ಕ್ರಿಕೆಟ್ವರನಟ ಅಣ್ಣಾವ್ರ ದೊಡ್ಡ ಅಭಿಮಾನಿ ಈ ಕ್ರಿಕೆಟಿಗ!

ವರನಟ ಅಣ್ಣಾವ್ರ ದೊಡ್ಡ ಅಭಿಮಾನಿ ಈ ಕ್ರಿಕೆಟಿಗ!

-

- Advertisment -spot_img

ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಮಯಾಂಕ್ ಅಗರ್ವಾಲ್ ಅವರ ಸಂದರ್ಶನದ ವೀಡಿಯೋ ಅದು.

ಸಂದರ್ಶಕ ಕೇಳುತ್ತಾನೆ, ‘’bro, ನಿಮ್ಮ ಫೇವರಿಟ್ ಆ್ಯಕ್ಟರ್ ಯಾರು’’ ಎಂದು. ‘’All time favourite ಡಾ.ರಾಜ್’ಕುಮಾರ್’’ ಎಂದು ಒಂದು ಕ್ಷಣ ಯೋಚಸದೆ ಹೇಳಿ ಬಿಟ್ಟರು ಮಯಾಂಕ್.

ಮಯಾಂಕ್ ಅಗರ್ವಾಲ್
ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಾ ಬೆಳೆದವರಲ್ಲ. ಡಾ.ರಾಜ್ ಅವರ ಅದೆಷ್ಟು ಸಿನಿಮಾಗಳನ್ನು ನೋಡಿದ್ದಾರೋ ಗೊತ್ತಿಲ್ಲ.
ಆದರೆ ನೆಚ್ಚಿನ ಸಿನಿಮಾ ತಾರೆ ಯಾರು ಎಂದಾಕ್ಷಣ ‘ಡಾ.ರಾಜ್’ಕುಮಾರ್’ ಎಂದು ಬಿಡುತ್ತಾರೆ ಮಯಾಂಕ್ ಅಗರ್ವಾಲ್.

ಸರಳತೆ, ಸಭ್ಯತೆಗೆ ಈ ಜಗತ್ತಿನಲ್ಲಿ ಮತ್ತೊಂದು ಹೆಸರೇನಾದರೂ ಇದ್ದರೆ ಅದು ವರನಟ ಡಾ.ರಾಜ್’ಕುಮಾರ್.

ಉತ್ಪ್ರೇಕ್ಷೆಯಲ್ಲ, ಮಯಾಂಕ್ ಅಗರ್ವಾಲ್ ಕೂಡ ಹಾಗೆಯೇ..
ಅತ್ಯಂತ ಸರಳ ಮತ್ತು ಸಭ್ಯ ಕ್ರಿಕೆಟಿಗ. ಮಯಾಂಕ್ ಅಗರ್ವಾಲ್ ಇರುವುದು ಹಾಗೆಯೇ.. ತುಂಬಾ down to earth ಮನುಷ್ಯ. ಅವರ ಕನ್ನಡ ಪ್ರೀತಿಯ ಬಗ್ಗೆ ಹೇಳಲೇಬೇಕು.

ಸಾಮಾನ್ಯವಾಗಿ ಅಗರ್ವಾಲ್ ಎಂಬ ಸರ್’ನೇಮ್ ಕೇಳಿದಾಕ್ಷಣ ಇವರು ಕನ್ನಡಿಗರಲ್ಲ, ಯಾರೋ ಉತ್ತರ ಭಾರತೀಯರಿರಬೇಕೆಂಬ ಅಭಿಪ್ರಾಯ ತನ್ನಿಂದ ತಾನಾಗಿಯೇ ಮೂಡಿ ಬಿಡುತ್ತದೆ. ಹೌದು, ಮಯಾಂಕ್ ಅಗರ್ವಾಲ್ ಅವರ ತಂದೆಯ ಮೂಲ ಉತ್ತರ ಭಾರತ, ಬಹುಶಃ ದೆಹಲಿ ಇರಬೇಕು. ಆದರೆ ಮಯಾಂಕ್ ಹುಟ್ಟಿದ್ದು ಇಲ್ಲೇ, ಬೆಳೆದದ್ದು ಇಲ್ಲೇ, ಆಡಿದ್ದೂ ಇಲ್ಲೇ, ಹೆಸರು ಮಾಡಿದ್ದೂ ಇಲ್ಲೇ.. ಅವರು ಕರ್ನಾಟಕಕ್ಕೆ ಗೌರವ ತಂದುಕೊಟ್ಟ ಹೆಮ್ಮೆಯ ಕನ್ನಡಿಗ.

ಮಾತನಾಡುವಾಗ ಅಚ್ಚಕನ್ನಡದಲ್ಲಿ, ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ. ಮಧ್ಯೆ ಇಂಗ್ಲೀಷ್ ಪದಗಳು ಬಾರದಂತೆ ಎಚ್ಚರ ವಹಿಸುತ್ತಾ ಮಾತನಾಡುವುದನ್ನು ಕೇಳುವುದೇ ಚಂದ.

ಮಾತೃಭಾಷೆ ಹಿಂದಿ, ಓದಿದ್ದು ಇಂಗ್ಲೀಷ್ ಮೀಡಿಯಂ. ಆದರೆ ಮಯಾಂಕ್ ಅಗರ್ವಾಲ್ ಅವರಿಗೆ ಕನ್ನಡ ‘ಜೀವನದ ಭಾಷೆ’.

ಅವಕಾಶ ಸಿಕ್ಕರೆ ಮಯಾಂಕ್ ಅವರೊಂದಿಗೆ ಒಮ್ಮೆ ಮಾತನಾಡಿ ಅಥವಾ ಅವರ ಯಾವುದಾದರೂ ಕನ್ನಡ ಸಂದರ್ಶನಗಳನ್ನೊಮ್ಮೆ ನೋಡಿ. ಕನ್ನಡಕ್ಕೆ ಅವರು ಕೊಡುವ ಬೆಲೆ, ಕನ್ನಡದ ಬಗ್ಗೆ ಆತನಿಗಿರುವ ಪ್ರೀತಿ, ಅಭಿಮಾನ ಅವರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವಂತೆ ಮಾಡಿ ಬಿಡುತ್ತದೆ.

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವ ವಹಿಸಿರುವ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ನಾಯಕನೂ ಹೌದು. ಕಳೆದ 10 ವರ್ಷಗಳಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲಿ.

LEAVE A REPLY

Please enter your comment!
Please enter your name here

seventeen − fifteen =

Latest news

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...
- Advertisement -spot_imgspot_img

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...

Must read

- Advertisement -spot_imgspot_img

You might also likeRELATED
Recommended to you