Categories
ಕಾಫಿ ವಿತ್ ಅರ್ ಕೆ

ಚಿಟ್ ಚಾಟ್-60 ವಿತ್ ಕಾಮೆಂಟ್ರಿ ಶಿವ – ಕ್ರೀಡಾ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರ ಸಂದರ್ಶನ

ಕ್ರೀಡೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ,ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಮೂರು ದಶಕಗಳಿಂದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ  ಅನುಭವಿ ವೀಕ್ಷಕ ವಿವರಣೆಕಾರ ಹಾಗೂ ಅಂಪಾಯರ್ ಕೋಟ ಶಿವನಾರಾಯಣ ಐತಾಳ್ ರವರು ಸ್ಥಾಪಿಸಿದ್ದ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.
ಜಿಲ್ಲಾ ಮಟ್ಟದ ಡಬಲ್ ವಿಕೆಟ್ ಪಂದ್ಯಾವಳಿ ಮೊತ್ತ ಮೊದಲ ಬಾರಿಗೆ ಸಂಘಟಿಸಿದ್ದು,
ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಪ್ರಥಮ ಸ್ಥಾನಗಳಿಸಿದ್ದು,ಇಲೆವೆನ್ ಅಪ್ ಕೋಟ ತಂಡದ ಪದ್ಮನಾಭ ಆಚಾರ್ ಹಾಗೂ ಮಿಥುನ್ ಹಂದೆ ದ್ವಿತೀಯ ಬಹುಮಾನ ಗಳಿಸಿರುವುದು
ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಅಂತೆಯೇ ಒಂದು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ,2 ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಬೆಳ್ಳಿಹಬ್ಬವನ್ನು ಆಚರಿಸಿದೆ.
ಹಲವಾರು ಟಿ.ವಿ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಕ್ರಿಕೆಟ್ ವಿಶ್ಲೇಷಕರ ಜೊತೆ ಅಂತರಾಷ್ಟ್ರೀಯ ಪಂದ್ಯಗಳ ವಿಶ್ಲೇಷಣೆ ನಡೆಸಿದ ಅನುಭವ ಹೊಂದಿರುವ ಶಿವನಾರಾಯಣ ಐತಾಳರು ಈ ಸಂಸ್ಥೆಯಿಂದ ವಿನೂತನ‌ ಪ್ರಯತ್ನಕ್ಕೆ ಕೈ ಹಾಕಿದ್ದು,ಹಿರಿಯ ಹಾಗೂ ಕಿರಿಯ ಕ್ರೀಡಾಲೋಕದ ಸಾಧಕರು,ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಅವರಿದ್ದಲ್ಲಿಗೇ ತೆರಳಿ ಸಂದರ್ಶನ ನಡೆಸಿ ಪ್ರಸಾರಗೊಳಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಿದ್ದಾರೆ.
Categories
ಕ್ರಿಕೆಟ್

ಜಾಕಿ ಕ್ರಿಕೆಟ್ ಕ್ಲಬ್(ಜೆ.ಸಿ.ಸಿ) ಮುಡಿಗೆ ಶ್ರೀನಿವಾಸಪುರ ಪ್ರೀಮಿಯರ್ ಲೀಗ್-2020 ಕಿರೀಟ

ಮಾವಿನ ಹಣ್ಣಿನ ಬೃಂದಾವನವೆಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಪ್ರಸಿದ್ಧ ಉದ್ಯಮಿ M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ಹಾಗೂ S.A.S ಗ್ರೂಪ್ ನ ಮಾಲೀಕ ಶಾಮೀರ್ ಎಸ್.ಎ ಸಾರಥ್ಯದಲ್ಲಿ ನಡೆದ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ಸೀಸನ್ 2 ರ ಪ್ರಶಸ್ತಿಯನ್ನು ಕಾರ್ತಿಕ್ ರೆಡ್ಡಿ ಜಾಕಿ ನೇತೃತ್ವದ ಜಾಕಿ ಕ್ರಿಕೆಟ್ ಕ್ಲಬ್ ಜಯಿಸಿದೆ.

