Categories
ಕ್ರಿಕೆಟ್

ಬೆಂಗಳೂರು-ಅವಿನಾಶ್ ಸ್ಪೋಟಕ ಇನ್ನಿಂಗ್ಸ್-ಮಟ್ಕಲ್ ತುಮಕೂರು ಫೈನಲ್ ಎಂಟ್ರಿ

ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರಾಂಡ್‌ ನಲ್ಲಿ ನಡೆಯುತ್ತಿರುವ, ಐತಿಹಾಸಿಕ ಕೆ.ಟಿ‌.ಪಿ‌‌‌.ಎಲ್-2022 ಪಂದ್ಯಾಟದಲ್ಲಿ ಎ‌.ಎನ್.ಕೃಷ್ಣ ಕುಮಾರ್ ಮಾಲೀಕತ್ವದ ಮಟ್ಕಲ್ ತುಮಕೂರು ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದ ಮಟ್ಕಲ್ ತುಮಕೂರು ಫೀಲ್ಡಿಂಗ್ ಆಯ್ದುಕೊಂಡಿತ್ತು.ರಾಕರ್ಸ್ ರಾಗಿಗುಡ್ಡ ಮೊದಲ ಇನ್ನಿಂಗ್ಸ್ ನಲ್ಲಿ  ಸುನಿಲ್ ಬಿರುಸಿನ 27 ರನ್ ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತ್ತು.
ಇದಕ್ಕುತ್ತರವಾಗಿ ಮಟ್ಕಲ್ ತುಮಕೂರು ಅವಿನಾಶ್ ಆಚಾರ್ಯ 10 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 20 ರನ್,ಫಹಾದ್ 13 ರನ್ ನೆರವಿನಿಂದ 6.3 ಓವರ್ ಗಳಲ್ಲಿ ಗುರಿ ಚೇಸ್ ಮಾಡಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ‌.
ಅವಿನಾಶ್ ಆಚಾರ್ಯ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

seven − one =