ಸ್ಪೋರ್ಟ್ಸ್ಪಾಕಿಸ್ತಾನ “ಭರ್ಜಿ ಬಾಹುಬಲಿ” ಒಲಿಂಪಿಕ್ಸ್ ಚಿನ್ನ ಗೆಲ್ಲಲು ಕಾರಣ ನಮ್ಮ “ಗೋಲ್ಡನ್...

ಪಾಕಿಸ್ತಾನ “ಭರ್ಜಿ ಬಾಹುಬಲಿ” ಒಲಿಂಪಿಕ್ಸ್ ಚಿನ್ನ ಗೆಲ್ಲಲು ಕಾರಣ ನಮ್ಮ “ಗೋಲ್ಡನ್ ಬಾಯ್” ನೀರಜ್ ಚೋಪ್ರಾ..!

-

- Advertisment -spot_img

ದೇಶ, ಭಾಷೆ, ಗಡಿಯನ್ನೂ ಮೀರಿ ಮನಸ್ಸುಗಳನ್ನುಒಂದಾಗಿಸುವ ಶಕ್ತಿ ಕ್ರೀಡೆಗಿದೆ ಎಂಬುದಕ್ಕೆ ಇದು ನಿದರ್ಶನವಾಗಿ ನಿಲ್ಲುವ ಘಟನೆ.

ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದಿದ್ದರೆ ಅದಕ್ಕೆ ಕಾರಣ ನೀರಜ್ ಚೋಪ್ರಾ ಮಾಡಿದ್ದ ಸಹಾಯ.

ಅರ್ಷದ್ ನದೀಮ್ ಎಸೆದ ಆ ಭರ್ಜಿ ನೆಟ್ಟಿದ್ದು ಒಲಿಂಪಿಕ್ಸ್ ಚಿನ್ನಕ್ಕಲ್ಲ, ಭಾರತೀಯರ ಎದೆಗೆ. ನಮ್ಮ “ಚಿನ್ನದ ಹುಡುಗ” ನೀರಜ್ ಚೋಪ್ರಾನ ಮತ್ತೊಂದು ಸ್ವರ್ಣ ಪದಕದ ಕನಸಿಗೆ ಅಡ್ಡಿಯಾಗಿತ್ತು ನದೀಮ್’ನ ರಟ್ಟೆಗಳಿಂದ ಮುನ್ನುಗ್ಗಿದ ಆ ಭರ್ಜಿ.

ಐದೇ ಐದು ತಿಂಗಳುಗಳ ಹಿಂದಿನ ಮಾತು. ಒಲಿಂಪಿಕ್ಸ್’ಗೆ ಸಿದ್ಧತೆ ನಡೆಸುತ್ತಿದ್ದ ಅರ್ಷದ್ ನದೀಮ್ ಬಳಿ ಒಂದೊಳ್ಳೆಯ ಭರ್ಜಿ ಇರಲಿಲ್ಲ. ಏಳು ವರ್ಷಗಳಿಂದ ಅದೊಂದು ತುಕ್ಕು ಹಿಡಿದ, ಸವೆದು ಸವೆದು ಸಣಕಲಾಗಿದ್ದ ಜಾವೆಲಿನ್’ನಲ್ಲೇ ಅಭ್ಯಾಸ ಮುಂದುವರಿದಿತ್ತು.

ಜಗತ್ತಿನ ಶ್ರೇಷ್ಠ ತರಬೇತುದಾರರ ಗರಡಿಯಲ್ಲಿ, ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಅಭ್ಯಾಸ ನಡೆಸುವವರ ಮಧ್ಯೆ.. ಜಗತ್ತಿನ ಖ್ಯಾತ ಜಾವೆಲಿನ್ ಎಸೆತಗಾರರಲ್ಲಿ ಒಬ್ಬನಾದರೂ ಪಾಕಿಸ್ತಾನದ ನದೀಮ್ ಒಂದು ಭರ್ಜಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಒಂದೊಳ್ಳೆ ಭರ್ಜಿಯ ಬೆಲೆ 85 ಸಾವಿರದಿಂದ ಒಂದು ಲಕ್ಷ ರೂಪಾಯಿ.. ಆ ಒಂದು ಭರ್ಜಿಗಾಗಿ ಅರ್ಷದ್ ನದೀಮ್ ಅಕ್ಷರಶಃ ಅಂಗಲಾಚುತ್ತಾನೆ.

