12.7 C
London
Saturday, May 18, 2024
Homeಕ್ರಿಕೆಟ್ದುಬೈನಲ್ಲಿ ಕರಾವಳಿ ಕನ್ನಡಿಗರ ಅದ್ಧೂರಿಯ "ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 2" ಜನವರಿ 17 ರಂದು.

ದುಬೈನಲ್ಲಿ ಕರಾವಳಿ ಕನ್ನಡಿಗರ ಅದ್ಧೂರಿಯ “ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 2” ಜನವರಿ 17 ರಂದು.

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img

ಕೋಸ್ಟಲ್ ಫ್ರೆಂಡ್ಸ್ ದುಬೈ ಇವರ ವತಿಯಿಂದ ಆಟೋ ಡೀಲ್ ಆಟೋಮೇಟಿವ್ ಸರ್ವಿಸ್,ಅಲ್ ಸಿತಾರಾ ಗಲ್ಫ್ ಕಾಂಟ್ರ್ಯಾಕ್ಟಿಂಗ್ & ಮೈಂಟೇನೆನ್ಸ್ ಕಂಪೆನಿ, U.N.I.F ಗಲ್ಫ್ ಹಾಗೂ ಪ್ರೈಮ್ ಟಾಸ್ಕ್ ಟೆಕ್ನಿಕಲ್ ಸರ್ವಿಸ್, ಗ್ಲೋಬಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್ L.L.C ಇವರ ಸಹಭಾಗಿತ್ವದಲ್ಲಿ, ಸಮಾನ ಮನಸ್ಕ ಸ್ನೇಹಿತ ಮೊಹಮ್ಮದ್ ಹಮ್ದಾನ್, ತನ್ವೀರ್ ಖಾಜಿ, ಖಲೀಲ್, ರೋವೆಲ್ ಪ್ರೀತ್, ಸುನಿಲ್, ಕಿಶೋರ್ ಶೆಟ್ಟಿ, ಪರ್ವೇಜ್, ನವೀನ್ ಹಾಗೂ ಸಮೀರ್ ಹೀಗೆ ಯುವ ಕ್ರಿಕೆಟಿಗರ ಕೂಡುವಿಕೆಯಲ್ಲಿ ಅಲ್ ಹಮ್ರಿಯಾ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಜ್ಮನ್ ದುಬೈನ ಅಂಗಣದಲ್ಲಿ ಹಗಲು ರಾತ್ರಿಯ ಕೊಲ್ಲಿ ರಾಷ್ಟ್ರದ ಅತ್ಯಂತ ವೈಭವೋಪೇತ ಪಂದ್ಯಾವಳಿ ಎಂದೇ ಖ್ಯಾತಿ ಪಡೆದ “ಕರ್ನಾಟಕ ಪ್ರೀಮಿಯರ್ ಲೀಗ್” ಕೆ.ಪಿ.ಎಲ್- ಸೀಸನ್ 2″ನಡೆಯಲಿದೆ.

ವಿಜೇತ ತಂಡಗಳು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರು ಅತ್ಯಾಕರ್ಷಕ ಟ್ರೋಫಿ ಹಾಗೂ ಪ್ರಶಸ್ತಿ ರೂಪದಲ್ಲಿ 4 ಲಕ್ಷಕ್ಕೂ ಹೆಚ್ಚಿನ ನಗದು ಬಹುಮಾನ ರೂಪದಲ್ಲಿ ಜೇಬಿಗಿಳಿಸಲಿದ್ದಾರೆ.

ಜನವರಿ 3 ರಂದು ದುಬೈನ ಲ್ಯಾವೆಂಡರ್ ಹೋಟೆಲ್ ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಉಡುಪಿ,ಮಂಗಳೂರು ಜಿಲ್ಲೆಯ ಪ್ರಸಿದ್ಧ ಆಟಗಾರರನ್ನೊಳಗೊಂಡ ಒಟ್ಟು 8 ಫ್ರಾಂಚೈಸಿಗಳು ಪಂದ್ಯಾವಳಿಯಲ್ಲಿ ಪ್ರತಿಷ್ಟಿತ ಕೆ‌.ಪಿ.ಎಲ್ ಕಿರೀಟಕ್ಕಾಗಿ ಕಾದಾಡಲಿದ್ದು ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.

1)ಕರಾವಳಿ ಉಡುಪಿ

2)ಡಿ.ಜೆ.ಚಾಲೆಂಜರ್ಸ್ ಪಡೀಲ್

3)ವರಾಹರೂಪ ಮಂಗಳೂರು

4)ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್

5)ಚಕ್ರವರ್ತಿ ಕ್ರಿಕೆಟರ್ಸ್ ಕುಂದಾಪುರ

6)ಆಟೋ ಡೀಲ್ ಮೂಡಬಿದಿರೆ

7)ಅಲ್ ಸಿತಾರಾ ಕಾರ್ಕಳ


8)ಗಂಗೊಳ್ಳಿ ಸ್ಟ್ರೈಕರ್ಸ್

ಕಳೆದ ವರ್ಷ ನಡೆದಿದ್ದ ಪ್ರಥಮ‌ ಆವೃತ್ತಿಯ ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್ ಪ್ರಥಮ ಹಾಗೂ ಚಕ್ರವರ್ತಿ ಕ್ರಿಕೆಟರ್ಸ್ ದ್ವಿತೀಯ ಸ್ಥಾನವನ್ನು ಅಲಂಕರಿಸಿತ್ತು. ಈ ಬಾರಿ ಯಾವ ತಂಡ ಕೆ.ಪಿ.ಎಲ್ ಸೀಸನ್ 2 ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆಯೆಂದು  ಕಾದು ನೋಡಬೇಕಾಗಿದೆ.

ಪ್ರದರ್ಶನ ಪಂದ್ಯದಲ್ಲಿ ಪ್ರಪ್ರಥಮ ಬಾರಿ ಎಸ್‌.ಆರ್.ಎಸ್ ರೈಸಿಂಗ್ ಕ್ವೀನ್ಸ್ ಹಾಗೂ ಅರಸ ವಾರಿಯರ್ಸ್ ಫ್ರಾಂಚೈಸಿ ರೂಪದ 2 ಮಹಿಳಾ ತಂಡಗಳು ಸ್ಪರ್ಧಾ ಕಣಕ್ಕಿಳಿಯಲಿದ್ದು ಪಂದ್ಯಾವಳಿಯ ರಂಗನ್ನು ಹೆಚ್ಚಿಸಲಿದೆ.

ವೀಕ್ಷಕ ವಿವರಣೆ ವಿಭಾಗದಲ್ಲಿ ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಸತೀಶ್ ಮಣಿಪಾಲ್ ಭಾಗವಹಿಸಲಿದ್ದು, ಪಂದ್ಯಾವಳಿಯ ನೇರ ಪ್ರಸಾರವನ್ನು ನಮ್ಮ ಕುಡ್ಲ ಹಾಗೂ ಯೂಟ್ಯೂಬ್ ಚಾನೆಲ್ ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಲಿದೆ.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

three + 12 =