ಕ್ರಿಕೆಟ್ಹುಲಿ ಹೊಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟುತ್ತದೆ..!

ಹುಲಿ ಹೊಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟುತ್ತದೆ..!

-

- Advertisment -spot_img

ನಿನ್ನೆ ಅಚಾನಕ್ ಆಗಿ Arjun CM Gowda ಸಿಕ್ಕಿದರು. ಇವರು ಕರ್ನಾಟಕದ ಜ್ಯೂನಿಯರ್ ಹುಡುಗರ ಜೊತೆ ಇರುವವರು. ಯಾವ ಹುಡುಗ ಏನು ಎಂಬುದನ್ನು ಅತ್ಯಂತ ಹತ್ತಿರದಿಂದ ನೋಡುವವರು. KSCA zonal ಟೂರ್ನಿಗಳಲ್ಲಿ ಶಿವಮೊಗ್ಗ ಝೋನ್ ತಂಡದ ಜೊತೆ ಇರುತ್ತಾರೆ. ಒಳ್ಳೆಯ ಥ್ರೋಡೌನ್ ಸ್ಪೆಷಲಿಸ್ಟ್ ಕೂಡ.

‘’ಸರ್, ದ್ರಾವಿಡ್ ಅವರ ದೊಡ್ಡ ಮಗನ ಬಗ್ಗೆ ಬರೆದಿದ್ದನ್ನು ಓದಿದೆ. ನೀವು ಸಣ್ಣವನ ಆಟ ನೋಡ್ಬೇಕು ಸರ್. ತಮ್ಮನ ಮುಂದೆ ಅಣ್ಣ ಏನೇನೂ ಅಲ್ಲ. ಹಾಗಿದೆ ಆಟ’’ ಎಂದು ಬಿಟ್ಟರು.

ನನಗೆ ಕುತೂಹಲ. ಅಣ್ಣನ ಆಟವನ್ನು ನೋಡಿದ್ದೇನೆ. ತಮ್ಮನ ಆಟದ ಬಗ್ಗೆ ಕೇಳಿದ್ದೇನೆ, ನೋಡಿಲ್ಲ. ಸ್ಕೋರ್ ಕಳುಹಿಸಿ ಕೊಟ್ಟರು. ನೋಡಿದಾಗ ಅನ್ನಿಸಿದ್ದು ಒಂದೇ. ಹುಲಿ ಹುಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟಿದೆ.

KSCA ಅಂಡರ್-16 inter zonal ಟೂರ್ನಮೆಂಟ್’ನಲ್ಲಿ ರಾಹುಲ್ ದ್ರಾವಿಡ್ ಅವರ 2ನೇ ಮಗ ಅನ್ವಯ್ ದ್ರಾವಿಡ್ ಬೆಂಗಳೂರು ಝೋನ್ ತಂಡದ ನಾಯಕ. ಆಟದಲ್ಲಿ ತಂದೆಯ ಪಡಿಯಚ್ಚು ಎಂದು ಆಟ ನೋಡಿದವರು ಹೇಳುತ್ತಾರೆ. ತಂದೆಯಂತೆ ವಿಕೆಟ್ ಕೀಪರ್ ಬ್ಯಾಟರ್.

ಹುಡುಗನ ವಯಸ್ಸು 15.. ಈ ವರ್ಷದ inter zonal ಟೂರ್ನಮೆಂಟ್’ನಲ್ಲಿ 4 ಮ್ಯಾಚ್, 5 ಇನ್ನಿಂಗ್ಸ್, 566 ರನ್.. 3 ಶತಕ, ಅದರಲ್ಲೊಂದು ಇನ್ನೂರು. 3 ದಿನಗಳ ಹಿಂದಷ್ಟೇ RSI ಮೈದಾನದಲ್ಲಿ ಅನ್ವಯ್ ದ್ರಾವಿಡ್ ಭರ್ಜರಿ ದ್ವಿಶತಕ ಬಾರಿಸಿದ್ದಾನೆ. ಆ ದ್ವಿಶತಕದ ಇನ್ನಿಂಗ್ಸ್’ನಲ್ಲಿ ದ್ರಾವಿಡ್ ಮಗನದ್ದು ಏಕಾಂಗಿ ಹೋರಾಟ. (scorecard ಗಮನಿಸಬಹುದು). ಭಾರತ ತಂಡದ ಬ್ಯಾಟಿಂಗ್ ಲೈನಪ್ ಕುಸಿದು ಬಿದ್ದಾಗ ರಾಹುಲ್ ದ್ರಾವಿಡ್ ಇದೇ ರೀತಿ ಆಡುತ್ತಿದ್ದರು.

ರಾಹುಲ್ ದ್ರಾವಿಡ್ ಅವರು ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲು 2012ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ಬಂದಿದ್ದರು. ಇಬ್ಬರನ್ನೂ ನಾನು ಮೊದಲ ಬಾರಿ ನೋಡಿದ್ದು ಅಲ್ಲೇ.

ದ್ರಾವಿಡ್ ಅವರ ಹಿರಿಮಗ ಸಮಿತ್ ದ್ರಾವಿಡ್ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಸಣ್ಣವನು ಜ್ಯೂನಿಯರ್ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾನೆ. ಕರ್ನಾಟಕ U-14 ತಂಡದ ನಾಯಕನಾಗಿದ್ದ ಅನ್ವಯ್ ದ್ರಾವಿಡ್, ಈ ಬಾರಿ U-16 ತಂಡದ ನಾಯಕನಾಗಲಿದ್ದಾನೆ.

LEAVE A REPLY

Please enter your comment!
Please enter your name here

three × 3 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you