ಸತತ ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಸಾಗಿದ ಅತ್ಯಂತ ಅದ್ಧೂರಿಯ ಪಂದ್ಯಾವಳಿಯಲ್ಲಿ
ಬಲಿಷ್ಠ 8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಾಡಿದ್ದು, ಲೀಗ್ ಹಂತದ ಪ್ರಬಲ ಪೈಪೋಟಿಗಳ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ನದೀಮ್ ಅಖ್ತರ್ ಮಾಲೀಕತ್ವದ ಸೈ ಬಾಯ್ಸ್ ತಂಡ ಫ್ರೆಂಡ್ಸ್ ಕ್ರಿಕೆಟರ್ಸ್ ನ್ನು ಹಾಗೂ ಜೆ.ಸಿ.ಸಿ ತಂಡ ಶಾಮೀರ್ ಮಾಲೀಕತ್ವದ ರೈಸಿಂಗ್ ಸ್ಟಾರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.

ಫೈನಲ್ ನಲ್ಲಿ ಜಾಕಿ‌ ಕ್ರಿಕೆಟ್ ಕ್ಲಬ್ ನ‌ ಸಂಘಟಿತ ಹೋರಾಟದ ಫಲವಾಗಿ‌ ಸೈ ಬಾಯ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಪ್ರಥಮ ಪ್ರಶಸ್ತಿ ರೂಪದಲ್ಲಿ ಜೆ.ಸಿ.ಸಿ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ ಸೈ ಬಾಯ್ಸ್ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್ ಜಾನ್, ಬೆಸ್ಟ್ ಬೌಲರ್ ಮಾರ್ಕ್ ಮಹೇಶ್, ಫೈನಲ್ ನ ಪಂದ್ಯಶ್ರೇಷ್ಟ ಸ್ವಸ್ತಿಕ್ ಹಾಗೂ ಸರಣಿಯುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ನಿರ್ವಹಣೆ ತೋರಿದ ಸಾಗರ್ ಭಂಡಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂದ್ಯಾವಳಿಗೆ ಕರ್ನಾಟಕ ವಿಧಾನ ಸಭಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಚಿತ್ರನಟರಾದ ಅಂಜಾನ್,ಡಾಲಿ ಧನಂಜಯ್,ಕೆ.ಜಿ.ಎಫ್ ಖ್ಯಾತಿಯ ಗರುಡಾ ರಾಮ್,ಇಂಡೋರ್ ನ ಖ್ಯಾತ ಉದ್ಯಮಿ ಹ್ಯಾಪಿ,ಶ್ರೀನಿವಾಸಪುರದ ವೃತ್ತ ನಿರೀಕ್ಷಕರು

ರಾಘವೇಂದ್ರ,ರಾಜಕೀಯ ಧುರೀಣರಾದ ಕೆ.ಕೆ.ಮಂಜು, ಪ್ರಸಿದ್ಧ ಡ್ರಮ್ಮರ್ ದೇವಾ ಪಂದ್ಯಾವಳಿಯ ರಂಗನ್ನು ಹೆಚ್ಚಿಸಿದ್ದರು.

  

ಅತ್ಯಂತ ಯಶಸ್ಸು ಕಂಡ ಶ್ರೀನಿವಾಸಪುರದ ಈ ಪಂದ್ಯಾಕೂಟಕ್ಕಾಗಿ ಐ.ಪಿ.ಎಲ್,ಪ್ರೊ ಕಬಡ್ಡಿ ಕಾಮೆಂಟೇಟರ್ ನವೀನ್ ಶೌರಿ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ,ಹಿರಿಯ ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ ಐತಾಳ್,ಹಿಂದಿ ಕಾಮೆಂಟೇಟರ್ ಸ್ಟಾರ್ ನವಾಝ್,ಸೈಯದ್ ಗುರುಕಂಬ್ಳ ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಭಾಗವಹಿಸಲಿದ್ದರು.

ಸಚಿನ್ ಮಹಾದೇವ್ ಮಾಲೀಕತ್ವದ M.Sports ಯೂ ಟ್ಯೂಬ್ ಚಾನೆಲ್ ನ ಪ್ರಮುಖ ಟೆಕ್ನಿಷಿಯನ್
ಓಂಕಾರ್ ಪಾಟೀಲ್ ಸಾರಥ್ಯದಲ್ಲಿ ನಡೆದ ಪಂದ್ಯಾವಳಿಯ ನೇರ ಪ್ರಸಾರವನ್ನು ಸಹಸ್ರಾರು ಕ್ರೀಡಾಭಿಮಾನಿಗಳು ವೀಕ್ಷಿಸಿದರು.

