Categories
ಕ್ರಿಕೆಟ್

ಬೆಂಗಳೂರು-ಯತೀಶ್ ಮ್ಯಾಜಿಕಲ್ ಸ್ಪೆಲ್- ರಂಗ:ಕ್ರಿಶಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಕೆ.ಟಿ.ಪಿ‌.ಎಲ್ ನ 9 ನೇ ಪಂದ್ಯದ ಕೊನೆಯ ಓವರ್ ನಲ್ಲಿ ಯತೀಶ್ ಅಲೆವೂರು ಮೊನಚಾದ ಬೌಲಿಂಗ್ ದಾಳಿಯ ಫಲವಾಗಿ,ಕ್ರಿಶಾ ಕುಂದಾಪುರ ಮತ್ತು ರಂಗ ಇಲೆವೆನ್ ನಡುವಿನ ಪಂದ್ಯರೋಚಕ ಟೈನಲ್ಲಿ ಅಂತ್ಯ ಕಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕ್ರಿಶಾ ಕುಂದಾಪುರ ಕಿಝರ್ 2 ಸಿಡಿಲಬ್ಬರದ ಸಿಕ್ಸರ್ ಸಹಿತ 21 ರನ್ ಸಿಡಿಸಿ ಎದುರಾಳಿಗೆ 51 ರನ್ ಗುರಿ ನೀಡಿತ್ತು.
ಸವಾಲಿನ ಗುರಿಯ ಚೇಸಿಂಗ್ ವೇಳೆ,ಆರಂಭಿಕ‌ ಆಟಗಾರನಾಗಿ ಕಣಕ್ಕಿಳಿದ ನವೀನ್ ಚೂ 17 ರನ್ ಗಳಿಸಿ ತಂಡವನ್ನು ಆಧರಿಸಿದರು.ಕೊನೆಯ ಓವರ್ ನಲ್ಲಿ 6 ರನ್ ಗಳ‌ ಅಗತ್ಯತೆಯ ಸಂದರ್ಭ ಯತೀಶ್ ಕೇವಲ 5 ರನ್ ನೀಡಿ 1 ವಿಕೆಟ್‌ ಉರುಳಿಸಿದ ಪರಿಣಾಮ‌ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಕೊನೆಯ ಓವರ್ ನ ಮ್ಯಾಜಿಕಲ್ ಸ್ಪೆಲ್ ನಡೆಸಿದ ಯತೀಶ್ ಅಲೆವೂರು ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

2 × five =