ಕ್ರಿಕೆಟ್ಹುಲಿ ಹೊಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟುತ್ತದೆ..!

ಹುಲಿ ಹೊಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟುತ್ತದೆ..!

-

- Advertisment -spot_img

ನಿನ್ನೆ ಅಚಾನಕ್ ಆಗಿ Arjun CM Gowda ಸಿಕ್ಕಿದರು. ಇವರು ಕರ್ನಾಟಕದ ಜ್ಯೂನಿಯರ್ ಹುಡುಗರ ಜೊತೆ ಇರುವವರು. ಯಾವ ಹುಡುಗ ಏನು ಎಂಬುದನ್ನು ಅತ್ಯಂತ ಹತ್ತಿರದಿಂದ ನೋಡುವವರು. KSCA zonal ಟೂರ್ನಿಗಳಲ್ಲಿ ಶಿವಮೊಗ್ಗ ಝೋನ್ ತಂಡದ ಜೊತೆ ಇರುತ್ತಾರೆ. ಒಳ್ಳೆಯ ಥ್ರೋಡೌನ್ ಸ್ಪೆಷಲಿಸ್ಟ್ ಕೂಡ.

‘’ಸರ್, ದ್ರಾವಿಡ್ ಅವರ ದೊಡ್ಡ ಮಗನ ಬಗ್ಗೆ ಬರೆದಿದ್ದನ್ನು ಓದಿದೆ. ನೀವು ಸಣ್ಣವನ ಆಟ ನೋಡ್ಬೇಕು ಸರ್. ತಮ್ಮನ ಮುಂದೆ ಅಣ್ಣ ಏನೇನೂ ಅಲ್ಲ. ಹಾಗಿದೆ ಆಟ’’ ಎಂದು ಬಿಟ್ಟರು.

ನನಗೆ ಕುತೂಹಲ. ಅಣ್ಣನ ಆಟವನ್ನು ನೋಡಿದ್ದೇನೆ. ತಮ್ಮನ ಆಟದ ಬಗ್ಗೆ ಕೇಳಿದ್ದೇನೆ, ನೋಡಿಲ್ಲ. ಸ್ಕೋರ್ ಕಳುಹಿಸಿ ಕೊಟ್ಟರು. ನೋಡಿದಾಗ ಅನ್ನಿಸಿದ್ದು ಒಂದೇ. ಹುಲಿ ಹುಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟಿದೆ.

KSCA ಅಂಡರ್-16 inter zonal ಟೂರ್ನಮೆಂಟ್’ನಲ್ಲಿ ರಾಹುಲ್ ದ್ರಾವಿಡ್ ಅವರ 2ನೇ ಮಗ ಅನ್ವಯ್ ದ್ರಾವಿಡ್ ಬೆಂಗಳೂರು ಝೋನ್ ತಂಡದ ನಾಯಕ. ಆಟದಲ್ಲಿ ತಂದೆಯ ಪಡಿಯಚ್ಚು ಎಂದು ಆಟ ನೋಡಿದವರು ಹೇಳುತ್ತಾರೆ. ತಂದೆಯಂತೆ ವಿಕೆಟ್ ಕೀಪರ್ ಬ್ಯಾಟರ್.

ಹುಡುಗನ ವಯಸ್ಸು 15.. ಈ ವರ್ಷದ inter zonal ಟೂರ್ನಮೆಂಟ್’ನಲ್ಲಿ 4 ಮ್ಯಾಚ್, 5 ಇನ್ನಿಂಗ್ಸ್, 566 ರನ್.. 3 ಶತಕ, ಅದರಲ್ಲೊಂದು ಇನ್ನೂರು. 3 ದಿನಗಳ ಹಿಂದಷ್ಟೇ RSI ಮೈದಾನದಲ್ಲಿ ಅನ್ವಯ್ ದ್ರಾವಿಡ್ ಭರ್ಜರಿ ದ್ವಿಶತಕ ಬಾರಿಸಿದ್ದಾನೆ. ಆ ದ್ವಿಶತಕದ ಇನ್ನಿಂಗ್ಸ್’ನಲ್ಲಿ ದ್ರಾವಿಡ್ ಮಗನದ್ದು ಏಕಾಂಗಿ ಹೋರಾಟ. (scorecard ಗಮನಿಸಬಹುದು). ಭಾರತ ತಂಡದ ಬ್ಯಾಟಿಂಗ್ ಲೈನಪ್ ಕುಸಿದು ಬಿದ್ದಾಗ ರಾಹುಲ್ ದ್ರಾವಿಡ್ ಇದೇ ರೀತಿ ಆಡುತ್ತಿದ್ದರು.

ರಾಹುಲ್ ದ್ರಾವಿಡ್ ಅವರು ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲು 2012ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ಬಂದಿದ್ದರು. ಇಬ್ಬರನ್ನೂ ನಾನು ಮೊದಲ ಬಾರಿ ನೋಡಿದ್ದು ಅಲ್ಲೇ.

ದ್ರಾವಿಡ್ ಅವರ ಹಿರಿಮಗ ಸಮಿತ್ ದ್ರಾವಿಡ್ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಸಣ್ಣವನು ಜ್ಯೂನಿಯರ್ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾನೆ. ಕರ್ನಾಟಕ U-14 ತಂಡದ ನಾಯಕನಾಗಿದ್ದ ಅನ್ವಯ್ ದ್ರಾವಿಡ್, ಈ ಬಾರಿ U-16 ತಂಡದ ನಾಯಕನಾಗಲಿದ್ದಾನೆ.

LEAVE A REPLY

Please enter your comment!
Please enter your name here

two × two =

Latest news

test123123

test123123

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ ಕಾಮಧೇನು‌ ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ...

ವಿದ್ಯಾ ಬೆಳಕು-ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಣೆ

ವಿದ್ಯಾ ಬೆಳಕು-ವೆಂಕಟರಮಣ ಪಿತ್ರೋಡಿ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ವಿತರಣೆ ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್ ಪಿತ್ರೋಡಿ(ರಿ) ಇವರ ವತಿಯಿಂದ ವಿದ್ಯಾ ಬೆಳಕು...
- Advertisement -spot_imgspot_img

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

Must read

- Advertisement -spot_imgspot_img

You might also likeRELATED
Recommended to you