ಬ್ಯಾಡ್ಮಿಂಟನ್ನಡಾಲ್ ನ ನಡವಳಿಕೆ-ನಂಬಿಕೆಗಳು

ನಡಾಲ್ ನ ನಡವಳಿಕೆ-ನಂಬಿಕೆಗಳು

-

- Advertisment -spot_img

ಕ್ರೀಡಾಪಟುಗಳಿಗೆ ಅವರದ್ದೇ ಆದ ವಿಚಿತ್ರ ನಂಬಿಕೆಗಳಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಟೆನ್ನಿಸ್ ಪಟು ರಾಫಾ ನಡಾಲ್‌‌ನ ಈ ನಂಬಿಕೆ ಕೊಂಚ ವಿಲಕ್ಷಣವಾದದ್ದು.ಆತ ಟೆನ್ನಿಸ್ ಕೋರ್ಟ್‌ನಲ್ಲಿ ತಾನು ಕುಳಿತುಕೊಳ್ಳುವ ಸೀಟಿನ ಪಕ್ಕ ಯಾವತ್ತಿಗೂ ಎರಡು ಬಾಟಲಿಗಳನ್ನಿಡುತ್ತಾನೆ.ಅದು ನೀರಿರುವ ಅಥವಾ ಜ್ಯೂಸ್ ಇರಬಹುದಾದ ಬಾಟಲಿಯಿರಲಿ.ಎರಡು ಬಾಟಲಿಗಳು ಅವನಿಗೆ ಬೇಕು.ಅದೂ ಸಹ ಅವನು ಕುಳಿತುಕೊಳ್ಳುವ ಆಸನದ ಎಡಪಕ್ಕಕ್ಕೆ ಇರಬೇಕು.

ಒಂದರ ಮುಂದೆ ಒಂದು ಕೊಂಚವೂ ವ್ಯತ್ಯಾಸವಾಗದಂತೆ ಹೊಂದಿಕೆಯಾಗುವಂತೆ ಒಂದರ್ಧ ಅಡಿ ದೂರದಲ್ಲಿ ಇರಬೇಕು.ಹಾಗೆ ಇರುವಂತೆ ಸ್ವತ: ನಡಾಲ್ ಅವುಗಳನ್ನು ಹೊಂದಿಸಿಡುತ್ತಾನೆ.ಬಾಟಲಿಗಳ ಸ್ಥಾನದ ಬಗ್ಗೆ ಆತ ಎಷ್ಟು ಕಟ್ಟುನಿಟ್ಟು ಎಂದರೆ ಬಾಟಲಿಗಳು ಬಿದ್ದು ಹೋದರೆ ಆತ ಸರ್ವಿಸ್ ಮಾಡುವ ಹಂತದಲ್ಲಿದ್ದರೂ ತಕ್ಷಣವೇ ಆಟ ನಿಲ್ಲಿಸಿ ಬಾಟಲುಗಳನ್ನು ಸರಿಪಡಿಸಿಯೇ ಆತ ಮುನ್ನಡೆಯುವುದು.ಹಾಗೊಂದು ವರ್ತನೆಗೆ ಅದೆಷ್ಟೋ ಎಚ್ಚರಿಕೆಗಳು, ದೂರುಗಳು ಬಿದ್ದಿದ್ದರೂ ಆತ ಮಾತ್ರ ತನ್ನ ವರ್ತನೆ ಬದಲಿಸಿಲ್ಲ.

