8.8 C
London
Tuesday, April 23, 2024
Homeಕ್ರಿಕೆಟ್ವಿಶ್ವಕರ್ಮ ಹ್ಯೂಮಾನಿಟಿ ಟ್ರೋಫಿ 2022-ಸಮಾಜದ ನೊಂದ ಹೃದಯಗಳಿಗಾಗಿ ಕ್ರೀಡೆ

ವಿಶ್ವಕರ್ಮ ಹ್ಯೂಮಾನಿಟಿ ಟ್ರೋಫಿ 2022-ಸಮಾಜದ ನೊಂದ ಹೃದಯಗಳಿಗಾಗಿ ಕ್ರೀಡೆ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು. ಆದರೆ ಗುರಿ ಸುಂದರವಾಗಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು.
ಸಮಾನ ಮನಸ್ಕರು ಒಂದೆಡೆ ಸೇರಿ ಮಾಡುವ ಎಲ್ಲ ಕೆಲಸಗಳು ಕೂಡ ಭಗವಂತನಿಗೆ ತಲುಪುತ್ತದೆ ಅನ್ನುವ ಭರವಸೆ ಯೊಂದಿಗೆ ಸ್ಕಾರ್ಪಿಯನ್ ಕ್ರಿಕೆಟರ್ಸ್ ಏಳಿಂಜೆ ಮಂಗಳೂರು ದಕ್ಷಿಣ ಕನ್ನಡ ಇದರ ವತಿಯಿಂದ ವಿಶ್ವಕರ್ಮ ಪ್ರೀಮಿಯರ್ ಲೀಗ್ 2022 ಇದೇ ಬರುವ ಎಪ್ರಿಲ್ 23 ಮತ್ತು 24 ರಂದು ನಡೆಯಲಿದೆ .
ಈಗಾಗಲೇ ಗುರುತಿಸಲಾದ ವಿಶ್ವಕರ್ಮ ಸಮಾಜದ 5 ಬಡ ಕುಟುಂಬಗಳಿಗೆ,ಅಸಹಾಯಕರಿಗೆ, ಸಾಧಕರಿಗೆ, ಹಿರಿಯ ಆಟಗಾರರಿಗೆ ಸಹಕಾರ ನೀಡುವ ಉದ್ದೇಶದಿಂದ ಇದೇ ಮೊತ್ತ ಮೊದಲ ಬಾರಿಗೆ ವಿಶ್ವಕರ್ಮ ಸಮಾಜ ಬಾಂದವರಿಗಾಗಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯಲ್ಲಿ ವಿಶ್ವಕರ್ಮ ಸಮಾಜದ ಪ್ರತಿಷ್ಠಿತ 12 ಫ್ರಾಂಚೈಸಿಗಳು ಭಾಗವಹಿಸಲಿದ್ದು,ವಿಶ್ವಕರ್ಮ ಸಮಾಜದ 1 ರಾಜ್ಯಮಟ್ಟದ ಆಟಗಾರರನ್ನು ತಂಡವೇ ಆಯ್ದುಕೊಳ್ಳಬಹುದು ಹಾಗೂ 2 ಐಕಾನ್ ಆಟಗಾರರು ಮತ್ತು ಸಹ ಆಟಗಾರರನ್ನು ಆಕ್ಷನ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ವೃಷ್ಟಿ ಸಾಲಿಗ್ರಾಮ
2)ವಿ‌.ವಿ‌.ಸಿ ಕುಂದಾಪುರ
3)ಕೆ.ವಿ.ಎಮ್‌‌.ಡಿ ಉಚ್ಚಿಲ
4)ಯುನೈಟೆಡ್ ಶ್ರೀವಿಕಾ ಪಾದೆಬೆಟ್ಟು
5)ಕದಳಿ ಪ್ರಿಯ ಪೆರ್ಡೂರು
6)ದೇವಾಂಶ್ ಸ್ಟ್ರೈಕರ್ಸ್ ಮುಂಬಯಿ
7)ಬಾಲಾಜಿ ಬುಲ್ಸ್ ಬುಕ್ಕಿಗುಡ್ಡೆ
8)ವರದಾ ಫ್ರೆಂಡ್ಸ್ ಎರ್ಮಾಳ್
9)ಪುನೀತ್ ಇಲೆವೆನ್ ಉಡುಪಿ
10)ಮಾಣಿಕ್ಯ ಅವೆಂಜರ್ಸ್ ನೀಲಾವರ
11)ವಿಶ್ವಕರ್ಮ ಪ್ಯಾಂಥರ್ಸ್ ಮಂಗಳೂರು
12)ದುರ್ಗಾದೇವಿ ಕ್ರಿಕೆಟರ್ಸ್ ಅವರಾಲು
ಪ್ರಥಮ‌ ಬಹುಮಾನ ವಿಜೇತ ತಂಡ 50,000 ನಗದು,ದ್ವಿತೀಯ 30,000 ನಗದು ಹಾಗೂ ಸೆಮಿಫೈನಲ್ಸ್ ಪರಾಜಿತ ತಂಡಗಳಿಗೆ ತಲಾ 10000 ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
ಟೂರ್ನಮೆಂಟ್ ನ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಪಂದ್ಯಾವಳಿಗೆ ಧನಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ಖಾತೆಗೆ ಜಮಾ ಮಾಡಬಹುದು.
Name-  Divya Ramesh Mulki
Ac-0653005002165
IFSC-KKBK0000653
G.Pay-Phone Pay
8296594422
ಭಾಗವಹಿಸಲಿಚ್ಚಿಸುವ ಆಟಗಾರರು ದೇವಿಪ್ರಸಾದ್-7204751990 ಈ ನಂಬರನ್ನು ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

fourteen + five =