7.1 C
London
Tuesday, April 23, 2024
Homeಕ್ರಿಕೆಟ್ಉದ್ಯಾವರ-ವೆಂಕಟರಮಣ ಪಿತ್ರೋಡಿ ಮಡಿಲಿಗೆ "ಸಮಾಗಮ ಟ್ರೋಫಿ-2021"

ಉದ್ಯಾವರ-ವೆಂಕಟರಮಣ ಪಿತ್ರೋಡಿ ಮಡಿಲಿಗೆ “ಸಮಾಗಮ ಟ್ರೋಫಿ-2021”

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
90 ರ ದಶಕದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉದ್ಯಾವರ ಪರಿಸರದ ಹಿರಿಯ ಆಟಗಾರರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ,ಉದ್ಯಾವರದ ಕ್ರೀಡಾ ಪ್ರೋತ್ಸಾಹಕರು,ಕುತ್ಪಾಡಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಶ್ರೀ.ವಸಂತ್ ಕುತ್ಪಾಡಿ ಇವರ ಸಾರಥ್ಯದಲ್ಲಿ,90 ರ ದಶಕದಲ್ಲಿ ಗತವೈಭವ ಮೆರೆದ ಉದ್ಯಾವರ ಪರಿಸರದ ಆಹ್ವಾನಿತ 10 ತಂಡಗಳ ನಡುವೆ ಆಯೋಜಿಸಲಾಗಿದ್ದ “ಸಮಾಗಮ ಟ್ರೋಫಿ-2021″ಯನ್ನು ವೆಂಕಟರಮಣ ಪಿತ್ರೋಡಿ ತಂಡ ಜಯಿಸಿದೆ.
ಮಾರ್ಚ್ 7 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಈ ಪ‌ಂದ್ಯಾಟ ನಡೆದಿತ್ತು.ಲೀಗ್ ಹಂತದ ರೋಚಕ‌ ಸೆಣಸಾಟಗಳ ಬಳಿಕ ಫೈನಲ್ ನಲ್ಲಿ ವೆಂಕಟರಮಣ ಪಿತ್ರೋಡಿ ತಂಡ ಜನಪ್ರಿಯ ಉದ್ಯಾವರ ತಂಡವನ್ನು ಸೋಲಿಸಿ ಸಮಾಗಮ ಟ್ರೋಫಿ-2021 ಜಯಿಸಿತ್ತು‌.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸಂದೀಪ್ ಕುಮಾರ್ ಪಿತ್ರೋಡಿ, ಬೆಸ್ಟ್ ಬೌಲರ್ ರಕ್ಷಿತ್ ವಿ‌.ಸಿ‌.ಸಿ ,ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪ್ರಸಾದ್ ಜನಪ್ರಿಯ ಹಾಗೂ ಸರಣಿಶ್ರೇಷ್ಟ  ಪ್ರಶಸ್ತಿಯನ್ನು ಜಯರಾಮ್ ವಿ‌.ಸಿ‌.ಸಿ ಪಡೆದರೆ,ಕರಾವಳಿ ಪಿತ್ರೋಡಿ ಶಿಸ್ತುಬದ್ಧ ತಂಡ ಗೌರವಕ್ಕೆ ಪಾತ್ರವಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಣ್ಯರಾದ
ಶರತ್ ಶೆಟ್ಟಿ ಪಡುಬಿದ್ರಿ,ರಾಧಾಕೃಷ್ಣ ಶ್ರೀಯಾನ್,ಜಿತೇಂದ್ರ ಶೆಟ್ಟಿ ಉದ್ಯಾವರ,ರಿಯಾಜ್ ಪಳ್ಳಿ,ಲೋಹಿತ್ ಕುಮಾರ್ ಪಿತ್ರೋಡಿ,ಶ್ರೀಮತಿ ಮಾಲತಿ.ಎಸ್.ಸಾಲ್ಯಾನ್,ಕೋಟ ರಾಮಕೃಷ್ಣ ಆಚಾರ್,ಸತೀಶ್ ಕುಂದರ್,ಶ್ರೀಮತಿ ಫ್ರೀಡಾ ಡಿಸೋಜ,ಸದಾಶಿವ ಅಮೀನ್,ಮಿಥೇಶ್ ಸುವರ್ಣ,ಆಬಿದ್ ಆಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶರತ್ ಶೆಟ್ಟಿ ಪಡುಬಿದ್ರಿ,ನಿವೃತ್ತ ಯೋಧರು ಬಾಲಚಂದ್ರ ಪಿತ್ರೋಡಿ,ರಾಜ್ಯಮಟ್ಟದ ಆಟಗಾರರಾದ ಪ್ರವೀಣ್ ಪಿತ್ರೋಡಿ, ಅಪ್ಪು ಉದ್ಯಾವರ,ಹಿರಿಯ ವೀಕ್ಷಕ ವಿವರಣೆಕಾರರು ವಿನಯ್ ಉದ್ಯಾವರ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪ್ರವರ್ತಕ ಕೋಟ ರಾಮಕೃಷ್ಣ ಆಚಾರ್ ಈ 6 ಮಂದಿ ಸಾಧಕರನ್ನು ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು.
ಹಾಗೂ ಉದ್ಯಾವರ ಪರಿಸರದ ಹಿರಿಯ ತಂಡಗಳಾದ ಸಭಾ ಕ್ರಿಕೆಟರ್ಸ್,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್,ಕುತ್ಪಾಡಿ ಕ್ರಿಕೆಟರ್ಸ್,11 ಸ್ಟಾರ್ ಕ್ರಿಕೆಟರ್ಸ್, ಕರಾವಳಿ ಪಿತ್ರೋಡಿ, ಬೊಳ್ಜೆ ಉದ್ಯಾವರ,ಜನಪ್ರಿಯ ಕ್ರಿಕೆಟರ್ಸ್, ಆಜಾದ್ ಕ್ರಿಕೆಟರ್ಸ್,ಸಂಪಿಗೆ ನಗರ(ಮಿತ್ರ ವೃಂದ),ಕೇದಾರ್ ಫ್ರೆಂಡ್ಸ್ ತಂಡಗಳನ್ನು ಅಭಿನಂದಿಸಲಾಯಿತು.
ವೀಕ್ಷಕ ವಿವರಣೆಯಲ್ಲಿ ಹಿರಿಯ ವೀಕ್ಷಕ ವಿವರಣೆಕಾರರಾದ ಉಮೇಶ್ ಪೂಜಾರಿ ಬ್ರಹ್ಮಾವರ ಹಾಗೂ ವಿನಯ್ ಉದ್ಯಾವರ ಸಹಕರಿಸಿದರು…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

19 + 6 =