“7-8 ವರ್ಷಗಳಿಂದ ಒಂದೇ ಜಾವೆಲಿನ್’ನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ.. ಇನ್ನು ಮುಂದೆ ಇದರಲ್ಲೇ ತಾಲೀಮು ಮುಂದುವರಿಸಿದರೆ, ಮುರಿದೇ ಹೋಗುತ್ತದೆ. ಪ್ಯಾರಿಸ್’ಗೆ ಹೋಗುವ ಮುನ್ನ ನನಗೊಂದು ಭರ್ಜಿ ಕೊಡಿಸಿ” ಎಂದು ರಾಷ್ಟ್ರೀಯ ಫೆಡರೇಶನ್ ಮತ್ತು ಕೋಚ್’ಗಳನ್ನು ಕೇಳುತ್ತಾನೆ. ಆ ದೇಶದ ದೊಡ್ಡ ದೊಡ್ಡವರನ್ನೆಲ್ಲಾ ಸಂಪರ್ಕಿಸುತ್ತಾನೆ. ಯಾರೂ ಕೂಡ ಇವನತ್ತ ತಿರುಗಿಯೂ ನೋಡಲಿಲ್ಲ. ಹಂದಿಗಳಿಗೇನು ಗೊತ್ತು ನಂದಿಯ ಮಹತ್ವ..?

ಒಲಿಂಪಿಕ್ಸ್’ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಹೊರಟು ನಿಂತವನೊಂದು ಒಳ್ಳೆಯ ಭರ್ಜಿ ಕೊಡಿಸುವ ಯೋಗ್ಯತೆ ಆ ದೇಶಕ್ಕಿರಲಿಲ್ಲ.

ವಿಷಯ ನೀರಜ್ ಚೋಪ್ರಾನ ಕಿವಿಗೆ ಬೀಳುತ್ತದೆ. ಪಾಕಿಸ್ತಾನದ ತನ್ನ ಪ್ರತಿಸ್ಪರ್ಧಿಯ ದಯನೀಯ ಪರಿಸ್ಥಿತಿಯನ್ನು ಕೇಳಿ ದಂಗಾಗಿ ಹೋಗುತ್ತಾನೆ ನೀರಜ್ ಚೋಪ್ರಾ.

ಒಬ್ಬ ಕ್ರೀಡಾಪಟುವಿನ ಕಷ್ಟವನ್ನು ಮತ್ತೊಬ್ಬ ಕ್ರೀಡಾಪಟುವಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಅರ್ಷದ್ ನದೀಮ್’ಗೆ ಸಹಾಯ ಮಾಡಲು ಮುಂದಾಗುತ್ತಾನೆ.

“ಹೊಸ ಜಾವೆಲಿನ್ ಪಡೆಯಲು ಆತ ಹೆಣಗಾಡುತ್ತಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆತನ ಸಾಧನೆ, ಅರ್ಹತೆಗಳ ಮುಂದೆ ಇದೆಲ್ಲಾ ಸಮಸ್ಯೆಯೇ ಆಗಬಾರದು. ಅರ್ಷದ್ ನದೀಮ್ ಜಗತ್ತಿನ ಟಾಪ್ ಜಾವೆಲಿನ್ ಎಸೆತಗಾರರಲ್ಲಿ ಒಬ್ಬ. ಆತನಿಗೊಂದು ಭರ್ಜಿಯ ಪ್ರಾಯೋಜಕತ್ವವನ್ನು ಜಾವೆಲಿನ್ ತಯಾರಕರು ಸಂತೋಷದಿಂದ ನೀಡುತ್ತಾರೆ ಎಂದು ಭಾವಿಸುತ್ತೇನೆ” ಎಂದು SAI Mediaಗೆ ನೀಡಿದ ಸಂದರ್ಶನದಲ್ಲಿ ಹೇಳಿ ಬಿಟ್ಟ ನೀರಜ್ ಚೋಪ್ರಾ.

