Categories
ಕ್ರಿಕೆಟ್

ಉಡುಪಿ-ಅಂಬಲಪಾಡಿಯಲ್ಲಿ ಸ್ವಸ್ತಿ ಟ್ರೋಫಿ-2021 ಫೆಬ್ರವರಿ 7 ಮತ್ತು 8 ರಂದು.

ಸ್ವಸ್ತಿ ಇಲೆವೆನ್ ಅಂಬಲಪಾಡಿ ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ಸ್ವಸ್ತಿಕ್ ಸವಿ ನೆನಪಿಗಾಗಿ ಫೆಬ್ರವರಿ 7 ಮತ್ತು 8 ರಂದು ಅಂಬಲಪಾಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಕೂಟ ಸ್ವಸ್ತಿಕ್ ಟ್ರೋಫಿ-2021 ಆಯೋಜಿಸಲಾಗಿದೆ.
ಸದಾ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಈ ಸಂಸ್ಥೆ 2016 ರ ಮೇ ತಿಂಗಳಲ್ಲಿ ನಡೆದ ಪ್ರಥಮ ಪಂದ್ಯಾಕೂಟದಲ್ಲಿ 2 ಅಂಧ ಮಕ್ಕಳಿಗೆ 35,000 ಸಹಾಯಧನ ಹಾಗೂ ಸಂಪಿಗೆ ನಗರದ ರಿಶಾನಿ ಎಂಬ ಮಗುವಿಗೆ 23-11-2017 ರಂದು ಹೃದಯ ಚಿಕಿತ್ಸೆಗಾಗಿ 10,000 ರೂ ನಗದನ್ನು ನೀಡಿರುತ್ತಾರೆ.ಈ ಸಂಸ್ಥೆಯ ಸದಸ್ಯರಾದ ಅಜಿತ್ ಕಪ್ಪೆಟ್ಟು  ಒಂದು ಮಗುವಿನ ಚಿಕಿತ್ಸೆಗೆ 1 ಲಕ್ಷ ಆರ್ಥಿಕ ಸಹಾಯ ನೀಡಿದ್ದಾರೆ.
ಪಂದ್ಯಾಕೂಟದ ಅಗ್ರಸ್ಥಾನಿ ತಂಡ 15 ಸಹಸ್ರ,ದ್ವಿತೀಯ ಸ್ಥಾನಿ 7 ಸಹಸ್ರ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಕ್ರೀಡಾರತ್ನ ಬಿರುದಾಂಕಿತ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ವಾಯ್ಸ್ ಆಫ್ ಕರ್ನಾಟಕ ಖ್ಯಾತಿಯ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ‌
V Dan Black belt K.B.I ಚೀಫ್ ಇನ್ಸ್ಟ್ರಕ್ಟರ್  B.K.S.A Examiner
ಶಿಹಾನ್ ವಾಮನ್ ಪಾಲನ್ ಪಂದ್ಯಾಕೂಟಕ್ಕೆ ಶುಭಕೋರಿದ್ದಾರೆ.
ವಿ‌.ಸೂ- ಆಸಕ್ತ ತಂಡಗಳು ಸುಜಿತ್-9036560472
ಕಾರ್ತಿಕ್-8660643651
ಮನೋಜ್-6361632810
ನಿಶು-9535241699
ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

16 − six =