6 C
London
Wednesday, April 24, 2024
Homeಬ್ಯಾಡ್ಮಿಂಟನ್ನಡಾಲ್ ನ ನಡವಳಿಕೆ-ನಂಬಿಕೆಗಳು

ನಡಾಲ್ ನ ನಡವಳಿಕೆ-ನಂಬಿಕೆಗಳು

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ಕ್ರೀಡಾಪಟುಗಳಿಗೆ ಅವರದ್ದೇ ಆದ ವಿಚಿತ್ರ ನಂಬಿಕೆಗಳಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಟೆನ್ನಿಸ್ ಪಟು ರಾಫಾ ನಡಾಲ್‌‌ನ ಈ ನಂಬಿಕೆ ಕೊಂಚ ವಿಲಕ್ಷಣವಾದದ್ದು.ಆತ ಟೆನ್ನಿಸ್ ಕೋರ್ಟ್‌ನಲ್ಲಿ ತಾನು ಕುಳಿತುಕೊಳ್ಳುವ ಸೀಟಿನ ಪಕ್ಕ ಯಾವತ್ತಿಗೂ ಎರಡು ಬಾಟಲಿಗಳನ್ನಿಡುತ್ತಾನೆ.ಅದು ನೀರಿರುವ ಅಥವಾ ಜ್ಯೂಸ್ ಇರಬಹುದಾದ ಬಾಟಲಿಯಿರಲಿ.ಎರಡು ಬಾಟಲಿಗಳು ಅವನಿಗೆ ಬೇಕು.ಅದೂ ಸಹ ಅವನು ಕುಳಿತುಕೊಳ್ಳುವ ಆಸನದ ಎಡಪಕ್ಕಕ್ಕೆ ಇರಬೇಕು.

ಒಂದರ ಮುಂದೆ ಒಂದು ಕೊಂಚವೂ ವ್ಯತ್ಯಾಸವಾಗದಂತೆ ಹೊಂದಿಕೆಯಾಗುವಂತೆ ಒಂದರ್ಧ ಅಡಿ ದೂರದಲ್ಲಿ ಇರಬೇಕು.ಹಾಗೆ ಇರುವಂತೆ ಸ್ವತ: ನಡಾಲ್ ಅವುಗಳನ್ನು ಹೊಂದಿಸಿಡುತ್ತಾನೆ.ಬಾಟಲಿಗಳ ಸ್ಥಾನದ ಬಗ್ಗೆ ಆತ ಎಷ್ಟು ಕಟ್ಟುನಿಟ್ಟು ಎಂದರೆ ಬಾಟಲಿಗಳು ಬಿದ್ದು ಹೋದರೆ ಆತ ಸರ್ವಿಸ್ ಮಾಡುವ ಹಂತದಲ್ಲಿದ್ದರೂ ತಕ್ಷಣವೇ ಆಟ ನಿಲ್ಲಿಸಿ ಬಾಟಲುಗಳನ್ನು ಸರಿಪಡಿಸಿಯೇ ಆತ ಮುನ್ನಡೆಯುವುದು.ಹಾಗೊಂದು ವರ್ತನೆಗೆ ಅದೆಷ್ಟೋ ಎಚ್ಚರಿಕೆಗಳು, ದೂರುಗಳು ಬಿದ್ದಿದ್ದರೂ ಆತ ಮಾತ್ರ ತನ್ನ ವರ್ತನೆ ಬದಲಿಸಿಲ್ಲ.

ತೀರ ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್‌ನ ಪಂದ್ಯವೊಂದರಲ್ಲಿ ಸಂದರ್ಶಕನಾಗಿದ್ದ ಮತ್ತೊಬ್ಬ ಟೆನ್ನಿಸ್ ದಂತಕತೆ ಮೆಕೆನ್ರೋ,’ಏನದು ನಿಮ್ಮ ಬಾಟಲಿಗಳ ಕುರಿತು ನಂಬಿಕೆ..?’ ಎಂದು ಪ್ರಶಿಸಿದಾಗ ಉತ್ತರಿಸಿದ್ದ ನಡಾಲ್,’ಬದುಕಿನಲ್ಲಿ ಯಾವುದಾದರೂ ನಂಬಿಕೆಗಳು ಫಲ ನೀಡುತ್ತಲಿವೆಯೆಂದರೆ ಅವುಗಳನ್ನು ಬದಲಿಸಬೇಡಿ, ಫಲ ನೀಡುತ್ತಿಲ್ಲ ಎಂದಾಗ ಮಾತ್ರ ಬದಲಿಸಿ, ಇಷ್ಟರವರೆಗಂತೂ ನನಗೆ ಈ ಬಾಟಲಿ ನಂಬಿಕೆ ಫಲ ನೀಡುತ್ತಲೇ ಇದೆ’ಎನ್ನುತ್ತ ನಕ್ಕಿದ್ದ.

ಯಕಶ್ಚಿತ್ ಪ್ಲಾಸ್ಟಿಕ್ ಬಾಟಲಿಗಳು ಸಹ ಬಲಿಷ್ಠ ಆಟಗಾರನೊಬ್ಬನನ್ನು ಆಡಿಸುವ ಈ ಬಗೆಯ ವರ್ತನೆ ನಿಜಕ್ಕೂ ಮನುಷ್ಯ ಸ್ವಭಾವದ ಕುರಿತು ಆಸಕ್ತಿ ಮೂಡಿಸುವುದಂತೂ ಸುಳ್ಳಲ್ಲ.

– ಗುರುರಾಜ್ ಕೊಡ್ಕಣಿ ಯಲ್ಲಾಪುರ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

12 − nine =