾಮೀಣ ಭಾಗದ ಯುವ ಕ್ರಿಕೆಟಿಗರ ಮನೆಗಳನ್ನು ತಲುಪಲಿದೆ….
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

15 + twenty =