ತೀರ ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್‌ನ ಪಂದ್ಯವೊಂದರಲ್ಲಿ ಸಂದರ್ಶಕನಾಗಿದ್ದ ಮತ್ತೊಬ್ಬ ಟೆನ್ನಿಸ್ ದಂತಕತೆ ಮೆಕೆನ್ರೋ,’ಏನದು ನಿಮ್ಮ ಬಾಟಲಿಗಳ ಕುರಿತು ನಂಬಿಕೆ..?’ ಎಂದು ಪ್ರಶಿಸಿದಾಗ ಉತ್ತರಿಸಿದ್ದ ನಡಾಲ್,’ಬದುಕಿನಲ್ಲಿ ಯಾವುದಾದರೂ ನಂಬಿಕೆಗಳು ಫಲ ನೀಡುತ್ತಲಿವೆಯೆಂದರೆ ಅವುಗಳನ್ನು ಬದಲಿಸಬೇಡಿ, ಫಲ ನೀಡುತ್ತಿಲ್ಲ ಎಂದಾಗ ಮಾತ್ರ ಬದಲಿಸಿ, ಇಷ್ಟರವರೆಗಂತೂ ನನಗೆ ಈ ಬಾಟಲಿ ನಂಬಿಕೆ ಫಲ ನೀಡುತ್ತಲೇ ಇದೆ’ಎನ್ನುತ್ತ ನಕ್ಕಿದ್ದ.

ಯಕಶ್ಚಿತ್ ಪ್ಲಾಸ್ಟಿಕ್ ಬಾಟಲಿಗಳು ಸಹ ಬಲಿಷ್ಠ ಆಟಗಾರನೊಬ್ಬನನ್ನು ಆಡಿಸುವ ಈ ಬಗೆಯ ವರ್ತನೆ ನಿಜಕ್ಕೂ ಮನುಷ್ಯ ಸ್ವಭಾವದ ಕುರಿತು ಆಸಕ್ತಿ ಮೂಡಿಸುವುದಂತೂ ಸುಳ್ಳಲ್ಲ.

– ಗುರುರಾಜ್ ಕೊಡ್ಕಣಿ ಯಲ್ಲಾಪುರ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

seven − four =

Latest news

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ ಪಂಜಾಬ್‌ನ ಸಣ್ಣ ಪಟ್ಟಣದಿಂದ ಆರಂಭವಾದ ಯುವ ಕ್ರಿಕೆಟಿಗ ಜಸ್ಪ್ರೀತ್ ಸಿಂಗ್ ಅವರ ಜೀವನಯಾನ ಇಂದು ಸಾವಿರಾರು ಯುವ...

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್ – ಸೀಸನ್ 2

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್  2026– ಸೀಸನ್ 2 ಕೊಲ್ನಾಡ್ ಮೈದಾನದಲ್ಲಿ ಫೆಬ್ರವರಿ 14 ಮತ್ತು 15ರಂದು LK ಕ್ರಿಕೆಟ್ ಪ್ರೀಮಿಯರ್ ಲೀಗ್ –...

ಮುಂಬೈ ನೆಲದಲ್ಲಿ ಕರ್ನಾಟಕದ ಐತಿಹಾಸಿಕ ವಿಜಯ

ಮುಂಬೈ ನೆಲದಲ್ಲಿ ಕರ್ನಾಟಕದ ಐತಿಹಾಸಿಕ ವಿಜಯ ರಣಜಿ ಟ್ರೋಫಿ ಕ್ರಿಕೆಟ್ ಎಂದರೆ ಮುಂಬೈಗೆ ಪ್ರತಿಷ್ಠೆಯ ಪ್ರಶ್ನೆ. 42 ಬಾರಿ ಚಾಂಪಿಯನ್ ಆಗಿರುವ ತಂಡದ ಎದುರು ಅವರದ್ದೇ ಮೈದಾನದಲ್ಲಿ...

ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭರ್ಜರಿ ಆರಂಭ: ಅಮೆರಿಕ ವಿರುದ್ಧ 29 ರನ್ ಜಯ

ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭರ್ಜರಿ ಆರಂಭ: ಅಮೆರಿಕ ವಿರುದ್ಧ 29 ರನ್ ಜಯ 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ....
- Advertisement -spot_imgspot_img

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು ಕರಾವಳಿ...

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ (Sports Kannada Live...

Must read

- Advertisement -spot_imgspot_img

You might also likeRELATED
Recommended to you