Categories
ಕ್ರಿಕೆಟ್

ಭರ್ಜರಿ ಫಾರ್ಮ್ ನಲ್ಲಿ ಕಿಝರ್-ಡೈನಾಮಿಕ್ ಡ್ಯಾಶರ್ಸ್ ತಂಡಕ್ಕೆ “ಸ್ಕಾರ್ಪಿಯಾನ್ಸ್‌ ಟ್ರೋಫಿ”

ಬೆಂಗಳೂರು-ಸ್ಕಾರ್ಪಿಯನ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ, ಸೋಲದೇವನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ “ಸ್ಕಾರ್ಪಿಯಾನ್ಸ್‌ ಟ್ರೋಫಿ-2021” ಪ್ರಶಸ್ತಿಯನ್ನು ಡೈನಾಮಿಕ್ ಡ್ಯಾಶರ್ಸ್ ತಂಡ ಜಯಿಸಿದೆ.
ಲೀಕ್ ಕಮ್ ನಾಕೌಟ್ ಮಾದರಿಯಲ್ಲಿ ಹಗಲು ರಾತ್ರಿ ನಡೆದ ಈ ಪಂದ್ಯಾವಳಿಯ ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೈನಾಮಿಕ್ ಡ್ಯಾಶರ್ಸ್ 3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿತ್ತು.ಇದಕ್ಕುತ್ತರವಾಗಿ ತೀವ್ರ ಪ್ರತಿಹೋರಾಟ ನೀಡಿದ ಅವಿಘ್ನ ಸೃಷ್ಟಿ ತಂಡ 3 ಓವರ್ ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 18 ರನ್ ಗಳಿಸಲಷ್ಟೇ ಶಕ್ತವಾಯಿತು.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಅವಿಘ್ನ ಸೃಷ್ಟಿ ತಂಡದ ಆದರ್ಶ್,ಬೆಸ್ಟ್ ಬೌಲರ್ ಅದೇ ತಂಡದ ಪುನೀತ್ ಹಾಗೂ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಅರ್ಹವಾಗಿ ಡೈನಾಮಿಕ್ ಡ್ಯಾಶರ್ಸ್ ನ‌ ಕಿಝರ್ ಪಡೆದುಕೊಂಡರು.
ಕ್ರಿಕ್ ಸೇ ಈ ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಯುವ ವೀಕ್ಷಕ ವಿವರಣೆಕಾರರಾದ ಭಾನುಪ್ರಕಾಶ್ ಉಡುಪಿ ಹಾಗೂ ಜಲೀಲ್ ಮೂಡಿಗೆರೆ ಸಹಕರಿಸಿದರು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

3 × 5 =