Categories
ಕ್ರಿಕೆಟ್

ಉಡುಪಿ-ಹೊನ್ನಾಳ ಕಪ್-2021 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ

ಫ್ರೆಂಡ್ಸ್ ಹೊನ್ನಾಳ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ,ಹೊನ್ನಾಳದ ಕ್ರಿಕೆಟಿಗರನ್ನು ದೇಶ ವಿದೇಶದೆಲ್ಲೆಡೆ ಪರಿಚಯಿಸಿದ ಹೊನ್ನಾಳದ ಕ್ರೀಡಾ ಪ್ರೋತ್ಸಾಹಕರಾದ ಮೊಹಮ್ಮದ್ ಆಯೂಬ್ ರವರ ಗೌರವಾಧ್ಯಕ್ಷತೆಯಲ್ಲಿ ಜನವರಿ 30 ಹಾಗೂ 31 ರಂದು ಹೊನ್ನಾಳದಲ್ಲಿ ಹೊನಲು ಬೆಳಕಿನ “ಹೊನ್ನಾಳ ಕಪ್-2021” ಪಂದ್ಯಾಕೂಟ ಆಯೋಜಿಸಲಾಗಿದೆ.
ಜನವರಿ 30 ರಂದು ಹೊನ್ನಾಳದ ಆಟಗಾರರಿಗಾಗಿ ಪಂದ್ಯಾಟ ನಡೆಯಲಿದ್ದು,ವಿಜೇತ ತಂಡ 27,777 ನಗದು ಹಾಗೂ ದ್ವಿತೀಯ ಸ್ಥಾನಿ 17,777 ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಜನವರಿ 31ರಂದು Area wise ಪಂದ್ಯಗಳು ನಡೆಯಲಿದ್ದು,ಪ್ರಥಮ‌ ಸ್ಥಾನಿ 27,777 ನಗದು,ರನ್ನರ್ ಅಪ್ 17,777 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M9 ಸ್ಪೋರ್ಟ್ಸ್ ನೇರ ಪ್ರಸಾರವನ್ನು ಬಿತ್ತರಿಸಿದರೆ,ಹೆಚ್ಚಿನ ಮಾಹಿತಿಗಾಗಿ
ಅರ್ಫಾದ್ ಕೈಫ್-8722796856,
ಜಮೀರ್-8105371915,
ಫಿರೋಝ್-9731580244,
ರಿಜ್ವಾನ್-9164200754,
ಫಝಲ್-8861347976
ಇವರನ್ನು ಸಂಪರ್ಕಿಸಬಹುದಾಗಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

11 − three =