Categories
ರಾಜ್ಯ ಸ್ಪೋರ್ಟ್ಸ್

ದಸರಾ ಕ್ರೀಡಾಕೂಟ ಚಿನ್ನದ ಪದಕದೊಂದಿಗೆ ವಿನೂತನ ದಾಖಲೆ ನಿರ್ಮಿಸಿದ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರು…

ಅಕ್ಟೋಬರ್ 1 ರಿಂದ 4 ರ ವರೆಗೆ ಮೈಸೂರಿನ ಜೆ.ಸಿ.ಇ ಕಾಲೇಜಿನಲ್ಲಿ ನಡೆದ ದಸರಾ ರಾಜ್ಯಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾಕೂಟದಲ್ಲಿ ಟೊರ್ಪೆಡೋಸ್ ಸಂಸ್ಥೆಯ ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಈ ಮೂವರ ತಂಡ ಪ್ರಥಮ‌ ಪ್ರಶಸ್ತಿಯನ್ನು ಅಲಂಕರಿಸಿದ್ದಾರೆ.
ಪ್ರಾರಂಭಿಕ ಹಂತದಿಂದಲೇ ಭರ್ಜರಿ ಯಶಸ್ಸು ಸಾಧಿಸಿದ ಈ ಮೂವರು ಪ್ರಥಮ‌ ಸುತ್ತಿನಲ್ಲಿ ಬೆಂಗಳೂರು ಗ್ರಾಮಾಂತರ ತಂಡವನ್ನು 3-0 ಅಂತರದಲ್ಲಿ,ದ್ವಿತೀಯ ಸುತ್ತಿನಲ್ಲಿ ಬೆಂಗಳೂರು ನಗರ ತಂಡವನ್ನು 3-0 ಅಂತರದಲ್ಲಿ,ತೃತೀಯ ಸುತ್ತಿನಲ್ಲಿ ಕಲಬುರ್ಗಿ ತಂಡವನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಗೈದು ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಎದುರಾಳಿ ಬೆಳಗಾಂ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿ,ನಗದು ಬಹುಮಾನವನ್ನು ಪಡೆದರು. ದಸರಾ ಕ್ರೀಡಾ ಕೂಟದಲ್ಲಿ ಸತತ 5 ನೇ ಬಾರಿಗೆ ಚಿನ್ನದ ಪದಕವನ್ನು ಪಡೆದು ವಿನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.
ದಾಖಲೆಯ ಗೆಲುವು ಸಾಧಿಸಿದ ಈ ಮೂವರಲ್ಲಿ ಕುಮಾರಿ ಪ್ರಶಸ್ತಿ ಶೆಟ್ಟಿ,ಗೌತಮ್ ಶೆಟ್ಟಿಯವರ ಪುತ್ರಿ.
ಆರ್ನಾ ಸದೋತ್ರಾ,ಇಶಾನಿ ಹರೀಶ್ ಹಾಗೂ ಪ್ರಶಸ್ತಿ ಡೆಲ್ಲಿ ಪಬ್ಲಿಕ್ ಸ್ಕೂಲ್(MRPL) ಮಂಗಳೂರು ವಿದ್ಯಾರ್ಥಿನಿಯರು,ದೈಹಿಕ ನಿರ್ದೇಶಕರಾದ ಗೌತಮ್ ಶೆಟ್ಟಿಯವರ ಟೊರ್ಪೆಡೋಸ್ ಸಂಸ್ಥೆಯಲ್ಲಿ ಕಠಿಣ ತರಬೇತಿ ಪಡೆದು,ಭರ್ಜರಿ ಯಶಸ್ಸು ಸಾಧಿಸಿ
ವಿದ್ಯಾಸಂಸ್ಥೆಗೂ ಹಾಗೂ ಟೊರ್ಪೆಡೋಸ್ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಗೌತಮ್ ಶೆಟ್ಟಿಯವರು ಹರ್ಷ ವ್ಯಕ್ತ ಪಡಿಸಿದ್ದಾರೆ.
          ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

9 + 1 =