Categories
ಇತರೆ ಗ್ರಾಮೀಣ

ಇಂದು ಸಾಲಿಗ್ರಾಮದಲ್ಲಿ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಬೆಳ್ಳಿ ಹಬ್ಬದ ಪ್ರಯುಕ್ತ “ಮಕ್ಕಳ ಹಬ್ಬ ಹಾಗೂ ಸ್ವರಾಂಜಲಿ”

ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಬೆಳ್ಳಿ ಹಬ್ಬದ ಪ್ರಯುಕ್ತ “ಮಕ್ಕಳ ಹಬ್ಬ ಹಾಗೂ ಸ್ವರಾಂಜಲಿ” ಸಾಲಿಗ್ರಾಮದಲ್ಲಿ ಇಂದು.

ಕ್ರೀಡೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ,ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಮೂರು ದಶಕಗಳಿಂದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಅನುಭವಿ ವೀಕ್ಷಕ ವಿವರಣೆಕಾರ ಹಾಗೂ ಅಂಪಾಯರ್ ಕೋಟ ಶಿವನಾರಾಯಣ ಐತಾಳ್ ರವರು ಸ್ಥಾಪಿಸಿದ್ದ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.

ಜಿಲ್ಲಾ ಮಟ್ಟದ ಡಬಲ್ ವಿಕೆಟ್ ಪಂದ್ಯಾವಳಿ ಮೊತ್ತ ಮೊದಲ ಬಾರಿಗೆ ಸಂಘಟಿಸಿದ್ದು,
ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಪ್ರಥಮ ಸ್ಥಾನಗಳಿಸಿದ್ದು,ಇಲೆವೆನ್ ಅಪ್ ಕೋಟ ತಂಡದ ಪದ್ಮನಾಭ ಆಚಾರ್ ಹಾಗೂ ಮಿಥುನ್ ಹಂದೆ ದ್ವಿತೀಯ ಬಹುಮಾನ ಗಳಿಸಿರುವುದು


ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಅಂತೆಯೇ ಒಂದು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ,2 ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಸಂಸ್ಥೆ ಇಂದು ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ.

ಈ ಪ್ರಯುಕ್ತ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಬಯಲು ರಂಗ ಮಂದಿರದಲ್ಲಿ ಇಂದು ಸಂಜೆ 6.30 ಕ್ಕೆ ಮಕ್ಕಳ ಹಬ್ಬ ಹಾಗೂ ಸ್ವರಾಂಜಲಿ-2 ಕಾರ್ಯಕ್ರಮ ನಡೆಯಲಿದೆ.

ಸರಿಗಮಪ ಖ್ಯಾತಿಯ ಡಾ|ಅಭಿಷೇಕ್ ರಾವ್,ಉದಯ ಸಿಂಗರ್ ಖ್ಯಾತಿಯ ವೈಷ್ಣವಿ ರವಿ,ಮಜಾ ಭಾರತ ಖ್ಯಾತಿಯ
ಜ್ಯೂನಿಯರ್ ಗುರುಕಿರಣ್,ಬಾಲನಟಿ
ಪ್ರಣತಿ ಸಾಲಿಗ್ರಾಮ ಬೆಂಗಳೂರು,
ರಾಷ್ಟ್ರೀಯ ಯೋಗಪಟು
ತನ್ವಿತಾ.ವಿ.ಕುಂದಾಪುರ,
ಶಿವನಾರಾಯಣ ಐತಾಳ್ ರ ಸುಪುತ್ರ ಶ್ರೀರಾಮ್ ಇವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು ಅವಿನಾಶ್ ಕಾಮತ್ ನಿರೂಪಣೆ ನಡೆಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಾಜ ಸೇವಕರು ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಕಾಪು,ಶ್ರೀ ಅನಂತ ಪದ್ಮನಾಭ ಐತಾಳ್ ಆಡಳಿತ ಧರ್ಮದರ್ಶಿಗಳು ಶ್ರೀ ಗುರುನರಸಿಂಹ ದೇವಸ್ಥಾನ ಹಾಗೂ
ಮುಖ್ಯ ಅತಿಥಿಗಳಾಗಿ ಶ್ರೀ ಯಶ್ ಪಾಲ್ ಸುವರ್ಣ ಸಹಕಾರಿ ಧುರೀಣರು ಉಡುಪಿ ಹಾಗೂ ಗೀತಾನಂದ ಫೌಂಡೇಶನ್ ಮಣೂರಿನ ಪ್ರವರ್ತಕರಾದ ಶ್ರೀ ಆನಂದ್.ಸಿ.ಕುಂದರ್ ಭಾಗವಹಿಸಲಿದ್ದಾರೆ.
ಆರ್.ಕೆ.ಆಚಾರ್ಯ ಕೋಟ.