ಚಾಂಪಿಯನ್ ಅಥ್ಲೀಟ್ ಹೇಳಿದ್ದು ಒಂದೇ ಮಾತು. ಮರುದಿನವೇ ಅರ್ಷದ್ ನದೀಮ್ ಕೈಯಲ್ಲಿತ್ತು ಆತ ಬಯಸಿದ್ದ ಭರ್ಜಿ. ಅದೇ ಭರ್ಜಿಯಲ್ಲಿ ನಿರಂತರ ಅಭ್ಯಾಸ ನಡೆಸಿವನು ಈಗ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ನೀರಜ್ ಚೋಪ್ರಾನನ್ನೇ ಹಿಂದಿಕ್ಕಿ ಚಿನ್ನ ಗೆದ್ದಿದ್ದಾನೆ.

ಹಾಗೆ ನೋಡಿದರೆ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಮಧ್ಯೆ ಇನ್ನಿಲ್ಲದ ಸ್ಪರ್ಧೆ-ಪೈಪೋಟಿ ಇರಬೇಕಿತ್ತು. ಪೈಪೋಟಿ ಇತ್ತು, ಇದೆ ಮತ್ತು ಮುಂದೆಯೂ ಇರುತ್ತದೆ. ಆದರೆ ಅದು ಭರ್ಜಿ ಹಿಡಿದು ಅಖಾಡ ಪ್ರವೇಶಿಸಿದಾಗ ಮಾತ್ರ.

ಅದರಾಚೆ ಇವರಿಬ್ಬರ ಸಂಬಂಧವನ್ನು ನೋಡಿದರೆ ಒಡ ಹುಟ್ಟಿದ ಅಣ್ಣ-ತಮ್ಮಂದಿರೇ ನಾಚಬೇಕು. ನದೀಮ್’ನನ್ನು ನೀರಜ್ ಪ್ರೀತಿಯಿಂದ “ಭಾಯ್” ಎನ್ನುತ್ತಾನೆ. ತನಗಿಂತ ಒಂದು ವರ್ಷ ಚಿಕ್ಕವನಾದ ನೀರಜ್ ಚೋಪ್ರಾನೇ “ನನ್ನ ರೋಲ್ ಮಾಡೆಲ್” ಎನ್ನುತ್ತಾನೆ ಅರ್ಷದ್.

ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ನೀರಜ್ ಚೋಪ್ರಾನ ಚಿನ್ನದ ಕನಸನ್ನು ಅರ್ಷದ್ ನದೀಮ್ ಭಗ್ನಗೊಳಿಸಿದಾಗ, ಇತ್ತ ನೀರಜ್ ತಾಯಿ ಏನು ಹೇಳಿದರು ಗೊತ್ತೇ..?
“ಅರ್ಷದ್ ನದೀಮ್, ಅವನೂ ನನ್ನ ಮಗನೇ” ಎಂದು. ಇಂಥಾ ತಾಯಿಯ ಹೊಟ್ಟೆಯಲ್ಲಿ ನೀರಜ್ ಚೋಪ್ರಾನಂಥಾ ಹೃದಯವಂತ ಹುಟ್ಟದೆ ಇನ್ನಾರು ಹುಟ್ಟಲು ಸಾಧ್ಯ..?

LEAVE A REPLY

Please enter your comment!
Please enter your name here

1 × two =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you