6 C
London
Wednesday, April 24, 2024
Homeಕ್ರಿಕೆಟ್ರಾಜ್ಯದಸರಾ ಕ್ರೀಡಾಕೂಟ ಚಿನ್ನದ ಪದಕದೊಂದಿಗೆ ವಿನೂತನ ದಾಖಲೆ ನಿರ್ಮಿಸಿದ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರು...

ದಸರಾ ಕ್ರೀಡಾಕೂಟ ಚಿನ್ನದ ಪದಕದೊಂದಿಗೆ ವಿನೂತನ ದಾಖಲೆ ನಿರ್ಮಿಸಿದ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರು…

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಅಕ್ಟೋಬರ್ 1 ರಿಂದ 4 ರ ವರೆಗೆ ಮೈಸೂರಿನ ಜೆ.ಸಿ.ಇ ಕಾಲೇಜಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾಕೂಟದಲ್ಲಿ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಈ ಮೂವರ ತಂಡ ಪ್ರಥಮ‌ ಪ್ರಶಸ್ತಿಯನ್ನು ಅಲಂಕರಿಸಿದ್ದಾರೆ.
ಪ್ರಾರಂಭಿಕ ಹಂತದಿಂದಲೇ ಭರ್ಜರಿ ಯಶಸ್ಸು ಸಾಧಿಸಿದ ಈ ಮೂವರು ಪ್ರಥಮ‌ ಸುತ್ತಿನಲ್ಲಿ ಬೆಂಗಳೂರು ಗ್ರಾಮಾಂತರ ತಂಡವನ್ನು 3-0 ಅಂತರದಲ್ಲಿ,ದ್ವಿತೀಯ ಸುತ್ತಿನಲ್ಲಿ ಬೆಂಗಳೂರು ನಗರ ತಂಡವನ್ನು 3-0 ಅಂತರದಲ್ಲಿ,ತೃತೀಯ ಸುತ್ತಿನಲ್ಲಿ ಕಲಬುರ್ಗಿ ತಂಡವನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಗೈದು ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಎದುರಾಳಿ ಬೆಳಗಾಂ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿ,ನಗದು ಬಹುಮಾನವನ್ನು ಪಡೆದರು. ದಸರಾ ಕ್ರೀಡಾ ಕೂಟದಲ್ಲಿ ಸತತ 5 ನೇ ಬಾರಿಗೆ ಚಿನ್ನದ ಪದಕವನ್ನು ಪಡೆದು ವಿನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.
ದಾಖಲೆಯ ಗೆಲುವು ಸಾಧಿಸಿದ ಈ ಮೂವರಲ್ಲಿ ಕುಮಾರಿ ಪ್ರಶಸ್ತಿ ಶೆಟ್ಟಿ,ಗೌತಮ್ ಶೆಟ್ಟಿಯವರ ಪುತ್ರಿ.
ಆರ್ನಾ ಸದೋತ್ರಾ,ಇಶಾನಿ ಹರೀಶ್ ಹಾಗೂ ಪ್ರಶಸ್ತಿ ಡೆಲ್ಲಿ ಪಬ್ಲಿಕ್ ಸ್ಕೂಲ್(MRPL) ಮಂಗಳೂರು ವಿದ್ಯಾರ್ಥಿನಿಯರು,ದೈಹಿಕ ನಿರ್ದೇಶಕರಾದ ಗೌತಮ್ ಶೆಟ್ಟಿಯವರ ಟೊರ್ಪೆಡೋಸ್ ಸಂಸ್ಥೆಯಲ್ಲಿ ಕಠಿಣ ತರಬೇತಿ ಪಡೆದು,ಭರ್ಜರಿ ಯಶಸ್ಸು ಸಾಧಿಸಿ
ವಿದ್ಯಾಸಂಸ್ಥೆಗೂ ಹಾಗೂ ಟೊರ್ಪೆಡೋಸ್ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಗೌತಮ್ ಶೆಟ್ಟಿಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.
          ಆರ್.ಕೆ.ಆಚಾರ್ಯ ಕೋಟ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

seven + seventeen =