11.9 C
London
Friday, May 17, 2024
Homeಕ್ರಿಕೆಟ್ಶಿಂಷಾ ಟ್ರೋಫಿ ಜಯಿಸಿದ ತುಮಕೂರಿನ ಶಿಕ್ಷಣ ಇಲಾಖೆ ತಂಡ

ಶಿಂಷಾ ಟ್ರೋಫಿ ಜಯಿಸಿದ ತುಮಕೂರಿನ ಶಿಕ್ಷಣ ಇಲಾಖೆ ತಂಡ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ಚಕ್ರವರ್ತಿ ಗೆಳೆಯರ ಬಳಗ ತುಮಕೂರು 20 ನೇ ವರ್ಷದ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸರ್ಕಾರಿ ನೌಕರರು ಹಾಗೂ ಸೇವಾ ರಂಗ ದ ತಂಡಗಳಿಗೆ ರವಿವಾರ ಏರ್ಪಡಿಸಿದ್ದ ಪಂದ್ಯಾಕೂಟವನ್ನು M.L.A ಜ್ಯೋತಿ ಗಣೇಶ್, ಧನಿಯ ಕುಮಾರ್ ಹಾಗೂ ಭಗತ್ ಸೇನೆಯ ಚೇತನ್ ಉದ್ಘಾಟಿಸಿದರು.

 

ತುಮಕೂರಿನ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವಿಶಿಷ್ಟವಾಗಿ ನಡೆದ ಈ ಪಂದ್ಯಾಕೂಟದಲ್ಲಿ ಸರ್ಕಾರಿ ಸೇವಾರಂಗದ ಒಟ್ಟು 10 ಸಂಸ್ಥೆಗಳು ಭಾಗವಹಿಸಿದ್ದರು.

ಅಂತಿಮವಾಗಿ ಫೈನಲ್ ನಲ್ಲಿ ಶಿಕ್ಷಣ ಇಲಾಖೆ ತಂಡ ಪ್ರಥಮ ಸ್ಥಾನಿಯಾಗಿ ಆಕರ್ಷಕ ಶಿಂಷಾ ಟ್ರೋಫಿಯನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನಿ ಬೆಸ್ಕಾಂ ತಂಡ “ಸ್ಮಾರ್ಟ್ ಸಿಟಿ ಕಪ್ ಪಡೆದು, ವಿಶೇಷ ನಿರ್ವಹಣೆ ತೋರಿದ ಆಟಗಾರರು ವೈಯಕ್ತಿಕ ಪ್ರಶಸ್ತಿಗಳಿಂದ ಪುರಸ್ಕೃತರಾದರು.

ಪಂದ್ಯಾಕೂಟದುದ್ದಕ್ಕೂ ಚಕ್ರವರ್ತಿ ಗೆಳೆಯರ ತಂಡದೊಂದಿಗೆ, ಕೆ.ಪಿ.ಸಿ.ಸಿ ಸದಸ್ಯ ಕೃಷ್ಣಮೂರ್ತಿ ಪಿ.ಎನ್ ರವರು, ಬಿಸಿಲಿನಲ್ಲಿ ಮೂರು ಪಂದ್ಯಗಳ ಅಂಪಾಯರ್ ಆಗಿಯೂ ಕಾರ್ಯನಿರ್ವಹಿಸಿ, ಉದ್ಘಾಟನಾ ಸಮಾರಂಭದಿಂದ ಸಮಾರೋಪದ ವರೆಗೂ ತಂಡದೊಂದಿಗಿದ್ದು ಸಹಕರಿಸಿದರು. ಈ ಸಂದರ್ಭ ಹಿರಿಯ ಕ್ರಿಕೆಟಿಗರೆಲ್ಲರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಕೃಷ್ಣಮೂರ್ತಿ ಪಿ.ಎನ್, ಕೆ.ಶ್ರೀಧರ್, ಇನ್ಸ್ಪೆಕ್ಟರ್ ರಾಘವೇಂದ್ರ, ರಾಮಕೃಷ್ಣ , ಭಗತ್ ಸೇನೆಯ ಚೇತನ್, ಧನಿಯ ಕುಮಾರ್, ಗೆಳೆಯರ ಬಳಗದ ಕೆಂಗಲ್ ಅಬೀದ್, ಚಕ್ರವರ್ತಿ ಗೆಳೆಯರ ಬಳಗದ ಸಂಸ್ಥಾಪಕಾಧ್ಯಕ್ಷ ಪ್ರಕಾಶ್ ಟಿ.ಸಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

ಗಿರೀಶ್ ರಾವ್ ಮಾಲೀಕತ್ವದ ಕ್ರಿಕ್ ಸೇ ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಬಿತ್ತರಿಸಿತ್ತು.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

3 × 5 =