11.2 C
London
Thursday, May 16, 2024
Homeಕ್ರಿಕೆಟ್ಕಾರ್ಕಳ-ಸಹಾರ ಪ್ರೀಮಿಯರ್ ಲೀಗ್ 2021ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ.

ಕಾರ್ಕಳ-ಸಹಾರ ಪ್ರೀಮಿಯರ್ ಲೀಗ್ 2021ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ.

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ಟೀಮ್ ಸಹಾರ  ಕಾರ್ಕಳ ಇವರ ಆಶ್ರಯದಲ್ಲಿ  ಕಾರ್ಕಳ ದ ಕ್ರಿಕೆಟ್  ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ,ಫೆಬ್ರವರಿ  22 ರಿಂದ 27 ರ ತನಕ ಕಾರ್ಕಳದ ಗಾಂಧಿ ಮೈದಾನ ದಲ್ಲಿ  ಟೆನ್ನಿಸ್ ಬಾಲ್, ಅಂಡರ್ ಆರ್ಮ್  ಕ್ರಿಕೆಟ್ ಟೂರ್ನಮೆಂಟ್  ಸಹಾರ ಪ್ರೀಮಿಯರ್  ಲೀಗ್ 2021  ಸೀಸನ್ 1 ಆಯೋಜಿಸಲಾಗಿದೆ.

ಒಟ್ಟು 16 ಆಹ್ವಾನಿತ  ತಂಡಗಳು ಭಾಗವಹಿಸಲಿದ್ದು,ಲೀಗ್ ಮಾದರಿಯಲ್ಲಿ ಪಂದ್ಯಾಕೂಟ ಸಾಗಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 50, 021 ನಗದು,ದ್ವಿತೀಯ ಸ್ಥಾನಿ 30, 021 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. M9ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಪಂದ್ಯಾಕೂಟ ನಿಯಮಗಳು ಈ ಕೆಳಗಿನಂತಿದೆ.
1)ಪ್ರತಿ ತಂಡದಲ್ಲಿ  ಕಾರ್ಕಳ ವಲಯದ 8 ಆಟಗಾರರು ಕಡ್ಡಾಯ 3 ಹೊರವಲಯದ ಆಟಗಾರರಿಗೆ    ಅವಕಾಶ.
2) ಭಾಗವಿಹಿಸುವ ತಂಡಗಳು ದಿನಾಂಕ 01 ಫೆಬ್ರವರಿ   ರ ಒಳಗೆ  ಮುಂಚಿತವಾಗಿ  ಹೆಸರು ನೊಂದಾಯಿಸಬೇಕು.
3) ಫೆಬ್ರವರಿ  05 ಕ್ಕೆ ಲಾರ್ಡ್ಸ್ ಹಾಕಲಾಗುದು ಲಾರ್ಡ್ಸ್ ಹಾಕುವ ಸ್ಥಳದಲ್ಲಿ ಪ್ರತಿ ತಂಡದ ಓರ್ವ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು.
4) 15 ಆಟಗಾರರ ಭಾವಚಿತ್ರದೊಂದಿಗೆ ಪ್ಲೇಯರ್  ಫಾರಂ ಅನ್ನು ಫೆಬ್ರವರಿ  5  ಲಾರ್ಡ್ಸ್ ಹಾಕುವಾಗ ವ್ಯವಸ್ಥಾಪಕರಿಗೆ ನೀಡಬೇಕು ನಂತರ  ಆಟಗಾರರನ್ನು ಬದಲಾಯಿಸುವಂತಿಲ್ಲ.
4)ಪ್ಲೇಯರ್ ಫಾರಂ ಅನ್ನು ವ್ಯವಸ್ಥಾಪಕರು ಎಲ್ಲಾ ತಂಡ ಗಳಿಗೆ ನೀಡುತ್ತಾರೆ.
5) ಯಾವುದೇ ಚರ್ಚೆ ಬಂದಲ್ಲಿ ತಂಡದ ನಾಯಕನಿಗೆ ಮಾತ್ರ ಮಾತನಾಡಲು ಅವಕಾಶ.ಅಶಿಸ್ತು ತೋರಿದ ತಂಡವನ್ನು ಕೈ ಬಿಡಲಾಗುತ್ತದೆ.
6)ಪಂದ್ಯಾವಳಿ ಯ ನೀತಿ  ನಿಯಮ ವನ್ನು ಲಾರ್ಡ್ಸ್ ಹಾಕುವ ಸಂದರ್ಭ ಎಲ್ಲಾ ತಂಡದ ಕ್ಯಾಪ್ಟನ್ ಗೆ ವಿವರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ದಾಖಲಿಸಿದ ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
+919108141443 (ಸುಹೈಲ್ ಬಿಲ್ಲಿ ),
+919071668113 (ಅಶ್ರಫ್ ಬೈಲೂರ್),
+919740058807 (ಅಝೀಜ್ )..
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twenty − 11 =