Categories
ಅಥ್ಲೆಟಿಕ್ಸ್

ಸಂಧ್ಯೋದಯ ಪಿತ್ರೋಡಿ-ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸರಳ ಯೋಗಾಸನ‌ ಸ್ಪರ್ಧೆ

ಸಂಧ್ಯೋದಯ ಪಿತ್ರೋಡಿ,ಉಡುಪಿ ಇವರ ಸಹಯೋಗದಲ್ಲಿ  ವಿಶ್ವಯೋಗ ದಿನಾಚರಣೆಯಂದು 1 ರಿಂದ 7 ನೇ ತರಗತಿಯವರೆಗಿನ ಮಕ್ಕಳಿಗೆ ಸರಳ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಿಗಳು ಯೋಗರತ್ನ ತನುಶ್ರೀ ಪಿತ್ರೋಡಿ ಇವರು ಮಾಡಿದ ಯೋಗಾಸನ ಭಂಗಿಗಳಲ್ಲಿ ದಿನಕ್ಕೆ 2 ಆಸನಗಳಂತೆ 7 ದಿನ ನಿಮ್ಮ ಯೋಗಾಸನ ಫೋಟೋ ಕಳುಹಿಸಿಕೊಡಬೇಕು.ಆಸನದ ಭಂಗಿಗಳು ಆಯೋಜಕರು ಕೊಟ್ಟ 2 ಆಸನಗಳನ್ನು
ಮಾಡಿ ಕಳುಹಿಸಿಕೊಡಬೇಕು.ಒಟ್ಟು 7 ದಿನಗಳಲ್ಲಿ ಇಲ್ಲಿರುವ 14 ಆಸನಗಳ ಫೋಟೋ ಕಳುಹಿಸಿಕೊಡಬೇಕು.
ಸ್ಪರ್ಧೆಯು 14/6/2021 ರಂದು ಆರಂಭಗೊಂಡು 20/6/2021 ರಂದು ಮುಕ್ತಾಯಗೊಳ್ಳುತ್ತದೆ. ದಿನಾಂಕ 21/6/2021 ಸಂಜೆ ಬಿಡುಗಡೆ ಮಾಡಲಾಗುವುದು.ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತಿದೆ.‌ನಿಮ್ಮ ಫೋಟೋ ಈ ಕೆಳಗಿನ ವಾಟ್ಸಪ್ ಸಂಖ್ಯೆಗೆ ಕಳುಹಿಸ ಬಹುದು.
ನಿಯಮಗಳು-1)ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವಕಾಶ.2)ಕಾರ್ಯಕ್ರಮದ ಉದ್ದೇಶ ಯೋಗ ಕಲಿಕೆಗೆ ಪ್ರೋತ್ಸಾಹ. 3)ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ.
4)ಸ್ಪರ್ಧಿಗಳು ತಮ್ಮ‌ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕ 12/6/2021
5)ನಿರ್ಣಾಯಕರು ಹಾಗೂ ಸಂಘಟಕರ ತೀರ್ಮಾನವೇ ಅಂತಿಮ.
ಈ ಯೋಗ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಯೋಗ ನಿರ್ಣಾಯಕರಾದ ನರೇಂದ್ರ ಕಾಮತ್ ಹಾಗೂ  ಅಂತರಾಷ್ಟ್ರೀಯ ಯೋಗ ಪಟು ಹರಿರಾಜ್ ಕಿನ್ನಿಗೋಳಿ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ.
ಬಹುಮಾನದ ಪ್ರಾಯೋಜಕರಾಗಿ
ಯು‌.ಆರ್‌.ಸ್ಪೋರ್ಟ್ಸ್ ಮಣಿಪಾಲ ಮತ್ತು ಲಕ್ಷ್ಮೀ ಆಂಜನೇಯ ಇಲೆಕ್ಟ್ರಿಕಲ್ಸ್ ಇವರು ಸಹಕರಿಸಲಿದ್ದಾರೆ.
ಹೆಚ್ಚಿ‌ನ ಮಾಹಿತಿಗಾಗಿ  9740922916 ಮತ್ತು 8217646547  ನಂಬರನ್ನು ಸಂಪರ್ಕಿಸಬಹುದು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

seven + thirteen =